Connect with us

bangalore

ಗಂಡನ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ 20 ಸಾವಿರಕ್ಕೆ ಸುಪಾರಿ ಕೊಟ್ಟ ಹೆಂಡ್ತಿ

Published

on

ಬೆಂಗಳೂರು: ಪಾಲುದಾರಿಕೆಯಲ್ಲಿ ಪತಿ ನಡೆಸುತ್ತಿದ್ದ ಡಾಬಾಗೆ ಬೆಂಕಿ ಹಚ್ಚಲು ಪತ್ನಿಯೇ ರೌಡಿಗೆ ಸುಪಾರಿ ನೀಡಿದ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.

ಪತ್ನಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಯೂ ಟರ್ನ್ ಡಾಬಾ ಮಾಲೀಕ ಅರ್ಪಿತ್ ಪತ್ನಿ ಶೀತಲ್ ಎಂಬಾಕೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಕಳೆದ‌ ತಿಂಗಳು 24ರಂದು ರಾತ್ರಿ ದುಷ್ಕರ್ಮಿಗಳು ಬಂದು ಡಾಬಾ‌‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು‌.

ಇದನ್ನು ಪ್ರಶ್ನಿಸಲು ಹೋದ ಡಾಬಾದ ಸಿಬ್ಬಂದಿ ಮನೋಜ್ ಎಂಬಾತನ ಮೇಲೂ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೋಲದೇವನಹಳ್ಳಿ ಪೊಲೀಸರು ಮೂವರು ಆರೋಪಿಗಳಾದ ರೌಡಿಶೀಟರ್ ಮನುಕುಮಾರ್ ಮತ್ತು ಆತನ ಸಹಚರರಾದ ಹೇಮಂತ್ ಹಾಗೂ ಮಂಜುನಾಥನನ್ನು ಬಂಧಿಸಿದ್ದರು‌.

ಕೆಲ ತಿಂಗಳ ಹಿಂದೆ ಅರ್ಪಿತ್ ಹಾಗೂ ಶೀತಲ್ ಮದುವೆಯಾಗಿತ್ತು.‌ ಪ್ರಾರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ಕಾಲಕ್ರಮೇಣ ಕೌಟುಂಬಿಕ ಕಾರಣಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಬೆಳೆದಿತ್ತು. ‌

ನಿತ್ಯ ಜಗಳವಾಗುತಿತ್ತು‌. ಈ ಹಿನ್ನೆಲೆ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಬಂದಿದ್ದ.

ಹಲವು ದಿನಗಳಾದರೂ ಹೆಂಡ್ತಿ ನೋಡಲು ಹೋಗದೆ ಡಾಬಾ ವ್ಯವಹಾರದಲ್ಲಿ‌ ಮಗ್ನನಾಗಿದ್ದ.‌ ಇದರಿಂದ ಅಸಮಾಧಾನಗೊಂಡು ಗಂಡನಿಗೆ ಬುದ್ಧಿ ಕಲಿಸಲು ಹೋದ ಹೆಂಡತಿ ಶೀತಲ್, ತನ್ನ ಸ್ನೇಹಿತ ರೌಡಿಶೀಟರ್ ಮನುಕುಮಾರ್​ಗೆ 20 ಸಾವಿರಕ್ಕೆ ಸುಪಾರಿ ನೀಡಿದ್ದಳು. ಶೀತಲ್ ಡಾಬಾಗೆ ಬೆಂಕಿ ಹಚ್ಚಿದರೆ ಅರ್ಪಿತ್​​ಗೆ ಬುದ್ಧಿ ಬರುತ್ತದೆ ಎಂಬ ಪ್ಲಾನ್ ಮಾಡಿದ್ದಳು. ಪ್ಲಾನ್​​ನಂತೆ ಮನು ಸುಪಾರಿ ತೆಗೆದುಕೊಂಡಿದ್ದ. ಈತನ ಸಹಚರರಿಗೆ ಹಣ ಕೊಟ್ಟು ಬೆಂಕಿ ಹಚ್ಚುವ ಸಂಚು ರೂಪಿಸಿದ್ದ.

bangalore

ಆಸ್ತಿಯಲ್ಲಿ ಪಾಲು ಬೇಕೆಂದರೆ ಅಪ್ಪ, ಅಮ್ಮ ಹಾಗೂ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಬೆಕು : ಕೃಷ್ಣ ಬೈರೇಗೌಡ

Published

on

ಮಂಗಳೂರು/ಬೆಂಗಳೂರು : “ಹೆಚ್ಚಿನ ಕುಟುಂಬಗಳಲ್ಲಿ ತಂದೆ- ತಾಯಿ ಅಥವಾ ಹಿರಿಯರು ಯಾರೇ ಇದ್ದರೂ ಅವರ ಆರೈಕೆ ಮಾಡದ ಸಂಬಂಧಿಕರು ಆಸ್ತಿಗಾಗಿ ಬೇಗ ಮುಂದೆ ಬರುತ್ತಾರೆ. ಆದರೆ ಯಾರು ಅಪ್ಪ-ಅಮ್ಮ ಹಾಗೂ ಹಿರಿಯರನ್ನು ಆರೈಕೆ ಮಾಡುವುದಿಲ್ಲವೋ ಅಂತಹ ಮಕ್ಕಳು ಅಥವಾ ಸಂಬಂಧಿಕರಿಗೆ ಅವರು ನೀಡಿದ ವಿಲ್-ದಾನಪತ್ರವನ್ನು ರದ್ದು ಮಾಡುವ ಅವಕಾಶವನ್ನು ಕೇಂದ್ರ ಸರಕಾರದ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007’ ನೀಡಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ನಿನ್ನೆ (ಮಾ.12) ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಬಿಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ , “ಪ್ರಸ್ತುತ ಮಕ್ಕಳು ಸ್ವಂತ ತಂದೆ-ತಾಯಿಯನ್ನೇ ಆರೈಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಒಂದು ವೇಳೆ ಮಕ್ಕಳು ಅಥವಾ ಸಂಬಂಧಿಕರು ಆರೈಕೆ ಮಾಡದಿದ್ದರೆ ಅವರ ಹೆಸರಿಗೆ ಮಾಡಿರುವ ವಿಲ್ ಅಥವಾ ದಾನಪತ್ರವನ್ನು ರದ್ದು ಮಾಡುವ ಅಧಿಕಾರ ಹಿರಿಯ ನಾಗರಿಕರಿಗೆ ಇದೆ. ಕೇಂದ್ರ ಸರಕಾರ 2007ರಲ್ಲೇ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ’ ಯನ್ನು ಜಾರಿಗೆ ತಂದಿದೆ. ಆದರೆ, ಈ ಬಗ್ಗೆ ಹಲವರಿಗೆ ಮಾಹಿತಿಯೇ ಇಲ್ಲ. ಈ ಮಾಹಿತಿಯನ್ನು ಪರಿಣಾಮಕಾರಿಯಾಗಿ ಎಲ್ಲರಿಗೂ ತಲುಪಿಸಬೇಕು ಎಂಬ ಉದ್ದೇಶದಿಂದಲೇ ಪರಿಷತ್‍ನಲ್ಲಿ ಈ ಕಾಯ್ದೆಯ ಬಗ್ಗೆ ಉಲ್ಲೇಖಿಸುತ್ತಿದ್ದೇನೆ” ಎಂದರು.

“ಈ ಕಾಯ್ದೆಯ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ಮಾಸಿಕ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅಥವಾ ಆರೈಕೆ ಮಾಡಲು ನಿರ್ಲಕ್ಷಿಸಿದರೆ ಹಿರಿಯ ನಾಗರಿಕರು ಸೆಕ್ಷನ್ 09ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ದೂರು ಸಲ್ಲಿಸಬಹುದು. ಹಿರಿಯ ನಾಗರಿಕರ ದೂರು ಸಾಬೀತಾದರೆ, ತಂದೆ ತಾಯಿಯಿಂದ ಆಸ್ತಿ ಪಡೆದು ಅವರ ಆರೈಕೆ ಮಾಡದಿದ್ದರೆ, ಸೆಕ್ಷನ್ 23ರಂತೆ ಪೋಷಕರು ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಿ ಮತ್ತೆ ಪೋಷಕರ ಹೆಸರಿಗೇ ಮರುಸ್ಥಾಪಿಸಲು ಕಾನೂನಿನಲ್ಲಿ ಅವಕಾಶ ಇದೆ” ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

Continue Reading

bangalore

ಫಸ್ಟ್ ನೈಟ್ ದಿನ ತಲೆದಿಂಬು ತಬ್ಕೊಂಡು ನಿಂತ ಯಜಮಾನ ಹೀರೋ

Published

on

ಮದುವೆಯ ಮೊದಲ ರಾತ್ರಿಯ ಶಾಸ್ತ್ರವನ್ನು ಗ್ರ್ಯಾಂಡ್ ಆಗಿ ಮಾಡುವುದು ಸಾಮಾನ್ಯ. ಅಂತೆಯೇ ಜಾನ್ಸಿ ಮತ್ತು ರಾಘವೇಂದ್ರನ ಕೋಣೆಯನ್ನು ಹೂಗಳಿಂದ ಬಹಳ ಸುಂದರವಾಗಿ ಅಲಂಕರಿಸಲಾಗಿತ್ತು. ಆದರೆ, ಜಾನ್ಸಿಯು ತನ್ನನ್ನು ಮುಟ್ಟುವಂತಿಲ್ಲ ಎಂಬ ಷರತ್ತನ್ನು ಮೊದಲೇ ಹಾಕಿದ್ದಳು. ಆ ವೇಳೆ ನಿರ್ದೇಶಕರು ಹಳೆಯ ಟ್ರಿಕ್ ಬಳಸಿ ಜಾನ್ಸಿ ಮತ್ತು ರಾಘವೇಂದ್ರನನ್ನು ಒಂದು ಮಾಡಿದ್ದರು. ಏನಿದು ಕಥೆ ? ಜಾನ್ಸಿ ಹಾಗೂ ರಾಘವೇಂದ್ರ ಯಾರು ? ಅವರಿಬ್ಬರು ಹೇಗೆ ಒಂದಾದ್ರು ? ಇಲ್ಲಿದೆ ನೋಡಿ.

ಹಣದ ಬಲದಿಂದ ಮಧ್ಯಮ ವರ್ಗದ ಹುಡುಗ ರಾಘವೇಂದ್ರನನ್ನು ಬಾಡಿಗೆ ಗಂಡನನ್ನಾಗಿ ಮಾಡಿಕೊಳ್ಳುವಲ್ಲಿ ಜಾನ್ಸಿ ಯಶಸ್ವಿಯಾಗಿದ್ದಾಳೆ. ಕೇವಲ ಒಂದು ತಿಂಗಳಿನ ಒಪ್ಪಂದದ ಮೇಲೆ ರಾಘವೇಂದ್ರ ಪರಿಸ್ಥಿತಿಯ ಗೊಂಬೆಯಾಗಿ ಹಠಮಾರಿ, ಜಂಬದ ಕೋಳಿ ಜಾನ್ಸಿಯನ್ನು ಮದುವೆಯಾಗಿದ್ದಾನೆ. ಆದರೆ ಇದು ಒಂದು ತಿಂಗಳ ಒಪ್ಪಂದ ಮದುವೆ ಅನ್ನೋ ವಿಷಯ ಜಾನ್ಸಿ ಅಜ್ಜ ಸೇರಿದಂತೆ ಬಹುತೇಕ ಯಾರಿಗೂ ಗೊತ್ತಿಲ್ಲ. ಹಾಗಾಯೇ ಮದುವೆ ಪೂರ್ವ ಮತ್ತು ನಂತರದ ಶಾಸ್ತ್ರಗಳನ್ನು ಜಾನ್ಸಿ ಕುಟುಂಬಸ್ಥರು ಆಯೋಜಿಸಿದ್ದರು. ಈ ರೀತಿಯ ರೋಚಕ ತಿರುವು ನೀಡುತ್ತಿರುವ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಜಮಾನ ಧಾರಾವಾಹಿ ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದೆ.

ಮೊದವೆಯ ಮೊದಲ ರಾತ್ರಿ ದಿನ ಜಾನ್ಸಿ ರಾಘವೇಮದ್ರನಿಗೆ ದೂರವಿರುವಂತೆ ಹೇಳುತ್ತಾಳೆ. ಈ ವೇಳೆ ನಿರ್ದೇಶಕರು ಹಳೆಯ ಟ್ರಿಕ್ ಬಳಸಿ ಜಾನ್ಸಿ ಮತ್ತು ರಾಘವೇಂದ್ರನನ್ನು ಒಂದು ಮಾಡಿದ್ದರು. ಅದೇ ಹಲ್ಲಿ, ಜಿರಳೆ ಕಂಡ್ರೆ ಹುಡುಗಿಯರು ನೂರು ಕಿಲೋ ಮೀಟರ್ ದೂರ ಓಡುತ್ತಾರೆ. ಇಲ್ಲಿಯೂ ನಿರ್ದೇಶಕರು ಹಲ್ಲಿ ಬಳಸಿ ಜಾನ್ಸಿಯನ್ನು ಹೆದರಿಸಿ ರೆಡಿಮೇಡ್ ಗಂಡ ರಾಘವೇಂದ್ರನನ್ನು ತಬ್ಬಿಕೊಂಡು ಒಂದಾಗುವಂತೆ ಮಾಡಿದ್ದಾರೆ.

ಧಾರಾವಾಹಿ ಎಂದರೆ ಕಲಾವಿದರು ಸೇರಿದಂತೆ ಇನ್ನುಳಿದ ಸಿಬ್ಬಂದಿ ಹಗಲು -ರಾತ್ರಿ ಅಂತ ನೋಡದೇ ಕೆಲಸ ಮಾಡುತ್ತಾರೆ. ರಾತ್ರಿಯ ದೃಶ್ಯಗಳನ್ನು ಆ ಸಮಯದಲ್ಲಿಯೇ ಶೂಟಿಂಗ್ ಮಾಡಲಿ ಪ್ಲಾನ್ ಮಾಡಲಾಗಿರುತ್ತದೆ. ಹಾಗಾಗಿ ಕೆಲವೊಮ್ಮೆ ಶೂಟಿಂಗ್ ಬೆಳಗಿನ ಜಾವ 5 ಗಂಟಯವರೆಗೂ ನಡೆಯುತ್ತಿರುತ್ತದೆ. ಯಜಮಾನ ಸೀರಿಯಲ್‌ನಲ್ಲಿ ಜಾನ್ಸಿ ಹಾಗೂ ರಾಘವೇಂದ್ರನ ಫಸ್ಟ್ ನೈಟ್ ದೃಶ್ಯವನ್ನೂ ಮದ್ಯರಾತ್ರಿ ಮಾಡಲಾಗಿದೆ. ತೆರೆ ಮೇಲೆ ದೃಶ್ಯವೊಂದು ಚೆನ್ನಾಗಿ ಮೂಡಿ ಬರಲು ತೆರೆ ಹಿಂದಿನವರ ಪ್ರಾಮುಖ್ಯತೆ ತುಂಬಾ ಇದೆ.

Continue Reading

bangalore

ಹುಷಾರ್ !! ಇಡ್ಲಿಯಿಂದನೂ ಬರಬಹುದು ಕ್ಯಾನ್ಸರ್‌… ರಾಜ್ಯ ರಾಜಧಾನಿಯಿಂದ ಆಘಾತಕಾರಿ ಮಾಹಿತಿ

Published

on

ಮಂಗಳೂರು/ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ತಿಂಡಿಪ್ರಿಯರಿಗೆ ಆಹಾರ ಇಲಾಖೆ ಶಾಕಿಂಗ್ ಮಾಹಿತಿ ನೀಡಿದೆ. ಅದರಲ್ಲಿಯೂ ಹೋಟೆಲ್‌ಗೆ ಹೋಗಿ ಇಡ್ಲಿ ಸೇವಿಸುವವರು ಇನ್ನು ಮುಂದೆ ಬಹಳ ಜಾಗರೂಕರಾಗಿರಬೇಕು. ಬೆಳಗ್ಗಿನ ಪ್ರಮುಖ ಉಪಹಾರವಾಗಿರುವ ಇಡ್ಲಿಯ ಸೇವನೆಯಿಂದ ಸಾವಿನ ಮನೆ ಬಾಗಿಲು ತಟ್ಟಿದಂತಾಗುತ್ತದೆ ಎಂದರೆ ಅದು ಆಶ್ಚರ್ಯವೇ ಸರಿ. ಹಾಗಾದರೆ ಅದು ಹೇಗೆ ? ಏನು ವಿಷಯ ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಅನೇಕ ಹೋಟೆಲ್‌ಗಳಲ್ಲಿ ತಯಾರಾಗುವ ಇಡ್ಲಿ ಅಸುರಕ್ಷಿತ ಎಂಬುವುದು ಆಹಾರ ಇಲಾಖೆ ನಡೆಸಿದ ಪ್ರಯೋಗದಲ್ಲಿ ದೃಢಪಟ್ಟಿದೆ. ಈ ಪ್ರಯೋಗದಿಂದ ದೊರೆತ ಮಾಹಿತಿ ಪ್ರಕಾರ, 35 ಕ್ಕೂ ಹೆಚ್ಚು ಇಡ್ಲಿ ಮಾದರಿಗಳು ಅಸುರಕ್ಷಿತ ಎಂಬ ಶಾಕಿಂಗ್ ವಿಚಾರ ಹೊರ ಬಿದ್ದಿದೆ. ಹಾಗಾಗಿ, ಸುಲಭವಾಗುತ್ತದೆ ಎಂದು ರಸ್ತೆ ಬದಿಯೇ ಇಡ್ಲಿ ಖರೀದಿಸಿ ತಿನ್ನುವ ಮೊದಲು ಎರಡು ಬಾರಿ ಯೋಚಿಸುವುದು ಉತ್ತಮ.

ಇಡ್ಲಿಯಿಂದ ಕ್ಯಾನ್ಸರ್ ಹೇಗೆ ಬರುತ್ತದೆ ?

ಬೆಂಗಳೂರಿನ ಹಲವಡೆ ಇತ್ತೀಚೆಗೆ ಇಡ್ಲಿ ತಯಾರಿಸಲು ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್‌ ಬಳಕೆ ಮಾಡಲಾಗುತ್ತಿದೆ. ಇಡ್ಲಿ ಮಾಡುವಾಗ ಮಾತ್ರವಲ್ಲದೆ ಆಹಾರವನ್ನು ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಹಾಳೆಯು ಶಾಖಕ್ಕೆ ಒಡ್ಡಿಕೊಂಡ ಇಡ್ಲಿಯು ಹಾನಿಕಾರಕ ವಸ್ತುವನ್ನು ಹೊರಸೂಸುತ್ತಿದೆ. ಇದು ಕ್ಯಾನ್ಸರ್ ಕಾರಕವಾಗಿದೆ. ಹಾಗಾಗಿ ಆದಷ್ಟು ಜಾಗರೂಕರಾಗಿರಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page