Connect with us

LATEST NEWS

ಚುನಾವಣೆ ಹತ್ತಿರ ಬರ್ತಿರುವುದರಿಂದ ಸೊರಕೆ ಎದ್ದು ನಿಂತಿದ್ದಾರೆ-ಕುಯಿಲಾಡಿ ಸುರೇಶ್ ನಾಯಕ್

Published

on

ಉಡುಪಿ: ‘ಸೊರಕೆಯವರು ಈಗ ಎಲೆಕ್ಷನ್ ಬಂತು ಅಂತ ಹೇಳಿ ಸಿಕ್ಕ ಸಿಕ್ಕ ಕಡೆಗಳೆಲ್ಲ ಆರೋಪ ಮಾಡುತ್ತಿದ್ದಾರೆ. ಅವರಿಗೆ ಅದೇ ಕೆಲಸ. ಸೊರಕೆಯವರಿಗೆ ಎಲ್ಲಾ ನಾಟಕ ಗೊತ್ತಿದೆ. ಅವರು ಪೊಲೀಸ್‌ ಅವರ ಹೆಸರಲ್ಲಿ ಕಾಲ್ ಮಾಡ್ತಾರೆ, ಬಿಜೆಪಿ ಕಾರ್ಯಕರ್ತರು ಅಂತ ಕಾಂಗ್ರೆಸ್‌ನವರಲ್ಲಿ ಕಾಲ್ ಮಾಡಿಸ್ತಾರೆ. ಅವರಿಗೆ ಈಗಲೇ ಗೊತ್ತಿದೆ. ಅವರು ಗೆಲ್ಲೋದಿಲ್ಲ ಅಂತ. ಏನೇನೋ ಗಿಮಿಕ್ ಮಾಡ್ತಿದ್ದಾರೆ. ಕೇವಲ ಚುನಾವಣೆ ಉದ್ದೇಶದಿಂದ ಎಸ್‌ಡಿಪಿಐ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರೂ ಹಿಂದೂಗಳ ಮನ ಓಲೈಸಲು ಪ್ರಾರಂಭ ಮಾಡಿದ್ದಾರೆ’ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ವ್ಯಂಗ್ಯವಾಡಿದ್ದಾರೆ.


ಬಿಜೆಪಿಯ ಕಾಪು ಶಾಸಕ ಲಾಲಾಜಿ ಮೆಂಡನ್ ಅವರಿಗೆ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾಡಿರುವ ಆರೋಪಕ್ಕೆ ಉಡುಪಿಯ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನಗೆ ತೀರುಗೇಟು ನೀಡಿದ ಅವರು ‘ವಿನಯ್‌ಕುಮಾರ್ ಸೊರಕೆಯವರು ಜೀವಮಾನದಲ್ಲಿ ದನ ಹಿಡಿದವರಿಗೆ ಶಿಕ್ಷೆ ವಿಧಿಸಿ ಅಂತ ಹೇಳಿದನ್ನು ನೀವು ಕೇಳಿದ್ದೀರಾ?

ಈಗ ಮೊನ್ನೆ ತಾನೇ ಎಸ್‌ಡಿಪಿಐ ಮೊನ್ನೆ ಮೂರು ಸೀಟ್ ಗೆದ್ದಿದಕ್ಕೆ ಇವರಿಗೆ ನಿದ್ದೆ ಬರುತ್ತಿಲ್ಲ. ಇದು ಬಿಜೆಪಿ ಒಳ ಒಪ್ಪಂದ ಅಂತ ಹೇಳುತ್ತಿದ್ದಾರೆ. ಸೊರಕೆಯವರು ಎಸ್‌ಡಿಪಿಐ ಸಂಬಂಧ ಹೇಗೆ ಇದೆ ಅಂತ ಇಡೀ ಉಡುಪಿಯವರಿಗೆ ಗೊತ್ತಿದೆ.

ಸೊರಕೆಯವರು ಎಸ್‌ಡಿಪಿಐ ಅವರ ಜೊತೆ ಸೇರ್ಕೊಂಡು ಏನು ಮಾಡಿದ್ರು. ಅವರ ಸಂಬಂಧ ಏನು ಅಂತ. ಕೇವಲ ರಾಜಕೀಯಕ್ಕಾಗಿ ರಾಜಕೀಯ ಮಾಡುವುದು ಸರಿಯಲ್ಲ. ಸೊರಕೆಯವರು ಚರ್ಚೆಗೆ ಬರಲಿ. ಏನೇ ಆದರೂ ಸುಳ್ಳನ್ನೇ ಹೇಳಬಾರದು.

ಪಕ್ಷದಲ್ಲಿ ನನಗೆ ಯಾರು ಸೀಟ್ ಕೊಟ್ಟರೂ ನಾನು ಕಾಪುವಿನಲ್ಲಿ ಗೆಲ್ಲುತ್ತೇನೆ. ಪಕ್ಷ ನಿರ್ಧಾರಕ್ಕೆ ನಾವು ಯಾವಾಗ್ಲೂ ಬದ್ಧ. ಸೊರಕೆಯವರು ಸತ್ಯವಂತರಲ್ಲ. ಸತ್ಯವಂತರಾಗಿದ್ದರೆ ಅವರು ಪುತ್ತೂರಿನಿಂದ ಇಲ್ಲಿ ತನಕ ಬರುತ್ತಿರಲಿಲ್ಲ. ಅಲ್ಲೇ ಗೆಲ್ಲುತ್ತಿದ್ದರು.

ಹಿಜಾಬ್ ವಿವಾದದ ಬಗ್ಗೆ ಸೊರಕೆ ಅವರ ಮನೋಭೂಮಿಕೆ ಏನು, ಏನಾದ್ರೂ ಹೇಳಿಕೆ ನೀಡಿದ್ದಾರಾ? ಇವರು ಹಿರಿಯ ಕಾಂಗ್ರೆಸ್ ಮುಖಂಡ ಆಗಿದ್ದರೂ ಅವರಿಗೆ ಉಡುಪಿಯಲ್ಲಿ ಹಿಜಾಬ್ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಕಿಡಿಕಾರಿದರು.

LATEST NEWS

ವಿಜಯಪುರದಲ್ಲಿ ಭೀಕರ ಅಪ*ಘಾತ; ಸ್ಥಳದಲ್ಲೇ 6 ಮಂದಿ ಸಾ*ವು

Published

on

ಮಂಗಳೂರು/ವಿಜಯಪುರ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 50 ರ ಚತುಷ್ಪಥ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ.

ಮಹೀಂದ್ರ ಟಿಯುವಿ 300 ಕಾರು, ಕಂಟೇನರ್​, ಖಾಸಗಿ ಬಸ್​ ನಡುವೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆಯ ಆರ್ಭಟ; ಅಲ್ಲಲ್ಲಿ ಹಾನಿ

ಘಟನಾ ಸ್ಥಳಕ್ಕೆ ಮನಗೂಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

DAKSHINA KANNADA

ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆಯ ಆರ್ಭಟ; ಅಲ್ಲಲ್ಲಿ ಹಾನಿ

Published

on

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಎರಡನೇ ದಿನವಾದ ಇಂದು ಕೂಡಾ ಮುಂದುವರಿದಿದೆ. ಇದರಿಂದ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ನೆರೆ ರಾಜ್ಯ ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಮಳೆ ತೀವ್ರವಾಗಿದೆ. ಹವಾಮಾನ ಇಲಾಖೆಯು ನಾಲ್ಕೂ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಘೋಷಿಸಿದೆ. ರಸ್ತೆ ಕಾಮಗಾರಿ, ಅವೈಜ್ಙಾನಿಕ ಚರಂಡಿ ಕೆಲಸ ಇತ್ಯಾದಿ ಕಾರಣಗಳಿಂದಾಗಿ ಮಳೆ ನೀರು ಸರಾಗವಾಗಿ ಹರಿಯದೆ ಕೃತಕ ನೆರೆ ಬಂದು ಅನೇಕ ಕಡೆಗಳಲ್ಲಿ ನಾಶ ನಷ್ಟ ಸಂಭವಿಸಿದೆ. ಸಂಚಾರ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ: ಬೆಳ್ತಂಗಡಿ: ಪಂಜಾಬ್‌ ನಲ್ಲಿ ಆಕಾಂಕ್ಷ ಆತ್ಮಹತ್ಯೆ ಪ್ರಕರಣ; ಮನೆಗೆ ತಲುಪಿದ ಮೃತದೇಹ

ಗಾಳಿ ಮಳೆಗೆ ಮರಗಳು ಬಿದ್ದು ವಿದ್ಯುತ್‌ ಸಂಪರ್ಕ ಹಲವಾರು ಕಡೆಗಳಲ್ಲಿ ಕಡಿತಗೊಂಡಿದೆ. ಮಂಗಳೂರು ನಗರ, ಉಡುಪಿ ನಗರ, ಮಣಿಪಾಲಗಳಲ್ಲಿ ಅಲ್ಲಲ್ಲಿ ಕೃತಕ ನೆರೆಯಿಂದ ಹಾನಿ ಸಂಭವಿಸಿದೆ. ಇಂದು ಮುಂಜಾನೆಯಿಂದ ಬಿಟ್ಟು ಬಿಟ್ಟು ಭಾರೀ ಮಳೆ ಬರುತ್ತಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Continue Reading

BELTHANGADY

ಬೆಳ್ತಂಗಡಿ: ಪಂಜಾಬ್‌ ನಲ್ಲಿ ಆಕಾಂಕ್ಷ ಆತ್ಮಹತ್ಯೆ ಪ್ರಕರಣ; ಮನೆಗೆ ತಲುಪಿದ ಮೃತದೇಹ

Published

on

ಬೆಳ್ತಂಗಡಿ: ಪಂಜಾಬ್​​ನಲ್ಲಿ ನಿಗೂಢವಾಗಿ ಮೃತಪಟ್ಟ ಬೆಳ್ತಂಗಡಿಯ ನಿವಾಸಿ ಆಕಾಂಕ್ಷಾ ಎಸ್ ನಾಯರ್ ಮೃತದೇಹವನ್ನು ಬುಧವಾರ ಹುಟ್ಟೂರಿಗೆ ತರಲಾಯಿತು. ಬೆಂಗಳೂರು ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಮನೆಗೆ ತರಲಾಯಿತು.

ಭಾರೀ ಮಳೆಯ ಹಿನ್ನಲೆ ಮನೆಗೆ ಸಾಗುವ ದಾರಿಯಲ್ಲಿ ಆ್ಯಂಬುಲೆನ್ಸ್ ಮಣ್ಣಿನಲ್ಲಿ ಹೂತಗೊಂಡ ಘಟನೆಯೂ ನಡೆಯಿತು. ನಂತರ ಸ್ಥಳೀಯರು ಆ್ಯಂಬುಲೆನ್ಸ್ ಟೈರ್ ಅನ್ನು ಮಣ್ಣಿನಿಂದ ಹೊರತೆಗೆದರು.

ಇದನ್ನೂ ಓದಿ: ಆಕಾಂಕ್ಷ ಸಾ*ವು ಪ್ರಕರಣ: ಪ್ರೊಫೆಸರ್ ಅರೆಸ್ಟ್; ಮೇ.21 ರಂದು  ಮೃ*ತದೇಹ ಬೆಳ್ತಂಗಡಿಗೆ

ಸದ್ಯ ಆಕಾಂಕ್ಷಾ ಮೃತದೇಹ ಬೋಳಿಯಾರ್​​ನಲ್ಲಿರುವ ಮನೆಗೆ ತಲುಪಿದೆ. ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಹೆಚ್ಚಾಗಿದೆ. ಮೃತದೇಹದ ಅಂತ್ಯ ಸಂಸ್ಕಾರ ಇಂದೇ ನೆರವೇರುವ ಸಾಧ್ಯತೆ ಇದೆ.

Continue Reading
Advertisement

Trending

Copyright © 2025 Namma Kudla News

You cannot copy content of this page