Connect with us

LATEST NEWS

ಕ್ಯಾನ್ಸರ್ ಇದೆ ಎಂದು ಸುಳ್ಳು ಹೇಳಿ ಬಾಯ್‌ಫ್ರೆಂಡ್‌ನಿಂದ ಹಣ ವಸೂಲಿ; ಆಮೇಲೆ ಏನ್ಮಾಡಿದ್ಲು ಗೊತ್ತಾ ..!?

Published

on

ಪ್ರಿತಿ ಎಂಬುವುದು ಪರಿಶುದ್ಧವಾದ ಭಾವನೆ. ಆದರೆ ಈಗ ಅದನ್ನೇ ಬ್ರಹ್ಮಾಸ್ತ್ರವನ್ನಾಗಿಸಿಟ್ಟುಕೊಂಡು ಪ್ರಿತಿ ಎಂಬ ಹೆಸರಿಗೆಯೇ ಕಲಂಕ ತರುವ ರಿತಿ ಯುವಜನತೆ ಮೋಸ ಮಾಡುತ್ತಾ ಬರುತ್ತಿದೆ. ಪ್ರತಿ ದಿನ ಈ ಕುರಿತು ಒಂದಲ್ಲಾ ಒಂದು ರಿತಿಯ ಘಟನೆಗಳು ನಡೆಯುತ್ತಿರುವುದನ್ನು ನೋಡುತ್ತೇವೆ. ಇದಿಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಚಾಲಾಕಿ ಮಹಿಳೆಯೊಬ್ಬಳು ತನಗೆ ಗರ್ಭಕಂಠ ಕ್ಯಾನ್ಸರ್, ಓವರಿಯನ್ ಕ್ಯಾನ್ಸರ್ ಎಂದು ಹೇಳಿ ಬಾಯ್‌ಫ್ರೆಂಡ್‌ನಿಂದ ಬರೋಬ್ಬರಿ 28 ಲಕ್ಷ ರೂಪಾಯಿ ಪೀಕಿದ್ದಾಳೆ. ಅಷ್ಟು ಹಣ ಪಡೆದ ಮಹಿಳೆ ಮಾಡಿದ ಕೆಲಸ ನೋಡಿ ಎಲ್ಲರಿಗೂ ಶಾಕ್ ಆಗಿದೆ. ಏನದು ಘಟನೆ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಲಂಡನ್ : ಲೌರಾ ಮೆಕ್‌ಫೆರ್ಸನ್ ಎಂಬ 35 ವರ್ಷದ ಮಹಿಳೆಗೆ 12 ವರ್ಷದ ಮಗಳಿದ್ದಾಳೆ. ಆದರೆ ಕಳೆದ ಹಲವು ವರ್ಷಗಳಿಂದ ಜಾನ್ ಲಿಯೋನಾರ್ಡ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು. ಜಾನ್ ಲಿಯಾನಾರ್ಡ್ ಜನಪ್ರಿಯ ಚಾರಿಟೇಬಲ್ ಟ್ರಸ್ಟ್ ಕಂಪನಿ ನಡೆಸುತ್ತಿದ್ದ. ಅಗತ್ಯ ಬಿದ್ದವರಿಗೆ ಆರ್ಥಿಕ ನೆರವು ಸೇರಿದಂತೆ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ತನ್ನ ಮಾದಕತೆಯಿಂದ ಈತನ ಬಲೆಗೆ ಬೀಳಿಸಿದ್ದ ಲೌರಾ, ರಿಲೇಶನ್‌ಶಿಪ್‌ನಲ್ಲಿ ತನ್ನ ತನು ಮನ ಅರ್ಪಿಸಿದ್ದಳು. ಆದರೆ ಧನ ಮಾತ್ರ ಆತನಿಂದ ಪೀಕಿದ್ದ ಘಟನೆ ಲಂಡನ್‌ನಲ್ಲಿ ನಡೆದಿದೆ.

ಲೌರಾ ಮೆಕ್‌ಫೆರ್ಸನ್ ಕ್ಯಾನ್ಸರ್ ಎಂದು ಹೇಳಿ 28 ಲಕ್ಷ ಪಡೆದು, ಆ ಹಣದಿಂದ ತನ್ನ ಸ್ತನ ಗಾತ್ರ ದೊಡ್ಡದು ಮಾಡಿಸಿಕೊಳ್ಳುವ ಸರ್ಜರಿಗೆ ಬಳಸಿಕೊಂಡಿದ್ದಾಳೆ. ಲಂಡನ್‌ನಲ್ಲಿ ರಿಲೇಶನ್‌ಶಿಪ್ ದೊಡ್ಡ ವಿಚಾರವೂ ಅಲ್ಲ. ಹಾಗಾಗಿ ಲೌರ ಹಾಗೂ ಜಾನ್ ರಿಲೇಶನ್‌ಶಿಪ್ ಗೌಪ್ಯವಾಗಿ ಇರಲಿಲ್ಲ. ಆದರೆ ಈ ನಡುವೆ ಲೌರಾ ತನಗೆ ಗರ್ಭಕಂಠ ಕ್ಯಾನ್ಸರ್ ಸೇರಿದಂತೆ ಒಂದೆರೆಡ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದೇನೆ ಎಂದು ಸುಳ್ಳು ಹೇಳಿ ಜಾನ್‌ನಿಂದ ದೂರ ಉಳಿದಿದ್ದಳು. ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ತನ್ನಲ್ಲಿದ್ದ ಎಲ್ಲಾ ಉಳಿತಾಯ ಮುಗಿದಿದೆ. ಇನ್ನು ಚಿಕಿತ್ಸೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಜಾನ್ ಬಳಿ ಹೇಳಿಕೊಂಡಿದ್ದಾಳೆ. ಆದರೆ ಧೈರ್ಯ ತುಂಬಿದ ಜಾನ್, ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದ್ದ.

ಲೌರಾಳೂ ಜಾನ್‌ನಿಂದ ಇದನ್ನೇ ಬಯಸುತ್ತಿದ್ದಳು. ಕ್ಯಾನ್ಸರ್‌ ಚಿಕಿತ್ಸೆಗೆ ಎಂದು ಜಾನ್‌ನಿಂದ ಹಂತ ಹಂತವಾಗಿ ಬರೋಬ್ಬರಿ 28 ಲಕ್ಷ ರೂಪಾಯಿ ಪಡೆದುಕೊಂಡಿದ್ದಾಳೆ. ಮತ್ತೆ ಮತ್ತೆ ಹಣ ಪಡೆಯಲು ಮುಂದಾಗಿದ್ದಾಳೆ. ಗೆಳತಿ ಬೇಗ ಗುಣಮುಖವಾಗಲಿ ಎಂದು ಆಕೆಯ ಹತ್ತಿರದ ಆಸ್ಪತ್ರೆಯಲ್ಲಿ ಕೀಮೋಥೆರಪಿ ಸೇರಿದಂತೆ ಕ್ಯಾನ್ಸರ್ ಚಿಕಿತ್ಸೆಗೆ ಎಲ್ಲವನ್ನೂ ಬುಕ್ ಮಾಡಿದ್ದ. ಆದರೆ ಲೌರಾ ಹಣ ಪಡೆದು ಬಳಿಕ ಆತ ಬುಕ್ ಮಾಡಿದ ಆಸ್ಪತ್ರೆಗೆ ತೆರಳಿ ಸ್ತನ ಗಾತ್ರ ದೊಡ್ಡದು ಮಾಡಲು, ಹೊಟ್ಟೆ ಕರಗಿಸಲು ಸೇರಿದಂತೆ ಇತರ ಬ್ಯೂಟಿ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಇದರ ನಡುವೆ ಬಾಯ್‌ಫ್ರೆಂಡ್ ಕ್ಯಾನ್ಸರ್ ಚಿಕಿತ್ಸೆ ಹೇಗಾಗುತ್ತಿದೆ? ಲೌರಾ ಹೇಗಿದ್ದಾಳೆ? ಎಂದು ತಿಳಿದುಕೊಳ್ಳಲು ಆಸ್ಪತ್ರೆಗೆ ಕರೆ ಮಾಡಿದ್ದಾನೆ. ಈ ವೇಳೆ ‘ಆಕೆ ಕ್ಯಾನ್ಸರ್‌ಗೆ ಯಾವುದೇ ಚಿಕಿತ್ಸೆ ಪಡೆದುಕೊಂಡಿಲ್ಲ, ಕೇವಲ ಸ್ತನ ಸೈಝ್ ಹೆಚ್ಚಿಸಲು ಸರ್ಜರಿ ಮಾಡಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಜಾನ್‌ಗೆ ಸತ್ಯಾಂಶವೆಲ್ಲಾ ತಿಳಿದಿದೆ.

ಲೌರಾ ಮಾಡಿದ ಮೋಸವನ್ನು ತಾಳದ ಜಾನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಪ್ರಕರಣ ತನಿಖೆ ನಡೆಸಿದ ಪೊಲೀಸರು, ವರದಿಯನ್ನು ಕೋರ್ಟ್‌‌ಗೆ ಸಲ್ಲಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಲೌರಾಗೆ ‘ತಪ್ಪಿಕಸ್ಥೆ’ ಎಂದು ವರದಿ ನೀಡಿದೆ. ಇಷ್ಟೇ ಅಲ್ಲ ‘ಲೌರಾ ಮೋಸಗಾರ್ತಿ’ ಎಂದಿದೆ. ‘ಲೌರಾ ತನ್ನ ಬಾಯ್‌‌ಫ್ರೆಂಡ್ ಮಾತ್ರವಲ್ಲ, ಕುಟುಂಬಸ್ಥರು, ಮಗಳು ಸೇರಿದಂತೆ ಹಲವರಿಗೆ ಸುಳ್ಳು ಹೇಳಿ ಭಾವನೆಗಳ ಜೊತೆ ಆಟವಾಾಡಿದ್ದಾಳೆ’ ಎಂದು ಕೋರ್ಟ್ ಹೇಳಿದೆ.

LATEST NEWS

ಶಿಕ್ಷಕರಿಗೆ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನದಿಂದ ವಿನಾಯಿತಿ..!?

Published

on

 ಮಂಗಳೂರು/ಬೆಂಗಳೂರು: ಏಪ್ರಿಲ್ 15 ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಆರಂಭವಾಗಿದೆ.


ಆದ್ರೆ ಏಪ್ರಿಲ್ 18 ರಂದು ಗುಡ್ ಫ್ರೈಡ್ , ಹೋಲಿ ಸ್ಯಾಟರ್‌ಡೆ ಮತ್ತು ಈಸ್ಟರ್ ಸಂಡೆ ದಿನದಂದು ಮೌಲ್ಯಮಾಪನಕ್ಕೆ ವಿನಾಯಿತಿ ಕೋರಿ ಶಿಕ್ಷಕರು ಮನವಿ ಮಾಡಿದ್ದಾರೆ. ಈ ಮನವಿಯನ್ನು ಪುರಸ್ಕರಿಸಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ಮಾಪನ ಮಂಡಳಿ ಕ್ರೈಸ್ತ ಸಮೂದಾಯದ ಶಿಕ್ಷಕರಿಗೆ ಮೌಲ್ಯ ಮಾಪನದಿಂದ ವಿನಾಯಿತಿ ನೀಡಿದೆ.

ಇದನ್ನೂ ಓದಿ: ರೈಲಿನಲ್ಲಿ ಎಟಿಎಮ್; ವಿನೂತನ ಕಾರ್ಯ ಪರಿಚಯಿಸಿದ ಭಾರತೀಯ ರೈಲ್ವೆ..!

ರಾಜ್ಯದ ಎಲ್ಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಪತ್ರ ಬರೆದು ಏ.18 ರಿಂದ 20 ರ ವರೆಗೆ ಅರ್ಹ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದೆ.

Continue Reading

DAKSHINA KANNADA

ಕಾಡು ಹಂದಿ ಮಾಂಸದ ಆಮಿಷವೊಡ್ಡಿ ವಂಚನೆ; ಖದೀಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

Published

on

ಕಡಬ : ಕಾಡು ಹಂದಿಯ ಮಾಂಸ ನೀಡುವುದಾಗಿ ಹಲವಾರು ಸಮಯಗಳಿಂದ ಹಲವರಿಂದ ಹಣ ಪಡೆದು  ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು  ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ  ಒಪ್ಪಿಸಿದ ಘಟನೆ ಮಂಗಳವಾರ(ಎ.15) ಕುಲ್ಕುಂದದಲ್ಲಿ  ನಡೆದಿದೆ.

ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ  ಕಾಡು ಹಂದಿ ಉರುಳಿಗೆ ಬಿದ್ದಿದ್ದು ಮಾಂಸ ಬೇಕಾದರೆ ಹೇಳಿ ಎಂದು ಈತ  ಹೇಳಿದ್ದ. ಮಹಿಳೆಯು ನಿರಾಕರಿಸಿ ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಈ ಸಂದರ್ಭ ಈ ಹಿಂದೆ ಹಣ ನೀಡಿ ಈತನಿಂದಲೇ ಮೋಸ ಹೋದ ವ್ಯಕ್ತಿಯೊಬ್ಬರು ಎದುರುಕೊಂಡಿದ್ದು ಈತನನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಡಬ ತಾಲೂಕಿನ ಮರ್ದಾಳದ ಮಹೇಶ ಬಂಧಿತ ಆರೋಪಿ. ಈತ ಹಲವರಿಗೆ ವಿವಿಧ ರೀತಿಯಲ್ಲಿ  ವಂಚಿಸಿರುವುದು ತಿಳಿದು ಬಂದಿದೆ. ದೂರು ನೀಡಲು ಯಾರು ಮುಂದೆ ಬಾರದ ಕಾರಣ ಆತನನ್ನು ವಿಚಾರಿಸಿ ಪೊಲೀಸರು ಬಿಟ್ಟಿರುವುದಾಗಿ ತಿಳಿದುಬಂದಿದೆ.

ಈತ ಫೆಬ್ರವರಿ ತಿಂಗಳಲ್ಲಿ ಕೆಡ್ಡಸದ ಸಂದರ್ಭ  ಎಡಮಂಗಲದಲ್ಲಿ  ವ್ಯಕ್ತಿಯೊಬ್ಬರು  ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದು , ಹಂದಿ ಮಾಂಸ ಇದೆ. ಬೇಕಾದರೆ ಕೊಡುತ್ತೇನೆ ಎಂದು ಹೇಳಿ ಹಲವರಿಂದ  ಹಣ ಪಡೆದಿದ್ದ. ತನ್ನ ಜೊತೆ  ಹಿರಿಯ ವ್ಯಕ್ತಿಯನ್ನು ಕರೆದೊಯ್ದಿದ್ದ. ಅವರನ್ನು ಪಾಲೋಲಿ ಸೇತುವೆ ಬಳಿ  ಬೈಕ್ ನಿಂದ ಇಳಿಸಿ ಕ್ಷಣ ಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ  ಎಸ್ಕೇಪ್ ಆಗಿದ್ದ.

ಇದನ್ನೂ ಓದಿ : ಗರ್ಭಿಣಿ ಎಂದು ಸುಳ್ಳು ಹೇಳಿದ್ಲು…ಮಗುವಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿ ಜೈಲು ಸೇರಿದ್ಲು!

ವಂಚಿಸಿದ ವ್ಯಕ್ತಿ ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು. ಆ ಸಂದರ್ಭದಲ್ಲಿ ಯಾರೂ ಠಾಣೆಗೆ ದೂರು ನೀಡದ ಕಾರಣ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿದುಬಂದಿದೆ.

 

 

Continue Reading

LATEST NEWS

ಗರ್ಭಿಣಿ ಎಂದು ಸುಳ್ಳು ಹೇಳಿದ್ಲು…ಮಗುವಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿ ಜೈಲು ಸೇರಿದ್ಲು!

Published

on

ಮಂಗಳೂರು/ನವದೆಹಲಿ : ಮದುವೆಯಾಗಿ ಏಳು ವರ್ಷವಾದ್ರೂ ಮಕ್ಕಳಾಗದ ಮಹಿಳೆ ಗಂಡನ ಮನೆಯಲ್ಲಿ ಹೇಳಿದ ಸುಳ್ಳಿನ ಕಾರಣದಿಂದಾಗಿ ಪೊಲೀಸರ ಅತಿಥಿಯಾಗಿದ್ದಾಳೆ. ಈ ಘಟನೆ ನವದೆಹಲಿಯಲ್ಲಿ ನಡೆದಿದ್ದು, ಮಾಲ್ವಿಯಾ ನಗರದ ಪೂಜಾ ಎಂಬಾಕೆ ಬಂಧನಕ್ಕೆ ಒಳಗಾದ ಮಹಿಳೆ.

ಗರ್ಭಿಣಿ ಎಂದು ಸುಳ್ಳು ಹೇಳಿದ್ಲು :

ಪೂಜಾಳಿಗೆ ಮದುವೆಯಾಗಿ ಏಳು ವರ್ಷವಾಗಿದ್ದರೂ ಮಕ್ಕಳಾಗದ ಕಾರಣ ಸಾಕಷ್ಟು ಪರಿತಪಿಸಿದ್ದು, ಕಳೆದ ಒಂಭತ್ತು ತಿಂಗಳ ಹಿಂದೆ ಅತ್ತೆಯಲ್ಲಿ ಅದೊಂದು ಸುಳ್ಳು ಹೇಳಿದ್ದಾಳೆ. ಪೂಜಾ ತಾನು ಗರ್ಭಿಣಿಯಾಗಿರುವುದಾಗಿ ಅತ್ತೆಯಲ್ಲಿ ತಿಳಿಸಿದ್ದು, ವಿಚಾರ ಕೇಳಿ ಮನೆಯವರೆಲ್ಲರೂ ಸಂಭ್ರಮಿಸಿದ್ದಾರೆ. ಪೂಜಾ ಕೂಡ ಒಂಭತ್ತು ತಿಂಗಳಿನಿಂದ ಗರ್ಭಿಣಿಯಂತೆ ನಟಿಸಿದ್ದು, ಪ್ರಸವದ ಸಮಯ ಹತ್ತಿರವಾಗುತ್ತಿದ್ದಂತೆ ಆತಂಕಗೊಂಡಿದ್ದಾಳೆ. ಆದರೆ, ಈ ಆತಂಕ ದೂರ ಮಾಡಲು ಆಕೆ ಸಾಕಷ್ಟು ಪ್ಲ್ಯಾನ್ ಮಾಡಿದ್ದು, ನವದೆಹಲಿಯ ಸಪ್ತರ್ಜಂಗ್ ಆಸ್ಪತ್ರೆಯಿಂದ ಮಗುವಿನ ಕಳ್ಳತನ ಮಾಡಿದ್ದಾಳೆ.

ಎಪ್ರಿಲ್ 14 ರಂದು ಸಪ್ತರ್ಜಂಗ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವನ್ನು ಎಪ್ರಿಲ್ 15 ರಂದು ಅಪಹರಿಸಿದ್ದಾಳೆ.

ಇದನ್ನೂ ಓದಿ : ಮಂಗಳೂರಿನಲ್ಲಿ ನಡೆಯಿತಾ ಸಾಮೂಹಿಕ ಅತ್ಯಾಚಾರ? ಅರೆ ಪ್ರಜ್ಞಾವಸ್ಥೆಯಲ್ಲಿ ಬಿಹಾರದ ಯುವತಿ ಪತ್ತೆ!

ಸಿಸಿಟಿವಿಯಿಂದಾಗಿ ಕೃತ್ಯ ಬಯಲು : 

ಆಸ್ಪತ್ರೆಯಲ್ಲಿ ಮಗು ಕಾಣೆಯಾದ ಬಗ್ಗೆ ಮಗುವಿನ ಪೋಷಕರು ದೂರು ನೀಡಿದ್ದು, ಸಿಸಿಟಿವಿಯ ತಪಾಸಣೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಮುಖವನ್ನು ಮರೆಮಾಚಿದ ಮಹಿಳೆಯೊಬ್ಬಳು ಮಗುವಿನೊಂದಿಗೆ ನಡೆದುಕೊಂಡು ಹೋಗುವುದನ್ನು ಗಮನಿಸಿದ್ದಾರೆ. ಆಕೆಯ ಪ್ರತಿಯೊಂದು ಚಲನವಲನವನ್ನು ಪತ್ತೆ ಮಾಡಿ ಏಮ್ಸ್ ಮೆಟ್ರೋ ನಿಲ್ದಾಣದಿಂದ ಸಮಯಪುರಕ್ಕೆ ಪ್ರಯಾಣಿಸಿ ಪಂಚಶೀಲ ಫ್ಲೈ ಓವರ್ ಕಡೆಗೆ ಹೋಗಿರುವುದನ್ನು ಗಮನಿಸಿದ್ದಾರೆ. ಮಗುವಿನ ಸಹಿತ ಗಂಡನ ಮನೆಗೆ ಹೋಗುತ್ತಿದ್ದ ಪೂಜಾಳನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಈ ವೇಳೆ ತಾನು ಅತ್ತೆಯಲ್ಲಿ ಹೇಳಿದ ಸುಳ್ಳನ್ನು ಸತ್ಯ ಮಾಡಲು ಮಗುವನ್ನು ಕದ್ದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.

Continue Reading
Advertisement

Trending

Copyright © 2025 Namma Kudla News

You cannot copy content of this page