Connect with us

FILM

ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾದ ಜೆರುಶಾ

Published

on

ಬೆಂಗಳೂರು: ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಾಗಿಣಿ ದ್ವಿವೇದಿ ನಟನೆಯ ವೀರ ಮದಕರಿ ಸಿನೆಮಾ  ಚಿತ್ರರಂಗದಲ್ಲೇ ಮೋಡಿ ಮಾಡಿತ್ತು. ಸಿನೆಮಾದ ಹೆಸರು ನೆನಪು ಮಾಡಿದ್ರೆ ಸುದೀಪ್, ರಾಗಿಣಿ ಜೊತೆ ಅವರ ಅವರ ಮಗಳ ಪಾತ್ರವನ್ನು ಮಾಡಿದ ಜೆರುಶಾ ಕೂಡಾ ನೆನಪಿಗೆ ಬರ್ತಾಳೆ.

jerusha with rakshith

ಮುದ್ದಾದ ಮುಖದ ಮುದ್ದು ಗೊಂಬೆ, ಗುಂಗುರು ಕೂದಲಿನ ಪುಟಾಣಿ ಸದಾ ಅಮ್ಮನ ಲಾಲಿ ಹಾಡನ್ನು ಟೇಪ್‌ರೆಕಾರ್ಡರ್‌ನಲ್ಲಿ ಕೇಳಿಕೊಂಡು ಅಪ್ಪನ ಹಿಂದೆನೆ ಸುತ್ತುತ್ತಿದ್ದ ಪುಟಾಣಿ ಈಗ ನಾಯಕಿ ನಟಿ.

 READ MORE..; ‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು

ನಾಯಕಿ ನಟಿಯಾಗಿ ಜೆರುಶಾ

ಈಗ ಪುಟಾಣಿ ಜೆರುಶಾ ಇದೀಗ ವೀರಮದಕರಿ ಸಿನೆಮಾದ ಬಳಿಕ ನಾಯಕಿ ನಟಿಯಾಗಿ ಬೆಳ್ಳಿತೆರೆಗೆ ಬರಲು ಸಿದ್ಧರಾಗಿದ್ದಾರೆ. ಹೌದು, ಮಹೇಶ್ ಬಾಬು ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಸಿನೆಮಾದಲ್ಲಿ ಮತ್ತೊಂದು ಯುವ ಪ್ರತಿಭೆಯನ್ನು ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ.  ಕಿರುತೆರೆ ನಟ ಸ್ಮೈಲ್ ಗುರು ರಕ್ಷಿತ್ ಹಾಗೂ  ಜೆರುಶಾರವರನ್ನು ಕಾಣಿಸಲಿದ್ದಾರೆ. ಆಕಾಶ್, ಅರಸು, ಪರಮೇಶ ಪಾನ್ ವಾಲ ಸೇರಿದಂತೆ ಹಲವಾರು ಹಿಟ್ ಸಿನೆಮಾಗಳನ್ನು ನೀಡಿರುವ ಮಹೇಶ್ ಬಾಬು ಇದೀಗ ಹೊಸಮುಖಗಳೊಂದಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಿನೆಮಾ ಯಾವ ರೀತಿ ಇರಲಿದೆ ಅನ್ನೋದು ಕಾದು ನೋಡಬೇಕಿದೆ.

mahesh babu with rakshith

ಜೆರುಶಾ ಈಗಾಗಲೇ ಬಾಲ ನಟಿಯಾಗಿ ಮಿಂಚಿದ್ದಾರೆ. ಅಲ್ಲದೆ ರಂಗಭೂಮಿಯ ನಟನೆಯಲ್ಲೂ ಪಳಗಿದ್ದಾರೆ. ಇನ್ನು ಸ್ಮೈಲ್ ಗುರು ರಕ್ಷಿತ್ ಡ್ಯಾನ್ಸ್ ರಿಯಾಲಿಟಿ ಶೋ, ಕಿರುತೆರೆ ಧಾರಾವಾಹಿಗಳ ಮೂಲಕ ಪ್ರೇಕ್ಷಕರಿಗೆ ಪರಿಚತರಾಗಿದ್ದಾರೆ. ಈ ಸಿನೆಮಾಗೆ ಹೊಸ ಮುಖದ ಮತ್ತೊಂದು ನಾಯಕಿಗಾಗಿ ಹುಡುಕಾಟದಲ್ಲಿ ಇದ್ದಾರಂತೆ ನಿರ್ದೇಶಕರು.

ಸಿನೆಮಾಗೆ ಇನ್ನೂ ಟೈಟಲ್ ಫೈನಲ್ ಆಗದಿದ್ದರೂ ಮೇಲ್ನೋಟಕ್ಕೆ ಸಿನೆಮಾ ಯೂತ್‌ಫುಲ್ ಕಥೆಯನ್ನ ಹೊಂದಿದೆ ಎನ್ನಬಹುದು. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದು, ಚೇತನ್ ಹಾಗೂ ಅನುರಾಗ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಸತ್ಯ ಛಾಯಾಗ್ರಾಹಣವಿರಲಿದೆ. ಇದೇ ಮೇ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಈ ಹಿಂದೆ ನಟಿ ಜೆರುಶಾ ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಕನ್ನಡ, ಮಲಯಾಳಂ ದ್ವಿಭಾಷಾ ಪ್ರಾಜೆಕ್ಟ್ ಧೂಮಮ್‌ನಲ್ಲಿ ನಟಿಸಿದ್ದರು. ಮಲಯಾಳಂ ನಟ ಫಹಾದ್ ಫಾಸಿಲ್ ನಟನೆಯ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು.

FILM

ಹೃದಯಾಘಾತದಿಂದ ಕರಿಷ್ಮಾ ಕಪೂರ್ ಮಾಜಿ ಪತಿ ನಿಧನ

Published

on

ಮಂಗಳೂರು/ಮುಂಬೈ : ಕರಿಷ್ಮಾ ಕಪೂರ್ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ಹೃದಯಾ*ಘಾತದಿಂದ ನಿ*ಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.

ಇಂಗ್ಲೆಂಡ್‌ನಲ್ಲಿದ್ದ ಸಂಜಯ್ ಕಪೂರ್ ಗಾರ್ಡ್ಸ್ ಪೋಲೊ ಕ್ಲಬ್‌ನಲ್ಲಿ ಪೋಲೋ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಕು*ಸಿದು ಬಿ*ದ್ದರೆನ್ನಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಸಂಜಯ್ ಹೃದಯಾ*ಘಾತದಿಂದ ಮೃ*ತಪಟ್ಟಿದ್ದಾರೆ ಎಂದು ಘೋಷಿಸಿದರು.

ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ಸಂಜಯ್ ಕಪೂರ್ ಮತ್ತ ನಟಿ ಕರಿಷ್ಮಾ ಕಪೂರ್ 2003ರಲ್ಲಿ ವಿವಾಹವಾಗಿದ್ದರು. ಇವರಿಗೆ ಸಮೈರಾ ಮತ್ತು ಕಿಯಾರಾ ಎಂಬ ಇಬ್ಬರು  ಮಕ್ಕಳಿದ್ದಾರೆ. ಸಂಸಾರದಲ್ಲಿ ಬಿರುಕು ಮೂಡಿ 2016 ರಲ್ಲಿ ವಿಚ್ಛೇದನ ಪಡೆದರು. ಬಳಿಕ ಸಂಜಯ್ ಕಪೂರ್ ಪ್ರಿಯಾ ಸಚ್‌ದೇವ್  ಎಂಬವರನ್ನು ವಿವಾಹವಾದರು.

ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ್ದ ಕಪೂರ್ :

ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ಬಗ್ಗೆ ಸಂಜಯ್ ಕಪೂರ್ ಟ್ವೀಟ್ ಮಾಡಿದ್ದರು. ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ದುರಂತ ಭಯಾನಕ ಸುದ್ದಿ. ಸಂತ್ರಸ್ತರ ಎಲ್ಲಾ ಕುಟುಂಬಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಅವರಿಗೆ  ಶಕ್ತಿ ಸಿಗಲಿ ಎಂದು ಪೋಸ್ಟ್ ಮಾಡಿದ್ದರು.

Continue Reading

FILM

ಹೆಸರು ಬದಲಿಸಿಕೊಂಡ ಆಲಿಯಾ ಭಟ್… ಏನು ಗೊತ್ತಾ..?

Published

on

ರಣಬೀರ್ ಕಪೂರ್ ಪತ್ನಿ ಆಲಿಯಾ ಭಟ್ ಮದ್ಯೆಯಾಗಿ ಹಲವು ವರ್ಷಗಳ ನಂತರ ತಮ್ಮ ಹೆಸರಿನ ಮುಂದೆ ಇರುವ ಭಟ್ ಎನ್ನುವ ಸರ್ ನೇಮ್ ತೆಗೆದು ಆಲಿಯಾ ಕಪೂರ್ ಎಂದು ಬದಲಿಸಿಕೊಂಡಿದ್ದಾರೆ.

ಆಲಿಯಾ ಭಟ್ ಅವರು ಬ್ಲಾಗ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಹೋಟೆಲ್ ರೂಂನ ದೃಶ್ಯ ಕೂಡ ಇದೆ. ಹೋಟೆಲ್ನಲ್ಲಿ ‘ಆಲಿಯಾ ಕಪೂರ್” ಎಂದು ಬರೆಯಲಾಗಿದೆ. ಹೀಗಾಗಿ, ಆಲಿಯಾ ಭಟ್ ಅವರು ಅಧಿಕೃತವಾಗಿ ಹೆಸರು ಬದಲಿಸಿಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಆಲಿಯಾ, ಕಪೂರ್ ಕುಟುಂಬದವರನ್ನು ವಿವಾಹ ಆಗಿದ್ದಾರೆ. ಈ ಕಾರಣದಿಂದಲೇ ಆಲಿಯಾ ಕಪೂರ್ ಎಂದು ಹೋಟೆಲ್ನವರು ಬದಲಿಸಿರಬಹುದು ಎಂಬುದು ಕೆಲವರ ಊಹೆ. ಸದ್ಯ ಆಲಿಯಾ ಅವರು ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.

Continue Reading

FILM

‘ಆ ವಿಷಯ ನನಗೆ ನಿಜವಾಗಿಯೂ ತಿಳಿದಿರಲಿಲ್ಲ’: ಬರ್ತ್‌ಡೇ ಪಾರ್ಟಿ ಬಗ್ಗೆ ಮಂಗ್ಲಿ ಸ್ಪಷ್ಟನೆ

Published

on

ಮಂಗಳೂರು/ಹೈದರಾಬಾದ್: ಖ್ಯಾತ ಗಾಯಕಿ ಮಂಗ್ಲಿ ಅವರ ಬರ್ತ್‌ಡೇ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮದ್ಯ ಮತ್ತು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇದರ ಬಗ್ಗೆ ಮಂಗ್ಲಿ ಕೊನೆಗೂ ಸ್ಪಷ್ಟನೆ ಕೊಟ್ಟಿದ್ದಾರೆ.


ಹೈದರಾಬಾದ್‌ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಜೂನ್ 10ರಂದು ಗಾಯಕಿ ಮಂಗ್ಲಿಯ ಬರ್ತಡೇ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಹಲವರು ಭಾಗಿಯಾಗಿದ್ದರು. ಮ್ಯೂಸಿಕ್, ಡ್ರಿಂಕ್ಸ್ ಒಳಗೊಂಡಂತೆ ಬಲು ಜೋರಾಗಿ ಪಾರ್ಟಿಯನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: Watch video: ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್ಸ್‌ ಸೇವನೆ ಪ್ರಕರಣ; ಪೊಲೀಸರಿಗೆ ಗಾಯಕಿ ಅವಾಜ್

ಇದೇ ಸಂದರ್ಭದಲ್ಲಿ ತಡರಾತ್ರಿ ಪೊಲೀಸರು ಮಂಗ್ಲಿ ಅವರ ಪಾರ್ಟಿಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಮಾದಕ ವಸ್ತುಗಳು ಪತ್ತೆಯಾಗಿದೆ. ಇದಲ್ಲದೆ ಸ್ಥಳದಲ್ಲಿ ವಿದೇಶಿ ಮದ್ಯ ಕೂಡ ಪತ್ತೆಯಾಗಿದೆ. ವಿದೇಶಿ ಮದ್ಯವನ್ನು ವಶಕ್ಕೆ ಪಡೆದ ಬಗ್ಗೆ ಪೊಲೀಸರು ಹೇಳಿಕೆ ನೀಡಿದ್ದರು. ಆದರೆ ಈ ಬಗ್ಗೆ ಮಂಗ್ಲಿ ಕೊನೆಗೂ ಸ್ಪಷ್ಟನೆ ಕೊಟ್ಟಿದ್ದಾರೆ.

 

ಈ ಬಗ್ಗೆ ಮಾತನಾಡಿರುವ ಅವರು ‘ಆಲ್ಕೋಹಾಲ್ ನೀಡುವ ವಿಚಾರದಲ್ಲಿ ಒಪ್ಪಿಗೆ ಪಡೆಯಬೇಕು ಎನ್ನುವ ವಿಷಯ ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ನಾನು ಹಾಗೆ ಮಾಡಲಿಲ್ಲ ಎಂಬ ಕೊರಗು ಇದೆ. ಯಾರಾದರೂ ನನಗೆ ಮಾರ್ಗದರ್ಶನ ನೀಡಿದ್ದರೆ, ನಾನು ಹಾಗೆ ಮಾಡುತ್ತಿದ್ದೆ. ಪಾರ್ಟಿಯಲ್ಲಿ ಯಾವುದೇ ವಿದೇಶಿ ಮದ್ಯ ಇರಲಿಲ್ಲ. ಲಭ್ಯವಿದ್ದದ್ದು ಸ್ಥಳೀಯ ಮದ್ಯ ಮಾತ್ರ. ಪೊಲೀಸರು ಸಹ ಇದನ್ನೇ ದೃಢಪಡಿಸಿದ್ದಾರೆ. ಯಾವುದೇ ಮಾದಕ ದ್ರವ್ಯ ಸಿಕ್ಕಿಲ್ಲ ಎಂದು ಕೂಡ ಹೇಳಿದ್ದಾರೆ’ ಎಂದು ಮಂಗ್ಲಿ ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page