Connect with us

DAKSHINA KANNADA

ಉಪ್ಪಿನಂಗಡಿ: ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಆರ್‌ಟಿಓ ವಾಹನಕ್ಕೆ ಲಾಕ್‌ ಹಾಕಿ ದಂಡ ವಿಧಿಸಿದ ಪಿಡಿಓ

Published

on

ಉಪ್ಪಿನಂಗಡಿ: ಸ್ಥಳೀಯ ಬಸ್ ನಿಲ್ದಾಣದಲ್ಲಿ ಲಘವಾಹನಗಳ ನಿಲುಗಡೆಗೆ ವಿಧಿಸಲಾದ ನಿಷೇಧವನ್ನು ಉಲ್ಲಂಘಿಸಿದರೆಂಬ ಕಾರಣಕ್ಕೆ ಸಾರಿಗೆ ಇಲಾಖಾಧಿಕಾರಿಗಳ ಜೀಪೊಂದಕ್ಕೆ ಸ್ಥಳೀಯ ಪಂಚಾಯತ್ ಪಿಡಿಓ ಲಾಕ್‌ ಜಡಿದು ದಂಡ ವಿಧಿಸಿದ ಘಟನೆ ನಡೆದಿದೆ.


ಇಲ್ಲಿನ ಹೊಸ ಬಸ್ ನಿಲ್ದಾಣವು ಗ್ರಾ.ಪಂ. ಅಧೀನದಲ್ಲಿದ್ದು, ಸರ್ಕಾರಿ ಬಸ್ ಹಾಗೂ ಖಾಸಗಿ ಬಸ್ ಒಂದೇ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು,

ಈಗಾಗಲೇ ಬಸ್‌ಗಳ ಸಂಖ್ಯೆ ಹೆಚ್ಚಾಗಿದ್ದು ವಾಹನ ದಟ್ಟನೆಯುಂಟಾದ ಹಿನ್ನೆಲೆಯಲ್ಲಿ ಲಘು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು. ಹಾಗೂ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಲಘು ವಾಹನಗಳ ನಿಷೇಧ ಫಲಕ ಅಳವಡಿಸಲಾಗಿತ್ತು. ಆದರೆ ಇದನ್ನು ಲೆಕ್ಕಿಸದೆ ಬಸ್ಸುಗಳು ನಿಲ್ಲುವ ಜಾಗದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಸಿಬ್ಬಂದಿ ತನಿಖಾ ತಂಡದ ವಾಹನ ನಿಲ್ಲಿಸಿದ ಬಗ್ಗೆ ಮಾಹಿತಿ ಪಡೆದ ಪಿಡಿಒ ಸ್ಥಳಕ್ಕೆ ಬಂದು ಸರ್ಕಾರಿ ವಾಹನಕ್ಕೆ ವೀಲ್‌ಲಾಕ್ ಹಾಕಿದರು.

ಈ ವಿಲಕ್ಷಣ ಘಟನೆಯಿಂದ ಕಸಿವಿಸಿಗೊಳಗಾದ ಅಧಿಕಾರಿಗಳು, ಪಂಚಾಯಿತಿ ಆಡಳಿತಕ್ಕೆ ದಂಡ ಪಾವತಿಸಿ ವಾಹನವನ್ನು ಲಾಕ್‌ ಮುಕ್ತಗೊಳಿಸಿದರು.

DAKSHINA KANNADA

ಕಾರ್ಕಳ: ಗೋಶಾಲೆಯಿಂದ 10,000 ರೂ. ಬೆಲೆಯ 3 ದನ ಕಳವು

Published

on

ಕಾರ್ಕಳ: ಗೋಶಾಲೆಯಿಂದ ಮೂರು ದನಗಳನ್ನು ಕಳವು ಮಾಡಿರುವ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯಲ್ಲಿ ನಡೆದಿದೆ.

 

ಬಜಗೋಳಿಯಲ್ಲಿ ಅಹಿಂಸಾ ಅನಿಮಲ್‌ ಕೇರ್‌ ಟ್ರಸ್ಟ್‌ ನಡೆಸುತ್ತಿರುವ ಗೋಶಾಲೆಯಿಂದ ಜೂನ್‌ 16ರಂದು ಮುಂಜಾನೆ 4 ಗಂಟೆ ಸುಮಾರಿಗೆ ಮೂರು ದನಗಳು ಕಳವಾಗಿವೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

READ IN ENGLISH : https://www.nammakudlaenglish.com/karkala-three-cows-worth-%e2%82%b910000-stolen-from-goshala/

ಇದನ್ನೂ ಓದಿ: ಮಂಗಳೂರು: ಭೀಕರ ಕಾರು ಅಪಘಾತದಲ್ಲಿ NSUI ಮುಖಂಡ ಸಹಿತ ಇಬ್ಬರು ಸಾವು

ಕಳವಾದ ದನಗಳ ಮೌಲ್ಯ ಸುಮಾರು 10 ಸಾವಿರ ರೂಪಾಯಿ ಆಗ ಬಹುದೆಂದು ಟ್ರಸ್ಟ್ ಸಂಚಾಲಕ ಎಂ.ಕೆ. ವಿರಂಜಯ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬಜಗೋಳಿಯಲ್ಲಿ ಅಹಿಂಸಾ ಅನಿಮಲ್‌ ಕೇರ್‌ ಟ್ರಸ್ಟ್‌ ಗೋಶಾಲೆಯನ್ನು ನಡೆಸುತ್ತಿದ್ದು, ಇಲ್ಲಿ ಗಾಯಗೊಂಡ, ಕಾಯಿಲೆಗೊಳಗಾದ, ಬೀದಿ ಪಾಲಾದ ಬೆಕ್ಕು, ನಾಯಿ ಮತ್ತು ದನಗಳನ್ನು ತಂದು ಆರೈಕೆ ಮಾಡಲಾಗುತ್ತಿದೆ ಎಂದು ಎಂ.ಕೆ. ವಿರಂಜಯ್‌ ವಿವರಿಸಿದ್ದಾರೆ.

Continue Reading

DAKSHINA KANNADA

ಮಂಗಳೂರು: ಭೀಕರ ಕಾರು ಅಪಘಾತದಲ್ಲಿ NSUI ಮುಖಂಡ ಸಹಿತ ಇಬ್ಬರು ಸಾವು

Published

on

ಮಂಗಳೂರು: ಕಾರೊಂದು ಡಿವೈಡರ್‌ ಗೆ ಢಿಕ್ಕಿ ಹೊಡೆದು ಇಬ್ಬರು ಯುವಕರು ಮೃತ ಪಟ್ಟ ದಾರುಣ ಘಟನೆ ಮಂಗಳೂರಿನ ಜಪ್ಪಿನಮೊಗರು ನಡು ಮೊಗೇರ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿನ್ನೆ (ಜೂ.17) ರಾತ್ರಿ ಸಂಭವಿಸಿದೆ.

ಕದ್ರಿ ಮಲ್ಲಿಕಟ್ಟೆಯ ನಿವಾಸಿ ಅಮನ್ ರಾವ್‌ (23) ಮತ್ತು ಕೊಂಚಾಡಿಯ ಓಂ ಶ್ರೀ ಪೂಜಾರಿ (24) ಮೃತ ಯುವಕರು ಎಂದು ಗುರುತಿಸಲಾಗಿದೆ. ಕಾರು ಡಿವೈಡರಿಗೆ ಢಿಕ್ಕಿಯಾಗಿ ಬಳಿಕ ಮೋರಿಗೆ ಬಡಿದು ಅವಘಡ ಸಂಭವಿಸಿದೆ.

ಓಂ ಶ್ರೀ ಪೂಜಾರಿ ಅವರು ಎನ್.ಎಸ್.ಯು.ಐ. ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಕಾರಿನಲ್ಲಿ 4- 5 ಮಂದಿ ಪ್ರಯಾಣಿಸುತ್ತಿದ್ದು, ಅಮನ್ ರಾವ್‌ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ತಲಪಾಡಿ ಕಡೆಯಿಂದ ಪಂಪ್‌ವೆಲ್‌ ಕಡೆಗೆ ಬರುತ್ತಿದ್ದ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಮುಂದೆ ಧರೆಗುರುಳಿದ ಬೃಹತ್ ಮರ

ವಂಶಿ ಮತ್ತು ಅಶಿಕ್‌ಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೊಬ್ಬ ಗೆಳೆಯ ಇಟಲಿ ಮೂಲದ ಜೆರ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಟ್ರಾಫಿಕ್‌ ದಕ್ಷಿಣ ಠಾಣೆಯ ಪೊಲೀಸರು ಕೇಸ್ ದಾಖಲಿಸಿದ್ದಾರೆ.

Continue Reading

DAKSHINA KANNADA

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ದಶಮಾನೋತ್ಸವ

Published

on

ಮಂಗಳೂರು/ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಜೂನ್ 29 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ತಿಳಿಸಿದ್ದಾರೆ.


ದಶಮ ಸಂಭ್ರಮದ ಪ್ರಯುಕ್ತ ಯುಎಇಯ ಏಳು ಮಂದಿ ಸಾಧಕರಿಗೆ ಮತ್ತು ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಸಂಘಟನೆ ಕ್ಷೇತ್ರದಲ್ಲಿ ಸರ್ವೋತ್ತಮ ಶೆಟ್ಟಿ, ಕಲಾ ಪೋಷಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮ ಕ್ಷೇತ್ರದಲ್ಲಿ ಪುತ್ತಿಗೆ ವಾಸುದೇವ ಭಟ್, ಸಮಾಜ ಸೇವಾ ಕ್ಷೇತ್ರದಲ್ಲಿ ಬಾಲಕೃಷ್ಣ ಸಾಲಿಯಾನ್, ಮಾಧ್ಯಮ ಕ್ಷೇತ್ರದ ಬಿ. ಕೆ. ಗಣೇಶ ರೈ, ನಾಟಕ ಕ್ಷೇತ್ರದಲ್ಲಿ ಡೋನಿ ಕೊರೆಯಾ, ಭರತನಾಟ್ಯ ಕ್ಷೇತ್ರದಲ್ಲಿ ರೂಪ ಕಿರಣ್ ಹಾಗೂ ಶ್ರೀ ರಾಜರಾಜೇಶ್ವರಿ ಭಜನಾ ತಂಡ, ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯನ್ನು ಗೌರವಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page