Connect with us

LATEST NEWS

WATCH VIDEO : ಪೊರಕೆಯಲ್ಲಿ ಬ್ಯಾಡ್ಮಿಂಟನ್ ಆಡಿದ ಆಟಗಾರ; ನೆಟ್ಟಿಗರು ಫಿದಾ

Published

on

ಕ್ರೀಡೆಗಳೆಂದರೆ ಹಲವರಿಗೆ ಅಚ್ಚುಮೆಚ್ಚು. ಕೆಲವರು ಕ್ರೀಡೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡವರು ಇದ್ದಾರೆ. ಇನ್ನು ಕೆಲವರು, ಹಲವರು ಹವ್ಯಾಸಕ್ಕಾಗಿ ಆಟ ಆಡುತ್ತಾರೆ. ಒಬ್ಬೊಬ್ಬರದು ಒಂದೊಂದು ತೆರನಾದ ಆಸಕ್ತಿ. ಕೆಲವರಿಗೆ ಕ್ರಿಕೆಟ್ ಆಡಲು ಇಷ್ಟ, ಇನ್ನು ಕೆಲವರಿಗೆ ವಾಲಿಬಾಲ್, ಥ್ರೋ ಬಾಲ್ ಹೀಗೆ…ಇನ್ನು ಹೆಚ್ಚಿನವರು ಬ್ಯಾಡ್ಮಿಂಟನ್ ಇಷ್ಟ ಪಡುತ್ತಾರೆ.

ಇಂತಹ ಆಡುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಹೇಳಿ ಕೇಳಿ ಇದು ಸೋಶಿಯಲ್ ಮೀಡಿಯಾ ಯುಗ. ವೀಡಿಯೋಗಳು ವೈರಲ್ ಆಗೋದು ಸಾಮಾನ್ಯ ಸಂಗತಿ. ಒಂದಿಲ್ಲೋಂದು ರೀಲ್ಸ್ ಗಳು ಹರಿದಾಡುತ್ತಿರುತ್ತವೆ. ಇತ್ತೀಚೆಗೆ ಕ್ರೀಡಾಳುಗಳ ಸಾಹಸಮಯ ದೃಶ್ಯಗಳು ಅಥವಾ ಹಾಸ್ಯಮಯ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವಿಭಿನ್ನ ವೀಡಿಯೋವೊಂದು ವೈರಲ್ ಆಗಿದೆ.

ಹೆಚ್ಚಿನವರು ಬ್ಯಾಡ್ಮಿಂಟನ್ ಆಡೋದು ಸಾಮಾನ್ಯ. ಬ್ಯಾಡ್ಮಿಂಟನ್ ಆಡಲು ಬ್ಯಾಡ್ಮಿಂಟನ್ ರಾಕೆಟ್ ಬಳಸಲಾಗುತ್ತೆ. ಹೌದು, ಅದರಲ್ಲೇನು ವಿಶೇಷ ಅಂತಿದ್ದೀರಾ…ಅದರಲ್ಲೇ ಇರೋದು ವಿಶೇಷ…ಇಲ್ಲೊಬ್ಬ ವ್ಯಕ್ತಿ ಬ್ಯಾಡ್ಮಿಂಟನ್ ವಿಭಿನ್ನ ರೀತಿಯಲ್ಲಿ ಆಡಿದ್ದಾರೆ. ಅವರು ರಾಕೆಟ್ ಬಳಸಿಲ್ಲ. ಬದಲಿಗೆ ಪೊರಕೆಯಲ್ಲಿ ಆಡಿದ್ದಾರೆ…!

ಬ್ಯಾಡ್ಮಿಂಡನ್ ಪ್ಲೇಯರ್ ಜಸ್ಟಿನ್ ಎಂ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಬ್ಬರು ಬ್ಯಾಡ್ಮಿಂಟನ್ ಆಡುತ್ತಿರುತ್ತಾರೆ. ಈ ವೇಳೆ ಒಬ್ಬರು ಗುಡಿಸುವಂತೆ ನಟಿಸುತ್ತಾ ಅಲ್ಲಿಗೆ ಬರುತ್ತಾರೆ. ಬಳಿಕ ಅಲ್ಲಿದ್ದ ಆಟಗಾರ್ತಿಯೊಬ್ಬಳನ್ನು ಹೊರಗೆ ಕಳಿಸಿ ತಾನು ಪೊರಕೆಯಲ್ಲಿ ಆಡಲು ಆರಂಭಿಸುತ್ತಾನೆ ವ್ಯಕ್ತಿ. ರಾಕೆಟ್ ಬದಲು ಬ್ಯಾಟ್ ಹಿಡಿದು ಆಟಗಾರ ಆಡಿದರೂ ಎಲ್ಲೂ ಆಟಗಾರ ಒಂದು ಆಟವನ್ನೂ ತಪ್ಪಿಸುವುದಿಲ್ಲ. ಕೊನೆಗೆ ಆತನೇ ಗೆಲ್ಲುತ್ತಾನೆ. ಆತನ ಉತ್ತಮ ಆಟ ಪ್ರದರ್ಶನ ನೋಡಿದ ನೆಟ್ಟಿಗರು ಫಿದಾ ಆಗಿರೋದು ಸುಳ್ಳಲ್ಲ. ಪುಸ್ತಕವನ್ನು ಅದರ ಮುಖಪುಟದಿಂದ ನಿರ್ಣಯಿಸಬೇಡಿ ಎಂದು ವೀಡಿಯೋದಲ್ಲಿ ಟೆಕ್ಸ್ಟ್ ಕಾಣಬಹುದು. ಈ ವೀಡಿಯೋ ನೋಡಿ ಬೆರಗಾಗದವರಿಲ್ಲ. ಅಚ್ಚರಿ ಪಟ್ಟು ಆಟಗಾರನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

DAKSHINA KANNADA

ಶೂಟ್ ಮಾಡಿದರೆ ಮಾತ್ರ ಗೋಹತ್ಯೆ ನಿಲ್ಲಿಸಲು ಸಾಧ್ಯ : ಡಾ. ಭರತ್ ಶೆಟ್ಟಿ ವೈ

Published

on

ಮಂಗಳೂರು: “ಗೋವುಗಳನ್ನು ವಧೆ ಮಂಗಳೂರಿನಲ್ಲಿ ನಗರ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು, ಸಚಿವ ಮಂಕಾಳ ವೈದ್ಯ ಹೇಳಿದಂತೆ ಆರೋಪಿಗಳ ಮೇಲೆ ಗುಂಡಿಕ್ಕಿ ಕ್ರಮ ಕೈಗೊಂಡರೆ ಗೋ ವಧೆ ನಿಲ್ಲಿಸಲು ಸಾಧ್ಯ. ಪೊಲೀಸರು ಸಚಿವರ ಸಲಹೆ ಪಾಲನೆ ಮಾಡಲು ಮುಂದಾಗಬೇಕು” ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದ್ದಾರೆ.

“ಮಂಗಳೂರಿನ ಅಳಕೆಯಲ್ಲಿ ಅಕ್ರಮ ಗೋ ವಧೆ ಕೇಂದ್ರವನ್ನು ಮೇಯರ್ ಮನೋಜ್ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಪತ್ತೆ ಮಾಡಿದನ್ನು ಶ್ಲಾಘಿಸುತ್ತೇನೆ. ದರೋಡೆಕೋರರ ವಿರುದ್ಧ ಫೈರಿಂಗ್ ಮಾಡುವ ಪೊಲೀಸರು ಅಕ್ರಮ ಗೋ ಸಾಗಾಟಗಾರರ ವಿರುದ್ಧವು ಇಂಥ ಕ್ರಮ ಕೈಗೊಂಡರೆ ತಾನಾಗಿಯೇ ಕಡಿಮೆ ಆಗುವುದರಲ್ಲಿ ಸಂಶಯವಿಲ್ಲ. ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಬಿಜೆಪಿ ಸರ್ಕಾರ ಆಸ್ತಿ ಮುಟ್ಟುಗೋಲು ಕ್ರಮ ಜಾರಿಗೆ ತಂದು ಅಕ್ರಮ ಗೋ ವದೆ ಮಾಡುವವರ ವಿರುದ್ಧ ಕ್ರಮ ಕೈಗೊಂಡಿದೆ.” ಎಂದರು.

ಇದನ್ನೂ ಓದಿ : ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಜಾರಕಿಹೊಳಿ ಮಗ ಆಯ್ಕೆ

“ಇಷ್ಟರವರೆಗೆ ನನ್ನ ಕ್ಷೇತ್ರದಲ್ಲಿಯೇ ಹಲವು ಪ್ರಕರಣ ದಾಖಲಿಸಿ ಆಸ್ತಿ ಮುಟ್ಟುಗೋಲು ಹಾಕಿಸಿದ್ದೇನೆ. ಕಾಂಗ್ರೆಸ್ ಸರ್ಕಾರ ಮಾತ್ರ ಗೋ ವಧೆ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡಿದ್ದು ಮತ್ತೆ ಕಸಾಯಿಖಾನೆಗಳು ತಲೆ ಎತ್ತಿವೆ” ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಆರೋಪಿಸಿದ್ದಾರೆ.

Continue Reading

BANTWAL

ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾ*ವು

Published

on

ಬಂಟ್ವಾಳ : ಫ್ಯಾನ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವ ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.

ಅರಳ ನಿವಾಸಿ ಭವಾನಿ ಶಂಕರ ಯಾನೆ ರಾಜೇಶ್ ಮೃತಪಟ್ಟವರು. ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ರಾಜೇಶ್ ತನ್ನ ತಂಗಿ ಮನೆಯಲ್ಲಿ ಫ್ಯಾನ್ ರಿಪೇರಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಬಿದ್ದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಆನ್ಲೈನ್ ವಂಚನೆ ; ಕೊನೆಗೂ ಪೊಲೀಸರ ಕೈವಶವಾದ ಖದೀಮ

ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Continue Reading

LATEST NEWS

ದೆಹಲಿ ಮತ ಏಣಿಕೆ ಆರಂಭ; ಗದ್ದುಗೆ ಏರುವವರು ಯಾರು?

Published

on

ಮಂಗಳೂರು/ಹೊಸದಿಲ್ಲಿ: ದೇಶದ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಫೆ.5ರಂದು ಒಟ್ಟು ಶೇ.60.54ರಷ್ಟು ಮತದಾನವಾಗಿತ್ತು. ಶನಿವಾರ (ಫೆ.08) ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದೆ.

ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಆಪ್, ಕಾಂಗ್ರೆಸ್ ಗೆ ಇದು ಮಹತ್ವದ ಚುನಾವಣೆಯಾಗಿದೆ. ಕಳೆದ ಎರಡು ಚುನಾವಣೆಗಳಲ್ಲಿ ಬಹುಮತ ಸಾಧಿಸಿ ಅಧಿಕಾರ ನಡೆಸಿರುವ ಅರವಿಂದ ಕೇಜಿವಾಲ್ ಅವರ ಆಮ್ ಆದ್ಮಿ ಪಕ್ಷವು ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಅಂದಾಜಿನಲ್ಲಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಎಲ್ಲಾ ಪ್ರಶ್ನೆ, ಕುತೂಹಲಗಳಿಗೆ ಇಂದು ಉತ್ತರ ಸಿಗಲಿದೆ.

ಇದನ್ನೂ ಓದಿ: ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಜಾರಕಿಹೊಳಿ ಮಗ ಆಯ್ಕೆ

ದಿಲ್ಲಿ ಗೆದ್ದವನು ದೇಶದ ದಿಲ್​ ಗೆದ್ದಂತೆ. ಆಮ್​​ ಆದ್ಮಿ, ಬಿಜೆಪಿ ನಡುವೆ ಟಗ್​ ಆಫ್ ವಾರ್​ ಏರ್ಪಟ್ಟಿದ್ದು, ಕಾಂಗ್ರೆಸ್​​ ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೋರಾಟಕ್ಕಿಳಿದಿದೆ. ದೆಹಲಿ ವಿಧಾನಸಭಾ ದಂಗಲ್‌ನ ಕ್ಲೈಮ್ಯಾಕ್ಸ್​​ ಹಂತಕ್ಕೆ ಬಂದು ನಿಂತಿದೆ. ಇಂದ್ರಪ್ರಸ್ಥದ ಗದ್ದುಗೆ ಯಾರಿಗೆ ಅನ್ನೋ ಜನಾದೇಶ ಇಂದೇ ಪ್ರಕಟ ಆಗಲಿದೆ. ಮತಗಟ್ಟೆ ಸಮೀಕ್ಷೆಗಳು ಕೇಜ್ರಿ ಕಟ್ಟಿದ್ದ ವಾಲ್​​​​ ನೆಲಸಮವಾಗಲಿದ್ದು, ಹೂವು ಅರಳುವ ಸಮಯ ಅಂತ ಭವಿಷ್ಯ ನುಡಿದಿವೆ.

ಡೆಲ್ಲಿ ದಂಗಲ್ ದೇಶದ ರಾಜಧಾನಿ ಈಗ ಹೊಸ ಚರಿತ್ರೆ ಬರೆಯಲು ಹೊರಟಿದೆ. ಬುಧವಾರ ಮತದಾರ ಬರೆದ ಹಣೆಬರಹ ಇವತ್ತೇ ಪ್ರಕಟವಾಗಲಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page