Connect with us

LATEST NEWS

ಭ್ರಷ್ಟ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ?

Published

on

ಭ್ರಷ್ಟಾಚಾರ ಎಂಬುವುದು ಜಗತ್ತಿನಲ್ಲಿ ಪರಿಹರಿಸಲಾಗದೇ ಉಳಿದಿರುವ ಮಾರಾಕ ಖಾಯಿಲೆಯಾಗಿ ಮಾರ್ಪಟ್ಟಿದೆ. ಜನರಿಂದ ಹಣ ಪಡೆದು ಜನರಿಗೆ ಮೋಸ ಮಾಡುವ ಭ್ರಷ್ಟ ಪ್ರಕರಣಗಳು ವಿಶ್ವದಾದ್ಯಂತ ವ್ಯಾಪಿಸಿದೆ. ಜಗತ್ತಿನ ಯಾವ ದೇಶದಲ್ಲಿ ಭ್ರಷ್ಟಾಚಾರ ಜಾಸ್ತಿ ಇದೆ  ಮತ್ತು ಭಾರತದ ಸ್ಥಾನ ಎಷ್ಟು ಎಂದು ನೋಡೋಣ.

ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಬುಧವಾರ (ಫೆ.12) 2024ನೇ ಸಾಲಿನ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) ರ್ಯಾಂಕಿಗ್ ವರದಿಯನ್ನು ಬಿಡುಗಡೆಗೊಳಿಸಿದ್ದು, ಜಗತ್ತಿನ ಅತೀ ಕಡಿಮೆ ಭ್ರಷ್ಟಾಚಾರದಲ್ಲಿ ಡೆನ್ಮಾರ್ಕ್ ಮೊದಲ ಸ್ಥಾನ ಪಡೆದಿದೆ.

ಜಾಗತಿಕವಾಗಿ ಸಾರ್ವಜನಿಕ (ಸರ್ಕಾರಿ ವಲಯ) ವಲಯಗಳಲ್ಲಿನ ಭ್ರಷ್ಟಾಚಾರ ಪ್ರಮಾಣ ಮಟ್ಟದ ಆಧಾರದ ಮೇಲೆ ಭ್ರಷ್ಟಾಚಾರದ ಸೂಚ್ಯಂಕ ಮತ್ತು ಶ್ರೇಣಿಯನ್ನು ನಿಗದಿಪಡಿಸಲಾಗುತ್ತದೆ ಎಂದು ವರದಿ ವಿವರಿಸಿದೆ.

ಸಿಪಿಐ ಪ್ರಕಾರ, 2024ರ ಭ್ರಷ್ಟಾಚಾರ ಸೂಚ್ಯಂಕದಲ್ಲಿ 180 ದೇಶಗಳಲ್ಲಿ ಭಾರತ 96ನೇ ಸ್ಥಾನ ಪಡೆದಿದೆ. ಇತ್ತೀಚಿನ ವರದಿಯ ಪ್ರಕಾರ, ಭಾರತದ ಅಂಕವು ಒಂದು ಪಾಯಿಂಟ್‌ನಿಂದ 38ಕ್ಕೆ ಇಳಿದಿದೆ. ಆದರೆ, 2023ರಲ್ಲಿ ಅದು 39 ಆಗಿತ್ತು ಎಂಬುದು ಗಮನಿಸಬೇಕಾದ ಅಂಶ. ತಜ್ಞರು ಮತ್ತು ಉದ್ಯಮಿಗಳ ಪ್ರಕಾರ, ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ಆಧರಿಸಿ ಸಿಪಿಐ 180 ದೇಶಗಳನ್ನು ಶ್ರೇಣೀಕರಿಸಿದೆ.

ಇದನ್ನೂ ಓದಿ: ಸಾಲ ವಸೂಲಿಗೆ ಬಂದ ಬ್ಯಾಂಕ್ ಉದ್ಯೋಗಿಯನ್ನೇ ಮದುವೆಯಾದ ವಿವಾಹಿತ ಮಹಿಳೆ !

ಈ ಪಟ್ಟಿಯಲ್ಲಿ ಶ್ರೇಯಾಂಕಗಳನ್ನು ಶೂನ್ಯದಿಂದ 100 ಅಂಕಗಳವರೆಗೂ ಕೊಡಲಾಗಿದೆ. ಇದರಲ್ಲಿ ಶೂನ್ಯ ಅಧಿಕ ಭ್ರಷ್ಟ ಎಂದು ಸೂಚಿಸಿದರೆ, 100 ತುಂಬಾ ಸ್ವಚ್ಛ ಎಂದು ತಿಳಿಸಿದೆ. ಈ ಪಟ್ಟಿಯಲ್ಲಿ ಭಾರತದ ಒಟ್ಟಾರೆ ಅಂಕ 38, 2023ರಲ್ಲಿ 39 ಅಂಕ ಮತ್ತು 2022ರಲ್ಲಿ 40 ಅಂಕ ಹಾಗೂ 2023ರಲ್ಲಿ ಭಾರತ 93ನೇ ಸ್ಥಾನದಲ್ಲಿದ್ದು, 2024ರಲ್ಲಿ 96ನೇ ಸ್ಥಾನಕ್ಕೆ ಕುಸಿದಿದೆ.

ಅಭಿವೃದ್ದಿ ಹೊಂದಿದ ದೇಶಗಳ ಸ್ಥಾನ

ಜಗತ್ತಿನ ದೊಡ್ಡಣ್ಣ ಅಮೆರಿಕ 69ನೇ ಸ್ಥಾನದಿಂದ 65ಕ್ಕೆ ಕುಸಿದಿದೆ. ಫ್ರಾನ್ಸ್ 67ನೇ ಸ್ಥಾನ, ಜರ್ಮನಿ 75ನೇ ಸ್ಥಾನ, ಚೀನಾ 76ನೇ ಸ್ಥಾನದಲ್ಲಿದೆ.

ಕಡಿಮೆ ಭ್ರಷ್ಟಾಚಾರ ಇರುವ ದೇಶಗಳು

ಡೆನ್ಮಾರ್ಕ್ (90) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಕನಿಷ್ಠ ಭ್ರಷ್ಟ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದರ ನಂತರದಲ್ಲಿ ಫಿನ್‌ಲ್ಯಾಂಡ್ (88) ಮತ್ತು ಸಿಂಗಾಪುರ (84), ಇನ್ನು ಸ್ವಚ್ಛ ಸಾರ್ವಜನಿಕ ವಲಯವನ್ನು ಹೊಂದಿರುವ ಟಾಪ್ ಹತ್ತರ ಪಟ್ಟಿಯಲ್ಲಿ ಇತರ ದೇಶಗಳಾದ ನಾರ್ವೆ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸ್ವೀಡನ್, ಲಕ್ಸೆಂಬರ್ಗ್ ಮತ್ತು ನೆದರ್‌ಲ್ಯಾಂಡ್ಸ್ ಸೇರಿವೆ.

ಹೆಚ್ಚು ಭ್ರಷ್ಟಾಚಾರ ಇರುವ ದೇಶಗಳು

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ವರದಿ ಪ್ರಕಾರ, ದಕ್ಷಿಣ ಸೂಡಾನ್ 8 ಅಂಕಗಳೊಂದಿಗೆ ಅತೀ ದೊಡ್ಡ ಭ್ರಷ್ಟಾಚಾರದ ದೇಶವಾಗಿದ್ದು, 180ನೇ ಸ್ಥಾನ ಪಡೆದಿದೆ. ಸೋಮಾಲಿಯಾ 179ನೇ ಸ್ಥಾನ, ವೆನಿಜುವೆಲಾ 178ನೇ ಸ್ಥಾನ ಪಡೆದಿದೆ. ಸಿರಿಯಾ 177ನೇ ಸ್ಥಾನ, ಯೆಮೆನ್, ಲಿಬಿಯಾ, ಏರಿಟ್ರಿಯಾ,  ನಿಕಾರಗುವಾ 172ನೇ ಸ್ಥಾನ, ಈಕ್ವಟೋರಿಯಲ್ 173ನೇ ಸ್ಥಾನಗಳಲ್ಲಿದೆ.

DAKSHINA KANNADA

ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ 5.75 ಮೀ ನೀರು ಸಂಗ್ರಹ..! ಎರಡು ತಿಂಗಳು ನಿರಾತಂಕ..!

Published

on

ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊಂಚ ನೀರಿನ ಸಂಗ್ರಹ ಕಡಿಮೆ ಆಗಿದೆ. ಹಾಗಂತ ಮುಂದಿನ 60 ದಿನಗಳ ಕಾಲ ನಗರದ ನೀರಿನ ಬೇಡಿಕ ಪೂರೈಸುವ ವಿಚಾರವಾಗಿ ಯಾವುದೇ ಆತಂಕ ಇಲ್ಲ ಎನ್ನಲಾಗಿದೆ. ಹಾಗಂತ ಮಳೆ ಬಾರದೆ ಬಿಸಿಲಿನ ತಾಪ ಏರಿಕೆಯಾದ್ರೆ ಕೊಂಚ ಮಟ್ಟಿನ ತೊಂದರೆಯನ್ನು ತಳ್ಳಿಹಾಕುವಂತಿಲ್ಲ.

ಮಂಗಳೂರು ನಗರಕ್ಕೆ ಪ್ರತಿ ನಿತ್ಯ 160 MLD ನೀರಿನ ಬೇಡಿಕೆ ಇದ್ದು, ತುಂಬೆ ಡ್ಯಾಮ್ ನಿಂದ ನಿರಂತರವಾಗಿ ನೀರು ಪೂರೈಕೆ ಆಗುತ್ತಿದೆ. ಮಂಗಳೂರಿನಲ್ಲಿರುವ 80 MLD ಸಾಮರ್ಥ್ಯದ ಎರಡು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣಗೊಂಡು ನಗರದ ಜನರಿಗೆ ಪೂರೈಕೆ ಆಗುತ್ತಿದೆ. ತುಂಬೆ ಡ್ಯಾಮ್ ನ ಶೇಖರಣಾ ಸಾಮರ್ಥ್ಯ 6 ಮೀಟರ್ ಆಗಿದ್ದು, ಇದೀಗ ಮಾರ್ಚ್ ಅಂತ್ಯದ ವೇಳೆಗೆ 5.75 ಮೀಟರ್ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನೀರಿನ ಮಟ್ಟ 5.85 ಇದ್ದು, ಕಳೆದ ವರ್ಷಕ್ಕಿಂತ ಈ ವರ್ಷ .10 ಮೀಟರ್ ಕಡಿಮೆ ನೀರಿನ ಸಂಗ್ರಹ ಇದೆ.

ತುಂಬೆ ವೆಂಟೆಡ್ ಡ್ಯಾಮ್ ಗೂ ಮೊದಲು ಸಿಗುವ ಎಎಂಆರ್, ಸರಳಿಕಟ್ಟೆ, ಜಕ್ಕ್ರಿಬೆಟ್ಟು, ಮೊದಲಾದ ಕಡೆಯಲ್ಲೂ ನೀರಿನ ಸಂಗ್ರಹ ಇರುವ ಕಾರಣ ಮಂಗಳೂರು ನಗರಕ್ಕೆ ನೀರು ಪೂರೈಕೆಗೆ ಯಾವುದೇ ಆತಂಕ ಇಲ್ಲಾ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಂತ ನೀರನ್ನು ಜನರು ಇತಿಮಿತಿಯಲ್ಲಿ ಬಳಸುವ ಮೂಲಕ ನೀರಿನ ಉಳಿತಾಯ ಮಾಡುವ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

Continue Reading

LATEST NEWS

ಹಬ್ಬಕ್ಕೆಂದು ಊರಿಗೆ ಹೋಗುತ್ತೀರಾ..? ಹಾಗಾದರೆ ಬಸ್ ಟಿಕೆಟ್ ದರ ಎಷ್ಟಿದೆ ನೋಡಿ

Published

on

ಬೆಂಗಳೂರು: ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೂರು ದಿನಗಳ ರಜೆ ಇದೆ ಎಂದು ಅನೇಕ ಜನರು ಊರಿನ ಕಡೆ ಹೋಗಲು ತಯಾರಾಗಿದ್ದಾರೆ. ಆದರೆ ಹಬ್ಬಕ್ಕೆ ಊರಿಗೆ ಹೊರಟವರಿಗೆ ಇದೀಗ ಬಿಗ್‌ ಶಾಕ್ ಎದುರಾಗಿದೆ. ಖಾಸಗಿ ಬಸ್ ಟಿಕೆಟ್ ದರವು 3 ಪಟ್ಟು ಹೆಚ್ಚಾಗಿದೆ.

ಮಾರ್ಚ್- 29 ಶನಿವಾರ, ಮಾರ್ಚ್‌ – 30 ಯುಗಾದಿ ಹಬ್ಬ ಹಾಗೂ ಮಾರ್ಚ್‌ 31 ರಂಜಾನ್ ಹಬ್ಬ ಹೀಗೆ ಒಟ್ಟು ಮೂರು ದಿನಗಳ ಕಾಲ ರಜೆ ಇರುತ್ತದೆ. ಹೀಗಾಗಿ ಮಾರ್ಚ್ 28ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಜನರು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಖಾಸಗಿ ಬಸ್ ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ.

ಯಾವ ಊರಿಗೆ ಎಷ್ಟು ಬಸ್ ಟಿಕೆಟ್ ದರ?

ಬೆಂಗಳೂರು-ದಾವಣಗೆರೆ

ಪ್ರಸ್ತುತ ದರ = 450-1300
ಹಬ್ಬದ ದರ = 750-5500

ಬೆಂಗಳೂರು-ಧಾರವಾಡ

ಪ್ರಸ್ತುತ ದರ = 600-1100
ಹಬ್ಬದ ದರ = 1069-5500

ಬೆಂಗಳೂರು-ಹುಬ್ಬಳ್ಳಿ

ಪ್ರಸ್ತುತ ದರ=475-1100
ಹಬ್ಬದ ದರ=1200-4200

ಬೆಂಗಳೂರು-ಬೆಳಗಾವಿ

ಪ್ರಸ್ತುತ ದರ=389-1200
ಹಬ್ಬದ ದರ=1129-5500

ಬೆಂಗಳೂರು-ಮಂಗಳೂರು

ಪ್ರಸ್ತುತ ದರ=650-1300
ಹಬ್ಬದ ದರ=1200-4500

ಬೆಂಗಳೂರು-ಕಲ್ಬುರ್ಗಿ

ಪ್ರಸ್ತುತ ದರ=750-1000
ಹಬ್ಬದ ದರ=1200-2200

ಬೆಂಗಳೂರು-ರಾಯಚೂರು

ಪ್ರಸ್ತುತ ದರ=650-990
ಹಬ್ಬದ ದರ=1100-2990

ಬೆಂಗಳೂರು-ಹಾಸನ

ಪ್ರಸ್ತುತ ದರ=463-1000
ಹಬ್ಬದ ದರ=750-1600

ಬೆಂಗಳೂರು-ಯಾದಗಿರಿ

ಪ್ರಸ್ತುತ ದರ=699-900
ಹಬ್ಬದ ದರ=1300-2200

ಬೆಂಗಳೂರು-ಶಿವಮೊಗ್ಗ

ಪ್ರಸ್ತುತ ದರ =500-990
ಹಬ್ಬದ ದರ =1199-1800

ಈ ಕುರಿತು ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ನಾವು 50 ರಿಂದ 60 ರಷ್ಟು ಟಿಕೆಟ್ ದರ ಏರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

Continue Reading

DAKSHINA KANNADA

ಹಳೆ ಮೀಸಲು ಪಟ್ಟಿಯಂತೆ ಪಾಲಿಕೆ ಚುನಾವಣೆ ..!? ಶೀಘ್ರವೇ ಆಗಲಿದೆ ಘೋಷಣೆ..!

Published

on

ಮಂಗಳೂರು / ಮೈಸೂರು: ಮಂಗಳೂರು ಸೇರಿದಂತೆ ರಾಜ್ಯದ ಐದು ಮಹಾನಗರ ಪಾಲಿಕೆಗೆ ಈ ವರ್ಷದಲ್ಲೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಸರ್ಕಾರದಿಂದ ಈ ಐದೂ ಮಹಾನಗರ ಪಾಲಿಕೆಗಳ ಮೀಸಲು ಪಟ್ಟಿ ನೀಡಿದ್ರೆ ಅದರಂತೆ ಚುನಾವಣೆ ನಡೆಯಲಿದೆ. ಇಲ್ಲವಾದಲ್ಲಿ ಹೈ ಕೋರ್ಟ್ ಮೊರೆ ಹೋಗಿ ಹಳೆ ಮೀಸಲು ಪಟ್ಟಿಯಂತೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.


ಮಂಗಳೂರು ಸೇರಿದಂತೆ ಮೈಸೂರು, ಶಿವಮೊಗ್ಗ, ದಾವರಣಗೆರೆ, ತುಮಕೂರು ಈ ಐದು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿದಿಗಳ ಅವದಿ ಮುಕ್ತಾಯಗೊಂಡಿದೆ. ಈ ಐದೂ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆಸಬೇಕಾಗಿದ್ದು, ಚುನಾವಣಾ ಆಯೋಗ ರಾಜ್ಯ ಸರ್ಕಾರದ ಬಳಿ ಮೀಸಲು ಪಟ್ಟಿ ನೀಡಲು ಮನವಿ ಮಾಡಿದೆ. ನಿಯಮಾನುಸಾರ ಸರ್ಕಾರ ಮೀಸಲು ಪಟ್ಟಿ ಕೊಟ್ಟ ಬಳಿಕ ಅದರಂತೆ ಚುನಾವಣೆ ನಡೆಸಲಾಗುತ್ತದೆ. ಆದ್ರೆ ಸರ್ಕಾರ ಇನ್ನೂ ಮೀಸಲು ಪಟ್ಟಿ ನೀಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೊಂದು ವೇಳೆ ಮೀಸಲು ಪಟ್ಟಿ ನೀಡದೇ ಇದ್ರೆ ಈ ಹಿಂದಿನ ಮೀಸಲು ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣ ಆಯಕ್ತು ಜಿ.ಎಸ್. ಸಂಗ್ರೇಶಿ ಮಾಹಿತಿ ನೀಡಿದ್ದಾರೆ. ಮತದಾರರ ಪಟ್ಟಿ ಸಿದ್ಧವಾಗಿದೆಯಾದ್ರೂ ಮೀಸಲು ಪಟ್ಟಿಗಾಗಿ ಮಾತ್ರ ಕಾಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page