Connect with us

LATEST NEWS

ಮಂಗಳೂರು ನಗರ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಇಂದಿನಿಂದ ಜು. 30ರವರೆಗೆ ನಿಷೇಧಾಜ್ಞೆ

Published

on

ಮಂಗಳೂರು: ಇಲ್ಲಿನ ನಗರ ಪೊಲೀಸ್ ಆಯುಕ್ತರ ಘಟಕದ ವ್ಯಾಪ್ತಿಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಜು.18 ರಿಂದ 30ರವರೆಗೆ ವಾಣಿಜ್ಯ ಪರೀಕ್ಷೆ ನಡೆಯಲಿರುವ ಕಾರಣ ಪರೀಕ್ಷಾ ಕೇಂದ್ರದ ಸುತ್ತ ಯಾವುದೇ ಅಹಿತಕರ ಘಟನೆ ಮತ್ತು ಸುಲಲಿತ ಪರೀಕ್ಷೆಯನ್ನು ನಡೆಸಲು ಕೇಂದ್ರದ ಸುತ್ತ 200.ಮೀ ಪ್ರದೇಶದಲ್ಲಿ ಕಲಂ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.


ವಿವರ ಇಂತಿದೆ
ನಿಷೇಧಿತ ಪ್ರದೇಶದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಅಭ್ಯರ್ಥಿಗಳನ್ನು ಹೊರತುಪಡಿಸಿ ಸಾರ್ವಜನಿಕರು 5 ಜನರು ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು, ತಿರುಗಾಡುವುದನ್ನು ನಿಷೇಧಿಸಲಾಗಿದೆ.
ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವುದು,

ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು, ಇನ್ನಾವುದೇ ವಸ್ತುಗಳನ್ನು ಹಂಚುವುದು, ರವಾನಿಸುವುದು ಇತ್ಯಾದಿ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಯಾವುದೇ ರೀತಿಯ ಕಾರಕ (ಆಸಿಡ್) ಸ್ಫೋಟಕ ವಸ್ತುಗಳನ್ನು ಕೊಂಡು ಹೋಗುವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ.

ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ತಿಳಿಸುವ ಸಲುವಾಗಿ ಸಂಜ್ಞೆಗಳನ್ನು ಮಾಡುವುದು ಹಾಗೂ ಇನ್ನಿತರ ಕ್ರಿಯೆಗಳಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪರೀಕ್ಷೆ ಪ್ರಾರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಲಾಗಿದೆ.

ಮೊಬೈಲ್ ದೂರವಾಣಿ ಹಾಗೂ ಬ್ಲೂಟೂತ್ ಇತ್ಯಾದಿ ಇಲೆಕ್ಟ್ರಾನಿಕ್ಸ್ ಸಂಪರ್ಕ ಉಪಕರಣಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.

ನಮೂದಿಸಿರುವ ದಿನಾಂಕಗಳಂದು ಹಾಗೂ ಮಂಗಳೂರು ನಗರದಲ್ಲಿ ಪರೀಕ್ಷೆ ನಡೆಯಲಿರುವ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ.

ನಿಷೇಧಾಜ್ಞೆಯು ಜಾರಿಯಲ್ಲಿರುವ ಪ್ರದೇಶದಲ್ಲಿ ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯವಾಗುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LATEST NEWS

ಉಡುಪಿಯಲ್ಲಿ ಬಂದ್‌ಗೆ ಬೆಂಬಲವಿಲ್ಲ; ಜನಜೀವನ ಯಥಾಸ್ಥಿತಿ

Published

on

ಉಡುಪಿ : ಇಂದು (ಮಾ.22) ಕರ್ನಾಟಕ ಬಂದ್ ಎಂದು ಘೋಷಣೆಯಾಗಿದೆ. ಆದರೆ ರಾಜ್ಯದ ಕರಾವಳಿ ಭಾಗವಾದ ಉಡುಪಿಯಲ್ಲಿ ಯಾವುದೇ ರೀತಿಯಿಂದಲೂ ಬಂದ್‌ಗೆ ಬೆಂಬಲ ಇಲ್ಲದ ಕಾರಣ ಎಂದಿನಂತೆ ಯಥಾಸ್ಥಿತಿಯಲ್ಲಿದೆ.

ಉಡುಪಿಯಲ್ಲಿ ಬಂದ್ ಇಲ್ಲ, ಎಂದಿನಂತೆ ಜನಜೀವನ ಓಡಾಟ ಇದೆ. ಖಾಸಗಿ ಬಸ್‌ಗಳು ಎಂದಿನಂತೆ ಇದೆ. ಅಂತೆಯೃ ಸರ್ಕಾರಿ ಬಸ್‌ಗಳು ಸಹ ಪ್ರತಿನಿತ್ಯದಂತೆ ಓಡಾಟ ನಡೆಸುತ್ತಿದೆ. ಆಟೋ ಕ್ಯಾಬ್ ಸಂಚಾರದಲ್ಲೂ ಯಾವುದೇ ಬದಲಾವಣೆಗಳಿಲ್ಲ.

ಉಎಉಪಿಯಲ್ಲಿ ಬಂದ್‌ಗೆ ಬೆಂಬಲವಿಲ್ಲ ಹಾಗೂ ಯಾವುದೇ ಪ್ರತಿಭಟನೆಗಳು ನಡೆಯುವ ಮುನ್ಸೂಚನೆಯೂ ಇಲ್ಲ. ನಗರದಾದ್ಯಂತ ಅಂಗಡಿಗಳು ತೆರೆದಿದ್ದು, ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆಯುತ್ತಿದೆ.

Continue Reading

LATEST NEWS

ಬೆಂಕಿಯಲ್ಲ … ಬಾಹ್ಯಾಕಾಶದಲ್ಲಿ ಅರಳಿದ ಈ ಹೂವಿನ ಬಗ್ಗೆ ನಿಮಗೆಷ್ಟುಗೊತ್ತು ..?

Published

on

ಒಂದು ಕಾಲದಲ್ಲಿ ಅಸಾಧ್ಯವೆಂದು ಭಾವಿಸಿದ್ದ ಕೆಲಸಗಳನ್ನು ಪ್ರಸ್ತುತ ಮಾಡಲು ಸಾಧ್ಯವಾಗುತ್ತಿದೆ. ಅಂದರೆ ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿದೆ ಎಂದರ್ಥ. ಹೀಗಿರುವಾಗ ಜಗತ್ತಿಗೆ ಹೊಸ ಸಂಶೋಧನೆ ಪರಿಚಯಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ನಾಸಾ, ಬಾಹ್ಯಾಕಾಶದಲ್ಲಿ ಹೂ ಅರಳಿದ್ದ ಚಿತ್ರವನ್ನು ಪ್ರಕಟಿಸಿತ್ತು. ಆ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದವು. ನೀವೂ ಒಮ್ಮೆ ನೋಡಿ…

ಈ ಒಂದು ಚಿತ್ರ ಇಡೀ ವಿಶ್ವವನ್ನೇ ಅಚ್ಚರಿಗೆ ನೂಕಿತ್ತು. ಯಾಕೆಂದರೆ, ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಹೂವೊಂದು ಅರಳಿತ್ತು. ಈ ಫೋಟೋ ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಹೂವಿನಾದ ಆರೆಂಜ್ ಜಿನ್ನಿಯಾದ ಕ್ಲೋಸ್‌ಅಪ್‌ ಫೋಟೋ ಆಗಿತ್ತು. ಹೂವಿನ ಹಿನ್ನಲೆಯಲ್ಲಿ ಭೂಮಿಯನ್ನು ಕಾಣಬಹುದಾಗಿತ್ತು. ವಿಜ್ಞಾನಿಗಳು 1970 ರ ದಶಕದಿಂದಲೂ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಅಧ್ಯಯನ ಮಾಡುತ್ತಿದ್ದಾರೆ, ಆದರೆ ಈ ನಿರ್ದಿಷ್ಟ ಪ್ರಯೋಗವನ್ನು 2015 ರಲ್ಲಿ ನಾಸಾ ಗಗನಯಾತ್ರಿ ಕೆಜೆಲ್ ಲಿಂಡ್‌ಗ್ರೆನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಾರಂಭಿಸಿದರು.

ಈ ಹೂವಿನ ಬೆಳವಣಿಗೆಯು VEG-01 ಪ್ರಯೋಗದ ಒಂದು ಭಾಗವಾಗಿದೆ ಎಂದು ನಾಸಾ ತಿಳಿಸಿತ್ತು. ನಾಸಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರವನ್ನು 2016ರಲ್ಲಿ ಪ್ರಕಟ ಮಾಡಿತ್ತು. ಈ ಹೂವು ಬೆಳೆಸಿದ್ದರ ಹಿಂದೆ ಕಾರಣವೂ ಇತ್ತು. ಐಎಸ್‌ಎಸ್‌ನಲ್ಲಿನ ವೆಗ್ಗ-01 ಸೌಲಭ್ಯದ ಕಕ್ಷೆಯ ಮೇಲಿನ ಕಾರ್ಯಾಚರಣೆ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗಿ ಮಾಡಲಾಗಿತ್ತು. ಬಾಹ್ಯಾಕಾಶದಲ್ಲಿ ಮೊಳಕೆ ಬೆಳವಣಿಗೆ ಹೇಗಾಗುತ್ತದೆ, ಜೊತೆಗೆ ಸಸ್ಯಗಳು ಮತ್ತು ಸೌಲಭ್ಯದ ಮೇಲಿನ ಸೂಕ್ಷ್ಮಜೀವಿಯ ಸಸ್ಯವರ್ಗದ ಸಂಯೋಜನೆಯನ್ನು ಕೇಂದ್ರೀಕರಿಸಿತ್ತು. ಜಿನ್ನಿಯಾಗಳನ್ನು 60 ದಿನಗಳವರೆಗೆ ಬೆಳೆಸಲಾಯಿತು ಮತ್ತು ಈ ಅವಧಿಯಲ್ಲಿ ಹಲವು ಹೂವುಗಳು ಅರಳಿದ್ದವು.

“ಈ ಜಿನ್ನಿಯಾವನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ವೆಗ್ಗಿ ಸೌಲಭ್ಯದ ಭಾಗವಾಗಿ ಕಕ್ಷೆಯಲ್ಲಿ ಬೆಳೆಸಲಾಯಿತು” ಎಂದು ನಾಸಾ ತಿಳಿಸಿತ್ತು. “ನಮ್ಮ ಬಾಹ್ಯಾಕಾಶ ಉದ್ಯಾನವು ಕೇವಲ ಪ್ರದರ್ಶನಕ್ಕಾಗಿ ಅಲ್ಲ: ಸಸ್ಯಗಳು ಕಕ್ಷೆಯಲ್ಲಿ ಹೇಗೆ ಬೆಳೆಯುತ್ತವೆ ಎಂಬುದನ್ನು ಕಲಿಯುವುದು ಭೂಮಿಯಿಂದ ಹೊರಗೆ ಬೆಳೆಗಳನ್ನು ಹೇಗೆ ಬೆಳೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ, ಚಂದ್ರ, ಮಂಗಳ ಮತ್ತು ಅದರಾಚೆಗೆ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ತಾಜಾ ಆಹಾರದ ಅಮೂಲ್ಯ ಮೂಲವನ್ನು ಒದಗಿಸುತ್ತದೆ.” ಎಂದು ನಾಸಾ ತಿಳಿಸಿತ್ತು.

Continue Reading

LATEST NEWS

ಪತ್ನಿಗೆ ವಿಡಿಯೋ ಕಾಲ್ ಮಾಡಿ ಖ್ಯಾತ ಪತ್ರಕರ್ತ ಆತ್ಮಹತ್ಯೆ; ಕಾರಣ ನಿಗೂಢ ..!

Published

on

ಮಂಗಳೂರು/ಗದಗ : ನ್ಯೂಸ್‌ಗೆ ಬೇಕಾಗುವ ದೃಶ್ಯಾವಳಿಗಳನ್ನ ಸೆರೆ ಹಿಡಿಯುವಲ್ಲಿ ಪರಿಣತರಾಗಿದ್ದು, ಒಂದೇ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದ ರವಿ ಗಿರಣಿ ನಿನ್ನೆ (ಮಾ.21) ಸಂಜೆ ಸಾವನ್ನಪ್ಪಿದ್ದಾರೆ. ಈ ಸುದ್ಧಿ ಪತ್ರಕರ್ತ ವಲಯಕ್ಕೆ ನೋವುಂಟು ಮಾಡಿದೆ.

ಟಿವಿ9 ಪ್ರಾರಂಭವಾದ ಮೊದಲ ದಿನದಿಂದಲೇ ಹುಬ್ಬಳ್ಳಿ ಕ್ಯಾಮೆರಾಮೆನ್ ಆಗಿ ಸೇರಿಕೊಂಡಿದ್ದರು. ಬಳಿಕ ದಾವಣಗೆರೆ , ಮಂಗಳೂರು ಬಳಿಕ ಪ್ರಸ್ತುತ ಗದಗದಲ್ಲಿ ಕೆಲಸ ಮಾಡಿದ್ದರು. ಮಂಗಳೂರಿನಲ್ಲಿ ಅನೇಕ ವರ್ಷ ಕೆಲಸ ಮಾಡಿರುವ ರವಿ ಗಿರಣಿ ಜಿಲ್ಲೆಯಲ್ಲಿ ಅನೇಖ ಸ್ನೇಹಿತರನ್ನು ಪಡೆದುಕೊಂಡಿದ್ದರು.

ಶುಕ್ರವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹೋಗಿದ್ದ ಅವರು ಪತ್ನಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸಿದ್ದು ಕಾರಣ ಏನು ಎಂದು ತಿಳಿಸಿರಲಿಲ್ಲ. ರವಿ ಅವರ ಪತ್ನಿ ಗಂಗಾವತಿಯಲ್ಲಿ ಶಿಶು ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ತಕ್ಷಣ ಮನೆ ಸಮೀಪದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಜನರು ಬಂದು ನೋಡುವಷ್ಟರಲ್ಲಿಯೇ ರವಿ ಇಹಲೋಕ ತ್ಯಜಿಸಿದ್ದರು.

ರವಿ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page