Connect with us

LATEST NEWS

ಮಡಿಕೇರಿ: ಆನೆ ದಂತದಲ್ಲಿ ಟ್ರೋಫಿ ತಯಾರಿಸಿ ಮಾರಾಟಕ್ಕೆ ಯತ್ನ-ಇಬ್ಬರ ಬಂಧನ

Published

on

ಮಡಿಕೇರಿ: ಆನೆ ದಂತದಲ್ಲಿ ನಿರ್ಮಿಸಿದ್ದ ಟ್ರೋಫಿಯನ್ನು ಮಾರಾಟ ಮಾಡಲು ಯತ್ನಿಸಿ ಇಬ್ಬರು ಅರಣ್ಯ ಸಂಚಾರಿ ದಳದ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ರಫೀಕ್​ ಅಹಮದ್​ ಖಾನ್​ ಹಾಗೂ ಫಾಜಿಲ್​ ಖಾನ್​ ಬಂಧಿತ ಆರೋಪಿಗಳು.

ಇವರಿಬ್ಬರೂ ಮಡಿಕೇರಿಯ ಚೈನ್​ ಗೇಟ್​ ಬಳಿಯ ಹಿಂದು ರುದ್ರಭೂಮಿ ಮುಂಭಾಗದ ರಸ್ತೆಯಲ್ಲಿ ಭಾನುವಾರ ಸಂಜೆ ಅಕ್ರಮವಾಗಿ ಸಂಗ್ರಹಿಸಿದ್ದ ಆನೆ ದಂತದಲ್ಲಿ ಕೆತ್ತಲಾದ ಟ್ರೋಫಿಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು.

ಈ ವೇಳೆ ದಾಳಿ ಮಾಡಿದ ಮಡಿಕೇರಿ ಅರಣ್ಯ ಸಂಚಾರ ದಳದ ಸಬ್​ ಇನ್ಸ್​ಪೆಕ್ಟರ್​ ಸಿ.ಯು. ಸವಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ಆನೆ ದಂತದ ಟ್ರೋಫಿಯನ್ನು ವಶಕ್ಕೆ ಪಡೆದಿದೆ.

LATEST NEWS

ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸಿಎ ಹೃದಯಾಘಾತದಿಂದ ಸಾವು

Published

on

ಇಂದೋರ್‌: ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ 29 ವರ್ಷದ ಚಾರ್ಟರ್ಡ್‌ ಅಕೌಂಟೆಂಟ್‌ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಂದೋರ್‌ನ ಸಿಎಟಿ ರಸ್ತೆಯಲ್ಲಿರುವ ಮದುವೆ ಗಾರ್ಡನ್‌ನಲ್ಲಿ ನಡೆದಿದೆ.

ಪುಣೆಯ ಸಂಪತ್‌ಹಿಲ್ಸ್‌ನ ನಿವಾಸಿ ಆಯುಷ್‌ ವ್ಯಾಸ್‌ ಮೃತಪಟ್ಟ ಯುವಕ. ಮದುವೆಯ ಸಂಭ್ರಮಾಚಾರಣೆಯ ವೇಳೆ ಈತನ ಆರೋಗ್ಯ ಹದಗೆಟ್ಟಿದ್ದು, ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪೊಲೀಸರ ಪ್ರಕಾರ ಆಯುಷ್‌ ಶನಿವಾರ ಸಂಜೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ನಂತರ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಾಗ ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಗುಂಡ್ಯದಲ್ಲಿ ಮತ್ತೆ ಕೆಎಸ್ಆರ್ಟಿಸಿ ಬಸ್ಸು ಮತ್ತು ಲಾರಿ ಅಪಘಾತ

ವೈದ್ಯಕೀಯ ಪರೀಕ್ಷೆಯಲ್ಲಿ ಅಪರೂಪದ ವಿಷಯ ಬೆಳಕಿಗೆ ಬಂದಿದೆ. ಹೃದಯದ ಅಪಧಮನಿಗಳು ಅಸಾಮಾನ್ಯವಾಗಿ ಗಟ್ಟಿಯಾಗಿದ್ದವು ಎಂದು ಹೇಳಲಾಗಿದೆ. ಇದು ಯುವ ವಯಸ್ಸಿನವರಲ್ಲಿ ಬಹಳ ವಿರಳ ಎನ್ನಲಾಗಿದೆ.

Continue Reading

LATEST NEWS

ಐಪಿಎಲ್‌ ಅಥವಾ ಪಿಎಸ್‌ಎಲ್‌ಗಿಂತ ಹೆತ್ತವರ ಸುರಕ್ಷತೆಯೇ ಮುಖ್ಯವಾಗಿತ್ತು: ಮೊಯಿನ್ ಅಲಿ

Published

on

ಮಂಗಳೂರು/ನವದೆಹಲಿ: ಕೋಲ್ಕತ್ತಾ ನೈಟ್‌ರೈಡರ್ಸ್ ತಂಡದ ಇಂಗ್ಲೆಂಡ್ ಸ್ಪಿನ್ನರ್ ಮೊಯಿನ್ ಅಲಿ 2025ರ ಐಪಿಎಲ್‌ನಿಂದ ಹೊರಹೋಗಲು ಕಾರಣವೇನೆಂದು ಹೇಳಿದ್ದಾರೆ.

ಭಾರತೀಯ ಸೇನೆ ಮತ್ತು ವಾಯುಪಡೆ ಆಪರೇಷನ್ ಸಿಂದೂರ್ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ 9 ಕಡೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ನಿದ್ದೆಗೆಡಿಸಿತು. ಆದರೆ ಈ ದಾಳಿಯ ಸಂದರ್ಭದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಮೊಹಿನ್ ಆಲಿ ಅವರ ಹೆತ್ತವರು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಬಳಿ ಇದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾದ ಮೊಹಮ್ಮದ್ ಶಮಿ; ಬಿಜೆಪಿ ಸೆರ್ತಾರಾ ಟೀಮ್‌ ಇಂಡಿಯಾ ವೇಗಿ

ಈ ಬಗ್ಗೆ ಮಾತನಾಡಿದ ಮೊಯಿನ್ ಅಲಿ, “ನನ್ನ ಹೆತ್ತವರಿದ್ದ ಜಾಗಕ್ಕೆ ಸುಮಾರು 30-35 ಕಿ.ಮೀ. ದೂರಕ್ಕೆ ಭಾರತೀಯ ಸೇನೆ ಮಿಸೈಲ್ ದಾಳಿ ನಡೆಸಿತು. ಇದೊಂಥರ ತಲೆ ಕೆಡುವಂಥ ಪರಿಸ್ಥಿತಿ. ಬಳಿಕ, ಹೆತ್ತವರು ಹೇಗೋ ಒಂದು ವಿಮಾನ ಹಿಡಿದು ಅದೇ ದಿನ ಅಲ್ಲಿಂದ ತೆರಳಿದರು. ಅನಂತರ ನನಗೆ ವೈರಲ್ ಜ್ವರ ಕಾಡತೊಡಗಿತು. ಹೀಗಾಗಿ ನನಗೆ ಐಪಿಎಲ್ ಅಥವಾ ಪಿಎಸ್‌ಎಲ್‌ಗಿಂತ ಹೆತ್ತವರ ಸುರಕ್ಷತೆಯೇ ಮುಖ್ಯವಾಗಿತ್ತು. ಆದ್ದರಿಂದ ನಾನು ಬೇಗ ಐಪಿಎಲ್ ತೊರೆಯಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.

 

Continue Reading

DAKSHINA KANNADA

ಗುಂಡ್ಯದಲ್ಲಿ ಮತ್ತೆ ಕೆಎಸ್ಆರ್ಟಿಸಿ ಬಸ್ಸು ಮತ್ತು ಲಾರಿ ಅಪಘಾತ

Published

on

ಕೆಎಸ್‌ಆರ್‌ಟಿಸಿ ಅಶ್ವಮೇಧ ಬಸ್ಸು ಹಾಗೂ ಸರಕು ಸಾಗಣೆ ಲಾರಿಯ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯದಲ್ಲಿ ಮೇ 20 ಮಂಗಳವಾರ ಬೆಳಿಗ್ಗೆ ಜಾವ ನಡೆದಿದೆ.

ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಲಿ ಅಥವಾ ಪ್ರಾಣಹಾನಿಯಾಗಲಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಈ ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಆತಂಕಕಾರಿ ಸಂಗತಿಯೆಂದರೆ ಎರಡು ದಿನಗಳ ಹಿಂದೆಯಷ್ಟೇ (ಮೇ.18) ಕೆಎಸ್‌ಆರ್‌ಟಿಸಿ ಬಸ್ಸು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಎರಡೂ ವಾಹನಗಳ ಚಾಲಕರು ಸೇರಿ ನಾಲ್ವರು ವ್ಯಕ್ತಿಗಳು ಗಾಯಗೊಂಡ ಘಟನೆ ನಡೆದಿತ್ತು. ಇದೀಗ ಅದೇ ಜಾಗದಲ್ಲಿ ಮತ್ತೆ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯ ಆರ್ಭಟ; ಮಂಗಳೂರು ನಿವಾಸಿ ಸಹಿತ ಇಬ್ಬರ ಸಾವು

ಈ 2 ಅಪಘಾತಗಳು ಸಾರ್ವಜನಿಕರಲ್ಲಿ ತೀವ್ರ ಕಳವಳ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವುದರ ಜೊತೆಗೆ, ಚಾಲಕರಿಗೆ ಸೂಕ್ತ ತರಬೇತಿ ಮತ್ತು ಎಚ್ಚರಿಕೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page