Connect with us

LATEST NEWS

ಉಡುಪಿ ಡ್ರಗ್ಸ್ ಜಾಲದ ವಿರುದ್ದ ಸಮರ ಸಾರಿದ ಎಸ್‌ಪಿ ಅಕ್ಷಯ್ : ಮಣಿಪಾಲ್ ಹಾಸ್ಟೆಲ್​ ರೂಂನಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆ..!

Published

on

ಉಡುಪಿ: ಶಿಕ್ಷಣ ಮತ್ತು ವೈದ್ಯಕೀಯ ವಿಚಾರದಲ್ಲಿ ಏಜ್ಯುಕೇಶನ್ ಹಬ್‌ ಜೊತೆಗೆ ದೇಶ ವಿದೇಶದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ್​ ನಲ್ಲಿರುವ ಡ್ರಗ್ ಮಾಫಿಯಾ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಸಮರ ಸಾರಿದೆ.

ದಿಟ್ಟ ಎಸ್‌ಪಿ ಅಕ್ಷಯ್ ಯುವ ಜನತೆ ಅದರಲ್ಲೂ ದೇವರಂತೆನೇ ಜನ ಭಾವಿಸುವ ವೈದ್ಯಕೀಯ ಕಾಲೇಜುಗಳ ಕ್ಯಾಂಪಸ್‌ ಗಳಲ್ಲಿ ಬೇರಿರುವ ಡ್ರಗ್ ಮತ್ತು ಸೆಕ್ಸ್‌ ಜಾಲದ ವಿರುದ್ದ ಮುಲಾಜಿಲ್ಲದೇ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.

ಈ ಸಂಬಂಧ ಈಗಾಗಲೇ ಮಣಿಪಾಲ ವಿವಿ ಪೊಲೀಸ್ ಇಲಾಖೆಯ ಶಿಫಾರಾಸಿನ ಮೇರೆಗೆ 42 ವಿದ್ಯಾರ್ಥಿಗಳಿಗೆ ಅಮಾನತು ಮಾಡಿ ಗೇಟ್ ಪಾಸ್ ನೀಡಿದೆ.

ಇದೇ ಹೊತ್ತಿನಲ್ಲಿ ಹೊರಗಿನಿಂದ ಡ್ರಗ್ಸ್ ಹಾಸ್ಟೆಲ್‌ಗಳಿಗೆ ಬರುತ್ತಿರುವ ಬಗ್ಗೆ ಭಯಾನಕ ಮಾಹಿತಿ ಹೊರ ಬಿದ್ದಿದೆ.

ಬಹುತೇಕ ಹೊರ ರಾಜ್ಯಯಗಳಿಂದ ಬಂದಂತ ವಿದ್ಯಾರ್ಥಿಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿತ್ತಿರುವುದು ಗಮನಕ್ಕೆ ಬಂದಿದೆ

. ಕಳೆದ ಬಾರಿ ಇದೇ ರೀತಿಯ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಮಣಿಪಾಲದ ಪ್ರತಿಷ್ಠಿತ ಮಾಹೆ ವಿದ್ಯಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು.

ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎನ್ನುವ ಇಲಾಖೆಯ ಬೇಡಿಕೆ ಹಿನ್ನಲೆಯಲ್ಲಿ ಇದೇ ರೀತಿ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ 42 ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ಅಮಾನತು ಶಿಕ್ಷೆ ನೀಡಿದೆ.


ಇಲ್ಲಿ ಡ್ರಗ್ ಪೆಡ್ಲಿಂಗ್ ಮಾಡ್ತಾ ಇದ್ದ ಅನೇಕ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಲಾಗಿದೆ. MDMA, LSD, ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ದುರಂತವೆಂದರೆ ಮೆಡಿಕಲ್, ಮ್ಯಾನೇಜ್ಮೆಂಟ್, ಹೋಟೆಲ್ ಮ್ಯಾನೆಜ್‌ಮೆಂಟ್‌, ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪಾರ್ಟ್‌ ಟೈಂ ಜಾಬಾಗಿ ಮಾಡುತ್ತಿದ್ದ ಡೆಲಿವರಿ ಬಾಯ್ ಕೆಲಸವನ್ನು ಉಪಯೋಗಿಸಿ ತಮ್ಮ ತಮ್ಮ ಹಾಸ್ಟೆಲ್​ಗಳಿಗೆ ಡ್ರಗ್ಸ್ ಸಪ್ಲೇ ಮಾಡುತ್ತಿದ್ದರು..!

ಜುಮೋಟೋದಲ್ಲಿ ಊಟ ಆರ್ಡರ್ ಮಾಡಿದ್ರೆ ಊಟದ ಜೊತೆ ಡ್ರಗ್ಸ್ ಕೂಡ ಸಪ್ಲೈ ಆಗುತ್ತಿದೆ. ಈ ಬಗ್ಗೆ ಮಾಹಿತಿ ಬಯಲಾಗಿದ್ದು ಪೊಲೀಸರು ಓರ್ವ ಜುಮೋಟೋ ಡಿಲಿವರಿ ಬಾಯ್​ನನ್ನು ಬಂಧಿಸಿದ್ದಾರೆ

. ರಾತ್ರಿ ವೇಳೆ 11.30 ರ ನಂತರ ಬರುವ ಊಟದ ಪಾಕೇಟ್​ನಲ್ಲಿ ಡ್ರಗ್ಸ್ ತರಿಸಲಾಗುತ್ತಿತ್ತು. ಸ್ಮಾರ್ಟ್ ವಾಚ್ ಪೌಚ್ ಬಾಕ್ಸ್ ಒಳಗೆ LSD ಪೇಪರ್, ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು. ವಾಚ್ ಡಿಸ್ಕ್ರಿಪ್ಷನ್ ಕಟ್ ಮಾಡಿ LSD ನ್ನು ಫಿಕ್ಸ್ ಮಾಡಿ ಕಳುಹಿಸುತ್ತಿದ್ದರು ಪೊಲೀಸ್ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಮಣಿಪಾಲ್ ಹಾಸ್ಟೆಲ್​ ರೂಂಗಳಲ್ಲಿ ಕಾಂಡೋಮ್ ರಾಶಿ..!
ಡ್ರಗ್ ವಿಷಯವಾಗಿ ಹಾಸ್ಟೆಲ್‌ಗಳಿಗೆ ರೈಡ್ ಮಾಡಲು ಹೋದ ಉಡುಪಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

ಮಣಿಪಾಲ್ ಹಾಸ್ಟೆಲ್​ನ ರೂಂಗಳಲ್ಲಿ ರಾಶಿ ರಾಶಿ ಕಾಂಡೋಮ್​ಗಳು ಪತ್ತೆಯಾಗಿವೆ.

ಮತ್ತಿನ ನಶೆಯಲ್ಲಿ ವಿದ್ಯಾರ್ಥಿನಿಯರ ಜೊತೆ ಕಾಮದಾಟ ನಡೆಯುತ್ತಿದ್ದದ್ದು ಬಯಲಾಗಿದೆ. ಯುವಕ-ಯುವತಿಯರು ಒಟ್ಟಿಗೆ ಗಾಂಜಾ ಸೇದುತ್ತಿದ್ದರು.

ಯುವಕರು ತಮ್ಮ ಗರ್ಲ್ ಫ್ರೆಂಡ್ಸ್​ಗಳಿಗೆ ಡ್ರಗ್ಸ್​ ತಂದುಕೊಟ್ಟು ಬಳಿಕ ಸೆಕ್ಸ್ ಗೆ ತಳ್ಳಿ ಅದನ್ನೆ ರೂಢಿಯಾಗಿಸಿಕೊಂಡಿದ್ದರು ಎಂಬ ಭಯಾನಕ ಸತ್ಯ ಬಯಲಾಗಿದೆ.

ಸದ್ಯ ಈ ಡ್ರಗ್ ಮಾಫಿಯಾದ ಬಗ್ಗೆ ಮಾತನಾಡಿರುವ ಎಸ್ಪಿ ಅಕ್ಷಯ್, ಮಣಿಪಾಲದಲ್ಲಿ ಡ್ರಗ್ ಜಾಲ ಸಾಕಷ್ಟು ವ್ಯಾಪಿಸಿದೆ ಆದರೆ. ಡ್ರಗ್ ಮುಕ್ತ ಮಣಿಪಾಲ ಮಾಡಲು ಮಾಹೆ ಯೂನಿವರ್ಸಿಟಿ ಕೂಡ ಸಹಕಾರ ನೀಡಿದ್ದು ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ!

Published

on

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿದ್ದ ಭಕ್ತರ ಮೇಲೆ ದಾಳಿ ಮಾಡಿದ ಚಿರತೆಯನ್ನು ಗುರುವಾರ(ಜ.22) ರಾತ್ರಿ ಅರಣ್ಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆ ನೇತೃತ್ವದಲ್ಲಿ ಡ್ರೋನ್‌ಗಳನ್ನು ಬಳಸಿಕೊಂಡು ನಡೆಸಲಾದ ಕಾರ್ಯಚರಣೆಯಿಂದ ಮಲೆ ಮಹದೇಶ್ವರ ಬೆಟ್ಟ ವನ್ಯ ಜೀವಿ ಅಭಯರಣ್ಯದ ಇಳಿಜಾರು ಪ್ರದೇಶದಲ್ಲಿ ಗುರುವಾರ(ಜ.22) ತಡರಾತ್ರಿ ಚಿರತೆ ಸಿಕ್ಕಿಬಿದ್ದಿದೆ.

ಬುಧವಾರದಂದು 150ಕ್ಕೂ ಹೆಚ್ಚು ಜನ ಮಲೆ ಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನಕ್ಕಾಗಿ ಪಾದಯಾತ್ರೆ ತೆರಳಿದ್ದಾಗ, ಪ್ರವೀಣ್‌ ಸೇರಿ 5 ಮಂದಿ ಬೇರೆಯೇ ತಂಡದಲ್ಲಿದ್ದರು. ಆ ವೇಳೆ ಏಕಾಏಕಿಯಾಗಿ ದಾಳಿ ಮಾಡಿದ ಚಿರತೆ ಪ್ರವೀಣ್‌ ಅವರ ಮೇಲೆ ಮುಗಿಬಿದ್ದು, ಕತ್ತು ಸೀಳಿ ರಕ್ತ ಹೀರಿದ ಬಳಿಕ ಕಾಡಿನೊಳಕ್ಕೆ ಎಳೆದೊಯ್ದಿತ್ತು.

ಇದನ್ನೂ ಓದಿ: ಉಡುಪಿ: ಕೊನೆಗೂ ಬೋನಿಗೆ ಬಿತ್ತು ಆತಂಕ ಸೃಷ್ಟಿಸಿದ್ದ ಚಿರತೆ

ಪ್ರವೀಣ್‌ನ ದುರಂತ ಸಾವಿನ ನಂತರ ಚಿರತೆಯನ್ನು ಸೆರೆಹಿಡಿಯುವ ಕಾರ್ಯಚರಣೆಗೆ ಚಾಮರಾಜನಗರ ಜಿಲ್ಲಾಡಳಿತವು ಅರಣ್ಯ ಮಾರ್ಗಗಳಲ್ಲಿ ಪಾದಯಾತ್ರೆಗಳ ಮೇಲೆ ಕಠಿಣ ನಿಬಂಧನೆಗಳನ್ನು ವಿಧಿಸಿ, ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು.

Continue Reading

DAKSHINA KANNADA

ಬಂಟ್ವಾಳ: ಕಾರು ಡಿ*ಕ್ಕಿ: ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾ*ವು

Published

on

ಬಂಟ್ವಾಳ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಡಂತ್ಯಾರು ಎಂಬಲ್ಲಿ ನಡೆದಿದೆ.


ಕಾವಳಮೂಡೂರು ಕಾರಿಂಜ ಪಾಡಿ ನಿವಾಸಿ ಪದ್ಮನಾಭ ದೇವಾಡಿಗ ( 45) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಪದ್ಮನಾಭ ಅವರು ಉಪ್ಪಿನಂಗಡಿ ಹೋಟೆಲ್ ಒಂದರಲ್ಲಿ ಸಪ್ಲಾಯರ್ ಕೆಲಸ ಮಾಡುತ್ತಿದ್ದು, ಮೂರು ದಿನಕ್ಕೊಮ್ಮೆ ಮನೆಗೆ ಬರುತ್ತಿದ್ದರು ಎನ್ನಲಾಗಿದೆ.

ಜ.23 ರಂದು ರಾತ್ರಿ ಹೋಟೆಲ್ ನಲ್ಲಿ ಕೆಲಸ ಮುಗಿಸಿ ಸುಮಾರು 11.30 ರ ವೇಳೆ ಬರುತ್ತಿದ್ದಾಗ ಪುಂಜಾಲಕಟ್ಟೆ ಹಾಗೂ ಮಡಂತ್ಯಾರು ಮಧ್ಯ ಭಾಗದಲ್ಲಿ ಮಂಗಳೂರು ಏರ್ ಪೋರ್ಟ್ ನಿಂದ ಬರುತ್ತಿದ್ದ ಇಗ್ನಿಸ್ ಕಾರು ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಾರ್ಕಳ: ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾ*ವು

ಮೃತರು ಪತ್ನಿ ಹಾಗೂ ಒಂದು ಗಂಡು ಮತ್ತು ಹೆಣ್ಣು ಮಗಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Continue Reading

LATEST NEWS

ಉತ್ತರಕನ್ನಡ: ಕಾರು ಅಪಘಾತದಿಂದ ಇಬ್ಬರು ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್; ಇದು ಅಪಘಾತವಲ್ಲ ಕೊಲೆ!

Published

on

ಉತ್ತರಕನ್ನಡ: ಹೊನ್ನಾವರದ ಸೂಳೆ ಮುರ್ಕಿ ಕ್ರಾಸ್ ಬಳಿ ಅಪಘಾತದಲ್ಲಿ ಸಿದ್ದಾಪುರ ಮೂಲದ ಮಂಜುನಾಥ ಮತ್ತು ಚಂದ್ರಶೇಖರ್ ಎಂಬ ಮೀನಿನ ವ್ಯಾಪಾರಿಗಳು ಸಜೀವ ದಹನಗೊಂಡಿದ್ದರು. ಆದರೆ, ಈ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಇದು ಅಪಘಾತವಲ್ಲ ಕೊಲೆ ಎಂಬುದು ಸಾಬೀತಾಗಿದೆ.


ಜನವರಿ 7 ರಂದು ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ಬೆಂಕಿಗಾಹುತಿಯಾದ ಕಾರಿನಲ್ಲಿ ಎರಡು ಮೃತ ದೇಹಗಳು ಕಾರಿನೊಂದಿಗೆ ಸುಟ್ಟ ರೀತಿಯಲ್ಲಿ ಪತ್ತೆ ಆಗಿದ್ದವು. ಹೊನ್ನಾವರ ಪೊಲೀಸರು ಆಕಸ್ಮಿಕ ಅಪಘಾತ ಎಂದು ದೂರು ದಾಖಲಿಸಿಕೊಂಡಿದ್ದರು.

ಬಳಿಕ ಮೃತರು ಸಿದ್ದಾಪುರ ಮೂಲದ ಮಂಜುನಾಥ ಮತ್ತು ಚಂದ್ರಶೇಖರ್ ಎಂಬುದು ದೃಢಪಟ್ಟಿತ್ತು. ಅನುಮಾನಗೊಂಡ ಕುಟುಂಬದವರು ಇದು ಆಕಸ್ಮಿಕ ಅಪಘಾತವಲ್ಲ ಕೊಲೆ ಎಂದು ದೂರು ನೀಡಿದ್ದರು.

ತನಿಖೆ ಕೈಗೊಂಡ ಹೊನ್ನಾವರ ಪೊಲೀಸರು ಪ್ರಮೋದ್ ಎಂಬಾತನ ಮೇಲೆ ಅನುಮಾನಗೊಂಡು ಆತನನ್ನು ತನಿಖೆ ನಡೆಸಲು ಹೋದಾಗ ಆತ ಪರಾರಿಯಾಗಿದ್ದ. 14 ದಿನಗಳ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: ಕಾರ್ಕಳ: ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾ*ವು

ಮದ್ಯದಲ್ಲಿ ಕೀಟನಾಶಕ ಸೇರಿಸಿ ಹತ್ಯೆ!
ಮೃತರಾದ ಚಂದ್ರಶೇಖರ ಮತ್ತು ಮಂಜುನಾಥ್ ಇಬ್ಬರು ಪ್ರಮೋದ್‌ ಜತೆಗೆ ಕೆಲಸ ಮಾಡುತಿದ್ದರು. ವ್ಯವಹಾರಕ್ಕಾಗಿ 5 ಲಕ್ಷ ರೂಪಾಯಿ ಹಣ ಸಾಲ ಮಾಡಿದ್ದು ಹಾಗೂ ತಾನೇ ಮಾಡಿಸಿದ ಕೋಟಿ ಇನ್ಶುರೆನ್ಸ್ ಹಣಕ್ಕಾಗಿ ಇಬ್ಬರಿಗೂ ಮದ್ಯದಲ್ಲಿ ಕೀಟನಾಶಕ ಸೇರಿಸಿ ಹತ್ಯೆ ಮಾಡಿ ತನ್ನ ಸ್ನೇಹಿತರ ಸಹಾಯದಿಂದ ಕಾರನ್ನು ಸೂಳೆ ಮುರ್ಕಿ ಕ್ರಾಸ್ ನಲ್ಲಿ ತಳ್ಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಹೇಳಿದ್ದಾನೆ. ಸದ್ಯ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page