Connect with us

LATEST NEWS

ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ರಿಲೀಫ್

Published

on

ಮಂಗಳೂರು/ ಬೆಂಗಳೂರು : ಫೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಿಲೀಫ್ ಕೊಟ್ಟಿದೆ. ಮಾರ್ಚ್​ 15 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂಪ್ಪರಿಗೆ 1ನೇ ತ್ವರಿತಗತಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್​ಗೆ ಹೈಕೋರ್ಟ್​ ತಡೆ ನೀಡಿದೆ.

ಇದರೊಂದಿಗೆ ಯಡಿಯೂರಪ್ಪ ಖುದ್ದು ಹಾಜರಾತಿಗೂ ವಿನಾಯಿತಿ ನೀಡಲಾಗಿದೆ. ಅರ್ಜಿಯ ವಿವರವಾದ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಹೇಳಿರುವ ಕೋರ್ಟ್ ಸಮನ್ಸ್ ಆದೇಶಕ್ಕೆ ತಡೆ ನೀಡಿದೆ.

ಇದನ್ನೂ ಓದಿ : 60ನೇ ವಯಸ್ಸಿನಲ್ಲಿ 3ನೇ ಮದುವೆಗೆ ಸಜ್ಜಾದ ಬಾಲಿವುಡ್ ನಟ ಅಮೀರ್ ಖಾನ್

ಏನಿದು ಪ್ರಕರಣ?
ಬಿ ಎಸ್ ಯಡಿಯೂರಪ್ಪ ಅವರ  ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ನಿವಾಸಕ್ಕೆ ಸಹಾಯ ಯಾಚಿಸಿ ತಾಯಿ ಮತ್ತು ಅವರ ಅಪ್ರಾಪ್ತ ಮಗಳು ಹೋಗಿದ್ದರು. ಈ ವೇಳೆ ಬಾಲಕಿಯನ್ನು ಕೋಣೆಗೆ ಕರೆದೊಯ್ದು ಲೈಂ*ಗಿಕ ದೌರ್ಜ*ನ್ಯ ನಡೆಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಬಾಲಕಿಯ ತಾಯಿ ಸದಾಶಿವನಗರ ಠಾಣೆಗೆ ನೀಡಿದ ದೂರಿನನ್ವಯ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು.

DAKSHINA KANNADA

ಮಂಗಳೂರು: ಪಾವನಿ ಸಿಲ್ಕ್ಸ್ & ಟೆಕ್ಸ್‌ಟೈಲ್ಸ್ ಶೋರೂಂ ಲೋಕಾರ್ಪಣೆ

Published

on

ಮಂಗಳೂರು: ಕಳೆದ 10 ವರ್ಷಗಳಿಂದ ಜವುಳಿ ಉದ್ಯಮದಲ್ಲಿ ಜನಮನ್ನಣೆಗೆ ಪಾತ್ರವಾಗಿರುವ ಪಾವನಿ ಸಿಲ್ಕ್ಸ್ ಮತ್ತು ಫ್ಯಾಬ್ರಿಕ್ಸ್‌ನ ಸಹ ಸಂಸ್ಥೆ ಪಾವನಿ ಸಿಲ್ಕ್ಸ್ ಮತ್ತು ಟೆಕ್ಸ್ ಟೈಲ್ಸ್ ಎರಡನೇ ಶೋರೂಂ ಮಂಗಳೂರಿನ ಭವಂತಿ ಸ್ಟ್ರೀಟ್ ನ ಮಹಾಲಕ್ಷ್ಮಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಶುಭಾರಂಭಗೊಂಡಿತು.

ದೈವಜ್ಞ ಕೆ.ಸಿ.ನಾಗೇಂದ್ರ ಭಾರದ್ವಾಜ್, ಕಟ್ಟಡ ಮಾಲಕ ರವೀಂದ್ರ ನಿಕಂ ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಶೋರೂಂ ಉದ್ಘಾಟಿಸಿದರು. ಪುಟ್ಟ ಮಕ್ಕಳಿಂದ ದೀಪ ಬೆಳಗಿಸುವ ಮೂಲಕ ಶೋರೂಂ ವಿಶೇಷ, ವಿಭಿನ್ನ ರೀತಿಯಲ್ಲಿ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗದಲ್ಲಿ ವ್ಯವಹಾರ ಮಾಡಬೇಕಾದರೆ ತುಂಬಾ ಕಷ್ಟವಿದೆ. ನಾವು ವ್ಯವಹಾರಕ್ಕೆ ಇಳಿದಾಗ ಅದರ ಕಷ್ಟ ಗೊತ್ತಾಗುತ್ತದೆ. ಆದರೆ ಆ ಕಷ್ಟವನ್ನು ಮೀರಿ ನಾವು ಯಶಸ್ವಿ ಆಗುವುದೇ ನಮ್ಮ ಸಾಧನೆ. ಆ ಸಾಧನೆ ಮಾಡಿ ಇನ್ನೂ ಹಲವರಿಗೆ ಉದ್ಯೋಗ ನೀಡುವ ಕೆಲಸಕ್ಕೆ ದೇವರ ಅನುಗ್ರಹ ಇರುತ್ತದೆ ಎಂದರು. ಪಾವನಿ ಸಂಸ್ಥೆಯ ಇನ್ನೂ ಹಲವು ಶಾಖೆಗಳು ಬೆಳೆದುಕೊಂಡು ಬರಲಿ ಎಂಧರು.

ದೈವಜ್ಞ ಕೆ ಸಿ ನಾಗೇಂದ್ರ ಅವರು ಮಾತನಾಡಿ ಶ್ರಮಜೀವಿಯಾಗಿರುವ ಐವರು ಯುವಕರು ಇಂದು ತಮ್ಮದೇ ಸಂಸ್ಥೇಯನ್ನು ಕಟ್ಟಿಕೊಂಡು ಇದೀಗ ೨ನೇ ಶೋರೂಂ ಉದ್ಘಾಟನೆ ಮಾಡಿರುವುದು ಸಂತಸದ ವಿಷಯ. ಈ ಮೂಲಕ ಅನ್ಯರಿಗೂ ಕೆಲಸ ನೀಡುತ್ತಿರುವುದು ಪುಣ್ಯದ ಕೆಲಸವಾಗಿದೆ. ಸಮಾಜಕ್ಕೆ ನಾವು ಮಾದರಿಯಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು.

ಬೋಳಾರ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಮ್ ಜಮಾಅತ್ ನ ಖತೀಬ್ ಬಿ.ಕೆ.ಇಲ್ಯಾಸ್ ಬಾಖವಿ ಮಾತನಾಡಿ, ಇಲ್ಲಿ ಸರ್ವಧರ್ಮದವರು ಜೊತೆಗೆ ಸೇರಿ ಈ ಜವುಳಿ ಸಂಸ್ಥೇಯನ್ನು ಕಟ್ಟಿಕೊಂಡು ಬಂದಿದ್ದಾರೆ. ನಾವು ವ್ಯವಹಾರ ಮಾಡುವಾಗ ಜಾತಿ, ಧರ್ಮ ಎನ್ನುವ ಮನೋಭಾವನೆಯನ್ನು ಕಾಣದೇ ಎಲ್ಲರೊಂದಿಗೂ ಪ್ರೀತಿಯಿಂದ ಇದ್ದರೆ ವ್ಯವಹಾರಕ್ಕೆ ಆ ಭಗವಂತ ಕೂಡಾ ಕೈಹಿಡಿಯುತ್ತಾನೆ ಎಂದು ಶುಭ ನುಡಿದರು.

ನೂತನ ಶೋರೂಂನಲ್ಲಿ ಕೆಲಸ ಮಾಡಿದ ಕಂಟ್ರಾಕ್ಟರ್ ಶರತ್‌ಚಂದ್ರ, ಇಲೆಕ್ಟ್ರಿಕ್ ಕೆಲಸ ಮಾಡಿದ ಅನೂಪ್ ಬಂಗೇರ, ಇಂಟೀರಿಯರ್ ಡಿಸೈನಿಂಗ್ ಮಾಡಿದ ದೀಕ್ಷಿತ್ ರಾಜ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಸಮಾರಂಭದಲ್ಲಿ ಅಡ್ವೋಕೇಟ್ ದಯಾನಂಧ ರೈ, ಅಡ್ವೋಕೇಟ್ ಮತ್ತು ತೆರಿಗೆ ಸಲಹೆಗಾರ ಅಬ್ದುಲ್ ಖಾದರ್ ಇಡ್ಯಾ, ದಕ್ಷಿಣ ಕನ್ನಡ ಟೆಕ್ಸ್‌ಟೈಲ್ಸ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಯಶವಂತ್ ವಿ. ರಾವಲ್, ಐಸಿವೈಎಂ ನಿರ್ದೇಶಕ ರೆ. ಫಾ.ಅಶ್ವಿನ್ ಕಾರ್ಡೋಜ, ರವೀಂದ್ರ ನಿಕ್ಕಂ ಅವರ ಸಹೋದರ ಅರುಣ್ ನಿಕ್ಕಂ ಮೊದಲಾದವರಿದ್ದರು. ಸಂಸ್ಥೆಯ ಪಾಲುದಾರರಾದ ಹೈದರ್, ಗೌತಮ್ ಬಂಗೇರ, ಇಬ್ರಾಹಿಂ, ನರಸಿಂಹ, ನಾಗೇಶ್ ಅವರು ಅತಿಥಿಗಳನ್ನು ಗೌರವಿಸಿದರು. ನೂತನವಾಗಿ ಉದ್ಘಾಟನೆಗೊಂಡ ಈ ಶೋರೂಂನಲ್ಲಿ ಮದುವೆ, ನಿಶ್ಚಿತಾರ್ಥ ಸೇರಿದಂತೆ ಸಭೆ ಸಮಾರಂಭ ಹಾಗೂ ಇತರ ಎಲ್ಲಾ ಸಂದರ್ಭಗಳಿಗೆ ಪೂರಕವಾದ ಬಟ್ಟೆಬರೆಗಳ ಅಪೂರ್ವ ಸಂಗ್ರಹವಿದೆ. ಸಂಸ್ಥೆಯ 10ನೇ ವಾರ್ಷಿಕೋತ್ಸವ ಮತ್ತು ಹೊಸ ಶಾಖೆಯ ಉದ್ಘಾಟನೆ ಪ್ರಯುಕ್ತ ಏಪ್ರಿಲ್ 39ರವರೆಗೆ ಎಲ್ಲಾ ಬಟ್ಟೆಗಳ ಮೇಲೆ ಶೇ.೧೦ರಷ್ಟು ವಿಶೇಷ ರಿಯಾಯಿತಿ ಗ್ರಾಹಕರಿಗೆ ನೀಡಲಾಗುತ್ತಿದೆ.

Continue Reading

LATEST NEWS

WATCH VIDEO : ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ; ಜಸ್ಟ್ ಮಿಸ್ ಆದ ಅಟೋ ಚಾಲಕ

Published

on

ಮಂಗಳೂರು/ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಭಾನುವಾರ(ಎ.20) ಭಾರಿ ಗಾಳಿ ಮಳೆಯಾಗಿದೆ. ಮಳೆಯ ನಡುವೆ ನಡೆದ ಘಟನೆಯ ಮೈ ನವಿರೇಳಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಧ್ಯಾಹ್ನದ ವೇಳೆಯಲ್ಲಿ ಮಳೆ ಸುರಿಯಲು ಆರಂಭಿಸಿದ್ದು, ಜೋರಾದ ಗಾಳಿ ಕೂಡ ಆರಂಭವಾಗಿದೆ. ಈ ಗಾಳಿ ಮಳೆಯಿಂದಾಗಿ ರಸ್ತೆಯೊಂದರ ಬದಿಯಲ್ಲಿಯಿದ್ದ ವಿದ್ಯುತ್ ಕಂಬ ಧರೆಗುರುಳಿದ್ದು ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಟೋ ಒಂದರ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಅಟೋ ಚಾಲಕ ತೋರಿದ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲೇ ಜೀವ ಉಳಿಸಿಕೊಂಡಿದ್ದಾನೆ.

ಇದನ್ನೂ ಓದಿ : ಓಡಿ ಹೋಗಿ ಮದುವೆ ..! ವಶೀಕರಣ ಆರೋಪ ..! ಖ್ಯಾತ ಗಾಯಕಿ ಪೃಥ್ವಿ ಭಟ್ ತಂದೆ ಹೇಳಿದ್ದೇನು ..?

ವಿದ್ಯುತ್ ಕಂಬ ನೆಲಕ್ಕೆ ಉರುಳಿ ಬಿದ್ದ ತಕ್ಷಣ ಅಟೋ ಚಾಲಕ ಬ್ರೇಕ್ ಹಾಕಿದ್ದನಾದ್ರೂ ಆ ವೇಳೆಗೆ ಬಿದ್ದ ಕಂಬದ ಬಳಿ ತಲುಪಿದ್ದಾನೆ. ವಿದ್ಯುತ್ ಕಂಬ ನೆಲಕ್ಕೆ ಉರುಳಿ ತಂತಿಗಳ ಬಲದಲ್ಲಿ ರಸ್ತೆಯ ಅರ್ಧಕ್ಕೆ ನಿಂತಿದೆ. ಈ ವೇಳೆ ಅಟೋದ ಮುಂಬಾಗ ವಿದ್ಯುತ್ ಕಂಬಕ್ಕೆ ಸಿಲುಕಿಕೊಂಡು ಅಟೋ ಕಂಬದಲ್ಲಿ ನೇತಾಡಿದೆ. ವಿದ್ಯುತ್ ತಂತಿಗಳು ತುಂಡಾದ ಕಾರಣ ವಿದ್ಯುತ್ ಸಂಪರ್ಕ ಕಡಿತವಾಗಿದ್ದ ಕಾರಣ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Continue Reading

LATEST NEWS

ಉಡುಪಿ : ಇಬ್ಬರು ಹಿರಿಯ ಬಿಜೆಪಿ ಮುಖಂಡರ ಉಚ್ಚಾಟನೆ

Published

on

ಉಡುಪಿ : ಜಿಲ್ಲಾ ಮಟ್ಟದ ಇಬ್ಬರು ಹಿರಿಯ ಬಿಜೆಪಿ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ರೈತ ಮೋರ್ಚಾ ಜಿಲ್ಲಾಧ್ಯಕ್ಷರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟನೆ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಮಾಜಿ ಜಿಪಂ ಸದಸ್ಯ ಉದಯ ಕೋಟ್ಯಾನ್ ಹಾಗೂ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್ ಇವರಿಬ್ಬರು ಉಚ್ಚಾಟಿತ ಬಿಜೆಪಿ ನಾಯಕರು.

ಇದನ್ನೂ ಓದಿ : ಓಡಿ ಹೋಗಿ ಮದುವೆ ..! ವಶೀಕರಣ ಆರೋಪ ..! ಖ್ಯಾತ ಗಾಯಕಿ ಪೃಥ್ವಿ ಭಟ್ ತಂದೆ ಹೇಳಿದ್ದೇನು ..?

ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆ.ಎಂ.ಎಫ್.)ದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಇದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ಹಾಗಾಗಿ ಇವರುಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page