Connect with us

DAKSHINA KANNADA

ಬೀದಿ ಪಾಲಾದ ಮಂಗಳಮುಖಿಯರು: ಸಹಾಯ ಹಸ್ತ ಚಾಚಿದ ಸಮಾಜ ಸೇವಕ ವಿಶು ಶೆಟ್ಟಿ..!

Published

on

ಉಡುಪಿ:ದೇಶವನ್ನೇ ತಲ್ಲಣಗೊಳಿಸಿದ ರೂಪಾಂತರಿ ಕೊರೊನಾ ಸಮಾಜದ ಎಲ್ಲಾ ವರ್ಗವನ್ನು ಕಾಡಲಾರಂಭಿಸಿದೆ. ಸಾರ್ವಜನಿಕ ಜೀವನದಿಂದ, ಹೊರಗುಳಿದಿರುವ ತೃತೀಯ ಲಿಂಗಿಗಳ ಬದುಕು ತೀರ ದುಸ್ತರವಾಗಿದೆ.ಮಂಗಳ ಮುಖಿಯರನ್ನು ಈ ಸಮಾಜ  ನೋಡುವ  ನೋಡುವ ದೃಷ್ಠಿನೇ ಬೇರೆ. ಇವರು ಸಾರ್ವಜನಿಕವಾಗಿ ಓಡಾಡುವಾಗ ವಾಸ್ತವದ ಮಾತಿಗಿಂತ ಅಪಹಾಸ್ಯದ ನುಡಿಗಳೇ ಹೆಚ್ಚಾಗಿ ಕೇಳುವ ಪರಿಸ್ಥಿತಿ.

ಅತ್ತ ಹೆಣ್ಣೂ ಅಲ್ಲದ ಇತ್ತ ಗಂಡೂ ಅಲ್ಲದ ಇವರ ಬದುಕು ಶೋಚನಿಯ.ಅಂತಹ ಎಡರು- ತೋಡರುಗಳ ನಡುವೆ ಈ  ಸಮಾಜದಲ್ಲಿ ಅವರದಲ್ಲದ ತಪ್ಪಿಗೆ ಬದುಕು ನಡಸಬೇಕಾದ ಅನಿವಾರ್ಯ ಪರಿಸ್ಥಿತಿ.

ಇವರಲ್ಲಿ  ಕೆಲವರು ಉತ್ತಮ ಉದ್ಯೋಗ ಮಾಡಿಕೊಂಡು ಜೀವನ ನಡೆಸಿದೆ,್ರ ಇನ್ನು ಕೆಲವು ಮಂಗಳ ಮುಖಿಯರು ಭಿಕ್ಷೆ  ಬೇಡಿ ಜೀವನ ನಡೆಸುತ್ತಿದ್ದಾರೆ.

ಸಮಾಜದಲ್ಲಿ ಸ್ವಾಭಿಮಾನದ ಬದುಕು ನಡೆಸುವ ಕೆಲವು ಮಂಗಳ ಮುಖಿಯರ  ಜೀವನಕ್ಕೆ ಕೊರೊನಾ ಎನ್ನುವ ಮಹಾಮಾರಿ  ಲಾಕ್ ಡೌನ್ ಮೂಲಕ ಕೊಳ್ಳಿ ಇಟ್ಟು ಬಿಟ್ಟಿದೆ.

ಇವರ ಈ ಸಂಕಷ್ಟ ಮನಗಂಡ ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ  ಮಂಗಳ ಮುಖಿಯರಿಗೆ ಸಹಾಯ ಹಸ್ತ ಚಾಚಿದ್ದಾರೆ…

ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಮಂಗಳ ಮುಖಿ ಲಾವಣ್ಯ   ಕಳೆದ ಲಾಕ್ ಡೌನ್ ನಲ್ಲಿ ಉಡುಪಿ ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಸಾಕಷ್ಟು ಕಿಟ್ಟ್ ನೀಡಿ ಸಹಕರಿಸಿದ್ದವು.  ಬಹಳಷ್ಟು ಸಹಾಯಧನಗಳು ಬಂದವು. ಅದೆಷ್ಟೋ ಜನ ಊಟ ನೀಡಿ ಮಾನವೀಯತೆ ಮೆರೆದರು.ಅಂಥ ಜನರ ಮಧ್ಯೆ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಇಂದಿಗೂ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಸಹಾಯ ಹಸ್ತ ನೀಡುತ್ತ ಬಂದಿದ್ದಾರೆ.

ತೃತೀಯ ಲಿಂಗಿಗಳ ಪರಿಸ್ಥಿತಿ ಕಂಡು ವಿಶು ಶೆಟ್ಟಿ ಅಹಾರ ಧಾನ್ಯಗಳ ಕಿಟ್ಟ್ ನೀಡಿ ಆಸರೆಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಅಧಿಕ ಸಂಖ್ಯೆಯ ತೃತೀಯ ಲಿಂಗಿಗಳಿದ್ದಾರೆ.

ಅವರಲ್ಲಿ ಅನೇಕರು ಬೇರೆ ಪ್ರದೇಶದಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಕೊರೊನಾ ಕಾರಣದಿಂದ ಸರಕಾರ ಕೆಲವು ಅನುದಾನಗಳನ್ನು ಘೋಷಣೆ ಮಾಡಿತ್ತು.

ಜಿಲ್ಲಾಡಳಿತ ಕೆಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು.ಈ ಎಲ್ಲ ವ್ಯವಸ್ಥೆಗಳು  ಕೆಲವೇ ದಿನಗಳಿಗೆ ಸೀಮಿತವಾಗಿ ತೃತೀಯ ಲಿಂಗಿಗಳಿಗೆ ಯಾವುದೇ ಆಸರೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು…

ಈ ಕುರಿತು ಸಮಾಜ ಸೇವಕ ವಿಶು ಶೆಟ್ಟಿ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಕಳೆದ ಬಾರಿ ಪ್ರತಿ ವರ್ಗದ ಜನ ಅದೆಷ್ಟೋ ಕಷ್ಟ ಪಟ್ಟು ದಿನಕಳೆದರು.ಇದೀಗ ಎರಡನೇ ಬಾರಿ ಕೊರೊನಾ ವಕ್ಕರಿಸಿ ಮರ್ಮಾಘಾತ ನೀಡಿದೆ. ಜನ ನಾಳೆಯ ದಿನಗಳ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದ ತೃತೀಯ ಲಿಂಗಿಗಳು ದಿಕ್ಕು ತೋಚದೆ ಕಂಗಾಲಾಗಿದ್ದು, ಜಿಲ್ಲಾಡಳಿತ ಹಾಗು ಸರಕಾರದ ವತಿಯಿಂದ ಅವರಿಗೆ ಭದ್ರತೆ ದೊರೆಯಲಿ ಎಂಬುದೇ ನಮ್ಮ ಆಶಯ ಎಂದರು.

BELTHANGADY

ಭೂತದ ಮನೆಯಲ್ಲಿ ನೀರವ ಮೌನ…! ಮನೆಬಿಟ್ಟು ಹೋದ ಕುಟುಂಬ

Published

on

ಬೆಳ್ತಂಗಡಿ: ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಬೆಳ್ತಂಗಡಿಯ ಮಾಲಾಡಿ ಗ್ರಾಮದ ಭೂತದ ಮನೆಯಲ್ಲಿ ಸದ್ಯ ನೀರವ ಮೌನ ಆವರಿಸಿದೆ. ಕಳೆದ ಮೂರು ತಿಂಗಳಿನಿಂದ ಭೂತದ ಉಪಟಳದಿಂದ ಬಳಲಿ ಬೆಂಡಾಗಿರುವ ಕುಟುಂಬ ಮನೆಯನ್ನೇ ಖಾಲಿ ಮಾಡಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಸಲಿಗೆ ಕಳೆದೆರಡು ದಿನಗಳಿಂದ ಈ ಮನೆಯಲ್ಲಿನ ಭೂತದ ಉಪಟಳ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಈ ಮನೆಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ನೂರಾರು ಜನ ಬಂದು ಭೂತದ ಹುಡುಕಾಟ ನಡೆಸಿದ್ದರು. ಭೂತದ ಇರುವಿಕೆಯ ವಿಚಾರವಾಗಿ ಪರ ವಿರೋಧದ ಚರ್ಚೆಗಳು ಆರಂಭವಾಗಿ ಹಲವರು ಮನೆಯವರ ಕಥೆಯೇ ಸುಳ್ಳು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ನಮ್ಮ ಕುಡ್ಲ ವಾಹಿನಿ ಈ ಬಗ್ಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿದಾಗಲೂ ಇದು ಭೂತದ ಕಾಟ ಇರಲಾರದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಖ್ಯಾತ ಮನೋರೋಗ ತಜ್ಞರು ಹಾಗೂ ಪವಾಡ ರಹಸ್ಯ ಬಯಲು ತಜ್ಞ ಡಾ. ಹುಲಿಕಲ್ ನಟರಾಜ್ ಅವರೂ ಕೂಡಾ ಮನೆಯವರ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ಹೇಳಿದ್ದರು.

ಇದೀಗ ಉಮೇಶ್ ಶೆಟ್ಟಿ ಅವರ ಇಡೀ ಕುಟುಂಬ ಭೂತದ ಭಯದಿಂದ ಮನೆಯನ್ನು ಬಿಟ್ಟು ಹೋಗಿದ್ದು, ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

Continue Reading

DAKSHINA KANNADA

ನಾಲ್ಕು ದಿಕ್ಕಿಗೆ ಪ್ರಸಾದ ಹಾರಿಸಿ ಉರ್ವ ಮಾರಿಯಮ್ಮ ಜಾತ್ರೋತ್ಸವಕ್ಕೆ ಚಾಲನೆ

Published

on

ಮಂಗಳೂರು : ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಉರ್ವ ಮಾರಿಯಮ್ಮ ಕ್ಷೇತ್ರದಲ್ಲಿ ಫೆ.7 ರಿಂದ ಜಾತ್ರೋತ್ಸವದ ಕಾರ್ಯಕ್ರಮಗಳು ಆರಂಭವಾಗಿವೆ. ಫ್ರೆ.18 ರಂದು ದರ್ಶನ ಬಲಿ ಹಾಗೂ ವಿಶೇಷವಾಗಿ ನಡೆಯುವ ರಾಶಿ ಪೂಜೆಯೊಂದಿಗೆ ಜಾತ್ರೋತ್ಸವ ನಡೆಯಲಿದೆ.

ಇಂದು ಕ್ಷೇತ್ರದಲ್ಲಿ ಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಮೆರವಣಿಗೆ ಮೂಲಕ ತೆರಳಿ ನಾಲ್ಕು ದಿಕ್ಕಿಗೆ ಪ್ರಸಾದ ಹಾರಿಸುವ ಧಾರ್ಮಿಕ ವಿಧಿಯ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿದೆ. ಉರ್ವ ಮೈದಾನದಲ್ಲಿ ಹಾಗೂ ಮೂರು ಮಾರ್ಗ ಸೇರುವ ಜಾಗದಲ್ಲಿ ಈ ಪ್ರಸಾದ ಹಾರಿಸುವ  ಧಾರ್ಮಿಕ ವಿಧಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಹಾಜರಿದ್ದ  ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿದೆ. ಫೆ.14 ರಂದು ಪರ್ಸಿನ್‌ ಮೀನುಗಾರರ ಸಂಘದಿಂದ ಕ್ಷೇತ್ರದಲ್ಲಿ ಚಂಡಿಕಾ ಯಾಗ ನಡೆಯಲಿದ್ದು, 17 ರಂದು ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಯಲಿದೆ. ಮಡೆಸ್ನಾನ, ದರ್ಶನ ಬಲಿ ಸೇವೆ, ರಾಶಿ ಪೂಜೆಗಳು ಫೆ.18 ರಂದು ನಡೆಯಲಿದ್ದು ಫೆ. 22 ರಂದು ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ಇದನ್ನೂ ಓದಿ: ಮಂಗಳೂರು : ಇಂದಿನಿಂದ 3 ದಿನ ಪಾಂಡೇಶ್ವರದಲ್ಲಿ ಬೃಹತ್ ಐಸ್‌ಕ್ರೀಂ ಪರ್ಬ

ಇಂದು ನಡೆದ ಪ್ರಸಾದ ಹಾರಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂಗಳೂರು ಏಳು ಪಟ್ನ ಮೊಗವೀರ ಸಂಯುಕ್ತ ಸಭಾದ ಕುದ್ರೋಳಿ 3 ನೇ ಗ್ರಾಮ ಅಧ್ಯಕ್ಷ ಲೋಕೇಶ್ ಸುವರ್ಣ, ದೇವಸ್ಥಾನದ ಮೊಕ್ತೇಸರ ಕುದ್ರೋಳಿ ಒಂದನೇ ಗ್ರಾಮದ ಮಾಧವ ಪುತ್ರನ್ ಗುರಿಕಾರ, 2 ನೇ ಗ್ರಾಮದ ಯಾದವ ಸುವರ್ಣ, 3 ನೇ ಗ್ರಾಮದ ಯಾದವ ಸಾಲ್ಯಾನ್, ಪುರುಷೋತ್ತಮ ಕೋಟ್ಯಾನ್ ಬೊಕ್ಕಪಟ್ನ, ಯಶವಂತ ಪಿ. ಮೆಂಡನ್ ಬೋಳೂರು, ರಂಜನ್ ಕಾಂಚನ್ ಬೋಳೂರು, ವಾಸುದೇವ ಸಾಲ್ಯಾನ್ ಬೈಕಂಪಾಡಿ, ಸುರೇಶ್ ಕುಂದರ್ ಕೂಳೂರು, ಅಮರನಾಥ ಸುವರ್ಣ ಗುರಿಕಾರ ಪಣಂಬೂರು ಮತ್ತು ಗ್ರಾಮದ ಭಕ್ತರು ಉಪ್ಥಿತರಿದ್ದರು.

 

Continue Reading

DAKSHINA KANNADA

ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ-ಮಳಿಗೆಗಳಿಗೆ ಮೇಯರ್ ದಿಢೀರ್ ದಾಳಿ

Published

on

ಮಂಗಳೂರು : ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ-ಮಳಿಗೆಗಳಿಗೆ ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ನಡೆಯಿತು.

ಮಂಗಳುರಿನ ಫಿಝಾ ಬೈ ನೆಕ್ಸ್ ಮಾಲ್ ಹಾಗೂ ಟೋಕಿಯಾ ಮಾರ್ಕೇಟ್‌ಗಳಿಗೆ ಮೇಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಕೆಲವೊಂದು ಅಂಗಡಿಗಳು ಟ್ರೇಡ್‌ಲೈನ್ಸನ್ ನವೀಕರಿಸದ ಹಿನ್ನಲೆಯಲ್ಲಿ ಬೀಗ ಜಡಿದರು. ಮಾತ್ರವಲ್ಲದೇ ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ ಮಾಲಕಕರಿಗೆ ಮೇಯರ್ ವಾರ್ನಿಂಗ್ ನೀಡಿದ್ದಾರೆ.

ಇದನ್ನೂ ಓದಿ : ಸಿದ್ಧರಾಮಯ್ಯಗೆ ಬಿಗ್ ರಿಲೀಫ್; ಸಿಬಿಐ ತನಿಖೆಯಿಂದ ಪಾರಾದ ಸಿಎಂ

ಈ ಸಂದರ್ಭ ಮಾತನಾಡಿದ ಮೇಯರ್, “ಹಲವಾರು ಮಂದಿಯ ದೂರಿನ ಮೇರಿಗೆ ದಾಳಿ ಮಾಡಲಾಗಿದೆ. ಕೆಲವೊಂದು ಅಂಗಡಿಗಳಲ್ಲಿ ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಹಿನ್ನಲೆಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಲಾಗುವುದು” ಎಂದು ಹೇಳಿದರು. ಈ ವೇಳೆ ಉಪಮೇಯರ್ ಭಾನುಮತಿ, ಪಾಲಿಕೆ ಸದಸ್ಯೆ ಸುಮಿತ್ರಾ ಕರಿಯ,ಕಂದಾಯ ಅಧಿಕಾರಿ ವಿಜಯ್,ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page