Connect with us

DAKSHINA KANNADA

ಬೀದಿ ಪಾಲಾದ ಮಂಗಳಮುಖಿಯರು: ಸಹಾಯ ಹಸ್ತ ಚಾಚಿದ ಸಮಾಜ ಸೇವಕ ವಿಶು ಶೆಟ್ಟಿ..!

Published

on

ಉಡುಪಿ:ದೇಶವನ್ನೇ ತಲ್ಲಣಗೊಳಿಸಿದ ರೂಪಾಂತರಿ ಕೊರೊನಾ ಸಮಾಜದ ಎಲ್ಲಾ ವರ್ಗವನ್ನು ಕಾಡಲಾರಂಭಿಸಿದೆ. ಸಾರ್ವಜನಿಕ ಜೀವನದಿಂದ, ಹೊರಗುಳಿದಿರುವ ತೃತೀಯ ಲಿಂಗಿಗಳ ಬದುಕು ತೀರ ದುಸ್ತರವಾಗಿದೆ.ಮಂಗಳ ಮುಖಿಯರನ್ನು ಈ ಸಮಾಜ  ನೋಡುವ  ನೋಡುವ ದೃಷ್ಠಿನೇ ಬೇರೆ. ಇವರು ಸಾರ್ವಜನಿಕವಾಗಿ ಓಡಾಡುವಾಗ ವಾಸ್ತವದ ಮಾತಿಗಿಂತ ಅಪಹಾಸ್ಯದ ನುಡಿಗಳೇ ಹೆಚ್ಚಾಗಿ ಕೇಳುವ ಪರಿಸ್ಥಿತಿ.

ಅತ್ತ ಹೆಣ್ಣೂ ಅಲ್ಲದ ಇತ್ತ ಗಂಡೂ ಅಲ್ಲದ ಇವರ ಬದುಕು ಶೋಚನಿಯ.ಅಂತಹ ಎಡರು- ತೋಡರುಗಳ ನಡುವೆ ಈ  ಸಮಾಜದಲ್ಲಿ ಅವರದಲ್ಲದ ತಪ್ಪಿಗೆ ಬದುಕು ನಡಸಬೇಕಾದ ಅನಿವಾರ್ಯ ಪರಿಸ್ಥಿತಿ.

ಇವರಲ್ಲಿ  ಕೆಲವರು ಉತ್ತಮ ಉದ್ಯೋಗ ಮಾಡಿಕೊಂಡು ಜೀವನ ನಡೆಸಿದೆ,್ರ ಇನ್ನು ಕೆಲವು ಮಂಗಳ ಮುಖಿಯರು ಭಿಕ್ಷೆ  ಬೇಡಿ ಜೀವನ ನಡೆಸುತ್ತಿದ್ದಾರೆ.

ಸಮಾಜದಲ್ಲಿ ಸ್ವಾಭಿಮಾನದ ಬದುಕು ನಡೆಸುವ ಕೆಲವು ಮಂಗಳ ಮುಖಿಯರ  ಜೀವನಕ್ಕೆ ಕೊರೊನಾ ಎನ್ನುವ ಮಹಾಮಾರಿ  ಲಾಕ್ ಡೌನ್ ಮೂಲಕ ಕೊಳ್ಳಿ ಇಟ್ಟು ಬಿಟ್ಟಿದೆ.

ಇವರ ಈ ಸಂಕಷ್ಟ ಮನಗಂಡ ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ  ಮಂಗಳ ಮುಖಿಯರಿಗೆ ಸಹಾಯ ಹಸ್ತ ಚಾಚಿದ್ದಾರೆ…

ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಮಂಗಳ ಮುಖಿ ಲಾವಣ್ಯ   ಕಳೆದ ಲಾಕ್ ಡೌನ್ ನಲ್ಲಿ ಉಡುಪಿ ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಸಾಕಷ್ಟು ಕಿಟ್ಟ್ ನೀಡಿ ಸಹಕರಿಸಿದ್ದವು.  ಬಹಳಷ್ಟು ಸಹಾಯಧನಗಳು ಬಂದವು. ಅದೆಷ್ಟೋ ಜನ ಊಟ ನೀಡಿ ಮಾನವೀಯತೆ ಮೆರೆದರು.ಅಂಥ ಜನರ ಮಧ್ಯೆ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಇಂದಿಗೂ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಸಹಾಯ ಹಸ್ತ ನೀಡುತ್ತ ಬಂದಿದ್ದಾರೆ.

ತೃತೀಯ ಲಿಂಗಿಗಳ ಪರಿಸ್ಥಿತಿ ಕಂಡು ವಿಶು ಶೆಟ್ಟಿ ಅಹಾರ ಧಾನ್ಯಗಳ ಕಿಟ್ಟ್ ನೀಡಿ ಆಸರೆಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಅಧಿಕ ಸಂಖ್ಯೆಯ ತೃತೀಯ ಲಿಂಗಿಗಳಿದ್ದಾರೆ.

ಅವರಲ್ಲಿ ಅನೇಕರು ಬೇರೆ ಪ್ರದೇಶದಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಕೊರೊನಾ ಕಾರಣದಿಂದ ಸರಕಾರ ಕೆಲವು ಅನುದಾನಗಳನ್ನು ಘೋಷಣೆ ಮಾಡಿತ್ತು.

ಜಿಲ್ಲಾಡಳಿತ ಕೆಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು.ಈ ಎಲ್ಲ ವ್ಯವಸ್ಥೆಗಳು  ಕೆಲವೇ ದಿನಗಳಿಗೆ ಸೀಮಿತವಾಗಿ ತೃತೀಯ ಲಿಂಗಿಗಳಿಗೆ ಯಾವುದೇ ಆಸರೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು…

ಈ ಕುರಿತು ಸಮಾಜ ಸೇವಕ ವಿಶು ಶೆಟ್ಟಿ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಕಳೆದ ಬಾರಿ ಪ್ರತಿ ವರ್ಗದ ಜನ ಅದೆಷ್ಟೋ ಕಷ್ಟ ಪಟ್ಟು ದಿನಕಳೆದರು.ಇದೀಗ ಎರಡನೇ ಬಾರಿ ಕೊರೊನಾ ವಕ್ಕರಿಸಿ ಮರ್ಮಾಘಾತ ನೀಡಿದೆ. ಜನ ನಾಳೆಯ ದಿನಗಳ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದ ತೃತೀಯ ಲಿಂಗಿಗಳು ದಿಕ್ಕು ತೋಚದೆ ಕಂಗಾಲಾಗಿದ್ದು, ಜಿಲ್ಲಾಡಳಿತ ಹಾಗು ಸರಕಾರದ ವತಿಯಿಂದ ಅವರಿಗೆ ಭದ್ರತೆ ದೊರೆಯಲಿ ಎಂಬುದೇ ನಮ್ಮ ಆಶಯ ಎಂದರು.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ರಾಜ್ಯದಲ್ಲಿ ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಯ; ಕುಕ್ಕೆ ಕ್ಷೇತ್ರಕ್ಕೂ ತಟ್ಟಿದ ಬಿಸಿ.. ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ

Published

on

ಸುಬ್ರಹ್ಮಣ್ಯ: ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ರಾಜ್ಯದಲ್ಲಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಇದೀಗ ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ಇದರ ಬಿಸಿ ತಟ್ಟಿದೆ.


ಸುಬ್ರಹ್ಮಣ್ಯ ದೇಗುಲದಲ್ಲಿ ಪ್ರತಿದಿನ ಬೆಳಿಗ್ಗೆ ವಿವಿಧ ಬಗೆಯ ಉಪಹಾರ ನೀಡಲಾಗುತ್ತಿತ್ತು. ಇದೀಗ ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಇಂದಿನಿಂದ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಬೇಯಿಸುವ ತಿನಿಸು ಬದಲಾಗಿ ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಗ್ಯಾಸ್ ಪೊರೈಕೆ ಸಂಸ್ಥೆಯವರಿಗೆ ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೊರೈಕೆ ಮಾಡಲು ದೇವಸ್ಥಾನದ ವತಿಯಿಂದ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಸಂಘರ್ಷ: ಮಾ.12ರಂದು ಮಂಗಳೂರು- ಮಧ್ಯ ಪ್ರಾಚ್ಯ ಮಾರ್ಗದ 14 ವಿಮಾನಗಳು ರದ್ದು

ಇದರ ನಡುವೆ ಪೊರೈಕೆ ಆಗದೇ ಇದ್ದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಬದಲಾವಣೆ ಮಾಡುವುದಿದ್ದಲ್ಲಿ ಈ ಬಗ್ಗೆ ದೇವಸ್ಥಾನದ ವತಿಯಿಂದ ಅಧಿಕೃತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

Continue Reading

DAKSHINA KANNADA

ಕಾಲೇಜಿಗೆ ರಾಜಕೀಯ ಕೇಂದ್ರಿತ ವ್ಯಕ್ತಿಗಳ ಅನಗತ್ಯ ಪ್ರವೇಶ ಆರೋಪ; ಮಂಗಳೂರು ವಿ.ವಿ. ಕಾಲೇಜಿನಲ್ಲಿ ಎಬಿವಿಪಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Published

on

ಮಂಗಳೂರು: ಕಾಲೇಜಿನಲ್ಲಿ ರಾಜಕೀಯ ಕೇಂದ್ರಿತ ವ್ಯಕ್ತಿಗಳ ಅನಗತ್ಯ ಪ್ರವೇಶ ಮಾಡಿ ಗದ್ದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಎ.ಬಿ.ವಿ.ಪಿ. ಸಂಘಟನೆಯ ವಿದ್ಯಾರ್ಥಿಗಳು ನಿನ್ನೆ ಹಂಪನಕಟ್ಟೆಯ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದರು.


ಮಾರ್ಚ್ 9 ರಂದು ರಾಜಕೀಯ ಪಕ್ಷ ಕೇಂದ್ರಿತ ಸುಮಾರು 15 ರಿಂದ 20 ಜನರ ಗುಂಪು ಆಗಮಿಸಿ ಕೆಲವು ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳ ಜತೆ ಸಂಭಾಷಣೆಯ ನೆಪದಲ್ಲಿ ಅನಾವಶ್ಯಕ ಗದ್ದಲವನ್ನು ಸೃಷ್ಟಿಸಿರುವುದು ವಿದ್ಯಾರ್ಥಿಗಳಲ್ಲಿ ಕಳವಳವನ್ನುಂಟು ಮಾಡಿದೆ. ಈ ರೀತಿ ಕಾಲೇಜಿಗೆ ಸಂಬಂಧ ಪಡದ, ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳ ಕ್ಯಾಂಪಸ್ ಪ್ರವೇಶವು ಅತ್ಯಂತ ಖಂಡನೀಯ.

ಇಂತಹ ಘಟನೆಗಳು ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಇದಕ್ಕೆ ಅನುಮತಿ ನೀಡಿರುವ ಪ್ರಾಧ್ಯಾಪಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಎಬಿವಿಪಿ ಮುಖಂಡರು ಒತ್ತಾಯಿಸಿದರು.̇

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಹೋಟೆಲ್‌ ಭಸ್ಮ; ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಹಾನಿ!

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲ ಗಣಪತಿ‌ ಗೌಡ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. ನಿನ್ನೆ ನಮ್ಮಿಂದ ಒಂದು ಆಚಾತುರ್ಯ ನಡೆದು ಹೋಗಿದೆ. ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಬರ್ತಾರೆ ಅಂತಾ ಹೇಳಿದ್ದರು. ಆದರೆ ಘೋಷಣೆ ‌ಕೂಗಿದ ವಿಚಾರ ನಮಗೆ ಗೊತ್ತಾಗಿಲ್ಲ. ಸಾಂಕೇತಿಕವಾಗಿ ಸಿಹಿ ತಿಂಡಿ ವಿತರಿಸಿದ್ದಾರೆ. ನಿನ್ನೆ ನಡೆದ ಘಟನೆಯ ವರದಿಯನ್ನು ಉಪಕುಲಪತಿಯಯವರಿಗೆ ನೀಡ್ತೇವೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಪ್ರಾಂಶುಪಾಲರು ಆಶ್ವಾಸನೆ ನೀಡಿದರು.

Continue Reading

DAKSHINA KANNADA

ಉಳ್ಳಾಲ ನಗರಸಭೆ ಅಧ್ಯಕ್ಷರ ಕಾರು ಚಾಲಕ ಹೃದಯಾಘಾತದಿಂದ ನಿಧನ

Published

on

ಉಳ್ಳಾಲ: ಉಳ್ಳಾಲ ನಗರಸಭೆ ಯ ಅಧ್ಯಕ್ಷರ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತಿದ್ದ, ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯ ಅಶೋಕ್ ಉಳ್ಳಾಲಬೈಲ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು 2 ಮಕ್ಕಳನ್ನು ಅಗಲಿದ್ದಾರೆ.


ಕರ್ನಾಟಕ ರಾಜ್ಯ ವಿಧಾನ ಸಭಾ ಸಭಾಧ್ಯಕ್ಷ ಯು. ಟಿ. ಖಾದರ್, ಮಂಗಳೂರು ಮುಡ ಅಧ್ಯಕ್ಷ ಸದಾಶಿವ ಉಳ್ಳಾಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಸಭಾಧ್ಯಕ್ಷರ ಆಪ್ತ ಸಹಾಯಕ ಮನ್ಸೂರ್ ಮಂಚಿಲ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page