Connect with us

LATEST NEWS

ನನಗೆ ಅಪಖ್ಯಾತಿ ತರುವುದಕ್ಕಾಗಿ ಈ ಪಿತೂರಿ.. ನ್ಯಾ. ಯಶವಂತ್ ವರ್ಮಾ !

Published

on

ಮಂಗಳೂರು/ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ದೆಹಲಿ ಹೈಕೋರ್ಟ್​ ಜಸ್ಟಿಸ್ ವರ್ಮಾ ಅವರ ಮನೆಯಲ್ಲಿ ಸಿಕ್ಕಿದ್ದ ಕಂತೆ ಕಂತೆ ನೋಟುಗಳ ವಿಚಾರ ಈಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.


ನಮ್ಮ ಮನೆಯ ಸ್ಟೋರ್‌ರೂಂನಲ್ಲಿ ಸಿಕ್ಕಿರುವ ಬಗ್ಗೆ ನನಗಾಗಲೀ ನನ್ನ ಕುಟುಂಬಕ್ಕಾಗಲೀ ತಿಳಿದಿಲ್ಲ. ನನಗೆ ಅಪಖ್ಯಾತಿ ತರುವುದಕ್ಕಾಗಿ ಈ ಪಿತೂರಿ ನಡೆಸಲಾಗಿದೆ ಎಂದು ದಿಲ್ಲಿ ಹೈಕೋರ್ಟ್ ನ್ಯಾ. ಯಶವಂತ್ ವರ್ಮಾ ಹೇಳಿದ್ದಾರೆ. ಈ ಮೂಲಕ ತಮ್ಮ ಮೇಲೆ ಬಂದಿರುವ ಆರೋಪವನ್ನು ಯಶವಂತ್ ವರ್ಮಾ ಅಲ್ಲಗಳೆದಿದ್ದಾರೆ.

ಏನಿದೂ ಪ್ರಕರಣ?
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದೆಹಲಿಯ ಅಧಿಕೃತ ನಿವಾಸದ ವಿವಿಧ ಕೋಣೆಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರ, ಅದನ್ನು ನಂದಿಸಲು ಬಂದ ಅಗ್ನಿಶಾಮಕ ದಳದವರು ದೊಡ್ಡ ಪ್ರಮಾಣದ ಹಣವನ್ನು ಪತ್ತೆ ಮಾಡಿದ್ದರು. ನ್ಯಾಯಮೂರ್ತಿ ಯಶವಂತ್ ವರ್ಮಾ ಊರಿನಿಂದ ಹೊರಗಿದ್ದಾಗ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅವರ ಕುಟುಂಬದ ಸದಸ್ಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅವರು ಬೆಂಕಿಯನ್ನು ನಂದಿಸಿದ ನಂತರ ರೂಂಗಳಲ್ಲಿ ನಗದು ಪತ್ತೆಯಾಗಿತ್ತು.

ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಅ*ಗ್ನಿ ಅವಘ*ಡ; ಬೆಂ*ಕಿ ನಂದಿಸಲು ಹೋದವರಿಗೆ ಸಿಕ್ತು ಕಂತೆ ಕಂತೆ ಹಣ!

ಪ್ರತಿಕ್ರಿಯೆ ಸಲ್ಲಿಸಿದ ನ್ಯಾ. ವರ್ಮಾ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಸೂಚನೆ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿರುವ ಅನುಗುಣವಾಗಿ ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾ. ವರ್ಮಾ ಪ್ರತಿಕ್ರಿಯೆ ಸಲ್ಲಿಸಿದ್ದಾರೆ.

ನನ್ನ ನಿವಾಸದಲ್ಲಿ ಹಣ ಪತ್ತೆಯಾದ ಪ್ರಕರಣವು ನನ್ನ ವಿರುದ್ದ ಸುಳ್ಳು ಆರೋಪ ಮಾಡಲು ಮತ್ತು ಅಪಖ್ಯಾತಿ ತರಲು ನಡೆಸಿರುವ ಪಿತೂರಿಯಂತೆ ಕಾಣುತ್ತದೆ. ಸ್ಟೋರ್‌ರೂಂನಲ್ಲಿ ಹಣ ಇದ್ದ ಬಗ್ಗೆ ನನಗಾಗಲೀ ಕುಟುಂಬಕ್ಕಾಗಲೀ ತಿಳಿದಿರಲಿಲ್ಲ ಎಂದಿದ್ದಾರೆ.

ಮಾ.14ರ ಮಧ್ಯರಾತ್ರಿಯಂದು ಸ್ಟೋರ್‌ರೂಂಗೆ ಬೆಂಕಿ ಬಿದ್ದಿತ್ತು. ಬಳಸದ ವಸ್ತುಗಳನ್ನು ಶೇಖರಿಸಿಡಲು ಈ ಕೊಠಡಿಯನ್ನು ಬಳಕೆ ಮಾಡಲಾಗುತ್ತಿತ್ತು. ಈ ಕೊಠಡಿಗೆ ಬೀಗ ಹಾಕಿರುವುದಿಲ್ಲ. ಇದು ನನ್ನ ಮನೆಯ ಒಂದು ಭಾಗವಲ್ಲ. ಅಲ್ಲದೇ ಸುಟ್ಟ ಹಣವನ್ನು ನಮಗೆ ಯಾರೂ ತೋರಿಸಿಲ್ಲ ಎಂದೂ ಅವರು ಹೇಳಿದ್ದಾರೆ.

ಪ್ರಕರಣದ ತನಿಖೆಗೆ 3 ಸದಸ್ಯರ ಸಮಿತಿ ರಚಿಸಿದ ಸಿಜೆಐ
ನಗದು ವಿವಾದದ ನಡುವೆ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ದದ ಆರೋಪಗಳ ಕುರಿತು ತನಿಖೆ ನಡೆಸಲು ಸಿಜೆಐ ಸಂಜೀವ್ ಖನ್ನಾ ಅವರು ಈಗಾಗಲೇ 3 ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ದೆಹಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಅವರಿಂದ ವರದಿ ಪಡೆದ ನಂತರ ಆಂತರಿಕ ತನಿಖೆಗೆ ಸಿಜೆಐ ಆದೇಶಿಸಿದ್ದಾರೆ.

 

LATEST NEWS

ಕೊಹ್ಲಿಯ 30 ರನ್‌ನಲ್ಲಿದೆ ಆರ್‌ಸಿಬಿಯ ಇಂದಿನ ಭವಿಷ್ಯ..!?

Published

on

ಮಂಗಳೂರು/ನವದೆಹಲಿ: ಐಪಿಎಲ್‌ನ 2025ರ 46ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇಂದಿನ ಮ್ಯಾಚ್‌ನಲ್ಲಿ ಕೊಹ್ಲಿಯ 30 ರನ್‌ನಲ್ಲಿ ಆರ್‌ಸಿಬಿಯ ಭವಿಷ್ಯ ನಿಂತಿದೆ ಎಂದು ಹೇಳಿದರೆ ತಪ್ಪಗಲಾರದು.

ಹೌದು.. ಇಂದಿನ ಪಂದ್ಯವು ಪಾಟೀದರ್ ಪಡೆಗೆ ಇದು ಪ್ರತಿಕಾರದ ಪಂದ್ಯ. ಬೆಂಗಳೂರಿನ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಡೆಲ್ಲಿ 6 ವಿಕೆಟ್‌ಗಳಿಂದ ಆರ್‌ಸಿಬಿಯನ್ನು ಮಣಿಸಿತ್ತು.

ಈಗಿನ ಲೆಕ್ಕಾಚಾರದಂತೆ ಆರ್‌ಸಿಬಿ, ಡೆಲ್ಲಿ ಎರಡೂ ಪ್ಲೇ ಆಫ್‌ನತ್ತ ಮುಖ ಮಾಡಿರುವ ತಂಡಗಳು. ಡೆಲ್ಲಿ 8ರಲ್ಲಿ 6 ಪಂದ್ಯ ಗೆದ್ದು 2ನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ 9ರಲ್ಲಿ 6 ಪಂದ್ಯ ಗೆದ್ದು 3ನೇ ಸ್ಥಾನದಲ್ಲಿದೆ. ಎರಡೂ ತಂಡಗಳು 12 ಅಂಕಗಳನ್ನು ಹೊಂದಿವೆ. ರನ್‌ರೇಟ್‌ನಲ್ಲಿ ಮುಂದಿರುವ ಕಾರಣ ಡೆಲ್ಲಿ ಒಂದು ಮೆಟ್ಟಿಲು ಮೇಲಿದೆ.

ಇಂದು ಕೋಟ್ಲಾದ ಕದನವನ್ನು ಗೆಲ್ಲುವವರು ಅಗ್ರಸ್ಥಾನಕ್ಕೆ ನೆಗೆಯುತ್ತಾರಷ್ಟೇ ಅಲ್ಲ, ಇವರ ಮುಂದಿನ ಸುತ್ತಿನ ಪ್ರವೇಶವೂ ಬಹುತೇಕ ಖಾತ್ರಿಗೊಳ್ಳುವ ಸಾಧ್ಯತೆಯಿದೆ ಎಂಬುದನ್ನು ಗಮನಿಸಬಹುದು.

ಇದನ್ನೂ ಓದಿ: ಗೌತಮ್ ಗಂಭೀರ್‌ಗೆ ಕೊ*ಲೆ ಬೆದರಿಕೆ ಹಾಕಿದ್ದು ಯಾರು ಗೊತ್ತಾ..!?

ಕೊಹ್ಲಿಯ 30 ರನ್‌ನಲ್ಲಿದೆ, ಆರ್‌ಸಿಬಿಯ ಇಂದಿನ ಭವಿಷ್ಯ..!
ಈ ಸೀಸನ್‌ನಲ್ಲಿ ಆರ್‌ಸಿಬಿಯ ಯಶಸ್ಸಿನ ಪಯಣಕ್ಕೆ ಸ್ಟಾರ್‌ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆಡಿದ ಎಲ್ಲಾ ಪಂದ್ಯಗಳಲ್ಲೂ ವಿರಾಟ್ 30ಕ್ಕಿಂತ ಹೆಚ್ಚು ರನ್ ಗಳಿಸಿದ ಪ್ರತಿಯೊಂದು ಪಂದ್ಯವನ್ನು ಆರ್‌ಸಿಬಿ ಗೆದ್ದಿದೆ. ಅದಕ್ಕಿಂತ ಕಡಿಮೆ ರನ್ ಗಳಿಸಿದ ಪಂದ್ಯಗಳೆಲ್ಲವೂ ಸೋತಿದೆ (ಗುಜರಾತ್ ವಿರುದ್ದ 7, ದೆಹಲಿ ವಿರುದ್ದ 22, ಪಂಜಾಬ್ ವಿರುದ್ದ 1). ಇದರ ಆಧಾರದ ಮೇಲೆ, ಇಂದು ದೆಹಲಿ ವಿರುದ್ದದ ಪಂದ್ಯದಲ್ಲಿ ವಿರಾಟ್ 30ಕ್ಕಿಂತ ಹೆಚ್ಚು ರನ್ ಗಳಿಸಿದರೆ ಆರ್‌ಸಿಬಿ ಖಂಂಡಿತವಾಗಿಯೂ ಗೆಲ್ಲುತ್ತದೆ ಎಂಬುದು ಅಭಿಮಾನಿಗಳ ನಂಬಿಕೆಯಾಗಿದೆ.

Continue Reading

LATEST NEWS

ಐವರು ಮಡದಿಯರ ಮುದ್ದಿನ ಗಂಡ.. ಇಂದು 11 ಮಕ್ಕಳ ತಂದೆ..! ಈತನ ಐದು ಮದುವೆಗೆ ಕಾರಣ ಏನು ಗೊತ್ತಾ?

Published

on

ಮಂಗಳೂರು/ಲಾಸ್ ಏಂಜಲೀಸ್: ಒಬ್ಬ ವ್ಯಕ್ತಿಗೆ ಒಂದು ಮದುವೆಯಾದರೇ ಸಾಕು ಸಂಸಾರದ ಜಂಜಾಟದಲ್ಲಿ ಬೇಸರ ಮೂಡಿಸುತ್ತದೆ. ಆದರೆ ಲಾಸ್‌ ಏಂಜಲೀಸ್‌ನ ವ್ಯಕ್ತಿಯೊಬ್ಬ ಐದು ಮದುವೆಯಾಗಿದ್ದಾನೆ. ಈಗ ಅವನಿಗೆ 11 ಮಕ್ಕಳಿದ್ದಾರೆ. ಅವನು ಏಕಪತ್ನಿತ್ವ ತ್ಯಜಿಸಿ ಬಹುಪತ್ನಿತ್ವ ಹೊಂದಲು ಕಾರಣ ಕೂಡ ಹೇಳಿದ್ದಾನೆ.

ಹೌದು.. ಲಾಸ್ ಏಂಜಲೀಸ್ ಜೇಮ್ಸ್ ಬ್ಯಾರೆಟ್ ತನ್ನ ಗೆಳತಿಯೊಬ್ಬಳಿಗೆ ಮೋಸ ಮಾಡಿದನು. ಅವನಿಗೆ ಬೇರೆ ಮಹಿಳೆಯರೊಂದಿಗೆ ಸಂಬಂಧವಿತ್ತು. ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕೆಂದು, ಅವನು ಏಕಪತ್ನಿತ್ವವನ್ನು ತ್ಯಜಿಸಿ ಬಹುಪತ್ನಿತ್ವವನ್ನು ಸ್ವೀಕರಿಸಿದನು.

ಅಂದರೆ ಆತ ಒಂದೇ ಬಾರಿಗೆ ಹಲವಾರು ಮಹಿಳೆಯರನ್ನು ಪ್ರೀತಿಸೋಕೆ ಶುರು ಮಾಡಿದನು. ಅವರಲ್ಲಿ ಒಬ್ಬರಿಗೆ ತಿಳಿಯದೆ ಮತ್ತೊಬ್ಬರೊಂದಿಗೆ ಸಂಬಂಧವಿತ್ತು. ಇನ್ನು ಮುಂದೆ ಯಾರನ್ನೂ ಮೋಸಗೊಳಿಸಬಾರದು ಎಂಬ ಉದ್ದೇಶದಿಂದ ತಾನೂ ಸಂಬಂಧದಲ್ಲಿದ್ದ ಎಲ್ಲರನ್ನು ಒಟ್ಟಿಗೆ ಮದುವೆಯಾದನು.

ಇದನ್ನೂ ಓದಿ: ನಾನು ಅಷ್ಟೊಂದು ಫೇಮಸ್ ಕೂಡ ಆಗಿರಲಿಲ್ಲ, ಆದರೆ ಕನ್ನಡದ ಸ್ಟಾರ್ ನಟ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿದ್ರು..! ಗಗನಾ ಭಾರಿ

ಜೇಮ್ಸ್ ಹೇಳುವಂತೆ, ತಾನು ಒಬ್ಬಳೇ ಗೆಳತಿಯೊಂದಿಗೆ ಇದ್ದಾಗ, ತನ್ನೊಳಗೆ ನಿರಂತರವಾಗಿ ಸಂಘರ್ಷಕ್ಕೊಳಗಾಗುತ್ತಿದೆ ಮತ್ತು ತಾನು ತನ್ನೊಂದಿಗೆ ಪ್ರಾಮಾಣಿಕವಾಗಿಲ್ಲ ಎಂದು ಭಾವಿಸುತ್ತಿದೆ. ಆದರೆ ಈಗ ನಾನು ಐವರ ಜತೆ ಮದುವೆಯಾಗಿದ್ದೇನೆ. ಇದು ನನ್ನ ಪತ್ನಿಯರಿಗೂ ಗೊತ್ತು. ನನಗೆ 11 ಮಕ್ಕಳು ಇದ್ದಾರೆ. ಐದು ಜನ ಪತ್ನಿಯರೊಂದಿಗೆ ಸಂತೋಷವಾಗಿದ್ದರೂ, ಇಷ್ಟು ದೊಡ್ಡ ಕುಟುಂಬವನ್ನು ಆರ್ಥಿಕವಾಗಿ ನಿರ್ವಹಿಸುವುದು ತನಗೆ ದೊಡ್ಡ ಸವಾಲಾಗಿದೆ. ಇಡೀ ಕುಟುಂಬವು ಒಟ್ಟಿಗೆ ವಾಸಿಸುತ್ತದೆ, ಪರಸ್ಪರ ಬೆಂಬಲಿಸುತ್ತಾರೆ ಎಂದಿದ್ದಾನೆ.

ಜೇಮ್ಸ್ ಬ್ಯಾರೆಟ್ ಉದ್ದೇಶವೆನೆಂದರೆ, ತನ್ನನ್ನು ತಾನು ಸುಧಾರಿಸಿಕೊಳ್ಳುವ ಉದ್ದೇಶದಿಂದ, ಆತ ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಅಗತ್ಯವನ್ನು ತಪ್ಪಿಸಲು ಐದು ಮದುವೆಯಾಗಿದ್ದಾನೆಯಂತೆ.

Continue Reading

LATEST NEWS

ವೈರಲ್ ವಿಡಿಯೋ: ಎಳನೀರಿನಲ್ಲೂ ಟೀ ಮಾಡ್ತಾರೇ.. ಹೇಗೆ ಗೊತ್ತಾ..? 

Published

on

ಸಾಮಾನ್ಯವಾಗಿ ನೀರು, ಹಾಲನ್ನು ಮಿಶ್ರಣ ಮಾಡಿ ಚಹಾವನ್ನು ತಯಾರು ಮಾಡ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ನೀರಿನ ಬದಲು ಎಳನೀರು ಹಾಕಿ ಮಹಿಳೆ ಬಿಸಿ ಬಿಸಿ ಚಹಾವನ್ನು ತಯಾರಿಸಿದ್ದಾಳೆ ಈ ಕುರಿತ ವಿಡಿಯೋವನ್ನು _hetals_art_ಹೆಸರಿನ ಇನ್‌ಸ್ಟ್ರಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಗ್ಯಾಸ್ ಒಲೆ ಮೇಲೆ ಸೀಯಾಳವನ್ನಿಟ್ಟು ಅದಕ್ಕೆ ಎಳನೀರು, ಚಹಾಪುಡಿ, ಸಕ್ಕರೆ, ಹಾಲು ಸೇರಿಸಿ ಬಿಸಿ ಬಿಸಿ ಚಹಾ ತಯಾರಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಏಪ್ರಿಲ್ 2ರಂದು ಶೇರ್ ಮಾಡಲಾದ ಈ ವಿಡಿಯೋ 2.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಈ ಜನಗಳು ನಮ್ಮ ಭಾವನೆಗಳ ಜೊತೆ ಯಾಕೆ ಹೀಗೆ ಆಡ್ತಾರೆ” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದೆಂಥಾ ಹುಚ್ಚಾಟ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದೆಂಥಾ ಅವಸ್ಥೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.

Watch Video:

Continue Reading
Advertisement

Trending

Copyright © 2025 Namma Kudla News

You cannot copy content of this page