Connect with us

LATEST NEWS

ಕೊಹ್ಲಿ ಎದುರಿಸಿದ ಕಠಿಣ ಬೌಲರ್ ಇವರಂತೆ ?

Published

on

ಮಂಗಳೂರು/ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೀವರ್ ಕ್ರಿಕೆಟ್ ಲೋಕವನ್ನು ಆವರಿಸಿದೆ. ಮಾರ್ಚ್ 22ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯ ನಡೆಯಲಿದ್ದು, ಈ ಮ್ಯಾಚ್‌ನಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿದೆ.


ಸೀಸನ್ 18ಕ್ಕೆ ಎಲ್ಲಾ ತಂಡಗಳು ಅಭ್ಯಾಸ ಪ್ರಾರಂಭಿಸಿದ್ದು, ಆರ್‌ಸಿಬಿ ಕೂಡ ಈ ಸೀಸನ್‌ಗೆ ಸಜ್ಜಾಗಿ ನಿಂತಿದೆ. ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಇದೆಲ್ಲದರ ನಡುವೆ ಕೊಹ್ಲಿ ಐಪಿಎಲ್‌ನಲ್ಲಿ ನಾನೆದುರಿಸಿದ ಅತ್ಯಂತ ಕಠಿಣ ಬೌಲರ್ ಯಾರೆಂಬುದನ್ನು ಹೇಳಿದ್ದಾರೆ.

ಆರ್‌ಸಿಬಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಾನೆದುರಿಸಿದ ಕಠಿಣ ಬೌಲರ್ ಎಂದರೆ ಅದು ಜಸ್‌ಪ್ರೀತ್ ಬುಮ್ರಾ ಎಂದಿದ್ದಾರೆ. ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್. ಅವರನ್ನು ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: IML 2025: ಇಂಡಿಯಾ ಮಾಸ್ಟರ್ಸ್‌ಗೆ ಚಾಂಪಿಯನ್‌ ಕಿರೀಟ

ಬುಮ್ರಾ ಐಪಿಎಲ್‌ನಲ್ಲಿ ಹಲವು ಬಾರಿ ನನ್ನನ್ನು ಔಟ್ ಮಾಡಿದ್ದಾರೆ. ಅವರನ್ನು ನೆಟ್ಸ್‌ನಲ್ಲೂ ಎದುರಿಸುವುದು ಅತ್ಯಂತ ಕಠಿಣವಾಗಿರುತ್ತದೆ. ಅವರನ್ನು ಎದುರಿಸಲು ನಾವು ಯಾವಾಗಲೂ, ಪ್ರತಿ ಚೆಂಡಿಗೂ ಮೈಂಡ್ ಗೇಮ್‌ನೊಂದಿಗೆ ಸಿದ್ದವಾಗಿರಬೇಕು ಎಂದು ಕೊಹ್ಲಿ ಬುಮ್ರಾ ಬೌಲಿಂಗ್ ಅನ್ನು ಹೊಗಲಿದ್ದಾರೆ.

 

 

ವಿರಾಟ್ ಕೊಹ್ಲಿ ಹಾಗೂ ಬುಮ್ರಾ ಐಪಿಎಲ್‌ನ 16 ಇನಿಂಗ್ಸ್‌ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಬುಮ್ರಾ ಎಸೆದ 95 ಎಸೆತಗಳನ್ನು ಎದುರಿಸಿರುವ ಕೊಹ್ಲಿ 140 ರನ್​ ಗಳಿಸಿದ್ದಾರೆ. ಇದರ ನಡುವೆ 5 ಬಾರಿ ವಿಕೆಟ್​ ಅನ್ನು ಸಹ ಒಪ್ಪಿಸಿದ್ದಾರೆ. ಇನ್ನು ಬುಮ್ರಾ-ಕೊಹ್ಲಿ ಮುಖಾಮುಖಿಯಲ್ಲಿ ಮೂಡಿಬಂದಿರುವ ಫೋರ್​ಗಳ ಸಂಖ್ಯೆ 15. ಹಾಗೆಯೇ ಬುಮ್ರಾ ಎಸೆತಗಳಲ್ಲಿ ಕೊಹ್ಲಿ ಕೇವಲ 5 ಸಿಕ್ಸ್ ಮಾತ್ರ ಬಾರಿಸಿದ್ದಾರೆ.

 

LATEST NEWS

ಕೊಹ್ಲಿಯ 30 ರನ್‌ನಲ್ಲಿದೆ ಆರ್‌ಸಿಬಿಯ ಇಂದಿನ ಭವಿಷ್ಯ..!?

Published

on

ಮಂಗಳೂರು/ನವದೆಹಲಿ: ಐಪಿಎಲ್‌ನ 2025ರ 46ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇಂದಿನ ಮ್ಯಾಚ್‌ನಲ್ಲಿ ಕೊಹ್ಲಿಯ 30 ರನ್‌ನಲ್ಲಿ ಆರ್‌ಸಿಬಿಯ ಭವಿಷ್ಯ ನಿಂತಿದೆ ಎಂದು ಹೇಳಿದರೆ ತಪ್ಪಗಲಾರದು.

ಹೌದು.. ಇಂದಿನ ಪಂದ್ಯವು ಪಾಟೀದರ್ ಪಡೆಗೆ ಇದು ಪ್ರತಿಕಾರದ ಪಂದ್ಯ. ಬೆಂಗಳೂರಿನ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಡೆಲ್ಲಿ 6 ವಿಕೆಟ್‌ಗಳಿಂದ ಆರ್‌ಸಿಬಿಯನ್ನು ಮಣಿಸಿತ್ತು.

ಈಗಿನ ಲೆಕ್ಕಾಚಾರದಂತೆ ಆರ್‌ಸಿಬಿ, ಡೆಲ್ಲಿ ಎರಡೂ ಪ್ಲೇ ಆಫ್‌ನತ್ತ ಮುಖ ಮಾಡಿರುವ ತಂಡಗಳು. ಡೆಲ್ಲಿ 8ರಲ್ಲಿ 6 ಪಂದ್ಯ ಗೆದ್ದು 2ನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ 9ರಲ್ಲಿ 6 ಪಂದ್ಯ ಗೆದ್ದು 3ನೇ ಸ್ಥಾನದಲ್ಲಿದೆ. ಎರಡೂ ತಂಡಗಳು 12 ಅಂಕಗಳನ್ನು ಹೊಂದಿವೆ. ರನ್‌ರೇಟ್‌ನಲ್ಲಿ ಮುಂದಿರುವ ಕಾರಣ ಡೆಲ್ಲಿ ಒಂದು ಮೆಟ್ಟಿಲು ಮೇಲಿದೆ.

ಇಂದು ಕೋಟ್ಲಾದ ಕದನವನ್ನು ಗೆಲ್ಲುವವರು ಅಗ್ರಸ್ಥಾನಕ್ಕೆ ನೆಗೆಯುತ್ತಾರಷ್ಟೇ ಅಲ್ಲ, ಇವರ ಮುಂದಿನ ಸುತ್ತಿನ ಪ್ರವೇಶವೂ ಬಹುತೇಕ ಖಾತ್ರಿಗೊಳ್ಳುವ ಸಾಧ್ಯತೆಯಿದೆ ಎಂಬುದನ್ನು ಗಮನಿಸಬಹುದು.

ಇದನ್ನೂ ಓದಿ: ಗೌತಮ್ ಗಂಭೀರ್‌ಗೆ ಕೊ*ಲೆ ಬೆದರಿಕೆ ಹಾಕಿದ್ದು ಯಾರು ಗೊತ್ತಾ..!?

ಕೊಹ್ಲಿಯ 30 ರನ್‌ನಲ್ಲಿದೆ, ಆರ್‌ಸಿಬಿಯ ಇಂದಿನ ಭವಿಷ್ಯ..!
ಈ ಸೀಸನ್‌ನಲ್ಲಿ ಆರ್‌ಸಿಬಿಯ ಯಶಸ್ಸಿನ ಪಯಣಕ್ಕೆ ಸ್ಟಾರ್‌ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆಡಿದ ಎಲ್ಲಾ ಪಂದ್ಯಗಳಲ್ಲೂ ವಿರಾಟ್ 30ಕ್ಕಿಂತ ಹೆಚ್ಚು ರನ್ ಗಳಿಸಿದ ಪ್ರತಿಯೊಂದು ಪಂದ್ಯವನ್ನು ಆರ್‌ಸಿಬಿ ಗೆದ್ದಿದೆ. ಅದಕ್ಕಿಂತ ಕಡಿಮೆ ರನ್ ಗಳಿಸಿದ ಪಂದ್ಯಗಳೆಲ್ಲವೂ ಸೋತಿದೆ (ಗುಜರಾತ್ ವಿರುದ್ದ 7, ದೆಹಲಿ ವಿರುದ್ದ 22, ಪಂಜಾಬ್ ವಿರುದ್ದ 1). ಇದರ ಆಧಾರದ ಮೇಲೆ, ಇಂದು ದೆಹಲಿ ವಿರುದ್ದದ ಪಂದ್ಯದಲ್ಲಿ ವಿರಾಟ್ 30ಕ್ಕಿಂತ ಹೆಚ್ಚು ರನ್ ಗಳಿಸಿದರೆ ಆರ್‌ಸಿಬಿ ಖಂಂಡಿತವಾಗಿಯೂ ಗೆಲ್ಲುತ್ತದೆ ಎಂಬುದು ಅಭಿಮಾನಿಗಳ ನಂಬಿಕೆಯಾಗಿದೆ.

Continue Reading

LATEST NEWS

ಐವರು ಮಡದಿಯರ ಮುದ್ದಿನ ಗಂಡ.. ಇಂದು 11 ಮಕ್ಕಳ ತಂದೆ..! ಈತನ ಐದು ಮದುವೆಗೆ ಕಾರಣ ಏನು ಗೊತ್ತಾ?

Published

on

ಮಂಗಳೂರು/ಲಾಸ್ ಏಂಜಲೀಸ್: ಒಬ್ಬ ವ್ಯಕ್ತಿಗೆ ಒಂದು ಮದುವೆಯಾದರೇ ಸಾಕು ಸಂಸಾರದ ಜಂಜಾಟದಲ್ಲಿ ಬೇಸರ ಮೂಡಿಸುತ್ತದೆ. ಆದರೆ ಲಾಸ್‌ ಏಂಜಲೀಸ್‌ನ ವ್ಯಕ್ತಿಯೊಬ್ಬ ಐದು ಮದುವೆಯಾಗಿದ್ದಾನೆ. ಈಗ ಅವನಿಗೆ 11 ಮಕ್ಕಳಿದ್ದಾರೆ. ಅವನು ಏಕಪತ್ನಿತ್ವ ತ್ಯಜಿಸಿ ಬಹುಪತ್ನಿತ್ವ ಹೊಂದಲು ಕಾರಣ ಕೂಡ ಹೇಳಿದ್ದಾನೆ.

ಹೌದು.. ಲಾಸ್ ಏಂಜಲೀಸ್ ಜೇಮ್ಸ್ ಬ್ಯಾರೆಟ್ ತನ್ನ ಗೆಳತಿಯೊಬ್ಬಳಿಗೆ ಮೋಸ ಮಾಡಿದನು. ಅವನಿಗೆ ಬೇರೆ ಮಹಿಳೆಯರೊಂದಿಗೆ ಸಂಬಂಧವಿತ್ತು. ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕೆಂದು, ಅವನು ಏಕಪತ್ನಿತ್ವವನ್ನು ತ್ಯಜಿಸಿ ಬಹುಪತ್ನಿತ್ವವನ್ನು ಸ್ವೀಕರಿಸಿದನು.

ಅಂದರೆ ಆತ ಒಂದೇ ಬಾರಿಗೆ ಹಲವಾರು ಮಹಿಳೆಯರನ್ನು ಪ್ರೀತಿಸೋಕೆ ಶುರು ಮಾಡಿದನು. ಅವರಲ್ಲಿ ಒಬ್ಬರಿಗೆ ತಿಳಿಯದೆ ಮತ್ತೊಬ್ಬರೊಂದಿಗೆ ಸಂಬಂಧವಿತ್ತು. ಇನ್ನು ಮುಂದೆ ಯಾರನ್ನೂ ಮೋಸಗೊಳಿಸಬಾರದು ಎಂಬ ಉದ್ದೇಶದಿಂದ ತಾನೂ ಸಂಬಂಧದಲ್ಲಿದ್ದ ಎಲ್ಲರನ್ನು ಒಟ್ಟಿಗೆ ಮದುವೆಯಾದನು.

ಇದನ್ನೂ ಓದಿ: ನಾನು ಅಷ್ಟೊಂದು ಫೇಮಸ್ ಕೂಡ ಆಗಿರಲಿಲ್ಲ, ಆದರೆ ಕನ್ನಡದ ಸ್ಟಾರ್ ನಟ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿದ್ರು..! ಗಗನಾ ಭಾರಿ

ಜೇಮ್ಸ್ ಹೇಳುವಂತೆ, ತಾನು ಒಬ್ಬಳೇ ಗೆಳತಿಯೊಂದಿಗೆ ಇದ್ದಾಗ, ತನ್ನೊಳಗೆ ನಿರಂತರವಾಗಿ ಸಂಘರ್ಷಕ್ಕೊಳಗಾಗುತ್ತಿದೆ ಮತ್ತು ತಾನು ತನ್ನೊಂದಿಗೆ ಪ್ರಾಮಾಣಿಕವಾಗಿಲ್ಲ ಎಂದು ಭಾವಿಸುತ್ತಿದೆ. ಆದರೆ ಈಗ ನಾನು ಐವರ ಜತೆ ಮದುವೆಯಾಗಿದ್ದೇನೆ. ಇದು ನನ್ನ ಪತ್ನಿಯರಿಗೂ ಗೊತ್ತು. ನನಗೆ 11 ಮಕ್ಕಳು ಇದ್ದಾರೆ. ಐದು ಜನ ಪತ್ನಿಯರೊಂದಿಗೆ ಸಂತೋಷವಾಗಿದ್ದರೂ, ಇಷ್ಟು ದೊಡ್ಡ ಕುಟುಂಬವನ್ನು ಆರ್ಥಿಕವಾಗಿ ನಿರ್ವಹಿಸುವುದು ತನಗೆ ದೊಡ್ಡ ಸವಾಲಾಗಿದೆ. ಇಡೀ ಕುಟುಂಬವು ಒಟ್ಟಿಗೆ ವಾಸಿಸುತ್ತದೆ, ಪರಸ್ಪರ ಬೆಂಬಲಿಸುತ್ತಾರೆ ಎಂದಿದ್ದಾನೆ.

ಜೇಮ್ಸ್ ಬ್ಯಾರೆಟ್ ಉದ್ದೇಶವೆನೆಂದರೆ, ತನ್ನನ್ನು ತಾನು ಸುಧಾರಿಸಿಕೊಳ್ಳುವ ಉದ್ದೇಶದಿಂದ, ಆತ ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಅಗತ್ಯವನ್ನು ತಪ್ಪಿಸಲು ಐದು ಮದುವೆಯಾಗಿದ್ದಾನೆಯಂತೆ.

Continue Reading

LATEST NEWS

ವೈರಲ್ ವಿಡಿಯೋ: ಎಳನೀರಿನಲ್ಲೂ ಟೀ ಮಾಡ್ತಾರೇ.. ಹೇಗೆ ಗೊತ್ತಾ..? 

Published

on

ಸಾಮಾನ್ಯವಾಗಿ ನೀರು, ಹಾಲನ್ನು ಮಿಶ್ರಣ ಮಾಡಿ ಚಹಾವನ್ನು ತಯಾರು ಮಾಡ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ನೀರಿನ ಬದಲು ಎಳನೀರು ಹಾಕಿ ಮಹಿಳೆ ಬಿಸಿ ಬಿಸಿ ಚಹಾವನ್ನು ತಯಾರಿಸಿದ್ದಾಳೆ ಈ ಕುರಿತ ವಿಡಿಯೋವನ್ನು _hetals_art_ಹೆಸರಿನ ಇನ್‌ಸ್ಟ್ರಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಗ್ಯಾಸ್ ಒಲೆ ಮೇಲೆ ಸೀಯಾಳವನ್ನಿಟ್ಟು ಅದಕ್ಕೆ ಎಳನೀರು, ಚಹಾಪುಡಿ, ಸಕ್ಕರೆ, ಹಾಲು ಸೇರಿಸಿ ಬಿಸಿ ಬಿಸಿ ಚಹಾ ತಯಾರಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಏಪ್ರಿಲ್ 2ರಂದು ಶೇರ್ ಮಾಡಲಾದ ಈ ವಿಡಿಯೋ 2.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಈ ಜನಗಳು ನಮ್ಮ ಭಾವನೆಗಳ ಜೊತೆ ಯಾಕೆ ಹೀಗೆ ಆಡ್ತಾರೆ” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದೆಂಥಾ ಹುಚ್ಚಾಟ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದೆಂಥಾ ಅವಸ್ಥೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.

Watch Video:

Continue Reading
Advertisement

Trending

Copyright © 2025 Namma Kudla News

You cannot copy content of this page