Connect with us

LATEST NEWS

ಕಮ್ಯುನಿಸ್ಟ್ ನಾಯಕನ ಪ್ರತಿಮೆ ತೆರವು; ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ..!?

Published

on

ಮಂಗಳೂರು/ತ್ರಿಪುರ : ಕಮ್ಯುನಿಸ್ಟ್ ನಾಯಕ, ತ್ರಿಪುರದ ಮಾಜಿ ಉಪಮುಖ್ಯಮಂತ್ರಿ ಬೈದ್ಯನಾಥ್ ಮಜುಂದಾರಿನ್ ಅವರ ಪ್ರತಿಮೆಯನ್ನು ತೆರವು ಮಾಡಿ ಅಲ್ಲಿ ರಾಮನ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ರಾತೋರಾತ್ರಿ ಯಾರೋ ಈ ಕೃತ್ಯ ಎಸಗಿದ್ದು, ಇದೀಗ ಸಿಪಿಐಎಂ ಇದರ ವಿರುದ್ಧ ಪ್ರತಿಭಟನೆಗೆ ಇಳಿದಿದೆ.


ತ್ರಿಪುರ ಒಂದು ಕಾಲದಲ್ಲಿ ಕಮ್ಯುನಿಸ್ಟ್ ಪ್ರಾಬಲ್ಯದ ರಾಜ್ಯವಾಗಿದ್ದು, 2018ರ ಬಳಿಕ ಬಿಜೆಪಿ ಇಲ್ಲಿ ಅಧಿಕಾರ ಹಿಡಿದಿತ್ತು. ಈಗಲೂ ಇಲ್ಲಿ ಕಮ್ಯುನಿಸ್ಟರ ಪ್ರಾಬಲ್ಯವಿದ್ದು, ಹಲವಾರು ಕಡೆಗಳಲ್ಲಿ ಕಮ್ಯುನಿಸ್ಟ್ ನಾಯಕರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ.

ಆದ್ರೆ ಉನಕ್ಕೋಟಿ ಜಿಲ್ಲೆಯ ಕೈಲಾಶಹರ್ ಪಟ್ಟಣದಲ್ಲಿ ಜಂಕ್ಷನ್ ಒಂದರಲ್ಲಿ ನಿರ್ಮಿಸಲಾಗಿದ್ದ ಕಮ್ಯುನಿಸ್ಟ್ ನಾಯಕ ಬೈದ್ಯನಾಥ್ ಮುಜಂದಾರಿನ್ ಅವರ ಮೂರ್ತಿಯನ್ನು ತೆರವು ಮಾಡಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು ಈ ಘಟನೆಯನ್ನು ಖಂಡಿಸಿ ಕಮ್ಯುನಿಸ್ಟರ್ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ವಿಷುಕಣಿಯಲ್ಲಿ ಕೃಷ್ಣನಿಗೆ ಮುತ್ತಿಟ್ಟ ಮುಸ್ಲಿಂ ಯುವತಿ ; ಪೊಲೀಸರಿಂದ ಕೇಸು ದಾಖಲು..!

ಈ ಹಿಂದೆ ಇದ್ದ ನಮ್ಮ ನಾಯಕ ಪ್ರತಿಮೆಯನ್ನು ಮರು ಸ್ಥಾಪಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

 

LATEST NEWS

ಶಿಕ್ಷಕರಿಗೆ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನದಿಂದ ವಿನಾಯಿತಿ..!?

Published

on

 ಮಂಗಳೂರು/ಬೆಂಗಳೂರು: ಏಪ್ರಿಲ್ 15 ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಆರಂಭವಾಗಿದೆ.


ಆದ್ರೆ ಏಪ್ರಿಲ್ 18 ರಂದು ಗುಡ್ ಫ್ರೈಡ್ , ಹೋಲಿ ಸ್ಯಾಟರ್‌ಡೆ ಮತ್ತು ಈಸ್ಟರ್ ಸಂಡೆ ದಿನದಂದು ಮೌಲ್ಯಮಾಪನಕ್ಕೆ ವಿನಾಯಿತಿ ಕೋರಿ ಶಿಕ್ಷಕರು ಮನವಿ ಮಾಡಿದ್ದಾರೆ. ಈ ಮನವಿಯನ್ನು ಪುರಸ್ಕರಿಸಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ಮಾಪನ ಮಂಡಳಿ ಕ್ರೈಸ್ತ ಸಮೂದಾಯದ ಶಿಕ್ಷಕರಿಗೆ ಮೌಲ್ಯ ಮಾಪನದಿಂದ ವಿನಾಯಿತಿ ನೀಡಿದೆ.

ಇದನ್ನೂ ಓದಿ: ರೈಲಿನಲ್ಲಿ ಎಟಿಎಮ್; ವಿನೂತನ ಕಾರ್ಯ ಪರಿಚಯಿಸಿದ ಭಾರತೀಯ ರೈಲ್ವೆ..!

ರಾಜ್ಯದ ಎಲ್ಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಪತ್ರ ಬರೆದು ಏ.18 ರಿಂದ 20 ರ ವರೆಗೆ ಅರ್ಹ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದೆ.

Continue Reading

DAKSHINA KANNADA

ಕಾಡು ಹಂದಿ ಮಾಂಸದ ಆಮಿಷವೊಡ್ಡಿ ವಂಚನೆ; ಖದೀಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

Published

on

ಕಡಬ : ಕಾಡು ಹಂದಿಯ ಮಾಂಸ ನೀಡುವುದಾಗಿ ಹಲವಾರು ಸಮಯಗಳಿಂದ ಹಲವರಿಂದ ಹಣ ಪಡೆದು  ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು  ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ  ಒಪ್ಪಿಸಿದ ಘಟನೆ ಮಂಗಳವಾರ(ಎ.15) ಕುಲ್ಕುಂದದಲ್ಲಿ  ನಡೆದಿದೆ.

ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ  ಕಾಡು ಹಂದಿ ಉರುಳಿಗೆ ಬಿದ್ದಿದ್ದು ಮಾಂಸ ಬೇಕಾದರೆ ಹೇಳಿ ಎಂದು ಈತ  ಹೇಳಿದ್ದ. ಮಹಿಳೆಯು ನಿರಾಕರಿಸಿ ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಈ ಸಂದರ್ಭ ಈ ಹಿಂದೆ ಹಣ ನೀಡಿ ಈತನಿಂದಲೇ ಮೋಸ ಹೋದ ವ್ಯಕ್ತಿಯೊಬ್ಬರು ಎದುರುಕೊಂಡಿದ್ದು ಈತನನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಡಬ ತಾಲೂಕಿನ ಮರ್ದಾಳದ ಮಹೇಶ ಬಂಧಿತ ಆರೋಪಿ. ಈತ ಹಲವರಿಗೆ ವಿವಿಧ ರೀತಿಯಲ್ಲಿ  ವಂಚಿಸಿರುವುದು ತಿಳಿದು ಬಂದಿದೆ. ದೂರು ನೀಡಲು ಯಾರು ಮುಂದೆ ಬಾರದ ಕಾರಣ ಆತನನ್ನು ವಿಚಾರಿಸಿ ಪೊಲೀಸರು ಬಿಟ್ಟಿರುವುದಾಗಿ ತಿಳಿದುಬಂದಿದೆ.

ಈತ ಫೆಬ್ರವರಿ ತಿಂಗಳಲ್ಲಿ ಕೆಡ್ಡಸದ ಸಂದರ್ಭ  ಎಡಮಂಗಲದಲ್ಲಿ  ವ್ಯಕ್ತಿಯೊಬ್ಬರು  ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದು , ಹಂದಿ ಮಾಂಸ ಇದೆ. ಬೇಕಾದರೆ ಕೊಡುತ್ತೇನೆ ಎಂದು ಹೇಳಿ ಹಲವರಿಂದ  ಹಣ ಪಡೆದಿದ್ದ. ತನ್ನ ಜೊತೆ  ಹಿರಿಯ ವ್ಯಕ್ತಿಯನ್ನು ಕರೆದೊಯ್ದಿದ್ದ. ಅವರನ್ನು ಪಾಲೋಲಿ ಸೇತುವೆ ಬಳಿ  ಬೈಕ್ ನಿಂದ ಇಳಿಸಿ ಕ್ಷಣ ಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ  ಎಸ್ಕೇಪ್ ಆಗಿದ್ದ.

ಇದನ್ನೂ ಓದಿ : ಗರ್ಭಿಣಿ ಎಂದು ಸುಳ್ಳು ಹೇಳಿದ್ಲು…ಮಗುವಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿ ಜೈಲು ಸೇರಿದ್ಲು!

ವಂಚಿಸಿದ ವ್ಯಕ್ತಿ ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು. ಆ ಸಂದರ್ಭದಲ್ಲಿ ಯಾರೂ ಠಾಣೆಗೆ ದೂರು ನೀಡದ ಕಾರಣ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿದುಬಂದಿದೆ.

 

 

Continue Reading

LATEST NEWS

ಗರ್ಭಿಣಿ ಎಂದು ಸುಳ್ಳು ಹೇಳಿದ್ಲು…ಮಗುವಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿ ಜೈಲು ಸೇರಿದ್ಲು!

Published

on

ಮಂಗಳೂರು/ನವದೆಹಲಿ : ಮದುವೆಯಾಗಿ ಏಳು ವರ್ಷವಾದ್ರೂ ಮಕ್ಕಳಾಗದ ಮಹಿಳೆ ಗಂಡನ ಮನೆಯಲ್ಲಿ ಹೇಳಿದ ಸುಳ್ಳಿನ ಕಾರಣದಿಂದಾಗಿ ಪೊಲೀಸರ ಅತಿಥಿಯಾಗಿದ್ದಾಳೆ. ಈ ಘಟನೆ ನವದೆಹಲಿಯಲ್ಲಿ ನಡೆದಿದ್ದು, ಮಾಲ್ವಿಯಾ ನಗರದ ಪೂಜಾ ಎಂಬಾಕೆ ಬಂಧನಕ್ಕೆ ಒಳಗಾದ ಮಹಿಳೆ.

ಗರ್ಭಿಣಿ ಎಂದು ಸುಳ್ಳು ಹೇಳಿದ್ಲು :

ಪೂಜಾಳಿಗೆ ಮದುವೆಯಾಗಿ ಏಳು ವರ್ಷವಾಗಿದ್ದರೂ ಮಕ್ಕಳಾಗದ ಕಾರಣ ಸಾಕಷ್ಟು ಪರಿತಪಿಸಿದ್ದು, ಕಳೆದ ಒಂಭತ್ತು ತಿಂಗಳ ಹಿಂದೆ ಅತ್ತೆಯಲ್ಲಿ ಅದೊಂದು ಸುಳ್ಳು ಹೇಳಿದ್ದಾಳೆ. ಪೂಜಾ ತಾನು ಗರ್ಭಿಣಿಯಾಗಿರುವುದಾಗಿ ಅತ್ತೆಯಲ್ಲಿ ತಿಳಿಸಿದ್ದು, ವಿಚಾರ ಕೇಳಿ ಮನೆಯವರೆಲ್ಲರೂ ಸಂಭ್ರಮಿಸಿದ್ದಾರೆ. ಪೂಜಾ ಕೂಡ ಒಂಭತ್ತು ತಿಂಗಳಿನಿಂದ ಗರ್ಭಿಣಿಯಂತೆ ನಟಿಸಿದ್ದು, ಪ್ರಸವದ ಸಮಯ ಹತ್ತಿರವಾಗುತ್ತಿದ್ದಂತೆ ಆತಂಕಗೊಂಡಿದ್ದಾಳೆ. ಆದರೆ, ಈ ಆತಂಕ ದೂರ ಮಾಡಲು ಆಕೆ ಸಾಕಷ್ಟು ಪ್ಲ್ಯಾನ್ ಮಾಡಿದ್ದು, ನವದೆಹಲಿಯ ಸಪ್ತರ್ಜಂಗ್ ಆಸ್ಪತ್ರೆಯಿಂದ ಮಗುವಿನ ಕಳ್ಳತನ ಮಾಡಿದ್ದಾಳೆ.

ಎಪ್ರಿಲ್ 14 ರಂದು ಸಪ್ತರ್ಜಂಗ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವನ್ನು ಎಪ್ರಿಲ್ 15 ರಂದು ಅಪಹರಿಸಿದ್ದಾಳೆ.

ಇದನ್ನೂ ಓದಿ : ಮಂಗಳೂರಿನಲ್ಲಿ ನಡೆಯಿತಾ ಸಾಮೂಹಿಕ ಅತ್ಯಾಚಾರ? ಅರೆ ಪ್ರಜ್ಞಾವಸ್ಥೆಯಲ್ಲಿ ಬಿಹಾರದ ಯುವತಿ ಪತ್ತೆ!

ಸಿಸಿಟಿವಿಯಿಂದಾಗಿ ಕೃತ್ಯ ಬಯಲು : 

ಆಸ್ಪತ್ರೆಯಲ್ಲಿ ಮಗು ಕಾಣೆಯಾದ ಬಗ್ಗೆ ಮಗುವಿನ ಪೋಷಕರು ದೂರು ನೀಡಿದ್ದು, ಸಿಸಿಟಿವಿಯ ತಪಾಸಣೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಮುಖವನ್ನು ಮರೆಮಾಚಿದ ಮಹಿಳೆಯೊಬ್ಬಳು ಮಗುವಿನೊಂದಿಗೆ ನಡೆದುಕೊಂಡು ಹೋಗುವುದನ್ನು ಗಮನಿಸಿದ್ದಾರೆ. ಆಕೆಯ ಪ್ರತಿಯೊಂದು ಚಲನವಲನವನ್ನು ಪತ್ತೆ ಮಾಡಿ ಏಮ್ಸ್ ಮೆಟ್ರೋ ನಿಲ್ದಾಣದಿಂದ ಸಮಯಪುರಕ್ಕೆ ಪ್ರಯಾಣಿಸಿ ಪಂಚಶೀಲ ಫ್ಲೈ ಓವರ್ ಕಡೆಗೆ ಹೋಗಿರುವುದನ್ನು ಗಮನಿಸಿದ್ದಾರೆ. ಮಗುವಿನ ಸಹಿತ ಗಂಡನ ಮನೆಗೆ ಹೋಗುತ್ತಿದ್ದ ಪೂಜಾಳನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಈ ವೇಳೆ ತಾನು ಅತ್ತೆಯಲ್ಲಿ ಹೇಳಿದ ಸುಳ್ಳನ್ನು ಸತ್ಯ ಮಾಡಲು ಮಗುವನ್ನು ಕದ್ದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.

Continue Reading
Advertisement

Trending

Copyright © 2025 Namma Kudla News

You cannot copy content of this page