Connect with us

FILM

ವಿರೋಶ್ ಮದುವೆಯ ಸಂಭ್ರಮ; 44 ಶಾಲೆಗಳ ಮಕ್ಕಳ ಬಾಳಿಗೆ ಬೆಳಕಾದ ವಿಜಯ್-ರಶ್ಮಿಕಾ ಜೋಡಿ!

Published

on

ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ನಂತರ ಮೊದಲ ಬಾರಿಗೆ ವಿಜಯ್ ಅವರ ಹುಟ್ಟೂರಾದ ತೆಲಂಗಾಣದ ತುಮ್ಮನ್‌ಪೇಟೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದ್ದಾರೆ.


ರಶ್ಮಿಕಾ ಅವರು ಗೃಹಪ್ರವೇಶ ಮಾಡಿ ಮನೆಯ ಮಹಾಲಕ್ಷ್ಮಿಯಾದ ಸಂಭ್ರಮದಲ್ಲಿ, ವಿಜಯ್ ಅವರು ತಮ್ಮ ದೇವರಕೊಂಡ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿಕ್ಷಣಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಅಚ್ಚಂಪೇಟೆ ವಿಭಾಗದ 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವುದಾಗಿ ಘೋಷಿಸಿದ್ದಾರೆ. ದಂಪತಿಗಳು ತಮ್ಮ ಹೊಸ ಮನೆಯಲ್ಲಿ ನಡೆಸಿದ ಗೃಹಪ್ರವೇಶ ಮತ್ತು ಸತ್ಯನಾರಾಯಣ ವ್ರತ ಪೂಜೆಯ ನಂತರ ಈ ಘೋಷಣೆ ಹೊರಬಿದ್ದಿದೆ ಎನ್ನಲಾಗಿದೆ.

ಮದುವೆಯ ನಂತರ ಮೊದಲ ಬಾರಿಗೆ ಹುಟ್ಟೂರಿಗೆ ಭೇಟಿ ನೀಡಿದ ಈ ಜೋಡಿ, ಗ್ರಾಮಸ್ಥರೊಂದಿಗೆ ಔತಣಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವುದು ಮತ್ತು ಅವರ ಭವಿಷ್ಯಕ್ಕೆ ಉತ್ತಮ ಅವಕಾಶಗಳನ್ನು ಕಲ್ಪಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಇದನ್ನೂ ಓದಿ: ಬೋನ್ ಬಳಿ ನಿಂತಿದ್ದ ಬಾಲಕಿ ಮೇಲೆ ಸಿಂಹದ ಭೀಕರ ದಾಳಿ: ಕೂದಲೆಳೆ ಅಂತರದಲ್ಲಿ ಬಚಾವ್!

ಈ ಮಾನವೀಯ ಕಾರ್ಯವನ್ನು ರಶ್ಮಿಕಾ ಮಂದಣ್ಣ ಅವರು ಶ್ಲಾಘಿಸಿದ್ದು, ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ ಅವರು ಹೆಮ್ಮೆಯಿಂದ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ.

FILM

ಮೈಮರೆತ ತಾಯಿಯ ಎಡವಟ್ಟು; ಹಸಿದ ಮಗುವಿನ ಕಿವಿಗೆ ಹಾಲಿನ ಬಾಟಲಿ ಇಟ್ಟ ಮಹಿಳೆ!

Published

on

ಮಗುವಿಗೆ ಹಾಲು ಕುಡಿಸುವಾಗ ಮಹಿಳೆಯೊಬ್ಬಳು ಮಾಡಿದ ಎಡವಟ್ಟಿನ ವೀಡಿಯೋ ಇದೀಗ ವೈರಲ್‌ ಆಗಿದೆ. ಮಹಿಳೆ ಬೇರೆ ಯಾವುದೋ ಆಲೋಚನೆಯಲ್ಲಿ ಮಗುವಿನ ಬಾಯಿಗೆ ಹಾಲಿನ ಬಾಟಲಿ ಇಡುವ ಬದಲು ಮಗುವಿನ ಕಿವಿಗೆ ಇಟ್ಟಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಮಹಿಳೆಯ ವಿರುದ್ಧ ಗರಂ ಆಗಿದ್ದಾರೆ.


ಕಾರ್ಯಕ್ರಮವೊಂದು ನಡೆಯುತ್ತಿರುವಾಗ ಈ ಘಟನೆ ಸಂಭವಿಸಿದೆ. ಮಹಿಳೆಯು ತನ್ನ ಮಡಿಲಲ್ಲಿ ಮಗುವನ್ನು ಹಿಡಿದುಕೊಂಡು, ತನ್ನ ಮುಂಭಾಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಆಸಕ್ತಿಯಿಂದ ನೋಡುತ್ತಿರುತ್ತಾರೆ. ಅವರ ಸಂಪೂರ್ಣ ಗಮನ ಕಾರ್ಯಕ್ರಮದ ಮೇಲಿದ್ದರಿಂದ, ಬಾಟಲಿಯನ್ನು ಮಗುವಿನ ಬಾಯಿಗೆ ಇಡುತ್ತಿದ್ದೇನೆ ಎಂದು ಭಾವಿಸಿ ತಿಳಿಯದೇ ಮಗುವಿನ ಕಿವಿಗೆ ಇಟ್ಟಿದ್ದಾರೆ.

ತಾಯಿ ಏನು ಮಾಡುತ್ತಿದ್ದಾರೆ ಎಂಬುದು ತಿಳಿಯದೆ ಹಸಿದಿದ್ದ ಆ ಪುಟ್ಟ ಮಗು ಅಳಲು ಪ್ರಾರಂಭಿಸಿದೆ ಮತ್ತು ಹಾಲಿನ ಬಾಟಲಿಗಾಗಿ ಸುತ್ತಲೂ ಹುಡುಕಾಡಿದೆ.
ಈ ವೀಡಿಯೊವನ್ನು dr_abhinandan_tripathi ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ಅನೇಕ ನೆಟ್ಟಿಗರು ಮಹಿಳೆಯ ಬೇಜವಾಬ್ದಾರಿತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಇದನ್ನು ಹಾಸ್ಯವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ: ದ್ವಿಚಕ್ರ ವಾಹನಕ್ಕಾಗಿ ಪ್ರೇಯಸಿ ಕುಟುಂಬಕ್ಕೆ ಬೆಂಕಿ ಹಚ್ಚಿದ ಕಿರಾತಕ; ಚಿಕಿತ್ಸೆ ಫಲಿಸದೆ ತಾಯಿ ಸಾವು!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮಗುವಿನ ಮೇಲೆ ತಾಯಿಗೆ ಜ್ಞಾನನೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಾಯಿ ಅಂದ್ರೆ ಹೀಗೆ ಇರ್ಬೇಕು ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು, ಮಗು ಮೇಲೆ ಗಮನ ಕೊಡದೇ ಆ ಕಡೆ ಏನು ನೋಡ್ತಾ ಇದ್ದಿಯಾ ಸುಂದ್ರಿ ಎಂದು ಹೇಳಿದ್ದಾರೆ.

Continue Reading

FILM

ಕಿರುಕು*ಳದಿಂದ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಮೆಗಾಸ್ಟಾರ್ ಕುಟುಂಬದ ಸೊಸೆ!

Published

on

ಮಂಗಳೂರು/ಹೈದರಾಬಾದ್ : ಜನಪ್ರಿಯ ನಟಿ, ಮೆಗಾಸ್ಟಾರ್ ಕುಟುಂಬದ ಸೊಸೆ ಲಾವಣ್ಯಾ ತ್ರಿಪಾಠಿ ಪೊಲೀಸರ ಮೊರೆ ಹೋಗಿದ್ದಾರೆ. ಲಾವಣ್ಯಾ ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಅವರ ಪತ್ನಿ. ಇತ್ತೀಚೆಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಿರುಕುಳದಿಂದ ಬೇಸತ್ತು ದೂರು :

ನಟಿ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆಗೆ ದೂರು ನೀಡಿರೋದು ಕುಟುಂಬಸ್ಥರ ವಿರುದ್ಧವಲ್ಲ, ಬದಲಿಗೆ ಆನ್‌ಲೈನ್‌ ಕಿರು*ಕುಳದಿಂದ ಬೇಸತ್ತು.

ಲಾವಣ್ಯಾ ತ್ರಿಪಾಠಿ ಹಾಗೂ ಅವರ ಕುಟುಂಬದವರನ್ನು ಗುರಿಯಾಗಿಸಿ ಆನ್‌ಲೈನ್‌ನಲ್ಲಿ ಕೆಲ ವ್ಯಕ್ತಿಗಳು ನಿಂದಿಸುತ್ತಿದ್ದಾರೆ ಎಂಬುದಾಗಿ ದೂರಿದ್ದಾರೆ. ಅಶ್ಲೀಲ ಕಮೆಂಟ್ಸ್, ಫೋಟೋವನ್ನು ಎಡಿಟ್ ಮಾಡಿ ಹರಿ ಬಿಡಲಾಗುತ್ತಿದೆ ಎಂದು ಅವರು ಆರೋಪಿದ್ದಾರೆ. ಹೈದರಾಬಾದ್‌ನ ಸೈಬರ್ ಠಾಣೆಗೆ ನಟಿ ಲಾವಣ್ಯಾ ದೂರು ನೀಡಿದ್ದಾರೆ.

ಇನ್ಸ್ಟಾಗ್ರಾಂ ಖಾತೆ ಮೂಲಕ ಕಿರುಕುಳ :

ಇನ್ಸ್ಟಾಗ್ರಾಂ ಖಾತೆಯಿಂದ ಸತತ ಕಿರುಕುಳ ನೀಡಲಾಗುತ್ತಿದೆ ಎಂದಿದ್ದಾರೆ ನಟಿ. ಪರ್ಪಲ್ ಕ್ರೆಯಾನ್ ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದಾರೆ. ಈ ಖಾತೆ ಮೂಲಕ ತಮ್ಮ  ವಿರುದ್ಧ ಕೆಟ್ಟದಾಗಿ ಕಮೆಂಟ್ಸ್, ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ತಮ್ಮ ಕುಟುಂಬದವರ ಬಗ್ಗೆಯೂ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಕೆಲ  ತಿಂಗಳುಗಳಿಂದ ಪರ್ಪಲ್ ಕ್ರೆಯಾನ್ ಪೇಜ್ ಮೂಲಕ ನಟಿಗೆ ಮೆಸೇಜ್, ಕಮೆಂಟ್ಸ್ ಮಾಡಲಾಗುತ್ತಿದೆಯಂತೆ.

ಇದನ್ನೂ ಓದಿ : ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪಿಗೆ ಕಪಾಳಮೋಕ್ಷ

ತೆಲುಗು, ತಮಿಳಿನಲ್ಲಿ ಮಿಂಚಿರುವ ಲಾವಣ್ಯಾ :

ಲಾವಣ್ಯಾ ತ್ರಿಪಾಠಿ ಮೂಲತಃ ಉತ್ತರ ಪ್ರದೇಶದವರು. ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು ತಮಿಳು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ.  2017ರಲ್ಲಿ ಮಿಸ್ಟರ್ ಚಿತ್ರದಲ್ಲಿ ನಟ ವರುಣ್ ತೇಜ್ ಹಾಗೂ ಲಾವಣ್ಯಾ  ಒಟ್ಟಿಗೆ ನಟಿಸಿದ್ದರು. ಬಳಿಕ 2018ರಲ್ಲಿ ಅಂತರಿಕ್ಷಂ 9000 ಕೆಎಂಪಿಎಚ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಪ್ರೇಮಾಂಕುರವಾಗಿದ್ದು, 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2025ರ ಸೆ.10 ರಂದು ಇವರಿಗೆ ಗಂಡು ಮಗು ಜನಿಸಿದ್ದು, ವಾಯುವ್ ತೇಜ್ ಎಂದು ಹೆಸರಿಡಲಾಗಿದೆ.

 

Continue Reading

FILM

ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪಿಗೆ ಕಪಾಳಮೋಕ್ಷ

Published

on

ಮಂಗಳೂರು/ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ರಯಲ್ ಶುರುವಾಗಿದೆ. ಆದರೆ, ಇದೀಗ ಮತ್ತೊಂದು ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ. ಈ ಕೊ*ಲೆ ಪ್ರಕರಣದ ಆರೋಪಿಗೆ ಕಪಾಳ ಮೋಕ್ಷ ಮಾಡಲಾಗಿದೆ ಎಂದು ವರದಿಯಾಗಿದೆ.

ಆರೋಪಿಗೆ ಕೋರ್ಟ್ ಕಾರಿಡಾರ್‌ನಲ್ಲಿಯೇ ಕೆನ್ನೆಗೆ ಹೊ*ಡೆಯಲಾಗಿದೆ. ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ10 ಆರೋಪಿ ವಿನಯ್‌ಗೆ ಕಪಾಳ ಮೋಕ್ಷ ಮಾಡಲಾಗಿದೆ.

ವಕೀಲರಿಂದ ಕಪಾಳಮೋಕ್ಷ :

ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಎ10 ಆರೋಪಿ ವಿನಯ್‌ ವಕೀಲರ ಬದಲಾವಣೆಗೆ ಮುಂದಾಗಿದ್ದಾರೆ. ಈ ಬಗ್ಗೆ ವಕೀಲ ನಟರಾಜ್ ಹಾಗೂ ವಿನಯ್ ನಡುವೆ ವಾಗ್ವಾದ ಆರಂಭವಾಗಿದೆ. ಈ ವೇಳೆ ವಕೀಲ ನಟರಾಜ್ ಮೇಲೆ ಸ್ಟೋನಿಬ್ರೂಕ್ ಮಾಲಕ ಆರೋಪಿ ವಿನಯ್ ಕಿರುಚಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಕೀಲ ನಟರಾಜ್, ವಿನಯ್ ಕಪಾಳಕ್ಕೆ ಬಾ*ರಿಸಿದ್ದಾರೆ ಎಂಬ ವಿಚಾರ ಸದ್ದು ಮಾಡುತ್ತಿದೆ.

ಇದನ್ನೂ ಓದಿ : ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

ಕೋರ್ಟ್ ಕಾರಿಡಾರ್‌ನಲ್ಲಿಯೇ ಈ ಘಟನೆ ನಡೆದಿದೆ. ವಿನಯ್ ಪರ ವಾದಿಸಲು ನೂತನ ವಕೀಲರು ಆಗಮಿಸಿದ್ದರು. ಈ ಸಂದರ್ಭ ವಿನಯ್ ಹಾಗೂ ವಕೀಲ ನಟರಾಜ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ನಟರಾಜ್, ವಿನಯ್ ಕೆನ್ನೆಗೆ ಐದಾರು ಬಾರಿ ಹೊ*ಡೆದಿದ್ದಾರೆ ಎಂದು ಹೇಳಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page