Connect with us

ನಗರ ಪ್ರವೇಶಿಸಿದ್ದ ಕಾಡುಕೋಣ ಸಾವನ್ನಪ್ಪಲು ಕಾರಣವೇನು.? ನಿಜವಾಗ್ಲೂ ನಡೆದಿದ್ದೇನು.?

Published

on

ನಗರ ಪ್ರವೇಶಿಸಿದ್ದ ಕಾಡುಕೋಣ ಸಾವನ್ನಪ್ಪಲು ಕಾರಣವೇನು.? ನಿಜವಾಗ್ಲೂ ನಡೆದಿದ್ದೇನು.?

ಮಂಗಳೂರು: ಕಾಡಿನಿಂದ ನಾಡು ಪ್ರವೇಶಿಸಿದ್ದ ಕಾಡುಕೋಣ ಮಂಗಳೂರು ನಗರದ ಜನತೆಯಲ್ಲಿ ಆತಂಕ ಮೂಡಿಸಿತ್ತು.

ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದರು. ಆದ್ರೆ ಸೆರೆಯಾದ ಕಾಡುಕೋಣ ದಿಢೀರ್ ಸಾವನ್ನಪ್ಪಿದ್ದ ಹಿನ್ನಲೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಕಾಡು ಕೋಣದ ಸಾವಿನ ವಿಚಾರವಾಗಿ ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದ ವೈಜ್ಞಾನಿಕ ಅಧಿಕಾರಿ ವಿಕ್ರಂ ಸ್ಪಷ್ಟನೆ ನೀಡಿದ್ದಾರೆ.

“ಮಂಗಳೂರು ನಗರ ಪ್ರವೇಶಿಸಿದ ಕಾಡುಕೋಣಕ್ಕೆ ಅರೆವಳಿಕೆ ನೀಡಿದ ಪ್ರಮಾಣ ಜಾಸ್ತಿಯಾಗಿ ಸಾವನಪ್ಪಿದೆಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ.

ಈಗಾಗಲೇ ಸೆರೆ ಹಿಡಿದ ಕಾಡು ಕೋಣವು ಬೆಳಗಿನಿಂದ ಓಡಾಡಿ ಕಡೆಗೆ ಸುಸ್ತಾಗಿ ಒಂದು ಕಡೆ ನಿಂತಿದ್ದರಿಂದ ಅರೆವಳಿಕೆ ಮದ್ದು ಕೊಡಲು ಸಾದ್ಯವಾಯಿತು.

ವನ್ಯ ಜೀವಿಗಳಿಗೆ ಅವುಗಳ ಭಾರದ ಲೆಕ್ಕದಲ್ಲಿ ಅರೆವಳಿಕೆ ಮದ್ದನ್ನು ನೀಡಬೇಕಾಗುತ್ತದೆ. ನಿನ್ನೆಯ ಕಾಡುಕೋಣದ ಭಾರ ಸುಮಾರು 600-750 ಕೆ. ಜಿ. ಎಂದು ಅಂದಾಜಿಸಿ ಅದಕ್ಕೆ ತಕ್ಕಂತೆ ಅರೆವಳಿಕೆ ಮದ್ದನ್ನು ಚುಚ್ಚಲಾಗಿದೆ.

ಅರೆವಳಿಕೆ ಮದ್ದು ಹೆಚ್ಚಾಗುವ ಮತ್ತು ಕಡಿಮೆಯಾಗುವ ಪ್ರಮೇಯ ಬರುವುದಿಲ್ಲ. ಕಡಿಮೆಯಾದರೆ ಪ್ರಾಣಿಗೆ ಅರೆವಳಿಕೆ ಆಗುವುದಿಲ್ಲ, ಹೆಚ್ಚಾದರೆ ಅದು ಸಹಜ ಸ್ಥಿತಿಗೆ ಬರಲು ತುಂಬಾ ಸಮಯವಾಗುತ್ತದೆ.

ನಿನ್ನೆಯ ಪರಿಸ್ಥಿತಿ ಬೇರೆಯಾಗಿದ್ದು ಒಂದು ಕಡೆ ಪ್ರಾಣಿಯನ್ನು ರಕ್ಷಿಸುವ ಮತ್ತು ಇನ್ನೊಂದು ಕಡೆ ಜನರ ಪ್ರಾಣ ರಕ್ಷಿಸುವ ಜವಾಬ್ದಾರಿ ಅಧಿಕಾರಿಗಳಿಗಿದ್ದು,

ಒಂದು ವೇಳೆ ಅರೆವಳಿಕೆ ನೀಡದೆ ಇದ್ದ ಪಕ್ಷದಲ್ಲಿ ಪ್ರಾಣಿ ಜನನಿಬಿಡ ಪ್ರದೇಶದಲ್ಲಿ ಓಡಾಡಿದರೆ ಏನಾಗುತ್ತೆಂದು ಊಹಿಸಲು ಕಷ್ಟ?

ಸಾಮಾನ್ಯವಾಗಿ ಮೃಗಾಲಯದಲ್ಲಿ ಪ್ರಾಣಿಗಳಿಗೆ ಅರೆವಳಿಕೆ ಮದ್ದು ಚುಚ್ಚಿದ ನಂತರ ಚಿಕಿತ್ಸೆಗಳನ್ನು ಮುಗಿಸಿ ಅವುಗಳು ಎಚ್ಚರ ಆಗುವರೆಗೆ ಆರೈಕೆ ನೀಡಲಾಗುತ್ತದೆ.

ಸಹಜ ಸ್ಥಿತಿಗೆ ಬಂದ ನಂತರ ಅವುಗಳನ್ನು, ಸುತ್ತು ಬಂದ್ ಇರುವ ವಾಹನದಲ್ಲಿ ಇರಿಸಿ ಸಾಗಿಸಲಾಗುತ್ತದೆ.

ದಾರಿ ಮಧ್ಯೆ ಅವುಗಳ ಮೈಮೇಲೆ ನೀರನ್ನು ಸಿಂಪಡಿಸುತ್ತಾ, ಕುಡಿಯಲು ನೀರು ಕೊಡುತ್ತಾ ರಾತ್ರಿ ಸಮಯದಲ್ಲಿ ಸೂರ್ಯನ ಬಿಸಿಲು ಇಲ್ಲದಾಗ ಸಾಗಿಸುವುದು ರೂಢಿ.

ಹಾಗಾಗಿ ನಗರಕ್ಕೆ ಪ್ರವೇಶಿಸಿದ್ದ ಕಾಡುಕೋಣದ ಪ್ರಕರಣದಲ್ಲಿ ಅಂತಹ ಯಾವುದೇ ಕ್ರಮವನ್ನು ಪಾಲಿಸುವುದು ಕಷ್ಟ ಮತ್ತು ವ್ಯವಸ್ಥೆಯೂ ಇರಲಿಲ್ಲ.

ತುರ್ತಾಗಿ ಎರಡು ಗಂಟೆಗಳ ಲಾರಿ ಪ್ರಯಾಣ ಹಗಲು ಹೊತ್ತೆ ಅಧಿಕಾರಿಗಳಿಗೆ ಅನಿವಾರ್ಯವಾಗಿತ್ತು. ಅರೆವಳಿಕೆ ನೀಡಿದ ನಂತರ ಸಾಗಾಣೆ ಪ್ರಾರಂಭವಾದಾಗ ಉಸಿರಾಟ ಸರಿಯಾಗಿ ನಡೆಯುತ್ತಿತು.

ಕಾಡುಕೋಣವು ಗುಂಪಿನಿಂದ ಬೇರೆಯಾದ ಒತ್ತಡದಯಲ್ಲಿದ್ದು ಮತ್ತು ಒಂಟಿಯಾಗಿ ಬೆದರಿದ್ದು ಮತ್ತು ಓಡೋಡಿ ಸುಸ್ತಾಗಿರುವುದರಿಂದ ಹೃದಯಕ್ಕೆ ಆಮ್ಲಜನಕ ಕಡಿಮೆಯಾಗಿ,

capture myopathy ಯಿಂದ ಜೀವಕ್ಕೆ ಕುತ್ತು ಬಂದಿರಬಹುದು ಎಂದು ಪಿಲಿಕುಳು ಜೈವಿಕ ಉದ್ಯಾನವನದ ಹಿರಿಯ ವೈಜ್ಞಾನಿಕ ಅಧಿಕಾರಿ ವಿಕ್ರಂ ಸ್ಪಷ್ಟನೆ ನೀಡಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

BELTHANGADY

ಕಾಲೇಜು ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ರಾಜ್ಯ ಗೃಹ ಇಲಾಖೆ ವೈಫಲ್ಯ ಕಾರಣ-ಶಾಸಕ ಪೂಂಜಾ

Published

on

ಬೆಳ್ತಂಗಡಿ: ಕೇವಲ ಬೆಳ್ತಂಗಡಿ ಮಾತ್ರವಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಸೋತಿದೆ. ಈ ಘಟನೆ ಸಣ್ಣ ಘಟನೆಯೇನಲ್ಲ. ಇದರಿಂದ ಜನ ಆತಂಕಕ್ಕೊಳಗಾಗಿದ್ದಾರೆ. ಇದರ ಹಿಂದಿರುವವರನ್ನು ಪತ್ತೆ ಹಚ್ಚಿ ಜನರ ಆತಂಕವನ್ನು ನಿವಾರಿಸುವ ಕೆಲಸವನ್ನು ಗೃಹ ಇಲಾಖೆ ಮಾಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.

ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ಪೊಲೀಸ್ ಇಲಾಖೆಯ ನಿಷ್ಟ್ರಿಯತೆಯನ್ನು ಗೃಹ ಇಲಾಖೆ ಸರಿಪಡಿಸದೇ ಇದ್ದಲ್ಲಿ ಇಂತಹ ಕಾನೂನು ಉಲ್ಲಂಘಿತ ದುಷ್ಕೃತ್ಯಗಳು ಹೆಚ್ಚಾಗುತ್ತಲೇ ಹೋಗುತ್ತದೆ.

ಅಶಾಂತಿ ನಿರ್ಮಾಣವಾಗುತ್ತದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಈ ಪ್ರಕರಣದ ಬಗ್ಗೆ ಮಾತನಾಡಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.

Continue Reading

BELTHANGADY

ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿಯ ಕಿಡ್ನ್ಯಾಪ್ ತಪ್ಪಿಸಿ ಬಾಲಕಿಯನ್ನು ರಕ್ಷಿಸಿದ ಅಬ್ಬುಸಾಲಿ !

Published

on

ಬೆಳ್ತಂಗಡಿ: ಸ್ಕೂಟರ್ ನಲ್ಲಿ ಕಾಲೇಜಿಗೆ ಹೋಗುತ್ತಿದ್ದ 16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಇಕೋ ಕಾರಿನಲ್ಲಿ ಬಂದು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು, ಸಿನಿಮೀಯ ಶೈಲಿಯಲ್ಲಿ ಅಪಹರಣಕ್ಕೆ ಯತ್ನಿಸಿದ ಆತಂಕಕಾರಿ ಘಟನೆ ಇಂದು ಬೆಳ್ತಂಗಡಿಯಲ್ಲಿ  ನಡೆದಿದೆ. ಈ ಘಟನೆ ಊರಿನ ಜನತೆಯನ್ನು ತಲ್ಲಣಗೊಳಿಸಿದೆ.

ಆಕೆಯನ್ನು ಕಾರಿಗೆ ತಳ್ಳಿ ಅಪಹರಣ ಮಾಡಲು ಸಾಧ್ಯವಾಗದೇ ಇದ್ದಾಗ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಧರಿಸಿದ್ದರು. ಇದೇ ವೇಳೆ ಅದೇ ದಾರಿಯಾಗಿ ಬರುತ್ತಿದ್ದ ಅಬ್ಬುಸಾಲಿ ಎಂಬವರು ಬಾಲಕಿಯ ಪಾಲಿಗೆ ಆಪತ್ಭಾಂದವರಾಗಿದ್ದಾರೆ.

ಅಬ್ಬುಸಾಲಿಯನ್ನು ಕಂಡ ಮೂವರು ದುಷ್ಕರ್ಮಿಗಳು ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಕೂಡಲೇ ಅಬ್ಬುಸಾಲಿ  ಭಯಭೀತಗೊಂಡಿದ್ದ ಮತ್ತು ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸಮಯ ಪ್ರಜ್ಞೆ ಮೆರೆದ ಅಬ್ಬುಸಾಲಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಬೆಳ್ತಂಗಡಿ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಇದು ಪೂರ್ವನಿಯೋಜಿತ ಕೃತ್ಯವೇ ಅಥವಾ ದರೋಡೆ ಉದ್ದೇಶವಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

 

Continue Reading

kerala

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!

Published

on

ಕಾಸರಗೋಡು: ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ಕಾಸರಗೋಡಿನ ಯುವತಿ ಅಡೂರು ಮೂಲದ ಚಿನ್ನು ಪಾಪು ಎಂಬಾಕೆ ಸಾವನ್ನಪ್ಪಿದ್ದಾರೆ.

ಅವರ ಬಾಡಿಗೆ ಮನೆಯಲ್ಲಿ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page