Connect with us

LATEST NEWS

ದೈವದ ಅಭಯ; ಕೊರಗಜ್ಜ ದೈವದ ಗುಡಿ ಮುಂದೆ 3 ದಿನದಲ್ಲೇ ಸಿಕ್ಕಿಬಿದ್ದ ಕಳ್ಳ

Published

on

ಹೆಬ್ರಿ: ಹುಂಡಿ ಕದ್ದವನ್ನು 9 ದಿನದೊಳಗೆ ತರಿಸಿಕೊಡುತ್ತೇನೆ ಎಂದು ದೈವ ಹೇಳಿದ್ದು, ದೈವ ನೀಡಿದ ಅಭಯದಂತೆ ಕೇವಲ 3 ದಿನದಲ್ಲೇ ಕೊರಗಜ್ಜ ದೈವದ ಗುಡಿಗೆ ಬಂದು ಕಳ್ಳ ಸಿಕ್ಕಿಬಿದ್ದ ವಿಶಿಷ್ಟ ಘಟನೆ ಹೆಬ್ರಿಯಲ್ಲಿ ನಡೆದಿದೆ.

ದೈವಸ್ಥಾನದ ಕಾಣಿಕೆ ಹುಂಡಿ ಕದ್ದಿದ್ದ ಕಳ್ಳನ್ನೊಬ್ಬ ಅದೇ ದೇವಸ್ಥಾನದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಹರಿಹರ ಮೂಲದ ಮೊಹಮ್ಮದ್ ಸಲ್ಮಾನ್‌ (24) ಬಂಧಿತ ಆರೋಪಿ.

ಮುದ್ರಾಡಿ ಗ್ರಾಮದ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರದಲ್ಲಿ ದೇವರ ಹುಂಡಿ ಹಾಗೂ ಕಲ್ಕುಡ ಕಲ್ಲುರ್ಟಿಯ ಕಾಣಿಕೆ ಡಬ್ಬಿಯಿಂದ ಮೇ 25ರಂದು ರಾತ್ರಿ ಕಳ್ಳತನವಾಗಿತ್ತು. ಕಳ್ಳನೊಬ್ಬ ದೈವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಮಾಡಿದ್ದ. ಬಳಿಕ ಮತ್ತೆ ಜೂನ್ 2 ರಂದು ಮಧ್ಯರಾತ್ರಿ ಮತ್ತೆ ಅದೇ ದೈವಸ್ಥಾನದ ಹುಂಡಿ ಕಳ್ಳತನಕ್ಕೆ ಬಂದಿದ್ದು, ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿದ್ದವರು ಕಳ್ಳನನ್ನು ನೋಡಿದ್ದಾರೆ.

ಕೂಡಲೇ ಕಾರನ್ನು ನಿಲ್ಲಿಸಿ ಹಿಂದಕ್ಕೆ ಬಂದಾಗ ಆತ ಗೋಡೆ ಹಾರಿ ಬೈಕಿನಲ್ಲಿ ಪರಾರಿಯಾಗಿದ್ದ. ಕಾರಿನವರು ಸಮೀಪದ ಮನೆಯವರಿಗೆ ವಿಷಯ ತಿಳಿಸಿ ಅವರ ಜತೆಗೂಡಿ ಕಳ್ಳನನ್ನು ಬೆನ್ನಟ್ಟಿ ದರು. ಜತೆಗೆ ಸೋಮೇಶ್ವರ ಮತ್ತು ಆಗುಂಬೆ ಚೆಕ್‌ಪೋಸ್ಟ್ ಗೆ ಮಾಹಿತಿ ನೀಡಿದರು. ಕಳ್ಳ ಆಗುಂಬೆ ತಲುಪಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದನು. ವಿಚಾರಿಸಿದಾಗ ದಾವಣಗೆರೆಯ ಹರಿಹರದ ಮೊಹಮ್ಮದ್ ಸಲ್ಮಾನ್‌ ಎಂದು ಹೇಳಿ ಕೊಂಡಿದ್ದಾನೆ. ಹೆಬ್ರಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್‌ ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ

ಹುಂಡಿಯಿಂದ ಕಳುವಾದ ಬಗ್ಗೆ ಕ್ಷೇತ್ರದ ಧರ್ಮದರ್ಶಿ ಸುಕುಮಾರ್‌ ಮೋಹನ್‌ ಅವರು ಮೇ 30ರಂದು ನಡೆದ ನೇಮದಲ್ಲಿ ಕಲ್ಕುಡ ಕಲ್ಲುರ್ಟಿ ಮತ್ತು ಕೊರಗಜ್ಜ ದೈವಕ್ಕೆ ದೂರು ನೀಡಿದ್ದರು. 9 ದಿನದೊಳಗೆ ಅತನನ್ನು ತರಿಸಿಕೊಡುತ್ತೇನೆ ಎಂದು ದೈವ ಅಭಯ ನುಡಿದಿತ್ತು. ಆ ಪ್ರಕಾರ ಕೇವಲ 3 ದಿನದ ಒಳಗೆ ಅದೇ ಕಳ್ಳ ಮತ್ತೆ ಕೊರಗಜ್ಜ ದೈವದ ಗುಡಿಯಲ್ಲಿ ಬಂದು ಸಿಕ್ಕಿಬಿದ್ದಿರುವುದು ದೈವದ ಕಾರಣಿಕ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

DAKSHINA KANNADA

ವಿಟ್ಲ : ಸಿಡಿಲು ಬಡಿದು ಮನೆಗೆ ಹಾ*ನಿ

Published

on

ವಿಟ್ಲ : ಸಿಡಿಲು ಬ*ಡಿದು ಮನೆಗೆ ಹಾ*ನಿಯಾದ ಘಟನೆ ಮಂಗಳವಾರ(ನ.18) ವಿಟ್ಲದ ಕೊಳ್ನಾಡು ಗ್ರಾಮದ ಬಾರೆಬೆಟ್ಟು ಎಂಬಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ, ಪ್ರಸ್ತುತ ವಿದೇಶದಲ್ಲಿರುವ  ಅಬ್ದುಲ್ ಲತೀಫ್ ಎಂಬವರ ಮನೆಗೆ ಹಾ*ನಿಯಾಗಿದೆ.

ರಾತ್ರಿ  ವೇಳೆ ಇದ್ದಕ್ಕಿದ್ದಂತೆ ಸಿಡಿಲು ಸಹಿತ ಮಳೆಯಾಗಿದ್ದು, ಈ ವೇಳೆ ಘಟನೆ ಸಂಭವಿಸಿದೆ. ಸಿಡಿಲು ಬ*ಡಿದ ಸಂದರ್ಭದಲ್ಲಿ ಮನೆಯೊಳಗೆ ಪುಟಾಣಿ ಮಗು ಹಾಗೂ ಇಬ್ಬರು ಮಹಿಳೆಯರಿದ್ದರು. ಮಗುವಿನ ಕಿವಿಗೆ ಗಾ*ಯವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಸಿಡ್ನಿಯಲ್ಲಿ ಭೀ*ಕರ ಅಪ*ಘಾತ; ಭಾರತ ಮೂಲದ ತುಂಬು ಗರ್ಭಿಣಿ ಸಾ*ವು

ಅಬ್ದುಲ್ ಲತೀಫ್ ಅವರು ಅರಬ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿ ಇರುವುದಾಗಿ ಮಾಹಿತಿ ಲಭಿಸಿದೆ.  ಘಟನೆಯಿಂದಾಗಿ ವಿದ್ಯುತ್ ಉಪಕರಣಗಳಿಗೆ ಹಾ*ನಿಯಾಗಿದ್ದು, ಗೋಡೆ ಬಿ*ರುಕುಬಿಟ್ಟಿದೆ.

Continue Reading

LATEST NEWS

ಸಿಡ್ನಿಯಲ್ಲಿ ಭೀ*ಕರ ಅಪ*ಘಾತ; ಭಾರತ ಮೂಲದ ತುಂಬು ಗರ್ಭಿಣಿ ಸಾ*ವು

Published

on

ಮಂಗಳೂರು/ಸಿಡ್ನಿ : ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಅಪ*ಘಾತದಲ್ಲಿ ಎಂಟು ತಿಂಗಳ ಗರ್ಭಿಣಿ  ಹಾಗೂ ಹೊಟ್ಟೆಯೊಳಗಿದ್ದ ಮಗು ಸಾ*ವನ್ನಪ್ಪಿದೆ. 33 ವರ್ಷದ ಸಮನ್ವಿತಾ ಧಾರೇಶ್ವರ್ ಮೃ*ತ ಮಹಿಳೆ.

ಸಮನ್ವಿತಾ , ಪತಿ ಹಾಗೂ 3 ವರ್ಷದ ಮಗನೊಂದಿಗೆ ಜರ್ಜ್ ಸೇಂಟ್ ಇನ ಹಾರ್ನ್ಸ್ಟಿ  ಬಳಿ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಿಯಾ ಕಾರೊಂದರ ಚಾಲಕ ತನ್ನ ವಾಹನ ನಿಲ್ಲಿಸಿ ಈ ಕುಟುಂಬಕ್ಕೆ ರಸ್ತೆ ದಾಟಲು ಅನುವು ಮಾಡಿಕೊಟ್ಟಿದ್ದಾರೆ. ಆದರೆ, ಹಿಂದಿನಿಂದ ವೇಗವಾಗಿ ಬಿಎಂಡಬ್ಲ್ಯೂ ಕಾರು ಕಿಯಾ ಕಾರಿಗೆ ಡಿ*ಕ್ಕಿಯಾಗಿದೆ. ಪರಿಣಾಮ ಕಿಯಾ ಕಾರು ಮುಂದಕ್ಕೆ ಚಲಿಸಿ ಸಮನ್ವಿತಾರಿಗೆ ಡಿಕ್ಕಿಯಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಸಮನ್ವಿತಾ ಹಾಗೂ ಅವರ ಹೊಟ್ಟೆಯಲ್ಲಿದ್ದ ಮಗು ಮೃ*ತಪಟ್ಟಿದೆ.

ಮೃತ ಸಮನ್ವಿತಾ, ಬಂಧಿತ ಆ್ಯರಾನ್ ಪಾಪಾಗ್ಲೂ

ಇದನ್ನೂ ಓದಿ : BBK12: ರಕ್ಷಿತಾಳನ್ನು ನಾಮಿನೇಟ್ ಮಾಡಿದ ರಘು; ಕೊಟ್ಟ ಕಾರಣ ಏನು?

ಘಟನೆಯಲ್ಲಿ ಕಾರು ಚಾಲಕರೂ ಗಾ*ಯಗೊಂಡಿದ್ದಾರೆ. ಈ ದುರಂತಕ್ಕೆ ಕಾರಣಕರ್ತನಾದ ಬಿಎಂಡಬ್ಲ್ಯೂ ಚಾಲಕ, 19 ವರ್ಷದ ಆ್ಯರಾನ್ ಪಾಪಾಗ್ಲೂ ಎಂಬಾತನನ್ನು ಬಂಧಿಸಲಾಗಿದೆ. ಸಮನ್ವಿತಾ  ಭಾರತ ಮೂಲದ ಟೆಕ್ಕಿ. ಅಲಸ್ಕೊ ಯೂನಿಫಾರ್ಮ್ಸ್ ಎಂಬ ಕಂಪನಿಯಲ್ಲಿ ಐಟಿ ಸಿಸ್ಟಂ ಅನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು.  ಅವರ ಹೆರಿಗೆ ಒಂದು ವಾರದಲ್ಲಿ ಆಗುವುದಾಗಿ ವೈದ್ಯರು ಸೂಚಿಸಿದ್ದರಂತೆ. ಅಷ್ಟರಲ್ಲಿ ಈ ದುರಂ*ತ ನಡೆದಿದೆ.

Continue Reading

DAKSHINA KANNADA

ಪ್ರೋಸ್ಟೇಟ್ ಆರೋಗ್ಯಕ್ಕೆ ಆದ್ಯತೆ : ಕೆಎಂಸಿ ಆಸ್ಪತ್ರೆಯಿಂದ ಪುರುಷರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

Published

on

ಮಂಗಳೂರು : ನಗರದ ಕೆಎಂಸಿ ಆಸ್ಪತ್ರೆಯು ಪುರುಷರ ದಿನಾಚರಣೆಯ ಅಂಗವಾಗಿ, “ಜೆಂಟಲ್ ರಿಮೈಂಡರ್: ಪ್ರೊಟೆಕ್ಟ್ ಯುವರ್ ಪ್ರಾಸ್ಟೇಟ್” ಎಂಬ ವಿಶೇಷ ಜಾಗೃತಿ ಉಪಕ್ರಮ ಪ್ರಾರಂಭಿಸಿದೆ. ಈ ಉಪಕ್ರಮದ ಭಾಗವಾಗಿ, ನ.17 ರಿಂದ 28 ರವರೆಗೆ, ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ, ಆಸ್ಪತ್ರೆಯು ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮೂತ್ರಶಾಸ್ತ್ರಜ್ಞರೊಂದಿಗೆ(ಯೂರೊಲಾಜಿಸ್ಟ್‌)  ಉಚಿತ ಸಮಾಲೋಚನೆಗಳನ್ನು ಆಯೋಜಿಸಿದೆ.

ಕಾರ್ಯಕ್ರಮವು ಪ್ರಾಸ್ಟೇಟ್ ಸಂಬಂಧಿತ ಪರಿಸ್ಥಿತಿಗಳ ಸಕಾಲಿಕ ಮೌಲ್ಯಮಾಪನ ಮತ್ತು ಆರಂಭಿಕ ಪತ್ತೆಯ ಮೂಲಕ ಪುರುಷರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಉತ್ತಮ ಪ್ರಾಸ್ಟೇಟ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ.

ವಯಸ್ಸಾದ ಪುರುಷರಲ್ಲಿ ಪ್ರಾಸ್ಟೇಟ್ ಸಂಬಂಧಿತ ಕಾಯಿಲೆಗಳು ಸಾಮಾನ್ಯವಾಗಿವೆ. ಆದರೆ, ಅರಿವಿನ ಕೊರತೆ ಅಥವಾ ಸಾಮಾಜಿಕ ಕಳಂಕಕ್ಕೆ ಬೆದರಿ ಅನೇಕರು ಸೂಕ್ತ ಸಮಯದಲ್ಲಿ ಸಹಾಯ ಪಡೆಯಲು ಹಿಂಜರಿಯುತ್ತಾರೆ. ಮೂತ್ರ ವಿಸರ್ಜನೆ ಮಾಡುವಾಗ ತೊಂದರೆ ಅಥವಾ ಆಯಾಸ, ವಿಶೇಷವಾಗಿ ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಯ ಪ್ರಚೋದನೆ , ಮೂತ್ರದಲ್ಲಿ ರಕ್ತ, ಜ್ವರ ಅಥವಾ ಶೀತದೊಂದಿಗೆ ಸುಡುವ ಸಂವೇದನೆ ಮುಂತಾದ ಲಕ್ಷಣಗಳು ವೈದ್ಯಕೀಯ ಮೌಲ್ಯಮಾಪನದ ಅಗತ್ಯವಿರುವ ಆಧಾರವಾಗಿರುವ ಕಾಳಜಿಯನ್ನು ಸೂಚಿಸುತ್ತವೆ. ಈ ಚಿಹ್ನೆಗಳನ್ನು ಕಡೆಗಣಿಸಬಾರದು ಮತ್ತು ಪುರುಷರು ಆರಂಭಿಕ ರೋಗ ನಿರ್ಣಯ ಮತ್ತು ಸೂಕ್ತ ಆರೈಕೆಯನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿ ಕೊಳ್ಳುವುದು ಈ ಉಪಕ್ರಮದ ಗುರಿಯಾಗಿದೆ.

ಕೆಎಂಸಿ ಆಸ್ಪತ್ರೆಯ ಯೂರೋಲಾಜಿ ವಿಭಾಗದ ಮುಖ್ಯಸ್ಥ ಮತ್ತು ಕನ್ಸಲ್ಟೆಂಟ್‌ ಡಾ.ಸನ್ಮಾನ್ ಗೌಡ ಪುರುಷರ ದಿನಾಚರಣೆಯ ಮಹತ್ವ ಮತ್ತು ಉಪಕ್ರಮದ ಬಗ್ಗೆ ಮಾತನಾಡಿ, ವಯಸ್ಸಾದ ಪುರುಷರಲ್ಲಿ ಪ್ರಾಸ್ಟೇಟ್ ಸಮಸ್ಯೆಗಳು ಅತ್ಯಂತ ಸಾಮಾನ್ಯವಾಗಿದೆ. ಆದರೆ, ಅನೇಕರು ಹಿಂಜರಿಕೆ ಅಥವಾ ತಪ್ಪು ಕಲ್ಪನೆಗಳಿಂದಾಗಿ ವೈದ್ಯಕೀಯ ಸಹಾಯವನ್ನು ಪಡೆಯಲು ವಿಳಂಬ ಮಾಡು ತ್ತಾರೆ. ಆರಂಭಿಕ ಮೌಲ್ಯಮಾಪನವು ತೊಡಕುಗಳನ್ನು ತಡೆಯುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಈ ಪುರುಷರ ದಿನಾಚರಣೆಯ ಉಪಕ್ರಮದ ಮೂಲಕ, ಪುರುಷರು ತಮ್ಮ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮತ್ತು ಸಕಾಲಿಕ ತಪಾಸಣೆಗೆ ಒಳಗಾಗುವುದನ್ನು ಪ್ರೋತ್ಸಾಹಿಸ ಬಯಸುತ್ತೇವೆ. ಕಾಯಿಲೆ ಕುರಿತು ಆರಂಭದಲ್ಲೇ ತೆಗೆದುಕೊಳ್ಳುವ ಮುಂಜಾಗ್ರತಾ ತಪಾಸಣಾ ಕ್ರಮಗಳು ವ್ಯತ್ಯಾಸವನ್ನುಂಟುಮಾಡುವುದರಿಂದ ಸೌಮ್ಯ ಲಕ್ಷಣಗಳನ್ನು ಸಹ ನಿರ್ಲಕ್ಷಿಸಬಾರದು ಎಂದರು.

ಇದನ್ನೂ ಓದಿ : ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಭವ್ಯ ಗೌಡ! ಯಾವ ಸಿನಿಮಾ ಗೊತ್ತಾ!?

50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಪುರುಷರು ಈ ಅವಕಾಶ ಬಳಸಿಕೊಳ್ಳಲು ಮತ್ತು ತಪಾಸಣೆಗೆ ಒಳಗಾಗಲು ಆಸ್ಪತ್ರೆ ಆಹ್ವಾನಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page