Connect with us

LATEST NEWS

ತಾಯಿಯ ದುಡುಕುತನ..! ಮಕ್ಕಳಿಬ್ಬರ ಜೀವಾಂತ್ಯ..!

Published

on

ಉಡುಪಿ  : ತನ್ನಿಬ್ಬರು ಮಕ್ಕಳೊಂದಿಗೆ ಜೀವಾಂತ್ಯಗೊಳಿಸಲು ಕೆರೆಗೆ ಹಾರಿದ ತಾಯಿಯನ್ನು ರಕ್ಷಣೆ ಮಾಡಲಾಗಿದ್ದು, ಮಕ್ಕಳಿಬ್ಬರು ಇಹಲೋಕ ತ್ಯಜಿಸಿದ್ದಾರೆ. ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ನಂದ್ರೋಳ್ಳಿ ಎಂಬಲ್ಲಿ ತಾಯಿ ಶೀಲಾ ಎಂಬವರು ತನ್ನ ಮಕ್ಕಳಾದ ಧನರಾಜ್ (13 ವರ್ಷ) ಹಾಗೂ ಛಾಯ (7 ವರ್ಷ) ಜೊತೆ ಕೆರೆಗೆ ಹಾರಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಕೆರೆಗೆ ಹಾರಿದವರ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ತಾಯಿ ಶೀಲಾ ಅವರನ್ನು ರಕ್ಷಣೆ ಮಾಡಲಾಗಿದೆ. ಶೀಲಾ ಗಂಭೀರ ಸ್ಥಿತಿಯಲ್ಲಿ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಕೃತ್ಯಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ

LATEST NEWS

‘ಆಪರೇಷನ್‌ ಸಿಂದೂರ್’ ನಂತರದ ಮುಂದಿನ ಕ್ರಮದ ಕುರಿತು ಇಂದು ಮಹತ್ವದ ಸಭೆ

Published

on

ಮಂಗಳೂರು/ನವದೆಹಲಿ : ಉಗ್ರರಿಗ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಈಗಾಗಲೇ ‘ಆಪರೇಶನ್ ಸಿಂಧೂರ್’ ಆರಂಭವಾಗಿದೆ. ಆದರೆ ಇದರ ಮುಂದಿನ ಕ್ರಮ ಏನು ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ಹಿನ್ನಲೆಯಲ್ಲಿಇಂದು (ಮೇ.14) ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಉನ್ನತ ಮಟ್ಟದ ಚರ್ಚೆಗಳು ನಡೆಯಲಿದೆ.

ಮೋದಿಯವರು ಭದ್ರತೆ ಕುರಿತ ಸಂಪುಟ ಸಮಿತಿಯ (CCS) ನಿರ್ಣಾಯಕ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ‘ಆಪರೇಷನ್ ಸಿಂದೂರ್’ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಘಟನೆಗಳನ್ನು ಚರ್ಚಿಸುವ ಜತೆಗೆ, ಪಾಕಿಸ್ತಾನದ ವಿರುದ್ಧ ಕಾರ್ಯತಂತ್ರದ ಪ್ರತಿಕ್ರಿಯೆಯನ್ನು ರೂಪಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ : ‘ವ್ಯಾಪಾರ ರಿಯಾಯಿತಿ ಬದಲು ಕದನ ವಿರಾಮಕ್ಕೆ ಸಹಾಯ ಮಾಡಿದ್ದೇನೆ…’ : ಟ್ರಂಪ್ ಹೇಳಿಕೆಯನ್ನು ವಿರೋಧಿಸಿದ ಭಾರತ

‘ಆಪರೇಷನ್‌ ಸಿಂದೂರ್’ ನಂತರ ಭಾರತವು ತನ್ನ ಮುಂದಿನ ಕ್ರಮದ ಬಗ್ಗೆ ಯೋಚಿಸುತ್ತಿರುವಾಗ ಇಂದಿನ ಸಭೆಯು ಮಹತ್ವದ್ದಾಗಿದೆ. ರಕ್ಷಣ, ಗೃಹ, ವಿದೇಶಾಂಗ ಮತ್ತು ಗುಪ್ತಚರ ಸಂಸ್ಥೆಗಳ ಪ್ರಮುಖ ಸಚಿವರು ಮತ್ತು ಉನ್ನತ ಅಧಿಕಾರಿಗಳನ್ನೊಳಗೊಂಡ ಸಿಸಿಎಸ್‌ ಸಭೆಯು, ಮಿಲಿಟರಿ ಮತ್ತು ಗುಪ್ತಚರ ವಲಯದಲ್ಲಿ ಭಾರತದ ಸನ್ನದ್ಧತೆಯ ಕುರಿತು ಚರ್ಚಿಸಲಾಗುತ್ತದೆ.

Continue Reading

LATEST NEWS

‘ವ್ಯಾಪಾರ ರಿಯಾಯಿತಿ ಬದಲು ಕದನ ವಿರಾಮಕ್ಕೆ ಸಹಾಯ ಮಾಡಿದ್ದೇನೆ…’ : ಟ್ರಂಪ್ ಹೇಳಿಕೆಯನ್ನು ವಿರೋಧಿಸಿದ ಭಾರತ

Published

on

ಮಂಗಳೂರು/ಹೊಸದಿಲ್ಲಿ: ಭಾರತ ಹಾಗೂ ಪಾಕ್ ನಡುವೆ ಯುದ್ಧದ ಕಾರ್ಮೋಡ ಆವರಿಸುತ್ತಿರುವಾಗಲೇ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ವ್ಯಾಪಾರ ರಿಯಾಯಿತಿಯ ಬದಲಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿ ಸಹಾಯ ಮಾಡಿದ್ದೇನೆ’ ಎಂಬ ಹೇಳಿಕೆ ನೀಡಿದ್ದನು. ಇದೀಗ ಟ್ರಂಪ್ ಹೇಳಿಕೆಗೆ ಭಾರತ ಸರ್ಕಾರ ನಿನ್ನೆ (ಮೇ 13) ತಿರಸ್ಕಾರ ವ್ಯಕ್ತ ಪಡಿಸಿದೆ.

ವಿದೇಶಾಂಗ ಸಚಿವಾಲಯ ಹೇಳಿದ್ದೇನು ..?

“ಮೇ 7 ರಂದು ಆಪರೇಷನ್ ಸಿಂಧೂರ್ ಪ್ರಾರಂಭವಾದಾಗಿನಿಂದ ಮೇ 10 ರಂದು ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ತಿಳುವಳಿಕೆ ಬರುವವರೆಗೆ, ಹೆಚ್ಚುತ್ತಿದ್ದ ಮಿಲಿಟರಿ ಪರಿಸ್ಥಿತಿಯ ಕುರಿತು ಭಾರತ ಮತ್ತು ಅಮೆರಿಕಾ ನಾಯಕರ ನಡುವೆ ಸಂಭಾಷಣೆಗಳು ನಡೆದವು. ಯಾವುದೇ ಚರ್ಚೆಗಳಲ್ಲಿ ವ್ಯಾಪಾರದ ವಿಷಯವು ಬರಲಿಲ್ಲ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ನಾವು ಅವರ ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ..! ಉಗ್ರರ ಜೊತೆ ಪಾಕ್‌ಗೂ ಖಡಕ್ ಎಚ್ಚರಿಕೆ ಕೊಟ್ಟ ಮೋದಿ ..!

ವ್ಯಾಪಾರದ ಮಾತುಕತೆ ನಡೆದಿಲ್ಲ ..!

ಇತ್ತೀಚಿನ ಮಿಲಿಟರಿ ಉಲ್ಬಣದ ಸಮಯದಲ್ಲಿ ಉಭಯ ರಾಷ್ಟ್ರಗಳ ನಡುವೆ ಯಾವುದೇ ಚರ್ಚೆಗಳಲ್ಲಿ “ವ್ಯಾಪಾರದ ವಿಷಯವು ಬರಲಿಲ್ಲ” ಎಂದು ನಿಸ್ಸಂದಿಗ್ಧವಾಗಿ ಹೇಳಿದೆ. ಟ್ರಂಪ್‌ ಅವರ ಹೇಳಿಕೆಗಳ ಕುರಿತು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯ (MEA), ಪಾಕಿಸ್ತಾನದೊಂದಿಗಿನ ಉದ್ವಿಗ್ನ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಾಯಕತ್ವ ಸಂಪರ್ಕದಲ್ಲಿತ್ತು, ಆದರೆ ವ್ಯಾಪಾರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿತು.

Continue Reading

bangalore

ಮತ್ತೆ ಆವರಿಸುತ್ತಿರುವ ಮುಂಗಾರು ; ಸಿಡಿಲು, ಮಿಂಚು ಸಹಿತ ರಾಜ್ಯಾದ್ಯಂತ ಅಲ್ಲಲ್ಲಿ ಮಳೆ

Published

on

ಬಳ್ಳಾರಿ/ ಬೆಂಗಳೂರು/ದ.ಕ/ಉಡುಪಿ : ಒಂದೊಮ್ಮೆ ಭಾರೀ ಆರ್ಭಟಿಸಿ ಬಳಿಕ ಕೊಂಚ ತಣ್ಣಗಾಗಿದ್ದ ಮುಂಗಾರು ಪೂರ್ವ ಮಳೆ ಮತ್ತೆ ರಾಜ್ಯಾದ್ಯಂತ ಆವರಿಸಿದೆ. ನಿನ್ನೆ (ಮೇ.13) ಒಂದೇ ದಿನ ರಾಜ್ಯಾದ್ಯಂತ ಅಲ್ಲಲ್ಲಿ ಸಿಡಿಲು, ಮಿಂಚು ಸಹಿತ ವರುಣನ ಆರ್ಭಟ ಜೋರಾಗಿಯೇ ಇತ್ತು.

ಬಳ್ಳಾರಿಯಲ್ಲಂತೂ ವರುಣನಾರ್ಭಟ ಜೋರಾಗಿಯೇ ಇತ್ತು ಮಾತ್ರವಲ್ಲದೆ, ಅಪಾರ ಹಾನಿಯೂ ಸಂಭವಿಸಿದೆ. ಮೊದಲೇ ಟ್ರಾಫಿಕ್ ಜಾಮ್ ಹೆಚ್ಚಿರುವ ಬೆಂಗಳೂರಿನಲ್ಲಿ ನಿನ್ನೆ ಮತ್ತೂ ಅಧಿಕ ಹೊತ್ತು ಜಾಮ್ ಆಘಿತ್ತು ಮಾತ್ರವಲ್ಲದೆ, ಬಸ್‌ ಒಳಗೂ ನೀರು ನುಗ್ಗಿ ಪ್ರಯಾಣಕ್ಕೆ ತೊಂದರೆ ನಿಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲೂ ಅಲ್ಲಲ್ಲಿ ಜೋರು ಮಳೆ ಸುರಿದಿದೆ.

ಬಳ್ಳಾರಿಯಲ್ಲಿ ಸಿಡಿಲು ಬಡಿದು ಪ್ರಾಣಹಾನಿ :

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಕುರಿಗಾಹಿಗಳು ಬಲಿಯಾಗಿದ್ದಾರೆ. ಬೀರಪ್ಪ (45), ಸುನೀಲ (26), ವಿನೋದ್ (14) ಮೃತ ದುರ್ದೈವಿಗಳು. ಕುರಿ ಮೇಯಿಸಲು ತೆರಳಿದ್ದಾಗ ಜೋರು ಮಳೆ ಬಂದಿದೆ. ಈ ವೇಳೆ, ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ಸಿರಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದ ರೈತ ಸುನೀಲ ಕಾಳೇರ (29), ಹಾನಗಲ್ಲ ತಾಲೂಕಿನ ಕೊಂಡೋಜಿ ಗ್ರಾಮದಲ್ಲಿ ವೃದ್ದೆ ಮರಿಯಮ್ಮ ನಾಯ್ಕ‌ರ್ (60) ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಟ್ರಾಫಿಕ್‌ಜಾಮ್, ಬಸ್‌ ಒಳಗೂ ನೀರು :

ಬೆಂಗಳೂರಿನಲ್ಲಿ ಸುರಿದ ಗುಡುಗು, ಗಾಳಿ ಸಹಿತ ಭಾರಿ ಮಳೆಗೆ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್, ಮೈತ್ರಿ ಸರ್ಕಲ್, ವಿಧಾನಸೌಧ, ಶಿವಾನಂದ ಸರ್ಕಲ್, ಕೆ.ಆ‌ರ್. ಸರ್ಕಲ್ ಸುತ್ತಮುತ್ತ ಮಳೆಯಾಗುತ್ತಿದೆ. ಮಳೆ ಹಿನ್ನೆಲೆ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮಾನ್ಯತಾ ಟೆಕ್ ಪಾರ್ಕ್‌ ಬಳಿ ಬಿಎಂಟಿಸಿ ಬಸ್ ಒಳಗೆ ಮಳೆ ನೀರು ನುಗ್ಗಿದೆ. ಭಾರಿ ಮಳೆಯಿಂದ ರಸ್ತೆ ಜಲಾವೃತಗೊಂಡಿದ್ದು, ರಸ್ತೆಯಿಂದ ಬಸ್‌ ಒಳಭಾಗಕ್ಕೆ ಮಳೆ ನೀರು ಹರಿದಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆ :

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಉಡುಪಿ ಜಿಲ್ಲೆಯಲ್ಲೂ ಸಿಡಿಲು, ಮಿಂಚು ಸಹಿತ ಉತ್ತಮ ಮಳೆಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page