Connect with us

LATEST NEWS

ಕರಿಂಬಿಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ಪುನಃ ಪ್ರತಿಷ್ಠಾ ಮಹೋತ್ಸವ

Published

on

ಕಾಸರಗೋಡು: ಕಾಸರಗೋಡು ಜಿಲ್ಲೆಯ ಪೆರಡಾಲ ಕರಿಂಬಿಲದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಮೇಷ ಲಗ್ನ ಸುಮುಹೂರ್ತದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪುನಃ ಪ್ರತಿಷ್ಠೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಮಂಗಳವಾರ ಸಂಜೆ ಆಚಾರ್ಯ ವರಣ, ಪ್ರಾರ್ಥನೆ, ವಾಸ್ತು ಪೂಜೆ, ವಾಸ್ತುಬಲಿ, ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ ನಡೆಯಿತು. ಬುಧವಾರದಂದು ಮುಂಜಾನೆ ಗಣಪತಿ ಹವನ, ಬದಿಯಡ್ಕ ಶಬರಿಗಿರಿ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ, ಗೃಹ ಪ್ರವೇಶ ನಡೆಯಿತು.


ಬೆಳಿಗ್ಗೆ 9.50ರಿಂದ 10.50ರ ಮಧ್ಯೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪುನಃ ಪ್ರತಿಷ್ಠಾ ಮಹೋತ್ಸವ ನಡೆಯಿತು. ಬಳಿಕ ಮತ್ತೆ ಭಜನಾ ಕಾರ್ಯಕ್ರಮ ನಡೆದು, ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಗುಳಿಗನ ಕೋಲ ನಡೆಯಿತು. ಊರ, ಪರವೂರ ಭಕ್ತರು ಆಗಮಿಸಿ ಶ್ರೀ ದೇವರ ಗಂಧಮುಡಿ ಪ್ರಸಾದ ಸ್ವೀಕರಿಸಿದರು. ಕರಿಂಬಿಲ ಶ್ರೀ ದುರ್ಗಾಪರಮೇಶ್ವರಿ ಸಮಿತಿ ಅಧ್ಯಕ್ಷ ಕೆ ನಾರಾಯಣ ಕರಿಂಬಿಲ, ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕ್ಷೇತ್ರದ ಹಿರಿಯ ಕೆ ನಾರಾಯಣ ಕರಿಂಬಿಲರಿಗೆ ಸನ್ಮಾನ:

ಕರಿಂಬಿಲ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಅಗಸರ ಯಾನೆ ಮಡಿವಾಳರ ಸಂಘದ ವತಿಯಿಂದ ಹಿರಿಯರಾದ ಕೆ. ನಾರಾಯಣ ಕರಿಂಬಿಲ ಇವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.


ಸಂಘದ ಅಧ್ಯಕ್ಷ ಬಾಬು ನೀರ್ಚಾಲು ಅವರು ಮಾತನಾಡಿ, ಪ್ರತೀ ವರ್ಷ ನಾವು ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ಸಮುದಾಯದ ಹಿರಿಯರೊಬ್ಬರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡುತ್ತಿದ್ದು, ಇದು 10ನೇ ವರ್ಷದ ಸನ್ಮಾನವಾಗಿದೆ. ಪುನಃ ಪ್ರತಿಷ್ಠಾ ಮಹೋತ್ಸವದ ಈ ಪುಣ್ಯ ಸಂದರ್ಭದಲ್ಲಿ ಕೆ ನಾರಾಯಣ ಕರಿಂಬಿಲ ಅವರನ್ನು ಸನ್ಮಾನಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ನುಡಿದರು.


ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸದಾಶಿವ ಪ್ರತಾಪನಗರ, ಜೊತೆ ಕಾರ್ಯದರ್ಶಿ ರಾಮ ಮುರಿಯಂಕೂಡ್ಲು, ಜಿಲ್ಲಾ ಸಮಿತಿ ಸದಸ್ಯರಾದ ಶಿವರಾಮ ಮೆಣಸಿನಪಾರೆ, ನಾರಾಯಣ ಬಂಗೇರ ನೀರ್ಚಾಲು, ಕರಿಂಬಿಲ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ ಪ್ರಮುಖರಾದ ನೇಮಿರಾಜ ಕರಿಂಬಿಲ, ಪುಷ್ಪರಾಜ್, ರಾಧಕೃಷ್ಣ ಕರಿಂಬಿಲಪರಮೇಶ್ವರ ಪೈವಳಿಕೆ, ನವೀನ್‌ ಪೈವಳಿಕೆ, ಪ್ರವೀಣ್‌ ಪೈವಳಿಕೆ, ವಿನೋದ್ ರಾಜ್‌ ಕರಿಂಬಿಲ, ಜೀವನ್ ರಾಜ್‌, ಗಣರಾಜ್‌ ಕರಿಂಬಿಲ ಮೊದಲಾದವರಿದ್ದರು.

LATEST NEWS

ಜೇಕಬ್ ಬೆಥೆಲ್ ಬದಲು ಆರ್‌ಸಿಬಿಗೆ ಸ್ಪೋಟಕ ಬ್ಯಾಟರ್ ಎಂಟ್ರಿ

Published

on

ಮಂಗಳೂರು/ಬೆಂಗಳೂರು: ಐಪಿಎಲ್‌ 2025ರ ಪ್ಲೇ ಆಫ್‌ಗೆ ತೇರ್ಗಡೆ ಆಗಿರುವ ಆರ್‌ಸಿಬಿ ತಂಡಕ್ಕೆ ಸ್ಪೋಟಕ ಆಟಗಾರ ಎಂಟ್ರಿ ಕೊಟ್ಟಿದ್ದಾರೆ.

ಹೌದು, ಆರ್​ಸಿಬಿ ತಂಡದ ಮುಂದಿನ ಪಂದ್ಯಗಳಿಂದ ಯುವ ದಾಂಡಿಗ ಜೇಕಬ್ ಬೆಥೆಲ್ ಹೊರಗುಳಿಯುವುದು ಖಚಿತವಾಗಿದೆ. ಹೀಗಾಗಿ ಬದಲಿ ಆಟಗಾರನಾಗಿ ನ್ಯೂಝಿಲೆಂಡ್‌ನ ವಿಕೆಟ್ ಕೀಪರ್ ಬ್ಯಾಟರ್ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಈ ಬದಲಾವಣೆಯಿಂದ ಆರ್‌ಸಿಬಿ ತಂಡದ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಮೇ 23ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುವ ಆರ್‌ಸಿಬಿಯ ಕೊನೆಯ ಲೀಗ್ ಹಂತದ ಪಂದ್ಯಕ್ಕೆ ಜೇಕಬ್ ಬೆಥೆಲ್ ಲಭ್ಯವಿರುತ್ತಾರೆ. ಆ ಪಂದ್ಯದ ನಂತರ ಅವರು ತಂಡದಿಂದ ಹೊರಡಲಿದ್ದಾರೆ.

ಇಂಗ್ಲೆಂಡ್ ರಾಷ್ಟ್ರೀಯ ತಂಡದ ಜೊತೆ ಸೇರಿಕೊಳ್ಳುವ ಸಲುವಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ ಬದಲಿ ಆಟಗಾರನಾಗಿ ಸೀಫರ್ಟ್ ಅವರನ್ನು ಆಯ್ಕೆ ಮಾಡಲಾಗಿದೆ.

ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಲಿರುವ ಟಿಮ್ ಸೀಫರ್ಟ್, ನ್ಯೂಜಿಲೆಂಡ್ ಪರ 66 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 1,540 ರನ್ ಗಳಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ ಮತ್ತು ವಿಕೆಟ್ ಕೀಪಿಂಗ್ ಸಾಮರ್ಥ್ಯ ತಂಡಕ್ಕೆ ದೊಡ್ಡ ಆಸ್ತಿಯಾಗಲಿದೆ. ಸೈಫರ್ಟ್ ಅವರನ್ನು ಆರ್‌ಸಿಬಿ 2 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಮೇ 24ರಿಂದಲೇ ಅವರ ಸೇರ್ಪಡೆ ಜಾರಿಗೆ ಬರಲಿದೆ.

ಸದ್ಯ ಆರ್​ಸಿಬಿ ತಂಡದ ಭಾಗವಾಗಿರುವ ಟಿಮ್ ಸೈಫರ್ಟ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ 3 ಐಪಿಎಲ್ ಪಂದ್ಯಗಳನ್ನಾಡಿರುವ ಅವರು 26 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಈ ಬಾರಿ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಆರ್‌ಸಿಬಿಯಲ್ಲಿ ಬದಲಿ ಆಟಗಾರನಾಗಿ ಸ್ಥಾನ ಪಡೆಯುವಲ್ಲಿ ಕಿವೀಸ್ ದಾಂಡಿಗ ಯಶಸ್ವಿಯಾಗಿದ್ದಾರೆ.

 

Continue Reading

FILM

‘ಸ್ಪಿರಿಟ್’ ಸಿನಿಮಾದಿಂದ ಹೊರಬಂದ ದೀಪಿಕಾ ಪಡುಕೋಣೆ!

Published

on

ಮಂಗಳೂರು/ಮುಂಬೈ : ನಟಿ ದೀಪಿಕಾ ಪಡುಕೋಣೆ ತಾಯ್ತನದ ಸಂಭ್ರಮದಲ್ಲಿದ್ದಾರೆ. ಈ ನಡುವೆ ಅವರು ಸಿನಿಮಾಗಳಿಗೆ ಮತ್ತೆ ಬಣ್ಣ ಹಚ್ಚುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವ ತಯಾರಿಯಲ್ಲಿದ್ದರು. ಸಿನಿಮಾ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರು.

ಹೌದು, ಅರ್ಜುನ್ ರೆಡ್ಡಿ, ಅನಿಮಲ್ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಿನಿಮಾ ಒಪ್ಪಿಕೊಂಡಿದ್ದರು ದೀಪಿಕಾ. ಈ ಚಿತ್ರಕ್ಕೆ ‘ಸ್ಪಿರಿಟ್’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದರು. ಕಲ್ಕಿ ಚಿತ್ರದ ಬಳಿಕ ಮತ್ತೊಮ್ಮೆ ಪ್ರಭಾಸ್ ಜೊತೆ ದೀಪಿಕಾ ಕಾಣಿಸಿಕೊಳ್ಳಲು ಅಣಿಯಾಗಿದ್ದರು.

ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ ಎಂಬ ವಿಚಾರಕ್ಕಿಂತಲೂ ಸುದ್ದಿಯಾಗಿದ್ದು ಆಕೆಯ ಸಂಭಾವನೆ. ಹೌದು, ನಟರಿಗೆ ಸರಿಸಮಾನವಾಗಿ ನಾಯಕಿಯರು ಸಂಭಾವನೆ ಪಡೆಯುತ್ತಿದ್ದು, ದೀಪಿಕಾ ಕೂಡ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ. ದೀಪಿಕಾ ಸ್ಪಿರಿಟ್ ಚಿತ್ರಕ್ಕೆ 20 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ಚಿತ್ರತಂಡವೂ ಒಪ್ಪಿಕೊಂಡಿತ್ತು ಎನ್ನಲಾಗಿದೆ.

ಇದನ್ನೂ ಓದಿ : ಕಾನ್ ಚಿತ್ರೋತ್ಸವದಲ್ಲಿ ಕಂಗೊಳಿಸಿದ ‘ಸಿಂದೂರ’; ಗಮನ ಸೆಳೆದ ಐಶ್ವರ್ಯಾ ರೈ, ಅದಿತಿ ರಾವ್ ಹೈದರಿ

ಆದ್ರೆ, ಇದೀಗ ನಿರಾಸೆಯುಂಟು ಮಾಡುವ ಸುದ್ದಿ ಬಂದಿದೆ.  ಸದ್ಯ ದೀಪಿಕಾ ಈ ಚಿತ್ರದಿಂದ ಹೊರ ಬಂದಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ, ದೀಪಿಕಾ ಚಿತ್ರತಂಡಕ್ಕೆ ಹಲವು ಷರತ್ತುಗಳನ್ನು ವಿಧಿಸಿದ್ದರಂತೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಸ್ಪಿರಿಟ್‌ನ ಮೂಲ ತೆಲುಗು. ಆದರೆ, ದೀಪಿಕಾ ತೆಲುಗಿನಲ್ಲಿ ಡೈಲಾಗ್ಸ್ ಹೇಳಲ್ಲ ಎಂದಿದ್ದಾರಂತೆ. 8 ಗಂಟೆ ಕೆಲಸ ಮಾಡಿ ನಂತರ ಒಂದು ಸೆಕೆಂಡ್ ಕೂಡ ಅಲ್ಲಿರುವುದಿಲ್ಲ ಎಂದಿದ್ದಾರೆ. ಹೀಗಾಗಿ ಚಿತ್ರತಂಡ ಅವರನ್ನು ಕೈ ಬಿಟ್ಟಿದೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ.

Continue Reading

LATEST NEWS

ಉಡುಪಿ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್

Published

on

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಉಡುಪಿಯಲ್ಲಿ ಬಂಧಿಸಲಾಗಿದೆ.

ಬಿಹಾರ ಮೂಲದ ಬ್ರಹ್ಮದೇವ್ ಯಾದವ್ (37) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ರೈಲ್ವೆ ನಿಲ್ಧಾಣದ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಮುಂದಾಗಿದ್ದನು. ಈ ವೇಳೆ ಸೆನ್ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: UPI Payment: ಇನ್ಮುಂದೆ ತಪ್ಪಾದ ಖಾತೆಗೆ ಹಣ ಪಾವತಿ ಆಗುವುದಿಲ್ಲ

ಈತನಿಂದ 690 ಗ್ರಾಂ ಗಾಂಜಾ, ಮೊಬೈಲ್ ಪೋನ್-1, ನಗದು 680 ರೂಪಾಯಿ ಮತ್ತು ಇತರೇ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page