Connect with us

LATEST NEWS

ಕುಂದಾಪುರ: ಮೊಬೈಲ್‌ ಅಂಗಡಿಯಲ್ಲಿ ಕಳವು ಪ್ರಕರಣ-ನಾಲ್ವರು ಅರೆಸ್ಟ್

Published

on

ಕುಂದಾಪುರ: ಕುಂದಾಪುರದ ಬೈಂದೂರು ತಾಲ್ಲೂಕಿನ ಉಪ್ಪುಂದ ದೇವಸ್ಥಾನದ ಬಳಿ ಮೊಬೈಲ್ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಮುರುಡೇಶ್ವರ ಬೀಚ್‌ ಬಳಿ ಬಂಧಿಸಿದ ಘಟನೆ ನಡೆದಿದೆ.

ಭಟ್ಕಳ ಮುರುಡೇಶ್ವರ ಮಾವಳ್ಳಿ ನಿವಾಸಿ ಮೊಹಮ್ಮದ್ ಇಫ್ಹಲ್ (27), ಮಹಮ್ಮದ್ ರಫಿ (21), ಮಹಮ್ಮದ್ ಅಸೀಮ್ ಡೊನ್ನಾ (20), ಮೊಹಮ್ಮದ್ ರಾಹಿಕ್ (22) ಬಂಧಿತ ಆರೋಪಿಗಳು.


ಬಿಜೂರು ನಿವಾಸಿ ಪ್ರಶಾಂತ್ ಎಂಬವರ ಮಾಲೀಕತ್ವದ ಮೊಬೈಲ್ ಝೋನ್ ಎಂಬ ಅಂಗಡಿಯಲ್ಲಿ ಜುಲೈ 5 ರಂದು ರಾತ್ರಿ ಅಂಗಡಿಯ ಶೆಟರ್‌ ಮುರಿದು ಕಳ್ಳತನ ಮಾಡಿದ ಘಟನೆ ಮರುದಿನ ಬೆಳಕಿಗೆ ಬಂದಿದೆ.

ಅಂಗಡಿಯಲ್ಲಿ 3500 ನಗದು, 25 ಸಾವಿರ ಬೆಲೆ ಬಾಳುವ 17 ಕೀಪ್ಯಾಡ್ ಮೊಬೈಲ್ ಫೋನುಗಳು ಹಾಗೂ 5 ಸಾವಿರ ರೂ. ಮೌಲ್ಯದ ಮೊಬೈಲ್‌ಗೆ ಉಪಯೋಗಿಸುವ ಪವರ್‌ ಬ್ಯಾಂಕ್ ಹಾಗೂ ಬ್ಲೂಟೂತ್ ಕಳವುಗೈದಿದ್ದು ಈ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 33500 ರೂ. ಆಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಸಬ್‌ಇನ್ಸ್‌ಪೆಕ್ಟರ್‌ ಪವನ್‌ ನಾಯಕ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಆರೋಪಿಗಳಿಂದ 20 ಸಾವಿರ ಮೌಲ್ಯದ ಮೊಬೈಲ್ ಫೋನುಗಳು, ಕೃತ್ಯಕ್ಕೆ ಉಪಯೋಗಿಸಿದ 8 ಲಕ್ಷ ಮೌಲ್ಯದ ಕಾರು, ಮೂರು ಪವರ್‌ ಬ್ಯಾಂಕ್ ಮೊದಲಾದವುಗಳನ್ನು ವಶಕ್ಕೆ ಪಡೆಯಲಾಗಿದೆ.

 

LATEST NEWS

ಅಯ್ಯೋ ಪಾಪಾ..! ಕಣ್ಣೀರಿಡುತ್ತಾ ತನ್ನ ಬ್ರೇಕಪ್ ಸ್ಟೋರಿ ಹಂಚಿಕೊಂಡ ಕಿಪ್ಪಿ ..!

Published

on

ಇಂದಿನ ಯುವ ಜನಾಂಗವು ಪ್ರೀತಿಯ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹಂಚಿಕೊಳ್ಳುತ್ತಾರೆ. ಆದರೆ ಅದು ಬ್ರೇಕಪ್ ಆದರೆ ಬೇಸರದ ಸ್ಟೇಟಸ್ ಹಾಕಿಕೊಂಡು ಸುಮ್ಮನಾಗುತ್ತಾರೆ. ಬಳಿಕ ಮತ್ತೊಂದು ಪ್ರೀತಿಗೆ ಹುಡುಕಾಡುತ್ತಾರೆ. ಆದರೆ ಇಲ್ಲೊಬ್ಬರು ನಿಜವಾಗಿ ಪ್ರೇಮಿಸಿದ ವ್ಯಕ್ತಿಯಿದ್ದು, ಅವರ ಲವ್ ಬ್ರೇಕಪ್ ಆಗಿದೆ. ಸ್ವತಃ ತಾವೇ ವಿಡಿಯೋ ಮಾಡಿ ವಿರಹ ಕಥೆಯನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಅವರು ಮತ್ತಾರೂ ಅಲ್ಲ, ರೀಲ್ಸ್ ಮೂಲಕವೇ ಫುಲ್ ಹವಾ ಸೃಷ್ಠಿಸಿರುವ ಕಿಪ್ಪಿ ಕೀರ್ತಿ. ಅಷ್ಟಕ್ಕೂ ಕಿಪ್ಪಿ ಜೀವನದಲ್ಲಿ ನಡೆದಿದ್ದದೇನು ? ಇಲ್ಲಿದೆ ನೋಡಿ.

ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮಾಡುತ್ತಾ, ಫುಲ್ ಟ್ರೋಲ್ ಆಗಿರುವ ಕಿಪ್ಪಿ ಕೀರ್ತಿಗೆ ಒಂದು ಲವ್ ಇತ್ತು. ಆದರೆ, ಈಗ ಅದು ಬ್ಏಕಪ್ ಆಗಿದೆ. ಈ ವಿಚಾರವನ್ನು ಸ್ವತಃ ಕಿಪ್ಪಿಯೇ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಕಾರಣವನ್ನೂ ಸ್ಪಷ್ಠೀಕರಿಸಿದ್ದಾರೆ. ಕಿಪ್ಪಿ ಕೀರ್ತಿ ಅವರು ಮುತ್ತು ಎನ್ನುವವರನ್ನು ಪ್ರೀತಿಸುತ್ತಿದ್ದರಂತೆ.

ಕಿಪಿ ವಿಡಿಯೋದಲ್ಲಿ ಹೇಳಿದ್ದೇನು ?

“ಎಲ್ಲೇ ಇರು, ಚೆನ್ನಾಗಿರು, ಖುಷಿಯಾಗಿರು ಅಷ್ಟೇ ಯಾವತ್ತೂ ಪ*** ಮುಖ ತೋರ್ಸೋದಿಲ್ಲ. ನೀನು ನನ್ನ ಬಗ್ಗೆ ತಪ್ಪು ತಿಳ್ಕೊಂಡು ದೂರ ಮಾಡಿದೆ ಅಲ್ವಾ ? ಹೇಗಿರಲಿ ನಾನು ಅಂತ ಗೊತ್ತಿಲ್ಲ. ಎಲ್ಲರಿಗೂ ಹಾಲು ಕುಡಿದಷ್ಟು ಸಂತೋಷ ಆಗಿರಬಹುದು , ಚೆನ್ನಾಗಿರಿ ಅಂತ ಅಷ್ಟೇ ಬಯಸೋದು. ನನಗೆ ಇನ್ನೇನು ಬೇಡ. ನಿನ್ನ ಮರೆಯೋಕೆ ಕಷ್ಟ ಆಗಬಹುದು. ಆದರೆ ಮರೆಯೋದಿಲ್ಲ, ಇನ್ಮುಂದೆ ನಾನು ಯಾರನ್ನೂ ಮದುವೆನೂ ಆಗಲ್ಲ. ಇದು ಪ್ರೀತಿ ಮೇಲೆ ಆಣೆ . ಸ್ವಲ್ಪ ಆದ್ರೂ ನೀನು ನನ್ನ ಮಾತು ಕೇಳಬಹುದಿತ್ತು, ಆದ್ರೆ ನೀನು ನನ್ ಮೇಲೆ ಅನುಮಾನ ಪಟ್ಟೆ” ಎಂದು ಕಿಪ್ಪಿ ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಕಿಪ್ಪಿ ಪೋಸ್ಟ್‌ಗೆ ಬಂದ ಕೆಲವು ಕುತೂಹಲಕಾರಿ ಕಾಮೆಂಟ್‌ಗಳು :

  • ಯಾಕೆ ಕಿಪ್ಪಿ ಇದೆಲ್ಲಾ? ಓದು ಚೆನ್ನಾಗಿ, ಕೆಲಸ ಮಾಡು, ದುಡ್ಡು ಮಾಡು, ಜಗತ್ತಿನಲ್ಲಿ ದುಡ್ಡೇ ದೊಡ್ಡಪ್ಪ… ಮತ್ತೆ ನಿನ್ನ ಇಟ್ಕೊಂಡು ಕೆಲಸಕ್ಕೆ ಬಾರದೇ ಯೂಟ್ಯೂಬ್ ಚಾನೆಲ್ ಅವರು ನಿನ್ನಿಂದ ದುಡ್ಡು ಮಾಡಿಕೊಂಡು ಅವರು ಜಾಲಿಯಾಗಿ ಇರುತ್ತಾರೆ, ಇದೆಲ್ಲಾ ಬಿಟ್ಟು ದುಡ್ಡು ಮಾಡಿ, ನಿನ್ನ ತಾಯಿಗೆ ಚೆನ್ನಾಗಿ ನೋಡಿಕೋ.
  • ನಂಗೆ ಯಾಕೋ ಡೌಟ್ ಹೊಡಿತಾ ಇದೆ. ಇಬ್ರು ಪಬ್ಲಿಸಿಟಿಗೆ ಹೀಗೆ ಮಾಡ್ತಾ ಇದ್ದಾರೆ ಆಂತ. ಮಾಡೋಕೆ ಕ್ಯಾಮೆನೂ ಇಲ್ಲ. ಮನೆಯವರು ನೋಡಿದ ಸಂಬಂಧಗಳೆ ಜಾಸ್ತಿ ದಿನ ಉಳಿಯದ ಕಾಲ ತಲುಪಿಬಿಟ್ಟಿದ್ದೀವಿ. ಇನ್ನೂ ಸೋಶಿಯಲ್ ಮೀಡಿಯಾದ್ದು ಉಳಿತದ ಒಳ್ಳೆ ಮಕ್ಕಳಾಟ ಬಿಟ್ಟು ಉದ್ಧಾರ ಆಗೋದು ಹೇಗೆ ಆಂತ ನೋಡ್ಕೊಳ್ಳಿ
  • ಮುಂದೆ ಯಾರನ್ನು ನಂಬಿ ಮೋಸ ಹೋಗ್ಬೇಡ, ಇದೊಂದು ಜೀವನದ ಪಾಠ ಅಂತ ತಿಳ್ಕೊ. ಇವನಿಗಿಂತ ಒಳ್ಳೆ ಮನಸ್ಸೂ ಹುಡುಗ ಸಿಕ್ತಾನೆ.
  • ಯಾರು ಯಾರಿಗೆ ಮೋಸ ಮಾಡಿದ್ರು ಅನ್ನೋದು ಆ ಭಗವಂತ ಇದ್ದಿದ್ರೆ ಗೊತ್ತು ಮಾಡ್ಲಿ…..
  • ಯಾವುದೇ ಕಾರಣಕ್ಕೂ ಕೆಟ್ಟ ನಿರ್ಧಾರ ತಗೋಬೇಡ, ಹೋದ್ರೆ ಹೋಗ್ತಾನೆ ಬಿಡು. ಅವನನ್ನು ನೋಡಿ ಹೊಟ್ಟೆ ಉರ್ಕೋಬೇಕು. ಆತರ ಬೆಳಿ. ನೀನು ನಿನ್ನ ಬುದ್ಧಿ ನಿನ್ನ ಕಲಿತುಕೊಂಡೆ, ಯಾರನ್ನು ನಂಬಬೇಡ.
  • ಹೋಗ್ಲಿ ಬಿಡು, ಕಿಪಿ ಖುಷಿಯಾಗಿ ಇರು, ನಿನ್ ಪ್ರೀತಿ ನಿಂಗೆ ಸಿಗುತ್ತೆ
  • ದಯವಿಟ್ಟು ಈ ತಪ್ಪು ಯಾರು ಮಾಡಬೇಡಿ ಪ್ಲೀಸ್. ಪ್ರೀತಿ ಹೆಸರು ಹೇಳಿಕೊಂಡು ಇನ್ನೊಬ್ಬರ ಲೈಫ್ ಅಲ್ಲಿ ಆಟ ಆಡಬೇಡಿ.
  • ನೋಡಿ ಇದೆಲ್ಲ ನಾಟಕ, ನಿಂಗೆ ಅರ್ಥ ಆಗಲ್ವಾ? ನೀನು ಆರಾಮಾಗಿ ಇರು ಅಷ್ಟೇ. ನಿಮ್ಮ ಅಮ್ಮನನ್ನು ಚೆನ್ನಾಗಿ ನೋಡ್ಕೋ…

Continue Reading

kerala

ಕಾಸರಗೋಡು: ಕೊನೆಯ ಹಂತದಲ್ಲಿದೆ ಮಧೂರು ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಿದ್ಧತೆ

Published

on

ಕಾಸರಗೋಡು: ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರುಷ ಹಲವಾರು ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವವು ನಡೆಯುತ್ತಿದ್ದು, ಇದೀಗ ಕಾಸರಗೋಡಿನ ಮಧುವಾಹಿನಿ ನದಿಯ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವವು ನಡೆಯಲಿದೆ. ಮಾ.27 ರಿಂದ ಎ.7ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

ಮೂಡು ಗೋಪುರಕ್ಕೆ ಗ್ರಾನೈಟ್ ಹಾಸಲಾಗಿದೆ. ಮುರುಡೇಶ್ವರದ ಶಂಕರ್ ಮತ್ತು ಬಳಗ ಅತ್ಯಾಕರ್ಷಕವಾಗಿ ಕೆತ್ತನೆ ಕೆಲಸ ನಿರ್ವಹಿಸಿದ್ದು, ಕಾಷ್ಠ ಶಿಲ್ಪವನ್ನು ಮೂಡುಬಿದಿರೆ ಸಂಪಿಗೆಯ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಹರೀಶ ಆಚಾರ್ಯ ಮಾಡಿದ್ದಾರೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ದೇಗುಲದ ನವೀಕರಣ ಕಾಮಗಾರಿ ನಡೆದಿದ್ದು, ರಾಜಾಂಗಣ, ಹೊರಾಂಗಣದ ಕಾಮಗಾರಿಗಳು ಸಂಪೂರ್ಣಗೊಂಡಿವೆ. ಗಣಪತಿ ನಡೆ, ಶಿವನ ನಡೆ, ದುರ್ಗಾ ಗುಡಿ, ಸುತ್ತು ಪೌಳಿಗೆ ಕೆಂಪುಕಲ್ಲು ಹಾಸಲಾಗಿದೆ. ನೂತನವಾಗಿ ಕಗ್ಗಲ್ಲಿನಿಂದ ನಿರ್ಮಾಣಗೊಂಡ ಕೆತ್ತನೆ ಕೆಲಸದ ಕಂಬಗಳು, ಕಾಷ್ಠ ಶಿಲ್ಪಗಳು ಆಕರ್ಷಿಸುತ್ತಿವೆ.

ಅನ್ನಛತ್ರ, ಉಗ್ರಾಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ, ಸಭಾ ಕಾರ್ಯಕ್ರಮಕ್ಕೆ ವೇದಿಕೆ, ಕಾರ್ಯಾಲಯ ಇತ್ಯಾದಿಗಳ ಕಾರ್ಯ ಪ್ರಗತಿಯಲ್ಲಿದೆ. ವಾಹನ ಪಾರ್ಕಿಂಗ್‌ಗೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. 2-3 ತಿಂಗಳುಗಳಿಂದ ಮಕ್ಕಳು, ಮಹಿಳೆಯರು ಸಹಿತ ಎಲ್ಲರೂ ರಾತ್ರಿ ಹಗಲೆನ್ನದೆ ಕರ ಸೇವೆಯಲ್ಲಿ ನಿರತರಾಗಿದ್ದಾರೆ. ದೇವಸ್ಥಾನದ ಪರಿಸರದಲ್ಲಿ ಚಪ್ಪರದ ಕಾರ್ಯ ನಡೆಯುತ್ತಿದೆ. ಈ ಬಾರಿ ಮಧೂರು ದೇವಾಲಯದ ಅಷ್ಟಬಂದ ಬ್ರಹ್ಮಕಲಶೋತ್ಸವವು ಒಂದು ಇತಿಹಾಸ ಸೃಷ್ಠಿಗೆ ಕಾರಣವಾಗಲಿದೆ.

Continue Reading

LATEST NEWS

ಹೆಬ್ರಿ : ಪಬ್ಲಿಕ್ ಜಾಗದಲ್ಲಿ ಹೊಡೆದಾಟ ಮಾಡಿದ 8 ಮಂದಿ ಅರೆಸ್ಟ್

Published

on

ಹೆಬ್ರಿ : ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದಾಗಿಸಿ ಗಲಾಟೆ ಮಾಡಿ, ಹೊಡೆದಾಟ ನಡೆಸಲು ಜನರು ಕಾಯುತ್ತಿರುತ್ತಾರೆ. ತಾಳ್ಮೆಯನ್ನು ಮೂಲೆಗುಂಪು ಮಾಡಿ ಗದ್ದಲ ಸೃಷ್ಠಿಸುತ್ತಾ ಮನಃಶ್ಶಾಂತಿ ಹಾಳುಮಾಡಿಕೊಂಡು ಇರುತ್ತಾರೆ. ಮನೆಯಲ್ಲಿ ಆದರೂ ಪರವಾಗಿಲ್ಲ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ ನಡೆಸಿದರೆ ಏನಾಗಬಹುದು ? ಇದೀಗ ಅದೇ ರೀತಿ ಸಾರ್ವಜನಿಕ ಜಾಗದಲ್ಲಿ ಗಲಾಟೆ ಮಾಡಿಕೊಂಡ 8 ಜನರು ಇದೀಗ ಕಂಬಿ ಎಣಿಸುವ ಸ್ಥಿತಿ ಬಂದಿದೆ. ಏನಿದು ಘಟನೆ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹೆಬ್ರಿಯಲ್ಲಿ ಬಡಾಗುಡ್ಡೆ ಹೋಗುವ ದಾರಿ ಬಳಿ ಮಾ.13ರಂದು ಸಂಜೆ ವೇಳೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ಎಂಟು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ 7-8 ಜನರು ಸೇರಿಕೊಂಡು ಪರಸ್ಪರ ಬೈದಾಡಿ ಹೊಡೆದಾಡಿಕೊಂಡು ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹನುಮಂತ, ಸುರೇಶ್, ರೇಖಾ, ರಮೇಶ, ಮಂಜುನಾಥ, ದುರ್ಗೇಶ್, ಹನುಮಂತ, ವಿಶ್ವನಾಥ ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page