Connect with us

DAKSHINA KANNADA

ಪುತ್ತೂರು: ಬಾವಿಗೆ ಬಿದ್ದ ಹೆಂಡತಿಯನ್ನು ರಕ್ಷಿಸಲು ಹೋಗಿ ಬಾವಿಯಲ್ಲೇ ಬಾಕಿಯಾದ ಗಂಡ

Published

on

ಪುತ್ತೂರು: ನೀರು ಸೇದುವ ವೇಳೆಯಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಹೆಂಡತಿಯನ್ನು ರಕ್ಷಿಸಲು ಇಳಿದ ಗಂಡನೂ ಬಾವಿಯಲ್ಲೇ ಬಾಕಿಯಾದ ಘಟನೆ ತಾಲೂಕಿನ ಕೆಯ್ಯರು ಗ್ರಾಮದ ಮಾಡಾವು ಎಂಬಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ.


ನಿನ್ನೆ ಮುಂಜಾನೆ ಸುನಂದಾ ಅವರು ನೀರು ಸೇದಲೆಂದು ಬಾವಿಯ ಸಮೀಪ ತೆರಳಿದ್ದರು. ಈ ವೇಳೆ ಅವರು ಆಕಸ್ಮಾತ್ ಸುಮಾರು 60 ಅಡಿ ಆಳದ ಬಾವಿಗೆ ಬಿದ್ದಿದ್ದರು.

ಅವರನ್ನು ರಕ್ಷಿಸಲೆ೦ದು ಪತಿ ಸದಾಶಿವ ರೈ ಅವರು ಬಾವಿಗೆ ಇಳಿದಿದ್ದರು.

ಪತ್ನಿಯನ್ನು ನೀರಿನಿಂದ ಮೇಲೆತ್ತಿ ರಕ್ಷಣೆ ಮಾಡಿದ್ದರೂ ಅವರನ್ನು ಬಾವಿಯಿಂದ ಮೇಲಕ್ಕೆತರಲು ಸಾಧ್ಯವಾಗದೆ ಇಬ್ಬರೂ ಬಾವಿಯಲ್ಲಿದ್ದ ಕಲ್ಲು ಹಿಡಿದುಕೊಂಡು ನಿಂತಿದ್ದರು.

ಮಾಹಿತಿ ಅರಿತ ಪುತ್ತೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ರುಕ್ಕಯ್ಯ ಗೌಡ, ಸಿಬ್ಬಂದಿ ಮಂಜುನಾಥ, ಚಾಲಕ ಮೋಹನ್ ಜಾದವ್,

ಗೃಹರಕ್ಷಕ ದಳದ ಚಂದ್ರ ಕುಮಾರ್ ತಕ್ಷಣವೇ ಸ್ಥಳಕ್ಕೆ ತೆರಳಿ ದಂಪತಿಯ ರಕ್ಷಣೆ ಮಾಡಿದರು

DAKSHINA KANNADA

ವಿಟ್ಲ : ಸಿಡಿಲು ಬಡಿದು ಮನೆಗೆ ಹಾ*ನಿ

Published

on

ವಿಟ್ಲ : ಸಿಡಿಲು ಬ*ಡಿದು ಮನೆಗೆ ಹಾ*ನಿಯಾದ ಘಟನೆ ಮಂಗಳವಾರ(ನ.18) ವಿಟ್ಲದ ಕೊಳ್ನಾಡು ಗ್ರಾಮದ ಬಾರೆಬೆಟ್ಟು ಎಂಬಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ, ಪ್ರಸ್ತುತ ವಿದೇಶದಲ್ಲಿರುವ  ಅಬ್ದುಲ್ ಲತೀಫ್ ಎಂಬವರ ಮನೆಗೆ ಹಾ*ನಿಯಾಗಿದೆ.

ರಾತ್ರಿ  ವೇಳೆ ಇದ್ದಕ್ಕಿದ್ದಂತೆ ಸಿಡಿಲು ಸಹಿತ ಮಳೆಯಾಗಿದ್ದು, ಈ ವೇಳೆ ಘಟನೆ ಸಂಭವಿಸಿದೆ. ಸಿಡಿಲು ಬ*ಡಿದ ಸಂದರ್ಭದಲ್ಲಿ ಮನೆಯೊಳಗೆ ಪುಟಾಣಿ ಮಗು ಹಾಗೂ ಇಬ್ಬರು ಮಹಿಳೆಯರಿದ್ದರು. ಮಗುವಿನ ಕಿವಿಗೆ ಗಾ*ಯವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಸಿಡ್ನಿಯಲ್ಲಿ ಭೀ*ಕರ ಅಪ*ಘಾತ; ಭಾರತ ಮೂಲದ ತುಂಬು ಗರ್ಭಿಣಿ ಸಾ*ವು

ಅಬ್ದುಲ್ ಲತೀಫ್ ಅವರು ಅರಬ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿ ಇರುವುದಾಗಿ ಮಾಹಿತಿ ಲಭಿಸಿದೆ.  ಘಟನೆಯಿಂದಾಗಿ ವಿದ್ಯುತ್ ಉಪಕರಣಗಳಿಗೆ ಹಾ*ನಿಯಾಗಿದ್ದು, ಗೋಡೆ ಬಿ*ರುಕುಬಿಟ್ಟಿದೆ.

Continue Reading

DAKSHINA KANNADA

ಪ್ರೋಸ್ಟೇಟ್ ಆರೋಗ್ಯಕ್ಕೆ ಆದ್ಯತೆ : ಕೆಎಂಸಿ ಆಸ್ಪತ್ರೆಯಿಂದ ಪುರುಷರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

Published

on

ಮಂಗಳೂರು : ನಗರದ ಕೆಎಂಸಿ ಆಸ್ಪತ್ರೆಯು ಪುರುಷರ ದಿನಾಚರಣೆಯ ಅಂಗವಾಗಿ, “ಜೆಂಟಲ್ ರಿಮೈಂಡರ್: ಪ್ರೊಟೆಕ್ಟ್ ಯುವರ್ ಪ್ರಾಸ್ಟೇಟ್” ಎಂಬ ವಿಶೇಷ ಜಾಗೃತಿ ಉಪಕ್ರಮ ಪ್ರಾರಂಭಿಸಿದೆ. ಈ ಉಪಕ್ರಮದ ಭಾಗವಾಗಿ, ನ.17 ರಿಂದ 28 ರವರೆಗೆ, ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ, ಆಸ್ಪತ್ರೆಯು ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮೂತ್ರಶಾಸ್ತ್ರಜ್ಞರೊಂದಿಗೆ(ಯೂರೊಲಾಜಿಸ್ಟ್‌)  ಉಚಿತ ಸಮಾಲೋಚನೆಗಳನ್ನು ಆಯೋಜಿಸಿದೆ.

ಕಾರ್ಯಕ್ರಮವು ಪ್ರಾಸ್ಟೇಟ್ ಸಂಬಂಧಿತ ಪರಿಸ್ಥಿತಿಗಳ ಸಕಾಲಿಕ ಮೌಲ್ಯಮಾಪನ ಮತ್ತು ಆರಂಭಿಕ ಪತ್ತೆಯ ಮೂಲಕ ಪುರುಷರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಉತ್ತಮ ಪ್ರಾಸ್ಟೇಟ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ.

ವಯಸ್ಸಾದ ಪುರುಷರಲ್ಲಿ ಪ್ರಾಸ್ಟೇಟ್ ಸಂಬಂಧಿತ ಕಾಯಿಲೆಗಳು ಸಾಮಾನ್ಯವಾಗಿವೆ. ಆದರೆ, ಅರಿವಿನ ಕೊರತೆ ಅಥವಾ ಸಾಮಾಜಿಕ ಕಳಂಕಕ್ಕೆ ಬೆದರಿ ಅನೇಕರು ಸೂಕ್ತ ಸಮಯದಲ್ಲಿ ಸಹಾಯ ಪಡೆಯಲು ಹಿಂಜರಿಯುತ್ತಾರೆ. ಮೂತ್ರ ವಿಸರ್ಜನೆ ಮಾಡುವಾಗ ತೊಂದರೆ ಅಥವಾ ಆಯಾಸ, ವಿಶೇಷವಾಗಿ ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಯ ಪ್ರಚೋದನೆ , ಮೂತ್ರದಲ್ಲಿ ರಕ್ತ, ಜ್ವರ ಅಥವಾ ಶೀತದೊಂದಿಗೆ ಸುಡುವ ಸಂವೇದನೆ ಮುಂತಾದ ಲಕ್ಷಣಗಳು ವೈದ್ಯಕೀಯ ಮೌಲ್ಯಮಾಪನದ ಅಗತ್ಯವಿರುವ ಆಧಾರವಾಗಿರುವ ಕಾಳಜಿಯನ್ನು ಸೂಚಿಸುತ್ತವೆ. ಈ ಚಿಹ್ನೆಗಳನ್ನು ಕಡೆಗಣಿಸಬಾರದು ಮತ್ತು ಪುರುಷರು ಆರಂಭಿಕ ರೋಗ ನಿರ್ಣಯ ಮತ್ತು ಸೂಕ್ತ ಆರೈಕೆಯನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿ ಕೊಳ್ಳುವುದು ಈ ಉಪಕ್ರಮದ ಗುರಿಯಾಗಿದೆ.

ಕೆಎಂಸಿ ಆಸ್ಪತ್ರೆಯ ಯೂರೋಲಾಜಿ ವಿಭಾಗದ ಮುಖ್ಯಸ್ಥ ಮತ್ತು ಕನ್ಸಲ್ಟೆಂಟ್‌ ಡಾ.ಸನ್ಮಾನ್ ಗೌಡ ಪುರುಷರ ದಿನಾಚರಣೆಯ ಮಹತ್ವ ಮತ್ತು ಉಪಕ್ರಮದ ಬಗ್ಗೆ ಮಾತನಾಡಿ, ವಯಸ್ಸಾದ ಪುರುಷರಲ್ಲಿ ಪ್ರಾಸ್ಟೇಟ್ ಸಮಸ್ಯೆಗಳು ಅತ್ಯಂತ ಸಾಮಾನ್ಯವಾಗಿದೆ. ಆದರೆ, ಅನೇಕರು ಹಿಂಜರಿಕೆ ಅಥವಾ ತಪ್ಪು ಕಲ್ಪನೆಗಳಿಂದಾಗಿ ವೈದ್ಯಕೀಯ ಸಹಾಯವನ್ನು ಪಡೆಯಲು ವಿಳಂಬ ಮಾಡು ತ್ತಾರೆ. ಆರಂಭಿಕ ಮೌಲ್ಯಮಾಪನವು ತೊಡಕುಗಳನ್ನು ತಡೆಯುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಈ ಪುರುಷರ ದಿನಾಚರಣೆಯ ಉಪಕ್ರಮದ ಮೂಲಕ, ಪುರುಷರು ತಮ್ಮ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮತ್ತು ಸಕಾಲಿಕ ತಪಾಸಣೆಗೆ ಒಳಗಾಗುವುದನ್ನು ಪ್ರೋತ್ಸಾಹಿಸ ಬಯಸುತ್ತೇವೆ. ಕಾಯಿಲೆ ಕುರಿತು ಆರಂಭದಲ್ಲೇ ತೆಗೆದುಕೊಳ್ಳುವ ಮುಂಜಾಗ್ರತಾ ತಪಾಸಣಾ ಕ್ರಮಗಳು ವ್ಯತ್ಯಾಸವನ್ನುಂಟುಮಾಡುವುದರಿಂದ ಸೌಮ್ಯ ಲಕ್ಷಣಗಳನ್ನು ಸಹ ನಿರ್ಲಕ್ಷಿಸಬಾರದು ಎಂದರು.

ಇದನ್ನೂ ಓದಿ : ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಭವ್ಯ ಗೌಡ! ಯಾವ ಸಿನಿಮಾ ಗೊತ್ತಾ!?

50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಪುರುಷರು ಈ ಅವಕಾಶ ಬಳಸಿಕೊಳ್ಳಲು ಮತ್ತು ತಪಾಸಣೆಗೆ ಒಳಗಾಗಲು ಆಸ್ಪತ್ರೆ ಆಹ್ವಾನಿಸಿದೆ.

Continue Reading

DAKSHINA KANNADA

ಜಾಗತಿಕ ಬಂಟರ ಸಂಘಗಳ ಒಕ್ಕೂಟ : 29ನೇ ವಾರ್ಷಿಕ ಮಹಾಸಭೆ

Published

on

ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು  ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಿಗೆ ಮತ್ತು ಸಾಧಕರಿಗೆ ಗೌರವ ಸನ್ಮಾನ ನ.25 ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಂಟ್ಸ್ ಹಾಸ್ಟೆಲ್ ಬಳಿ ಇರುವ  ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ ಗಂಟೆ 10 ರಿಂದ 11 ರ ವರೆಗೆ ಕಾರ್ಯಕಾರಿ ಸಮಿತಿ ಸಭೆ ಮತ್ತು 29ನೇ ವಾರ್ಷಿಕ ಮಹಾಸಭೆ  ಜರುಗಲಿದೆ. ಬೆಳಿಗ್ಗೆ  11 ರಿಂದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ  ಹಾಗೂ ಬಹಿರಂಗ ಅಧಿವೇಶನ ಕಾರ್ಯಕ್ರಮ ನಡೆಯಲಿದೆ.

ಬಹಿರಂಗ ಅಧಿವೇಶನದಲ್ಲಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಒಕ್ಕೂಟದ ದಾನಿ  ಉಮಾ ಕೃಷ್ಣ ಶೆಟ್ಟಿ ದಂಪತಿಗೆ  ಸನ್ಮಾನ ಕಾರ್ಯಕ್ರಮ ಮತ್ತು 2025ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಿಗೆ ಗೌರವ ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳು ಜರುಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ.

ಇದನ್ನೂ ಓದಿ : ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಭವ್ಯ ಗೌಡ! ಯಾವ ಸಿನಿಮಾ ಗೊತ್ತಾ!?

ಸಮಾರಂಭದಲ್ಲಿ ಮಹಾದಾನಿ, ದಾನಿಗಳು, ಪದಾಧಿಕಾರಿಗಳು, ವಿವಿಧ ಬಂಟರ ಸಂಘಗಳ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page