Connect with us

BANTWAL

ಬಂಟ್ವಾಳದಲ್ಲಿ ಸೂರ್ಯ-ಚಂದ್ರ ಶಿವಲಿಂಗ ಚಿತ್ರದ ಶಿಲಾಶಾಸನ ಪತ್ತೆ

Published

on

ಬಂಟ್ವಾಳ: ಇತಿಹಾಸದ ಮೇಲೆ  ಬೆಳಕು ಚೆಲ್ಲುವ ಅಪೂರ್ವ ಐತಿಹಾಸಿಕ ಶಿಲಾಶಾಸನ ಇಲ್ಲಿನ ಮಾಣಿ ಗ್ರಾಮದ ವೀರಕಂಭ ಸಮೀಪದ  ಶ್ರೀ ಗುಡ್ಡೆ ಚಾಮುಂಡಿ- ಪಂಜುರ್ಲಿ- ಮಲೆಕೊರತಿ ದೈವಗಳ ಚಾವಡಿ ದಾಸಗದ್ದೆಯ ಕಂಬಳದ ಗದ್ದೆಯ ಬದಿಯಲ್ಲಿ ಇರುವಿಕೆಯ ಬಗ್ಗೆ ಮಾಹಿತಿ ಲಭ್ಯ ವಾಗಿದೆ.

ಈ ಶಾಸನದ ಮೇಲ್ಭಾಗದಲ್ಲಿ  ಸೂರ್ಯ ಚಂದ್ರರ ಚಿತ್ರ ನಡುವಿನಲ್ಲಿ ಶಿವಲಿಂಗ ದ ಚಿತ್ರವಿದೆ. ಬರಹಗಳು ತುಂಬಾ ಇದ್ದು  ಅಸ್ಪಷ್ಟವಾಗಿದೆ ಮತ್ತು ಅಪೂರ್ವ ಮಾಹಿತಿಯನ್ನು ಒದಗಿಸುವ ಸಾಧ್ಯತೆ ಇದೆ. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರ ಕಾಲದಲ್ಲಿ ದಾನ ಭೂಮಿಯನ್ನು ಗುರುತಿಸುವ ಕಲ್ಲೇ ಇದು ಅಥವಾ ಬಂಗರಸನ ಕಾಲದಲ್ಲಿ ಪ್ರತೀ ಗ್ರಾಮದ ದೇವರು ಮತ್ತು ದೈವಗಳ ವ್ಯಾಪ್ತಿಯಲ್ಲಿ ಬರುವ ಭೂಮಿಯನ್ನು ಗುರುತಿಸಲ್ಪಡುವ ಉದ್ದೇಶ ದಿಂದ ಸ್ತಾಪಿಸಿದ ಕಲ್ಲು ಇದಾಗಿರಬಹುದೇ ಎಂಬುದು ಸದ್ಯದ ಕುತೂಹಲ.

ನಾಲ್ಕು ಗುತ್ತು ಮೂರು ಗ್ರಾಮದ, ಅರಸು ದೈವ ಶ್ರೀ ಗುಡ್ಡೆ ಚಾಮುಂಡಿ ದೈವ ಈ ಪರಿಸರದಲ್ಲಿ ಗ್ರಾಮ ದೈವವಾಗಿದ್ದು ಸೀಮೆಯ ಅರಸು ದೈವಗಳಿಂದ  ಅರ್ಧ ಸೀಮೆಯ ಭೂ ಭಾಗದ ಅಧಿಕಾರವನ್ನು ಸೆಳೆದುಕೊಂಡ ದೈವ ಎಂಬ ಹೆಗ್ಗಳಿಕೆ ಇದೆ. ಈ ದೈವದ  ಅಧೀನದಲ್ಲಿ  ಮೂರು ಗ್ರಾಮದಲ್ಲಿ 16ಕ್ಕೂ ಹೆಚ್ಚು ಕಂಬಳ  ಗದ್ದೆಗಳು ಒಳಪಡುತ್ತದೆ.

ಈ ದಾಸಗದ್ದೆ ಅಥವಾ ದಾಸಖಂಡ  ಕಂಬಳದ ಗದ್ದೆಯ ಬದಿಯಲ್ಲಿ ದೈವಗಳ ಚಾವಡಿ ಸಮೀಪದಲ್ಲಿ ಈ ಶಿಲಾ ಶಾಸನ ಪತ್ತೆಯಾಗಿರುವುದು ಐತಿಹಾಸಿಕ ವಾಗಿ  ಒಂದು ಮಹತ್ವದ ಸಂಗತಿಯಾಗಿದೆ. ತಜ್ಞ ಇತಿಹಾಸಕಾರರು ಇದನ್ನು ಓದುವ ಪ್ರಯತ್ನ ಮಾಡಿದರೆ ಈ ಶಾಸನ ಕಲ್ಲಿನ ರೋಚಕ ಇತಿಹಾಸ ಬೆಳಕಿಗೆ ಬರಬಹುದು.

BANTWAL

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲಕ್ಷ ಕುಂಕುಮಾರ್ಚನೆ ಸೇವೆ

Published

on

ಬಂಟ್ವಾಳ: ಗಂಜಿಮಠದ ಶ್ರೀ ಮೃತ್ಯುಂಜಯೇಶ್ವರ ಕ್ಷೇತ್ರದ ಪುನರ್ ನಿರ್ಮಾಣದ ಸಲುವಾಗಿ ಸಾವಿರ ಸೀಮೆಯ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲಕ್ಷ ಕುಂಕುಮಾರ್ಚನೆ ಸೇವೆ ನಡೆಯಿತು.

ಶಿವ ಕ್ಷೇತ್ರ ಪುನರ್ ನಿರ್ಮಾಣದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಲಕ್ಷ ಕುಂಕುಮಾರ್ಚನೆ ಮಾಡಲಾಯಿತು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿ.ಪಂ. ಸಿಇಒ ಡಾ. ಆನಂದ್ ವರ್ಗಾವಣೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಜರಗಿದ ಕುಂಕುಮಾರ್ಚನೆಯಲ್ಲಿ ಕ್ಷೇತ್ರದ ಪ್ರದಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ಕೆ.ರಾಮ್ ಭಟ್, ಸಹ ಅರ್ಚಕರಾದ ಪದ್ಮನಾಭ ಭಟ್, ಅನಂತಪದ್ಮನಾಭ ಭಟ್ ಮೊದಲಾದವರಿದ್ದರು.

Continue Reading

BANTWAL

ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Published

on

ಬಂಟ್ವಾಳ: ಪಿಯುಸಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ತುಂಬೆ ಬಳಿ ನಡೆದಿದೆ.

ತುಂಬೆಯ ಪರ್ಲಕ್ಕೆ ನಿವಾಸಿಗಳಾದ ಕರುಣಾಕರ ಗಟ್ಟಿ ಮತ್ತು ಶೋಭಾ ಗಟ್ಟಿ ದಂಪತಿಯ ಏಕೈಕ ಪುತ್ರ 17 ವರ್ಷದ ತೇಜಸ್ ಗಟ್ಟಿ ಮೃತ ವಿದ್ಯಾರ್ಥಿ. ತೇಜಸ್ ಗಟ್ಟಿ ಮೊಡಂಕಾಪು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ನಿನ್ನೆ ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ತೇಜಸ್ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಹಾವೇರಿಯಲ್ಲಿ ಹೃದಯಾಘಾತಕ್ಕೆ ಲಾರಿ ಚಾಲಕ ಬಲಿ

ತಂದೆ ಕರುಣಾಕರ ಎಂದಿನಂತೆ ಮನೆಗೆ ಬಂದಾಗ ಬಾಗಿಲು ತೆರೆದಿದ್ದು, ಒಳಗೆ ನೋಡಿದಾಗ ತೇಜಸ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಶನಿವಾರ ಕಾಲೇಜಿನಲ್ಲಿ ತೇಜಸ್ ಮೊಬೈಲ್ ಬಳಸಿ ಉಪನ್ಯಾಸಕರಿಗೆ ಸಿಕ್ಕಿಬಿದ್ದಿದ್ದನಂತೆ. ಕಾಲೇಜು ಆಡಳಿತದವರು ಮೊಬೈಲ್ ವಶಪಡಿಸಿ ಪೋಷಕರಿಗೆ ವಿಚಾರ ತಿಳಿಸಿದ್ದರಂತೆ.

ಕಾಲೇಜು ಆಡಳಿತವು ಸೋಮವಾರವೂ ಮೊಬೈಲನ್ನು ತೇಜಸ್ ಗೆ ವಾಪಸ್ ನೀಡಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Continue Reading

BANTWAL

ಭಾರೀ ಮಳೆ: ಬಂಟ್ವಾಳ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು (ಜು.4) ರಜೆ ಘೋಷಣೆ

Published

on

ಬಂಟ್ವಾಳ: ತಾಲೂಕಿನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಶುಕ್ರವಾರ (ಜು.4) ರಜೆ ಘೋಷಣೆ ಮಾಡಲಾಗಿದೆ.

ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಕ್ರಿಸ್ಟಿಯಾನೋ ರೋನಾಲ್ಡೋ ಟೀಮ್‌ಮೇಟ್ ಕಾರು ಅಪಘಾತದಲ್ಲಿ ಸಾ*ವು

ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಮಾಡಲಾಗಿದೆ. ಸಾರ್ವಜನಿಕರು ಕೂಡಾ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page