Connect with us

BANTWAL

ಬಂಟ್ವಾಳ: ಒಂಟಿ ವೃದ್ಧೆ ಬಾಯಿಗೆ ಬಟ್ಟೆ ತುರುಕಿ ಚಿನ್ನಾಭರಣ ದರೋಡೆ

Published

on

ಬಂಟ್ವಾಳ: ರಾತ್ರಿ ವೇಳೆ ಒಂಟಿಯಾಗಿ ಮನೆಯಲ್ಲಿದ್ದ ಅಜ್ಜಿಯ ಬಾಯಿಗೆ ಬಟ್ಟೆ ತುರುಕಿ ಜೀವ ಬೆದರಿಕೆ ಹಾಕಿ ಚಿನ್ನ ದರೋಡೆ ಮಾಡಿರುವ ಘಟನೆ ಮಾ.26 ರ ಶನಿವಾರ ರಾತ್ರಿ ವೇಳೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದಲ್ಲಿ ನಡೆದಿದೆ.

ಮಣಿನಾಲ್ಕೂರು ಗ್ರಾಮದ ಟಾಂದಲ್ಕೆ ನಿವಾಸಿ ಸೇಸಪ್ಪ ನಾಯ್ಕ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.

ಅಜ್ಜಿಯ ಕಿವಿಯಲ್ಲಿದ್ದ ಬೆಂಡೋಲೆ ಸಹಿತ ಗೋಡ್ರೆಜ್‌ನಲ್ಲಿ ಇರಿಸಲಾಗಿದ್ದ ಕರಿಮಣಿ ಸರ, ಹಾಗೂ ಉಂಗುರ ಸೇರಿ ಒಟ್ಟು 4.30 ಪವನ್ ಚಿನ್ನವನ್ನು ಕಳ್ಳರು ದರೋಡೆ ಮಾಡಿಕೊಂಡು ಹೋಗಿದ್ದಾರೆ.

ಸೇಸಪ್ಪ ನಾಯ್ಕ್ ಅವರ ಮನೆಯಲ್ಲಿ ತಾಯಿ ಮುತ್ತು ಹಾಗೂ ಪತ್ನಿ ಪ್ರೇಮಾ ಒಟ್ಟು ಮೂರು ಮಂದಿ ಮಾತ್ರ ವಾಸಿಸುತ್ತಿದ್ದರು.

ಶನಿವಾರ ರಾತ್ರಿ ಸುಮಾರು 8.30 ರ ಸುಮಾರಿಗೆ ವೃದ್ಧೆ ತಾಯಿಯನ್ನು ಮನೆಯಲ್ಲಿ ನಿಲ್ಲಿಸಿ ಮನೆಗೆ ಬೀಗ ಹಾಕಿ ಅಲ್ಲಿಯೇ ಹತ್ತಿರದಲ್ಲೇ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವದ ಅಂಗವಾಗಿ ನಾಟಕ ಪ್ರದರ್ಶನ ನೋಡಲು ಹೋಗಿದ್ದರು.

ನಾಟಕ ಮುಗಿಸಿ 2.30 ವೇಳೆ ವಾಪಾಸು ಮನೆಗೆ ಬರುವಾಗ ಮನೆಯ ಬೀಗ ಮುರಿದು ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿ ಇದ್ದು, ಮನೆಯೊಳಗೆ ಹೋಗಿ ತಾಯಿಯನ್ನು ವಿಚಾರಿಸಿದಾಗ ಯಾರೋ ಅಪರಿಚಿತ ವ್ಯಕ್ತಿ ಮನೆಯೊಳಗೆ ಬಂದು ಮಲಗಿದ್ದ ಮುತ್ತು ಅಜ್ಜಿಯ ಬಾಯಿಗೆ ಬಟ್ಟೆ ತುರುಕಿ ಬೊಬ್ಬೆ ಹಾಕಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಚಿನ್ನವನ್ನು ದರೋಡೆ ಮಾಡಿರುವ ಪ್ರಕರಣದ ಬಗ್ಗೆ ತಿಳಿದಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಥೋರಾಟ್, ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಹರೀಶ್, ಅಪರಾಧ ವಿಭಾಗದ ಎಸ್‌ಐ.ಸಂಜೀವ, ಬೆರಳಚ್ಚು ತಜ್ಞರು, ಶ್ವಾನ ದಳದವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದರೋಡೆ ಆರೋಪಿಗಾಗಿ ಶೋಧ ಕಾರ್ಯಮುಂದುವರಿದಿದ್ದು, ಶೀಘ್ರವಾಗಿ ಆರೋಪಿಯ ಬಂಧನ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

BANTWAL

ಬಂಟ್ವಾಳ: ರಸ್ತೆ ಅಗೆದು ಜಲ್ಲಿ ಹಾಕಿ ಹೋದವರು ನಾಪತ್ತೆ; ಅಣ್ಣಳಿಕೆಯಿಂದ ಕೊಯಿಲದವರೆಗಿನ ರಸ್ತೆಗಿಲ್ಲ ಡಾಂಬರ್ ಭಾಗ್ಯ

Published

on

ಬಂಟ್ವಾಳ: ರಸ್ತೆಯನ್ನು ಅಗೆದು ಜಲ್ಲಿ ಹಾಕಿ ಹೋದವರು ಪತ್ತೆಯಿಲ್ಲ, ಡಾಂಬರ್‌ಗಾಗಿ ಕಾದು ಕಾದು ಸುಸ್ತಾದ ರಸ್ತೆಯ ಜಲ್ಲಿಕಲ್ಲುಗಳು ವಾಹನ ಮೇಲೆ ದಾಳಿ ಮಾಡುತ್ತಿದ್ದು, ವಾಹನ ಸವಾರರಿಗೆ ಅಪಾಯದ ಕರೆಗಂಟೆ ಬಾರಿಸಿದೆ.


ಇದು ಬಂಟ್ವಾಳ ಮೂಡಬಿದಿರೆ ರಸ್ತೆಯ ಅಣ್ಣಳಿಕೆಯಿಂದ ಕೊಯಿಲವರೆಗಿನ ಒಂದುಕಾಲು ಕಿ.ಮೀ‌.ರಸ್ತೆಯ ದುರಾವಸ್ಥೆ! ಹೇಳುವವರು ಇಲ್ಲ, ಕೇಳುವರು ಇಲ್ಲ… ಅನ್ನುವ ಸ್ಥಿತಿ ಎದುರಾಗಿದ್ದು, ಕಳೆದ ಒಂದು ವರ್ಷಗಳಿಂದ ಇಲ್ಲಿನ ಜನರು ರಸ್ತೆಯಲ್ಲಿ ಓಡಾಟ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಇದು ಝಿಗ್‌ ಜ್ಯಾಗ್‌ ರಸ್ತೆಯಾಗಿದ್ದು ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಟ ನಡೆಸುತ್ತಿವೆ. ಜನರು ಸಾವಿನ ಭಯದಿಂದ ಸಂಚರಿಸುವಂತಾಗಿದೆ. ಪಿಡಬ್ಲ್ಯೂ ಇಲಾಖೆಗೆ ಸೇರಿದ ರಸ್ತೆ ಇದಾಗಿದ್ದು, ರಸ್ತೆಯ ಡಾಂಬರೀಕರಣಕ್ಕಾಗಿ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಯೂ ಆರಂಭವಾಗಿದೆ ಆದರೆ ಕಾಮಗಾರಿ ಇನ್ನೂ ಮುಗಿಯುತ್ತಿಲ್ಲ.

ಇದನ್ನೂ ಓದಿ: ಸುರತ್ಕಲ್‌: ಒಂಟಿ ವೃದ್ಧೆ ಮನೆಯಲ್ಲಿ ಕಳವು ಪ್ರಕರಣ; ಮೂವರು ಆರೋಪಿಗಳ ಬಂಧನ

ಡಾಂಬರು ಹಾಕಲೆಂದು‌ ರಸ್ತೆಯನ್ನು ಅಗೆದು ತಿಂಗಳುಗಳು ಕಳೆದಿವೆಯಾದರೂ ಇನ್ನೂ ಡಾಂಬರು ಹಾಕಿಲ್ಲ. ಇದ್ದ ರಸ್ತೆಯನ್ನು ಅಗೆದು ಜಲ್ಲಿ ಹಾಕಿ ತಿಂಗಳಾಗುತ್ತಾ ಬಂದಿದ್ದು, ಇನ್ನೂ ಧೂಳು ಮಿಶ್ರಿತ ಜಲ್ಲಿ ಕಲ್ಲು ಮೇಲೆ ಡ್ಯಾನ್ಸ್ ಮಾಡುತ್ತಾ ಕುಂಟುತ್ತಾ, ಉರುಳುತ್ತಾ ಸಾಗಬೇಕಾಗಿರುವ ಸ್ಥಿತಿ ಉಂಟಾಗಿದೆ ಎಂಬ ಆರೋಪ ಇಲ್ಲಿನ‌ ಜನರದ್ದಾಗಿದೆ.

Continue Reading

BANTWAL

ರಾಜ್ಯದ ಕಾನೂನು ವ್ಯವಸ್ಥೆ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆಯ ಮಳೆಗರೆದ ಎಂ.ಎಲ್.ಸಿ ಕಿಶೋರ್ ಕುಮಾರ್

Published

on

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ  ಕಿಶೋರ್ ಕುಮಾರ್ ಪುತ್ತೂರು ರಾಜ್ಯದಲ್ಲಿ ಹೆಚ್ಚುತ್ತಿರುವ ದರೋಡೆ, ಸುಲಿಗೆ, ಮನೆಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ಕುರಿತಾಗಿ ಗೃಹಸಚಿವರನ್ನು ಕಠಿಣವಾಗಿ ಪ್ರಶ್ನಿಸಿದರು.

ಕಳೆದ ಮೂರು ವರ್ಷಗಳ ಅಂಕಿಅಂಶವೇ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದನ್ನು ಸಾಬೀತುಪಡಿಸುತ್ತದೆ. 2023ರಲ್ಲಿ ದಾಖಲಾಗಿದ 45 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ 28 ಸಾವಿರ ಪತ್ತೆಯಾಗಿಲ್ಲ. 2024ರಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ 23 ಸಾವಿರ ಪತ್ತೆಯಾಗಿಲ್ಲ. 2025ರಲ್ಲೇ ಈಗಾಗಲೇ 30 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 8 ಸಾವಿರ ಪ್ರಕರಣ ಪತ್ತೆಯೇ ಆಗಿಲ್ಲ. ಇದು ಜನರನ್ನು ಭಯಕ್ಕೆ ತಳ್ಳುವಂತೆ ಆಗಿದೆ.

ರಾಜ್ಯದಲ್ಲಿ ಕಳೆದ ಎಂಟು ತಿಂಗಳಲ್ಲಿ ಒಬ್ಬ ಎಸಿಪಿ ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಲೋಕಾಯುಕ್ತ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಕುಗ್ಗಿಸಿದೆ ಎಂದು ಉದ್ಧರಿಸಿದರು. “ನಮ್ಮ ರಾಜ್ಯ ‘ಕಳ್ಳಕಾಕರ ರಾಜ್ಯವಾಗುತ್ತಿರುವಂತೆ ಕಂಡುಬರುತ್ತಿದೆ. ಗೃಹಸಚಿವರಿಗೆ ಇಲಾಖೆಯ ಮೇಲಿನ ಹಿಡಿತವಿಲ್ಲ, ಸರ್ಕಾರಕ್ಕೆ ಗೃಹ ಇಲಾಖೆಯ ಮೇಲಿನ ಕಂಟ್ರೋಲ್ ಕಾಣುತ್ತಿಲ್ಲ. ಜನರ ಸುರಕ್ಷತೆಯೇ ಚಿಂತಾಜನಕವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಸಿಸ್ ಉಗ್ರ ಮೊಬೈಲ್ ಬಳಸುವುದರ ಮೂಲಕ ವಾಟ್ಸಪ್ ವೀಡಿಯೋ ಕಾಲ್ ಮಾಡಿದ ಘಟನೆಯನ್ನು ಉಲ್ಲೇಖಿಸಿ, “ಇಂತಹ ಭದ್ರತಾ ವೈಫಲ್ಯಗಳು ರಾಷ್ಟ್ರದ ಮಾನವನ್ನು ಹರಾಜು ಮಾಡುತ್ತಿವೆ. ರಾಜ್ಯದ ಜೈಲು ನಿರ್ವಹಣೆಯಲ್ಲಿಯೇ ಗಂಭೀರ ಲೋಪವಿದೆ ಎಂದು ಗೃಹಸಚಿವರ ಗಮನಕ್ಕೆ ತಂದರು.

ಇದೇ ವೇಳೆ ಪಿಎಸ್‌ಐ ನೇಮಕಾತಿ ಇನ್ನೂ ನಡೆಯದೆ ಇರುವುದನ್ನು ಪ್ರಶ್ನಿಸಿದ ಶಾಸಕರು, ಯುವಕರ ಭವಿಷ್ಯವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಸಚಿವರ ಉಡಾಫೆ ಉತ್ತರಕ್ಕೆ ಆಕದಷೇಪವನ್ನು ವ್ಯಕ್ತಪಡಿಸಿದರು.

ರಾಜ್ಯದ ಹೊರರಾಜ್ಯ ಗಡಿಗಳು ಕಳ್ಳತನಕ್ಕೆ ಪ್ರಮುಖ ಮಾರ್ಗವಾಗಿರುವುದರಿಂದ, ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆಯ ಸಿಸಿಟಿವಿ, ನಿಗಾವ್ಯವಸ್ಥೆ ಮತ್ತು ಕಣ್ಗಾವಲುಗಳನ್ನು ಬಲಪಡಿಸಲು ಶಾಸಕರು ಸರ್ಕಾರವನ್ನು ಒತ್ತಾಯಿಸಿದರು.

ಕೆಲವು ಪ್ರಾಮಾಣಿಕ ಅಧಿಕಾರಿಗಳ ಸೇವೆಯನ್ನು ಮೆಚ್ಚಿಕೊಂಡ ಶಾಸಕರು, ದ.ಕ. ಎಸ್‌ಪಿ  ಡಾ. ಅರುಣ್ ಶಂಕರ್, ಹಿಂದಿನ ದ.ಕ. ಎಸ್‌ಪಿ ಯತೀಶ್, ಮಂಗಳೂರು ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ಅವರ ಶಿಸ್ತಿನ ಕಾರ್ಯನೈಪುಣ್ಯವನ್ನು ಶ್ಲಾಘಿಸಿದರು. ರಾಜ್ಯದಲ್ಲಿ ಇದೇ ರೀತಿಯ ಪ್ರಾಮಾಣಿಕ ಮತ್ತು ಪರಿಣಾಮಕಾರಿ ಅಧಿಕಾರಿಗಳು ಇನ್ನಷ್ಟು ಬೇಕು ಎಂದು ಹೇಳಿದರು.

 

 

Continue Reading

BANTWAL

ಇದನ್ನು ತಿನ್ನುವ ಮೊದಲು ಯೋಚಿಸಿ..! ಬಂಟ್ವಾಳದಲ್ಲಿ ಚಿಕನ್ ಶವರ್ಮದ ಮೆಶಿನ್ ಗೆ ಬಾಯಿ ಹಾಕಿದ ಬೌಬೌ..!

Published

on

ಬಂಟ್ವಾಳ:  ಚಿಕನ್ ಶವರ್ಮಪ್ರಿಯರೇ ಎಚ್ಚರ! ಎಚ್ಚರ! ಸರಿಯಾಗಿ ನೋಡಿಕೊಂಡು ತಿಂದರೆ ನೀವು ಸೇಫ್…ನಿಮ್ಮ ಹೊಟ್ಟೆಯೂ ಸೇಫ್…  ಇಲ್ಲಾಂದ್ರೆ ಚಿಕನ್ ಶವರ್ಮ ವನ್ನು ಬೌಬೌ ನ ಎಂಜಲು ಆಗಿ ಕೂಡಾ ತಿನ್ನುಬೇಕಾದ ಸ್ಥಿತಿಯೂ ಬಂದರೆ ಅಚ್ಚರಿಯೇನಿಲ್ಲ….

ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಡೆಗೋಳಿ ಎಂಬಲ್ಲಿರುವ ಪಾಸ್ಟ್ ಪುಡ್ ಅಂಗಡಿಯೊಂದರ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.  ಅರ್ಬನ್ ಬೈಟ್ಸ್  ಎಂಬ ಪಾಸ್ಟ್ ಪುಂಡ್ ಅಂಗಡಿಯಲ್ಲಿ ಚಿಕನ್ ಶವರ್ಮ ವ್ಯಾಪಾರ ನಡೆಯುತ್ತಿದೆ.

ಶವರ್ಮ ತಯಾರಿಸುವ ಮೆಷಿನ್ ಒಳಗಿನಿಂದ ಚಿಕನ್ ಪೀಸ್ ಗಳನ್ನು ನಾಯಿಯೊಂದು ಎಳೆದು ತಿನ್ನುವ ದೃಶ್ಯ ಸಾಮಾಜಿಕ ಜಾಲತಾಣದ ಮೂಲಕ ಪುಲ್ ವೈರಲ್ ಆಗುತ್ತಿದೆ. ಅಂಗಡಿಯಲ್ಲಿ ಯಾರೂ ಇಲ್ಲದಿರುವ ವೇಳೆ ನಾಯಿ ಶವರ್ಮ ತಯಾರಿಸುವ ಮೆಷಿನ್ ನಿಂದ ಚಿಕನ್ ಪೀಸ್‌ ಎಳೆದು ತಿಂದು ಮತ್ತೆ ವಾಪಸ್‌ ಚಿಕನ್ ಗಾಗಿ ಹೋಗುವ ದೃಶ್ಯದ ವಿಡಿಯೋ ಒಂದನ್ನು ಯಾರೋ ಮೊಬೈಲ್ ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.

ಎರಡೆರಡು ಬಾರಿ ನಾಯಿ ಅಂಗಡಿಯೊಳಗಿನಿಂದ ಚಿಕನ್ ಕದ್ದು ತಿಂದರೂ ಅಂಗಡಿ ಮಾಲಕರಿಗೆ ಗೊತ್ತೇ ಅಗಲಿಲ್ಲ. ನೂರಾರು ಮಂದಿ ಹೊಟೇಲ್ ಆಹಾರ ನಂಬಿ ಬದುಕುವ ಕಾಲಘಟ್ಟದಲ್ಲಿ ಇಂತಹ ಬೇಜಾಬ್ದಾರಿತನದ ಬಗ್ಗೆ ಹಾಗೂ ಅಂಗಡಿಯವರ ಸ್ಚಚ್ಚತೆ ಬಗೆಗಿನ ಕಾಳಜಿಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page