Connect with us

LATEST NEWS

ನಾಡಿನಲ್ಲಿ ಕೊರೊನಾ ಅಟ್ಟಹಾಸ- ಸಾವಿಗೆ ಬಂದವರಿಗೆ ತಿಂಡಿ– ನಗುಮೊಗದ ಪ್ರಚಾರ ಫ್ಲೆಕ್ಸ್‌..!!?

Published

on

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮಿತಿಮೀರಿದೆ.ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಅಪಾರ ಸಾವುನೋವುಗಳು ಸಂಭವಿಸುತ್ತಿವೆ.

ಕೊರೊನಾ ಸೋಂಕಿಗೆ ಜನ ಕಂಗಲಾಗಿದ್ದಾರೆ. ಆದರೆ ಕೆಲವರು ಇದನ್ನೆ ಬಂಡವಾಳ ಮಾಡಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

ಬೆಂಗಳೂರು ದೇಶದಲ್ಲೇ ಅಧಿಕ ಸಂಖ್ಯೆಯಲ್ಲಿ ಕೊರೊನಾ ಸೋಂಕಿನಿಂದ ಕಂಗೆಟ್ಟಿದ್ದು ರಾಜ್ಯ ರಾಜಧಾನಿಯಲ್ಲಿ ಸಾವಿನ ಸುನಾಮಿ ಎದ್ದಿದೆ.

ಬೆಂಗಳೂರು ನಗರದ ಹೊರವಲಯದಲ್ಲಿ ಕೋವಿಡ್‌ ಶವಗಳ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಬರುವವರಿಗೆ ಕಾಫಿ, ತಿಂಡಿಯ ವ್ಯವಸ್ಥೆ ಮಾಡಿದ್ದನ್ನು ಪ್ರಚಾರಕ್ಕೆ ಬಳಸಿಕೊಂಡ ಬಿಜೆಪಿ ನಾಯಕರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ಕುರಿತು ಗಿಡ್ಡೇನಹಳ್ಳಿ ಬಳಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ‘ಕೋವಿಡ್‌ನಿಂದ ಸಾವಿಗೀಡಾದವರವನ್ನು ‘ಸಕಲ ಸರ್ಕಾರಿ ಮರ್ಯಾದೆಯೊಂದಿಗೆ’ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಲಾಗಿದೆ.

ಈ ಕಾರ್ಯಕ್ಕೆ ಬಂದವರಿಗೆ ಉಚಿತವಾಗಿ ನೀರು, ಕಾಫಿ, ಟೀ, ತಿಂಡಿ ವ್ಯವಸ್ಥೆ ಮಾಡಲಾಗಿದೆ’ ಎಂದು ಫ್ಲೆಕ್ಸ್‌ನಲ್ಲಿ ಬರೆಯಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಆರ್. ಅಶೋಕ, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನಗುಮೊಗದ ಭಾವಚಿತ್ರವನ್ನು ಹಾಕಲಾಗಿದೆ.

ಈ ಫ್ಲೆಕ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರು ವ್ಯಾಪಕ ಟೀಕೆ ಮಾಡಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಾವಿನ ಸಂದರ್ಭದಲ್ಲಿಯೂ ಇಂತಹ ಪ್ರಚಾರ ಬೇಕಾ? ಹಾಸಿಗೆ ನೀಡದೆ ಜನರನ್ನು ಸಾಯಿಸುವ ಯೋಜನೆಗೆ ಪ್ರಚಾರ ಬೇರೆ ಕೇಡು’ ಎಂದು ಹಲವರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಈ ಫ್ಲೆಕ್ಸ್‌ ಅನ್ನು ತೆರವುಗೊಳಿಸಲಾಯಿತು.

DAKSHINA KANNADA

ಪುತ್ತೂರಿನಲ್ಲಿದೆಯಂತೆ ನಕಲಿ ವೈದ್ಯರ ಹಾವಳಿ; ಪ್ರತಿಭಟನೆಯಲ್ಲಿ ಬಯಲಾಯ್ತು ರಹಸ್ಯ!

Published

on

ಪುತ್ತೂರು : ಪುತ್ತೂರಿನಲ್ಲಿ ಸರ್ಕಾರಿ ವೈದ್ಯಾಧಿಕಾರಿ ಮೇಲೆ ಹ*ಲ್ಲೆಗೆ ಮುಂದಾದ ಪ್ರಕರಣದ ವಿಚಾರದಲ್ಲಿ ವೈದ್ಯರು ಪ್ರತಿಭಟನೆ ನಡೆಸಿದ್ದರು. ಸೂಕ್ತ ಕಾನೂನು ಭರವಸೆ ಬಳಿಕ ವೈದ್ಯರ ಪ್ರತಿಭಟನೆ ಅಂತ್ಯವಾಗಿದೆಯಾದ್ರೂ ಶನಿವಾರ(ಎ.26) ಸಂಜೆ ತನಕ ಗಡುವು ನೀಡಲಾಗಿದೆ. ಆದ್ರೆ, ಈ ನಡುವೆ ಪುತ್ತೂರಿನಲ್ಲಿ ನಕಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಕೂಡ ಬಯಲಿಗೆ ಬಂದಿದೆ.

ಪುತ್ತೂರಿನಲ್ಲಿರುವ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ತಾಲೂಕು ಆರೋಗ್ಯ ಅಧಿಕಾರಿಗೆ ದೂರು ನೀಡಲಾಗಿದೆ ಅಂತ ಸ್ವತಃ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಹೇಳಿದ್ದಾರೆ. ವಿಪರ್ಯಾಸ ಅಂದ್ರೆ, ಈ ವಿಚಾರವಾಗಿ ದೂರು ನೀಡಿ ಎರಡು ವರ್ಷವಾಗಿದ್ರೂ ಕ್ರಮ ಕೈಗೊಂಡಿಲ್ಲ ಎಂಬ ವಿಚಾರವನ್ನೂ ಅವರೇ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಜನಿವಾರ ಪ್ರಕರಣ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ಅತ್ಯಂತ ಅಗತ್ಯದ ವಿಚಾರವಾಗಿದ್ದು, ಇದರ ವಿಚಾರವಾಗಿ ವೈದ್ಯಕೀಯ ಸಂಘ ನೀಡಿದ ದೂರಿಗೆ ಕ್ರಮ ಆಗದೇ ಇದ್ರೂ ಮೌನವಾಗಿರುವುದೇ ಅಚ್ಚರಿಯ ಸಂಗತಿ. ಈ ಬಗ್ಗೆ ಆರೋಗ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

 

 

Continue Reading

LATEST NEWS

ದುರ್ಗಮ ಹಾದಿ ಪಹಲ್ಗಾಮ್‌ನ ಬೈಸರನ್‌ನಲ್ಲಿ ಯೋಧರೇಕೆ ಇರಲಿಲ್ಲ: ಕೇಂದ್ರ ಸ್ಪಷ್ಟನೆ

Published

on

ಮಂಗಳೂರು/ನವದೆಹಲಿ: ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಮುಗ್ದ ಪ್ರವಾಸಿಗರ ಭೀಕರ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಯ ಬೆನ್ನಲ್ಲೇ ಭದ್ರತಾ ವೈಫಲ್ಯದ ಬಗ್ಗೆ ಹಲವಾರು ಭಾರತೀಯರು ಆತಂಕ ವ್ಯಕ್ತಪಡಿಸಿದ್ದರು. ಸರ್ವ ಪಕ್ಷ ಸಭೆಯಲ್ಲಿಯೂ ಭದ್ರತಾ ವೈಫಲ್ಯದ ಬಗ್ಗೆ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದವು.

ದುರ್ಗಮ ಹಾದಿಯಾದ ಪಹಲ್ಗಾಮ್‌ನ ಬೈಸರನ್‌ನಲ್ಲಿ ಯೋಧರೇಕೆ ಇರಲಿಲ್ಲ ಎಂಬ ಪ್ರಶ್ನೆಗೆ ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ ಉತ್ತರಿಸಿದೆ.

ಭದ್ರತಾ ಪಡೆ ನಿಯೋಜನೆಗೂ ಮುನ್ನ ಮಾಹಿತಿ ನೀಡದೇ, ಬೈಸರನ್‌ನಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.

ಸರ್ವಪಕ್ಷ ಸಭೆಯಲ್ಲಿ ಬೈಸರನ್ ಹುಲ್ಲುಗಾವಲಿನಲ್ಲಿ ಭದ್ರತಾ ಪಡೆಗಳ ಅಲಭ್ಯತೆಯ ಬಗ್ಗೆ ಪ್ರಶ್ನೆಯೆದ್ದ ಹಿನ್ನೆಲೆಯಲ್ಲಿ ಉತ್ತರಿಸಿದ ಸರಕಾರ, ‘ಜೂನ್ ತಿಂಗಳಿನಲ್ಲಿ ಪ್ರಾರಂಭವಾಗುವ ವಾರ್ಷಿಕ ಅಮರನಾಥ ಯಾತ್ರೆಗೂ ಮುನ್ನ ಈ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತದೆ ಹಾಗೂ ಇಲ್ಲಿಗೆ ಪ್ರವಾಸಿಗರ ಭೇಟಿಗೂ ಅವಕಾಶ ಕಲ್ಪಿಸಲಾಗುತ್ತದೆ.

ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ ವಿರೋಧಿಸಿ ಪ್ರತಿಭಟನೆ; ಕುತ್ತಿಗೆ ಕತ್ತರಿಸುವುದಾಗಿ ಬೆದರಿಕೆ ಹಾಕಿದ ಪಾಕ್ ಸೇನಾ ಅಧಿಕಾರಿ

ಆದರೆ ಪ್ರವಾಸಿ ಮಾರ್ಗದರ್ಶಿಗಳು ಸ್ಥಳೀಯಾಡಳಿತಗಳ ಗಮನಕ್ಕೆ ತಾರದೇ ಎ.20ರಿಂದಲೇ ಈ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆ ತರಲು ಪ್ರಾರಂಭಿಸಿದ್ದರು. ಈ ವಿಷಯ ಪೊಲೀಸರಿಗಾಗಲೀ, ಸೇನೆಗಾಗಲೀ ಗೊತ್ತಿರಲಿಲ್ಲ. ಅವಧಿಗಿಂತ ಮೊದಲೇ ಪ್ರವಾಸೋದ್ಯಮ ಪ್ರಾರಂಭವಾಗಿದ್ದರಿಂದ ಸೈನಿಕರ ನಿಯೋಜನೆ ಸಾಧ್ಯವಾಗಿರಲಿಲ್ಲ’ ಎಂದು ಸ್ಪಷ್ಟಪಡಿಸಿದೆ.

 

Continue Reading

DAKSHINA KANNADA

ಶೋಷಣೆಯನ್ನು ಎದುರಿಸಿ ನಿಂತ ವಿದ್ಯಾವಂತ ಮಹಿಳೆಯ ಕಥೆ; ‘ಪಿದಾಯಿ’ ಮೇ 9 ಕ್ಕೆ ತೆರೆಗೆ

Published

on

ಮಂಗಳೂರು : ಸಂಪ್ರದಾಯಸ್ತರ ಮನೆಯಲ್ಲಿ ನಡೆಯುವ ಮಹಿಳಾ ಶೋಷಣೆಯ ವಿರುದ್ಧದ ಹೋರಾಟ ಹಾಗೂ ಮಹಿಳೆಯರ ಘನತೆ ಎತ್ತಿಹಿಡಿಯುವ ಸಂದೇಶ ಹೊಂದಿರುವ ತುಳು ಸಿನೆಮಾ ‘ಪಿದಾಯಿ’. ಈಗಾಗಲೇ ಈ ಚಿತ್ರ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿದೆ.  2 ನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದೀಗ ಈ ಚಿತ್ರ ಬೆಳ್ಳಿಪರದೆಯ ಮೇಲೆ ಮೋಡಿ ಮಾಡಲು ಬರುತ್ತಿದ್ದು, ಮೇ 9 ರಂದು ತೆರೆಗೆ ಅಪ್ಪಳಿಸಲಿದೆ.

ಅಂದಹಾಗೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಸಂತೋಷ್ ಮಾಡ. ಜೀಟಿಗೆ ಚಿತ್ರ ನಿರ್ದೇಶಿಸಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಂತೋಷ್ ಮಾಡ ಈ ಬಾರಿ ಮಹಮ್ಮಾಯಿ ಪಾತ್ರಿಯ ಮನೆಯಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರ ಮೇಲಾಗುವ ಶೋಷಣೆಯ ಕುರಿತು ಕಥೆ ಹೇಳಿದ್ದಾರೆ. ನಮ್ಮ ಕನಸು ಬ್ಯಾನರ್ ನಲ್ಲಿ  ಕೆ . ಸುರೇಶ್ ನಿರ್ಮಿಸಿದ್ದಾರೆ.  ಮುಡಿಪು ಹಾಗೂ ಮಂಜೇಶ್ವರ ಪರಿಸರದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ರಮೇಶ್ ಶೆಟ್ಟಿಗಾರ್ ಅವರು ಚಿತ್ರಕತೆ ಬರೆದಿದ್ದು,  ಮಹಾಮಾಹಿ ಪಾತ್ರಿಯಾಗಿ ಖ್ಯಾತ ನಟ ಶರತ್ ಲೋಹಿತಾಶ್ವ ನಟಿಸಿದ್ದಾರೆ.  ಹಲವಾರು ಪ್ರಶಸ್ತಿ ಪಡೆದಿರುವ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಖ್ಯಾತನಾಮರು ಈ ಸಿನೆಮಾದಲ್ಲಿ ಕೆಲಸ ಮಾಡಿದ್ದಾರೆ. ರೂಪಾ ವರ್ಕಾಡಿ, ಇಳಾ ವಿಟ್ಲ, ದೀಪಕ್ ರೈ ಪಾಣಾಜೆ, ದೇವಿ ನಾಯರ್, ಪುಷ್ಪರಾಜ್ ಬೋಳಾರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ ಮೊದಲಾದವರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ : ರನ್ಯಾ ರಾವ್‌ಗೆ ಮತ್ತೆ ಸಂಕಷ್ಟ; ನಟಿ ವಿರುದ್ಧ’ಕಾಫಿಪೋಸಾ’ ಜಾರಿ

ಈ ಸಿನಿಮಾದ ಛಾಯಾಗ್ರಾಹಣ ಹೊಣೆಯನ್ನು ಉಣ್ಣಿ ಮಾಡವೂರ್‌ ಹೊತ್ತಿದ್ದು, ಅಜಯ್ ನಂಬೂದಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page