Connect with us

UDUPI

ಕಾಶ್ಮೀರ ಪಹಲ್ಗಾಮ್’ನಲ್ಲಿ ಉಗ್ರರ ದಾ*ಳಿ; ಉಡುಪಿ ಬಿಷಪ್ ಖಂಡನೆ

Published

on

ಉಡುಪಿ : ಕಾಶ್ಮೀರದ ಪಹಲ್ಗಾಮ್’ನಲ್ಲಿ ಮಂಗಳವಾರ(ಎ.22) ಉಗ್ರವಾದಿಗಳಿಂದ ನಡೆದಿರುವ ಹೃದಯ ವಿದ್ರಾವಕ ಘಟನೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಖಂಡಿಸಿದ್ದಾರೆ.

ಈ ಘಟನೆಯಿಂದ ಆಮಾಯಕರ ಜೀವಗಳು ಬ*ಲಿಯಾಗುವುದರೊಂದಿಗೆ ಅನೇಕ ಕುಟುಂಬಗಳನ್ನು ಧ್ವಂಸಗೊಳಿಸಿದ್ದು, ಇಂತಹ ಹಿಂಸಾಚಾರಗಳು ಸಂಪೂರ್ಣವಾಗಿ ಅಮಾನವೀಯವಾಗಿದ್ದು, ನ್ಯಾಯ, ಘನತೆ ಮತ್ತು ಶಾಂತಿಯನ್ನು ಬಯಸುವ ಸಮಾಜದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಪ್ರತಿಯೊಂದು ಜೀವವೂ ಕೂಡ ಅಮೂಲ್ಯವಾಗಿದ್ದು, ಹಿಂಸಾಚಾರದಿಂದ ಉಂಟಾಗುವ ಜೀವ ನಷ್ಟವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಆಗುವ ಗಾ*ಯವಾಗಿದೆ.

ಶಾಶ್ವತ ಶಾಂತಿಯ ನಿಜವಾದ ಅಡಿಪಾಯವೇ ‘ಸಹೋದರತ್ವ’ ಎಂದು ಪವಿತ್ರ ಪೋಪ್ ಫ್ರಾನ್ಸಿಸ್ ನಮಗೆ ಆಗಾಗ್ಗೆ ನೆನಪಿಸಿದ್ದಾರೆ. ಈ ಮಾತುಗಳು ನಂಬಿಕೆಯ ಜನರಿಗೆ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಯ ಘನತೆ, ಸಹಾನುಭೂತಿ ಮತ್ತು ಪರಸ್ಪರ ಗೌರವದಲ್ಲಿ ನೆಲೆಗೊಂಡ ಭವಿಷ್ಯವನ್ನು ನಿರ್ಮಿಸುವ ತುರ್ತು ಅಗತ್ಯವನ್ನು ನೆನಪಿಸುತ್ತದೆ.

ಇದನ್ನೂ ಓದಿ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಬಿಗ್‌ ಶಾಕ್; ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ?

ಮೃತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುವುದರೊಂದಿಗೆ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ಪ್ರದೇಶ ಮತ್ತು ರಾಷ್ಟ್ರದಾದ್ಯಂತ ನಾಯಕರು, ಸಮುದಾಯಗಳು ಮತ್ತು ವ್ಯಕ್ತಿಗಳು ಧೈರ್ಯ, ಒಗ್ಗಟ್ಟು ಮತ್ತು ಶಾಂತಿಗಾಗಿ ನವೀಕೃತ ಬದ್ಧತೆಯಿಂದ ಪ್ರತಿಕ್ರಿಯಿಸುವಂತೆ ಒತ್ತಾಯಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

FILM

ತಂದೆ, ಅಕ್ಕನಿಗೆ ಬೆದರಿಕೆ ಹಾಕಿದ್ರಾ ಚೈತ್ರಾ ಕುಂದಾಪುರ; ಉಡುಪಿ ಎಸ್ ಪಿ ಏನಂದ್ರು?

Published

on

ಉಡುಪಿ: ಚೈತ್ರಾ ಕುಂದಾಪುರ ಅವರು ಮದುವೆಯಾಗಿ ಗಂಡನ ಮನೆಗೆ ತೆರಳಿದರೂ ವಿವಾದಗಳು ಆಕೆಯನ್ನು ಬೆಂಬತ್ತುತ್ತಲೇ ಇವೆ. ಇದೀಗ ಚೈತ್ರಾ ಅವರು ತಂದೆ ಮತ್ತು ಅಕ್ಕನಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಉಡುಪಿ ಜಿಲ್ಲಾ ಎಸ್.ಪಿ. ಡಾ. ಅರುಣ್‌ ಕುಮಾರ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ತಿಂಗಳ 15 ರಂದು ತಂದೆ ಬಾಲಕೃಷ್ಣ ನಾಯಕ್‌ ಕುಂದಾಪುರ ಟೌನ್‌ ಪೊಲೀಸ್‌ ಠಾಣೆಗೆ ತೆರಳಿ ಪುತ್ರಿ ಚೈತ್ರಾ ವಿರುದ್ಧ ದೂರೊಂದನ್ನು ಸಲ್ಲಿಸಿದ್ದಾರೆ. ‘ಕೆಲವು ವರ್ಷಗಳ ಹಿಂದೆ ಚೈತ್ರಾ ಅವರು ಇದ್ದ ಮನೆಯಲ್ಲಿ ತಂದೆ ವಾಸವಾಗಿದ್ದ ಸಂದರ್ಭ ಚೈತ್ರಾ ಬಂದು ಹಣ ಎಣಿಸುತ್ತಿದ್ದಾಗ ಅದನ್ನು ನೋಡಿ, ಇದು ಅಕ್ರಮವಾಗಿ ಗಳಿಸಿದ ಹಣ. ನಾನು ನಿಮ್ಮ ಜತೆ ಇರುವುದಿಲ್ಲ ಎಂದು ಹೇಳಿ ಹಿರಿಯ ಪುತ್ರಿ ಗಾಯತ್ರಿ ಅವರ ಮನೆಗೆ ಹೋಗಿ ವಾಸವಿರುವುದಾಗಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಸೆಕೆ ತಡೆಯಲಾಗದೆ ಎಟಿಎಂ ಒಳಗೆ ಕುಳಿತ ಫ್ಯಾಮಿಲಿ! ವೀಡಿಯೋ ವೈರಲ್

ಬಳಿಕ ಚೈತ್ರಾ ಅವರು ತಂದೆ ಬಾಲಕೃಷ್ಣ ನಾಯಕ್‌ ಮತ್ತು ಹಿರಿಯ ಪುತ್ರಿ ಗಾಯತ್ರಿ ಅವರಿಗೆ ಬೆದರಿಕೆ ಹಾಕಿ ಅವರ ಹೆಸರಿನಲ್ಲಿರುವ ಅಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳುವುದಾಗಿ ಹೇಳಿ ಹೋಗಿದ್ದಾಳೆ ಎಂಬುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಠಾಣೆಯಲ್ಲಿ ಕೇಸು ದಾಖಲಾದ ಬಳಿಕ ಚೈತ್ರಾ ಅವರು ಠಾಣೆಗೆ ಬಂದು, ಈ ವಿಚಾರವನ್ನು ತಾನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ತಂದೆ ಬಾಲಕೃಷ್ಣ ನಾಯಕ್‌ ಅವರಿಗೆ ಇದೊಂದು ಸಿವಿಲ್‌ ವಿಚಾರ ಆಗಿರುವುದರಿಂದ ಕೋರ್ಟಿನಲ್ಲಿ ಬಗೆಹರಿಸಿಕೊಳ್ಳುವಂತೆ ಎಂಡೋರ್ಸ್‌ಮೆಂಟ್‌ನ್ನು ಕೊಡಲಾಗಿದೆ ಎಂದು ಎಸ್‌ಪಿ ಅವರು ತಿಳಿಸಿದ್ದಾರೆ.

Continue Reading

LATEST NEWS

ಉಡುಪಿ: ಡ್ರಗ್ಸ್ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗುತ್ತಿದ್ದ ಇಬ್ಬರ ಬಂಧನ

Published

on

ಉಡುಪಿ: ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆದಿದೆ.

ಗಾಂಜಾ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗಿರುವ ಉಡುಪಿ ಜಿಲ್ಲೆಯ ಹಲವು ಠಾಣೆಯಲ್ಲಿ ಪ್ರಕರಣಗಳ ಆರೋಪಿಗಳನ್ನು ಪಿಟ್ NDPS ಕಾಯಿದೆ ಅಡಿಯಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿ: ಬೀದಿ ವ್ಯಾಪಾರ ತೆರವು ಕಾರ್ಯಾಚರಣೆ; ವ್ಯಾಪಾರಸ್ಥರ ಸಂಘದಿಂದ ಆಕ್ಷೇಪ

ಉಪ್ಪೂರು ಗ್ರಾಮದ ಕೊಳಲಗಿರಿಯ ಕೃಷ್ಣ ಆಚಾರಿ ಯಾನೆ ಕೃಷ್ಣ(43) ಹಾಗೂ ಕೇಳಾರ್ಕಳಬೆಟ್ಟುವಿನ ಅಬ್ದುಲ್‌ ಜಬ್ಬಾರ್‌ (27) ಬಂಧಿತ ಆರೋಪಿಗಳು. ಇಬ್ಬರನ್ನು ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲಾಗಿದೆ.

Continue Reading

LATEST NEWS

ಉಡುಪಿ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್

Published

on

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಉಡುಪಿಯಲ್ಲಿ ಬಂಧಿಸಲಾಗಿದೆ.

ಬಿಹಾರ ಮೂಲದ ಬ್ರಹ್ಮದೇವ್ ಯಾದವ್ (37) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ರೈಲ್ವೆ ನಿಲ್ಧಾಣದ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಮುಂದಾಗಿದ್ದನು. ಈ ವೇಳೆ ಸೆನ್ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: UPI Payment: ಇನ್ಮುಂದೆ ತಪ್ಪಾದ ಖಾತೆಗೆ ಹಣ ಪಾವತಿ ಆಗುವುದಿಲ್ಲ

ಈತನಿಂದ 690 ಗ್ರಾಂ ಗಾಂಜಾ, ಮೊಬೈಲ್ ಪೋನ್-1, ನಗದು 680 ರೂಪಾಯಿ ಮತ್ತು ಇತರೇ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page