Connect with us

LATEST NEWS

ಕುಂದಾಪುರಲ್ಲಿ ಕೆಟ್ಟು ನಿಂತಿದ್ದ ಟಿಪ್ಪರ್‌ಗೆ ಆಕ್ಟಿವಾ ಢಿಕ್ಕಿ: ಓರ್ವ ಸಾವು – ಮತ್ತೋರ್ವ ಗಂಭೀರ..!

Published

on

ಕುಂದಾಪುರ: ದುರಸ್ಥಿಗೊಂಡು ನಿಂತಿದ್ದ ಟಿಪ್ಪರ್ ವಾಹನಕ್ಕೆ ಆಕ್ಟಿವ್ ಹೊಂಡಾ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುಂದಾಪುರದ ತಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.


ಘಟನೆಯಲ್ಲಿ ಹಿಂಬದಿ ಸವಾರ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೈಂದೂರು ತಾಲೂಕಿನ ಕಂಬದಕೋಣೆ ಹಳಗೇರಿ ತೆಂಕಬೆಟ್ಟಿನ ನಿವಾಸಿ ಸತೀಶ್ ಜೋಗಿ (42) ಮೃತ ದುರ್ದೈವಿ. ಆಕಾಶ್ ಜೋಗಿ (17) ಗಂಭೀರ ಗಾಯಗೊಂಡವರು.

ಸತೀಶ್ ಜೋಗಿಯವರು ಸಂಬಂಧಿ ಆಕಾಶ್ ಅವರನ್ನು ಆಕ್ಟಿವ್ ಹೊಂಡಾದಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಟಿಪ್ಪರ್ ಚಾಲಕ ನಜ್ರುಲ್ ಬಷೀರ್ ಎಂಬಾತ ನಿರ್ಲಕ್ಷತನದಿಂದ ಯಾವುದೇ ಸಿಗ್ನಲ್, ಇಂಡಿಕೇಟರ್ ಇಲ್ಲದೆ ಇತರೆ ಯಾವುದೇ ಮುನ್ನೆಚರಿಕೆ ಕ್ರಮ ವಹಿಸದೆ ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಹಿಂಬಂದಿಗೆ ಆಕ್ಟಿವ್ ಹೊಂಡಾ ಡಿಕ್ಕಿ ಹೊಡೆದಿದೆ.

ಇದರಿಂದಾಗಿ ಸತೀಶ ಜೋಗಿಯವರ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಆಕಾಶ ಜೋಗಿರವರ ಮುಖ, ತಲೆಗೆ ರಕ್ತಗಾಯ ಆಗಿದೆ.

ಅವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

FILM

ಅಂಬಾನಿ ಮಗನ ಮದುವೆಯಲ್ಲಿ ನಡೆದ ಘಟನೆಯ ಬಗ್ಗೆ ಬೇಸರ ಹೊರಹಾಕಿದ ಮಾಡೆಲ್

Published

on

ಮಂಗಳೂರು/ನವದೆಹಲಿ: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮಗನ ಅದ್ದೂರಿ ಮದುವೆಯಲ್ಲಿ ಅಮೆರಿಕನ್ ಮಾಡೆಲ್ ಕಿಮ್ ಕರ್ದಾಶಿಯನ್ ಪಾಲ್ಗೊಂಡಿದ್ದರು. ಮದುವೆಯಲ್ಲಿ ಆ ಒಂದು ಅಚಾನಕ್ ಘಟನೆಯ ಬಗ್ಗೆ ಇತ್ತೀಚೆಗೆ ನಡೆದ ಖಾಸಗಿ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಬಾಲಿವುಡ್‌ನ ಸೆಲೆಬ್ರಿಟಿಗಳನ್ನು ಕರೆದು ಒಂದು ಕಡೆ ಗುಡ್ಡೆ ಹಾಕಿದ್ದರು. ಸಾಲದಕ್ಕೆ ಇಂಟರ್‌ ನ್ಯಾಷನಲ್ ಸ್ಟಾರ್ಸ್‌ಗಳನ್ನು ಕರೆಸಿದ್ದರು. ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರು ಬಂದಿದ್ದರು. ಆ ಪೈಕಿ ಜಗತ್ತಿನಲ್ಲಿ ಅತ್ಯಂತ ಸುಂದರ ನಟಿ ಎಂದೇ ಖ್ಯಾತಿಯನ್ನೂ ಪಡೆದ  ಶಿಯಾನ್ ಕೂಡ ಒಬ್ಬರು.

ಈ ವೇಳೆ ಕಿಮ್ ಕಾರ್ದಾಶಿಯಾನ್ ಅವರು ಕಸ್ಟಮ್ ಐವರಿ ಲೆಹಂಗಾ ಜೊತೆಗೆ ದುಬಾರಿ ಬೆಲೆಯ ವಜ್ರದ ಹಾರ, ಕಿವಿಯೋಲೆಗಳು ಮತ್ತು ಶಿರ ಮಾಲೆಯನ್ನು ಧರಿಸಿದ್ದರು.

ಇದನ್ನೂ ಓದಿ: ಭಾರತೀಯ ರೂಪಾಯಿ ಚಿಹ್ನೆಗೆ ತಮಿಳುನಾಡಿನ ನಂಟು!

ಮದುವೆ ಸಮಾರಂಭದಲ್ಲಿ ಅನಂತ್ ಅಂಬಾನಿ ಸಹೋದರಿ ಇಶಾ ಅಂಬಾನಿ ಜೊತೆ ಕಿಮ್ ಕರ್ದಾಶಿಯನ್ ಮಾತನಾಡುತ್ತಿದ್ದಾಗ ಅವರ ಡೈಮಂಡ್ ನೆಕ್ಲೆಸ್‌ನಿಂದ ಒಂದು ವಜ್ರದ ಹರಳು ಕೆಳಗೆ ಬಿದ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ ಕರ್ದಾಶಿಯನ್, “ನನಗೆ ಅರಿವಿಲ್ಲದೇ ನನ್ನ ನೆಕ್ಲೆಸ್‌ನಿಂದ ವಜ್ರದ ಹರಳು ಕೆಳಗೆ ಬಿದ್ದಿದೆ. ಇದನ್ನೂ ನನ್ನ ಜೊತೆಗಿದ್ದ ಸ್ನೇಹಿತೆ ಕ್ಲೋಯ್ ಗಮನಿಸಿದ್ದು, ಬಳಿಕ ನನ್ನ ಗಮನಕ್ಕೆ ತಂದಳು. ನಾವೆಲ್ಲರೂ ಸೇರಿ ಆ ಡೈಮಂಡ್ ನೆಕ್ಲೆಸ್‌ನ ಹರಳನ್ನು ಹುಡುಕಿದೆವು ಆದರೆ ಕೊನೆಗೂ ದುಬಾರಿ ಆ ವಜ್ರದ ಹರಳು ಸಿಗಲಿಲ್ಲ” ಎಂದು ಹೇಳಿದ್ದಾರೆ.

Continue Reading

BELTHANGADY

ಭಾರೀ ಮಳೆಗೆ ಬೆಳ್ತಂಗಡಿಯಲ್ಲಿ ಧರೆಗುರುಳಿದ 131 ವಿದ್ಯುತ್ ಕಂಬಗಳು

Published

on

ಬೆಳ್ತಂಗಡಿ: ಕಳೆದ ಒಂದು ವಾರದಿಂದ ವಾತಾವರಣದ ಉಷ್ಣತೆಯು ವಿಪರೀತ ಏರಿಕೆಯಾಗಿತ್ತು. ಆದರೆ ಬಿಸಿಯ ಗಾಳಿಗೆ ತತ್ತರಿಸಿ ಹೋಗಿದ್ದ ಜನರಿಗೆ ಇದೀಗ ವರುಣದೇವ ತಂಪೆರೆದಿದ್ದಾನೆ. ರಾಜ್ಯದ ಹಲವು ಭಾಗಗಳಲ್ಲಿ ಈಗ ಮಳೆಯ ಆರ್ಭಟ ಜೋರಾಗಿದೆ.

ಕರಾವಳಿಯಲ್ಲೂ ಮಳೆಯ ಸಿಂಚನವಾಗಿದ್ದು, ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಕೆಲ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ರಭಸಕ್ಕೆ 131 ವಿದ್ಯುತ್ ಕಂಬಗಳು ಧರೆಗುರುಳಿದೆ.

ರಭಸದ ಗಾಳಿಯೊಂದಿಗೆ ಆರ್ಭಟಿಸಿದ ವರ್ಷದ ಮೊದಲ ಮಳೆಗೆ ಬೆಳ್ತಂಗಡಿಯಲ್ಲಿ ಒಟ್ಟು 131 ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಹೀಗಾಗಿ ತಾಲೂಕಿನೆಲ್ಲೆಡೆ ಕರೆಂಟ್ ಇಲ್ಲದೇ ಜನರು ಪರದಾಡುವಂತೆ ಆಗಿದೆ. ಅಪಾರ ಸಂಖ್ಯೆಯಲ್ಲಿ ಅಡಿಕೆ, ತೆಂಗು, ಬಾಳೆ ಗಿಡಗಳು ತುಂಡಾಗಿ ಅಪಾರ ಪ್ರಮಾಣದ ಕೃಷಿನಷ್ಟ ಉಂಟಾಗಿದೆ.

Continue Reading

DAKSHINA KANNADA

ಭಗತ್ ಸಿಂಗ್ ಆರ್ಮಿ ಮಂಗಳೂರು : ಎಪ್ರಿಲ್ 25 ರಂದು ಉರ್ವದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ; ಆಮಂತ್ರಣ ಪತ್ರಿಕೆ ಬಿಡುಗಡೆ

Published

on

ಮಂಗಳೂರು : ಭಗತ್ ಸಿಂಗ್ ಆರ್ಮಿ ಮಂಗಳೂರು ವತಿಯಿಂದ ಎಪ್ರಿಲ್ 25 ರ ಶುಕ್ರವಾರದಂದು ಶ್ರೀ ದೇವಿ ಮಹಾತ್ಮೆ ಯಕ್ಷಗಾನವನ್ನು ಆಯೋಜಿಸಲಾಗಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಇಂದು(ಮಾ.14) ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ಅನಾವರಣ ಮಾಡಲಾಗಿದೆ.

ಕಾರ್ಯಕ್ರಮ ವಿವರ :

ಉರ್ವ ಮೈದಾನದಲ್ಲಿ ‘ಶ್ರೀದೇವಿ ಮಹಾತ್ಮೆ’  ಯಕ್ಷಗಾನ ಬಯಲಾಟ ನಡೆಯಲಿದೆ.  ಸಂಜೆ 5.30 ಕ್ಕೆ ಚೌಕಿ ಪೂಜೆ ನಡೆಯಲಿದೆ. ಅನ್ನ ಸಂತರ್ಪಣೆಯನ್ನೂ ಹಮ್ಮಿಕೊಳ್ಳಲಾಗಿದೆ. ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶವಾತಾರ ಯಕ್ಷಗಾನ ಮಂಡಳಿಯಿಂದ ಪ್ರತಿ ವರ್ಷ ಉರ್ವ ಮೈದಾನದಲ್ಲಿ ದೇವಿ ಮಹಾತ್ಮೆ ಯಕ್ಷಗಾನವನ್ನು ಭಗತ್ ಸಿಂಗ್ ಆರ್ಮಿ ಆಯೋಜಿಸಿಕೊಂಡು ಬಂದಿದೆ. ಈ ವರ್ಷದ ಯಕ್ಷಗಾನ ಎಪ್ರಿಲ್ 25 ರಂದು ನಡೆಯಲಿದೆ. ಮಧ್ಯಾಹ್ನ 3  ಗಂಟೆಗೆ ಸರಿಯಾಗಿ ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಹೊಯ್ಗೆಬೈಲ್‌ನಿಂದ ಭವ್ಯವಾದ ಮೆರವಣಿಗೆ ಹೊರಡಲಿದೆ.

ಇದನ್ನೂ ಓದಿ : ಕಟೀಲು ಕ್ಷೇತ್ರಕ್ಕೆ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಭೇಟಿ

ಭಕ್ತಾದಿಗಳು ತನು ಮನ, ಧನದಿಂದ ಸಹಕರಿಸಿ ದೇವಿಯ ಗಂಧ ಪ್ರಸಾದ ಸ್ವೀಕರಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page