Connect with us

ತುಳುನಾಡು ಕಂಡ ಅಪೂರ್ವ ರಾಜಕಾರಣಿ ಉಳ್ಳಾಲ ಶ್ರೀನಿವಾಸ ಮಲ್ಯ

Published

on

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನವ ಮಂಗಳೂರು ಬಂದರು, ಎನ್ಐಟಿಕೆ, ನೇತ್ರಾವತಿ ಸೇತುವೆ, ಅದೆಷ್ಟೋ ಹೈವೇಗಳು…ಅದೆಷ್ಟೋ ಶಾಲಾ-ಕಾಲೇಜುಗಳು… ಇದರೆಲ್ಲದರ ಹಿಂದೆ ಇರುವ ಒಂದೇ ಒಂದು ಹೆಸರು ಉಳ್ಳಾಲ ಶ್ರೀನಿವಾಸ ಮಲ್ಯ.

ಯು.ಎಸ್ ಮಲ್ಯ 1902 ರಲ್ಲಿ ನಮ್ಮ ಮಂಗಳೂರಿನ ಕಾರ್ ಸ್ಟ್ರೀಟ್ ಹತ್ತಿರದ ಗೌಡ ಸಾರಸ್ವತಿ ಕುಟುಂಬದಲ್ಲಿ ಹುಟ್ಟಿದರು. ಸೈಂಟ್ ಅಲೋಶಿಯಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಲಿತು ಬಳಿಕ ಕೆನರಾ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದರು. ಸ್ವಾತಂತ್ರ್ಯ ಹೋರಾಟದ ಆ ಸಮಯದಲ್ಲಿ ಕಾರ್ನಾಡ್ ಸದಾಶಿವ ರಾವ್ ಅವರ ದೇಶಭಕ್ತರ ತ್ಯಾಗವನ್ನು ನೋಡಿ ಪ್ರೇರಿತರಾದ ಶ್ರೀನಿವಾಸ ಮಲ್ಯ ಇವರೂ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುತ್ತಾರೆ.

ಕ್ವಿಟ್ ಇಂಡಿಯಾ, ದಂಡಿಯಾತ್ರೆ ಇದರೆಲ್ಲದರಲ್ಲೂ ಪಾಲು ಪಡೆಯುತ್ತಾರೆ. ಹೀಗೆ ಹೋರಾಟದಲ್ಲೇ ಮುಂದೆ ಹೋದಂತಹ ಮಲ್ಯರಿಗೆ ನೆಹರು, ಲಾಲ್ ಬಹುದ್ದೂರ್ ಶಾಸ್ತ್ರಿ ಇವರೆಲ್ಲರೂ ಆಪ್ತರಾಗುತ್ತಾರೆ. ಭಾರತ ಸ್ವಾತಂತ್ರ್ಯ ಆದ ನಂತರ ಆದಂತಹ ಚುನಾವಣೆಯಲ್ಲಿ 1952, 1957 ಮತ್ತು 1962 ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಾರೆ.

ಜನಪ್ರತಿನಿಧಿ ಒಬ್ಬನಿಗೆ ಕೆಲಸ ಮಾಡುವ ಇಚ್ಛಾಶಕ್ತಿ ಒಂದಿದ್ದರೆ ಯಾವ ರೀತಿಯ ಕ್ರಾಂತಿಯನ್ನು ಮಾಡಬಹುದು ಎಂಬುದಕ್ಕೆ ಯು.ಎಸ್ ಮಲ್ಯರು ದೊಡ್ಡ ಉದಾಹರಣೆ. ಹೌದು, ಯು. ಎಸ್ ಮಲ್ಯರು ಸಂಸದರಾಗಿ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು-ಹಾಸನ-ಬೆಂಗಳೂರು ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ, ಸುರತ್ಕಲ್ನಲ್ಲಿರುವ ಎನ್ಐಟಿಕೆ, ನವಮಂಗಳೂರು ಬಂದರು, ಆಕಾಶವಾಣಿ, ಎಂ.ಸಿ.ಎಫ್, ಮಂಗಳೂರಿನ ಸಕ್ಯೂಟ್ ಹೌಸ್, ಮಂಗಳೂರು ಪುರಭವನ, ವೆನ್ಲಾಕ್ ಆಸ್ಪತ್ರೆಯ ಅಭಿವೃದ್ಧಿ, ನೇತ್ರಾವತಿ, ಕೂಳೂರು, ಮೂಲ್ಕಿ, ಉದ್ಯಾವರ, ಗಂಗೊಳ್ಳಿ ಈ ಎಲ್ಲದರ ಸೇತುವೆ ನಿರ್ಮಾಣ, ಆಲ್ ಇಂಡಿಯಾ ಹ್ಯಾಂಡಿ ಕ್ಯಾಪ್ ಬೋರ್ಡ್, ಇಂಡಿಯಾ ಕಾರ್ಪೋರೇಟರ್ ಯೂನಿಯನ್ ಮುಖೇನ ಲಕ್ಷಾಂತರ ಜನರಿಗೆ ಉದ್ಯೋಗ ಹೀಗೆ ಹೇಳಿಕೊಂಡು ಹೋದರೆ ಅದೆಷ್ಟೋ ಇವೆ.

ಇಂತಹ ಮಹಾನ್ ವ್ಯಕ್ತಿ 1965 ರಲ್ಲಿ ಡಿಸೆಂಬರ್ 19 ರಂದು ದೆಹಲಿಯಿಂದ ಮಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದ ಸಮಯದಲ್ಲಿ ಹೃದಯಾ*ಘಾತವಾಗುತ್ತದೆ. ಈ ಸುದ್ದಿಯನ್ನು ಕೇಳಿದಂತಹ ಅಂದಿನ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ದೆಹಲಿಗೆ ಅವರು ಇದ್ದಂತಹ ಸ್ಥಳಕ್ಕೆ ಓಡಿ ಬರುತ್ತಾರೆ. ವಿಶೇಷ ವಿಮಾನದಲ್ಲಿ ಅವರ ಪಾರ್ಥಿವ ಶರೀರವನ್ನು ಮಂಗಳೂರಿಗೆ ಕಳುಹಿಸುತ್ತಾರೆ.

ಒಂದು ಕಡೆಯಲ್ಲಿ ಭಾರತ-ಪಾಕಿಸ್ತಾನ ಯುದ್ಧ ಆಗುತ್ತಿದ್ದಂತಹ ಸಮಯ ಅದು. ಮಂಗಳೂರಿನ ನೆಹರೂ ಮೈದಾನದಲ್ಲಿ ಸ್ಪಲ್ಪ ಹೊತ್ತು ಸಾರ್ವಜನಿಕ ವೀಕ್ಷಣೆಗಾಗಿ ಅವರ ಶರೀರವನ್ನು ಇಡುತ್ತಾರೆ. ಆ ಮೂಲಕವಾಗಿ ಯು.ಎಸ್. ಮಲ್ಯ ಎನ್ನುವ ಮಹಾನ್ ಚೇತನ ಪಂಚಭೂತಗಳಲ್ಲಿ ಲೀನವಾಗುತ್ತಾರೆ.

ನಮ್ಮ ಜಿಲ್ಲೆಯ ಅಭಿವೃದ್ಧಿಯ ವಿಷಯ ಬರುವಾಗ ಉಳ್ಳಾಲ ಶ್ರೀನಿವಾಸ ಮಲ್ಯ ಎನ್ನುವ ಹೆಸರು ಯಾವಾಗಲೂ ಚಿರಸ್ಥಾಯಿ. ಇವತ್ತಿಗೂ ನಾವು ನವ ಮಂಗಳೂರು ಬಂದರಿನ ಪ್ರವೇಶ ದ್ವಾರ, ಪದುವ ಹೈಸ್ಕೂಲ್ನ ಎದುರುಗಡೆ, ಸುರತ್ಕಲ್ ಎನ್ಐಟಿಕೆ ಸ್ಮಾರಕ ಭವನ, ಪಡೀಲ್ ಸರ್ಕಲ್ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಅವರ ಶಾಶ್ವತ ಪ್ರತಿಮೆ ಹಾಗೂ ಹೆಸರನ್ನು

ನಾವು ಕಾಣಬಹುದು. ಮಂಗಳೂರಿನ ಕಾರ್ಸ್ಟ್ರೀಟ್ ನಲ್ಲಿರುವ ಒಂದು ಅಶ್ವಥ ಮರವಿದೆ. ಇದು ಯು.ಎಸ್ ಮಲ್ಯರಿಗೆ 60 ವರ್ಷ ಆದಾಗ ಅವರು ನೆಟ್ಟಂತಹ ಸಸಿ. ಒಂದು ರೀತಿಯಲ್ಲಿ ಈ ಮರವನ್ನು ಅವರ ಪ್ರತಿನಿಧಿ ಎಂದು ಹೇಳಬಹುದು.

ತನ್ನ ಸ್ವಂತಕ್ಕಾಗಿ ಯಾವುದನ್ನೂ ಮಾಡದೆ ಈ ಊರು ಒಳ್ಳೆಯದಾಗಬೇಕು, ಊರಿನ ಜನರಿಗೆ ಒಳ್ಳೆಯದಾಗಬೇಕು ಎನ್ನುವ ಭಾವನೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶಾಶ್ವತವಾದಂತಹ ಕೊಡುಗೆಯನ್ನು ನೀಡಿದಂತಹ ಮಹಾನ್ ವ್ಯಕ್ತಿ ಉಳ್ಳಾಲ ಶ್ರೀನಿವಾಸ ಮಲ್ಯ ನಮ್ಮ ಮಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ ಎನ್ನುವಂತದ್ದೇ ಹೆಮ್ಮೆ ಪಡುವ ಸಂಗತಿ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಕೇಜ್ರಿವಾಲ್ ಸೋಲಿಗೆ ಕಾರಣ ಬಿಚ್ಚಿಟ್ಟ ಅಣ್ಣಾ ಹಜಾರೆ !

Published

on

ಮಂಗಳೂರು/ಮುಂಬೈ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲನುಭವಿಸಿದೆ. 27 ವರ್ಷಗಳ ಬಳಿಕ ಬಿಜೆಪಿಗೆ ಅಧಿಕಾರ ಸಿಗುವಂತಾಗಿದೆ. ಈ ಮೂಲಕ ಆಡಳಿತರೂಢ ಆಮ್ ಆದ್ಮಿ ಪಕ್ಷ ನಿರ್ಗಮಿಸುತ್ತಿದೆ. ದೆಹಲಿ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಾತನಾಡಿದ್ದಾರೆ.

ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ 87ರ ಹರೆಯದ ಅಣ್ಣಾ ಹಜಾರೆ, “ಕೇಜ್ರಿವಾಲ್ ನಾನು ಹೇಳಿದಕ್ಕೆ ಕಿವಿಗೊಡಲಿಲ್ಲ ಮತ್ತು ಮದ್ಯದ ಮೇಲೆ ಮಾತ್ರ ಗಮನಹರಿಸಿದರು. ಅವರು ಹಣದ ದುರಾಸೆಯಲ್ಲಿ ಮುಳುಗಿದರು” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: 27 ವರ್ಷಗಳ ಬಳಿಕ ದೆಹಲಿಯಲ್ಲಿ ಅರಳಿದ ಕಮಲ; ದಿಲ್ಲಿಯ ದಿಲ್ ಗೆದ್ದ ಬಿಜೆಪಿ

“ಅಭ್ಯರ್ಥಿಯ ನಡವಳಿಕೆ ಮತ್ತು ಆಲೋಚನೆಗಳು ಶುದ್ದವಾಗಿರಬೇಕು, ಜೀವನವು ದೋಷರಹಿತವಾಗಿರಬೇಕು ಮತ್ತು ತ್ಯಾಗ ಇರಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ. ಈ ಗುಣಗಳಿದ್ದವರ ಮೇಲೆ ಮತದಾರರು ನಂಬಿಕೆ ಇಡುತ್ತಾರೆ. ಆದರೆ ಅವರು ಮದ್ಯ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಜನರು ಭಾವಿಸಿದ್ದಾರೆ. ರಾಜಕೀಯದಲ್ಲಿ ಆರೋಪಗಳನ್ನು ಮಾಡಲಾಗುತ್ತದೆ. ಆಗ ತಪ್ಪಿತಸ್ಥನಲ್ಲ ಎಂದು ಸಾಬೀತುಪಡಿಸಬೇಕು. ಸತ್ಯವು ಸತ್ಯವಾಗಿ ಉಳಿಯುತ್ತದೆ” ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

 

Continue Reading

LATEST NEWS

ಮದುವೆ ಆಗುವ ಹುಡುಗರೇ ಎಚ್ಚರ; ನಿಮ್ಮ ಸಿಬಿಲ್ ಸ್ಕೋರ್‌ ಅನ್ನು ಒಮ್ಮೆ ನೋಡಿಕೊಳ್ಳಿ..!

Published

on

ಮಹಾರಾಷ್ಟ್ರ: ಇತ್ತೀಚಿನ ದಿನದಲ್ಲಿ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡುತ್ತಾರೆ. ವಧುವಿನ ಕಡೆಯವರು ವರನನ್ನು ಹುಡುಕುವಾಗ ವರನ ಪೂರ್ವಪರ ವಿಚಾರಗಳನ್ನು ನೋಡುವುದುಂಟು. ಮೊದಲು ವರ ಧೂಮಪಾನ, ಮಧ್ಯಪಾನ ಮಾಡುತ್ತಿದ್ದರೆ ಆಕೆಗೆ ಹುಡುಗಿ ಕೊಡುತ್ತಿರಲಿಲ್ಲ. ಆದರೆ ಈಗ ವರನ ಕೆಲಸ, ಗುಣ, ನಡತೆ, ಜಾತಕವನ್ನು ನೋಡಿ ಹುಡುಗಿಯನ್ನು ಕೊಡುವುದುಂಟು. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.

ಮಹಾರಾಷ್ಟ್ರದ ಮುರ್ಜಿಜಾಪುರದಲ್ಲಿ ಈ ಘಟನೆ ನಡೆದಿದ್ದು, ಮದುವೆ ಮಾತುಕತೆಗೆ ಬಂದ ಎರಡು ಕಡೆಯವರು ಚೆನ್ನಾಗಿಯೇ ಎಲ್ಲಾ ರೀತಿಯ ಮಾತುಕತೆಗಳನ್ನು ಮುಗಿಸಿದ್ದರು. ಕೊನೆಗೆ ನಿಶ್ಚಿತಾರ್ಥದ ದಿನಾಂಕವನ್ನು ನಿಗದಿ ಮಾಡಲೂ ಮುಂದಾಗಿದ್ದರು.

ಬಳಿಕ ಹುಡುಗಿಯ ಅಂಕಲ್ ಒಬ್ಬರು ಅನಿರೀಕ್ಷಿತವಾದ ಬೇಡಿಕೆಯೊಂದನ್ನು ಇಡುತ್ತಾರೆ. ನಾನು ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡಬೇಕು ಎನ್ನುತ್ತಾರೆ. ಇದನ್ನು ಕೇಳಿದ ಅಲ್ಲಿದ್ದ ಎಲ್ಲರಿಗೂ ಒಂದು ಕ್ಷಣ ಅಚ್ಚರಿಯಾಗುತ್ತದೆ. ಯಾವಾಗ ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡುತ್ತಾರೋ ಹುಡುಗ ಹಲವು ಕಡೆ ಸಾಲ ಮಾಡಿ ಆರ್ಥಿಕವಾಗಿ ಒದ್ದಾಡುತ್ತಿದ್ದಾನೆ ಎಂಬುದು ಕಂಡು ಬರುತ್ತದೆ. ಇದರಿಂದ ನನ್ನ ಮಗಳ ಬದುಕು ಹಾಳಾಗುತ್ತದೆ ಈ ಮದುವೆ ಬೇಡ ಎಂದು ನಿರ್ಧರಿಸಿದ ಹುಡುಗಿಯ ಕುಟುಂಬ ಹುಡುಗನ ಮನೆಯಿಂದ ಎದ್ದು ಬರುತ್ತದೆ.

ಈಗಾಗಲೇ ಸಾಲದಲ್ಲಿ ಮುಳುಗಿ ಹೋಗಿರುವ ಈ ಹುಡುಗನಿಗೆ ಮದುವೆ ಯಾಕೆ ಬೇಕು ? ಎಂದು ಪ್ರಶ್ನಿಸಿದ ಹುಡುಗಿಯ ಅಂಕಲ್​ ವಾದ ಮಾಡುತ್ತಾನೆ. ಉಳಿದವರು ಕೂಡ ಅವರ ಮಾತಿಗೆ ಸಮ್ಮತಿಯನ್ನು ನೀಡಿ ಮದುವೆಯ ಮಾತುಕತೆಯನ್ನು ಅಲ್ಲಿಗೆ ನಿಲ್ಲಿಸಿ ಮನೆಯಿಂದ ಎದ್ದು ಬರುತ್ತಾರೆ.

Continue Reading

LATEST NEWS

ಅಯ್ಯೋ ದೇವಾ..! ಬೆಕ್ಕಿಗಾಗಿ ನಡೆಯಿತು ಎರಡು ಕುಟುಂಬಗಳ ನಡುವೆ ಜಗಳ

Published

on

ಮಂಗಳೂರು/ಹೈದರಾಬಾದ್ : ಹಾಸಿಗೆಯ ಮೇಲೆ ಬೆಕ್ಕೊಂದು ಮಲಗಿದ್ದ ಪ್ರಕರಣ ತೆಲಂಗಾಣದ ನೆಲ್ಗೊಂಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ‘ನಮ್ಮದು ಬೆಕ್ಕು, ನಮ್ಮದು ಬೆಕ್ಕು’ ಎಂದು ಹೇಳಿಕೊಂಡು ಎರಡು ಕುಟುಂಬಗಳು ರಸ್ತೆಯಲ್ಲಿ ಜಗಳವಾಡುತ್ತಿದ್ದಾರೆ.

ತೆಲಂಗಾಣದ ನೆಲ್ಗೊಂಡ ಪಟ್ಟಣದ ರಹಮತ್ ನಗರದ ನಿವಾಸಿ ಪುಷ್ಪಲತಾ ಅವರು ಬೆಕ್ಕನ್ನು ಸಾಕಿ ಅದಕ್ಕೆ ‘ಪಫಿ’ ಎಂದು ಹೆಸರಿಟ್ಟಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಬೆಕ್ಕು ಕಾಣೆಯಾದಾಗ, ಅವರು ಟೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೆಲ್ಲದರ ನಡುವೆ ಪುಷ್ಪಲತಾ ಅವರ ವಠಾರದಲ್ಲಿ ಅಶ್ರಫ್ ಎಂಬುವವರ ಮನೆಯಲ್ಲಿ ಕೂಡ ಪಫಿ ಹೋಲುವಂತಹ ಬೆಕ್ಕು ಕಂಡುಬಂದಿದೆ.

ಈ ಬಗ್ಗೆ ಪುಷ್ಪಲತಾ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರಿನಲ್ಲಿ ಬೆಕ್ಕನ್ನು ಗುರುತಿಸದೆ ಬಣ್ಣ ಬಳಿಯಲಾಗಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಎಟಿಎಂ ದರೋಡೆ ಪ್ರಕರಣ ಬಯಲು ಮಾಡಿತು ಟೀ ಅಂಗಡಿ ಬಳಿ ನಡೆದ ಜಗಳ!

ಅಶ್ರಫ್ ಅವರ ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಿಸಿದಾಗ, ಅವರು ಒಬ್ಬ ವ್ಯಕ್ತಿಯಿಂದ 3,500 ರೂ. ಗಳನ್ನು ಕೊಟ್ಟು ಖರೀದಿಸಿರುವುದಾಗಿ ಹೇಳಿದರು. ಮತ್ತೊಂದೆಡೆ ಎರಡು ಕುಟುಂಬಗಳು ಎಸ್‌ಪಿಯವರಿಗೆ ಕರೆಮಾಡಿ ಪಂಚಾಯಿತಿ ನಡೆಸುವಂತೆ ಕೇಳಿಕೊಂಡಿತ್ತು.

ಈ ಪ್ರಕರಣ ಪೊಲೀಸರ ತಲೆನೋವಿಗೆ ಕಾರಣವಾಗಿದ್ದು, ಬೆಕ್ಕಿನ ಕೂದಲಿನ ಮಾದರಿಗಳನ್ನು ಪರೀಕ್ಷೆ ಮಾಡುವಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಬೆಕ್ಕು ಯಾರಿಗೆ ಸೇರಿದ್ದು ಎಂದು ತಿಳಿಯಲಿದೆ. ಪ್ರಸ್ತುತ ಬೆಕ್ಕು ಅಶ್ರಫ್ ಅವರ ಮನೆಯಲ್ಲಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page