Connect with us

LATEST NEWS

ಕೊಹ್ಲಿ-ಶ್ರೇಯಾಂಕ ಫೊಟೋ ಪೋಸ್ಟ್ ಮಾಡಿದ ಆರ್‌ಸಿಬಿ..! ನಿಮ್ಮ ತಂಗಿಯನ್ನು ರಕ್ಷಿಸಿ ಎಂದು ಹೇಳಿದ್ಯಾಕೆ..??

Published

on

ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ತನ್ನ ಎಕ್ಸ್‌ ಖಾತೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಾಂಕ ಪಾಟೆಲ್ ಫೊಟೋವನ್ನು ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟ್ ಭಾರೀ ವೈರಲ್‌ ಆಗುತ್ತಿದೆ.

ಆರ್‌ಸಿಬಿ ತನ್ನ ಎಕ್ಸ್‌ನಲ್ಲಿ ಕೊಹ್ಲಿ ಮತ್ತು ಕನ್ನಡತಿ ಶ್ರೇಯಾಂಕ ಪಾಟೇಲ್‌ರವರು ತಮ್ಮ ಬ್ಯಾಟ್‌ ಅನ್ನು ಬಿಗಿದಪ್ಪಿಕೊಂಡಿರುವ ಫೊಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ‘ಸೂಪರ್‌ಸ್ಟಾರ್ಸ್‌ ತಮ್ಮ ಬ್ಯಾಟ್‌ ಅನ್ನು ರಕ್ಷಿಸಿದಂತೆ ನೀವು ನಿಮ್ಮ ಸೋದರಿಯರನ್ನು ರಕ್ಷಿಸಿ. ನಿಮ್ಮ ಹೃದಯಕ್ಕೆ ಹತ್ತಿರದಂತೆ, ನಿಮ್ಮ ಅಪ್ಪುಗೆ ಬಿಗಿಗೊಳುವಂತೆ’ ಎಂದು ಬರೆದು ಅವರಿಬ್ಬರ ಬೇರೆ ಬೇರೆ ಫೊಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಹೊಸ ಉದ್ಯಮ ಆರಂಭಿಸಿದ ಡಾ ಬ್ರೋ..! ಅಭಿಮಾನಿಗಳು ಹೇಳಿದ್ದೇನು?

ಇಂದು ರಕ್ಷಾಬಂಧನ ವಿಶೇಷ ದಿನವಾಗಿದ್ದು, ಈ ಶುಭದಿನದಂದು ಆರ್​ಸಿಬಿ ಟ್ವಿಟ್ಟರ್​ ಖಾತೆ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಕೊಹ್ಲಿ ಮತ್ತು ಶ್ರೇಯಾಂಕಾ ತಮ್ಮ ಬ್ಯಾಟ್​ ಅನ್ನು ರಕ್ಷಿಸುವಂತೆ, ಸಹೋದರಿಯರನ್ನು ರಕ್ಷಿಸಿ ಎಂಬ ಸಂದೇಶವನ್ನು ಸಾರಿದೆ.

LATEST NEWS

ಈ ದೇಶದಲ್ಲಿ ಪ್ರೇಮಿಗಳ ದಿನದಂದು ಹುಡುಗಿಯರು ಹುಡುಗರಿಗೆ ಉಡುಗೊರೆಗಳನ್ನು ನೀಡುತ್ತಾರೆ !

Published

on

ಪ್ರಪಂಚದಾದ್ಯಂತ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಅನೇಕ ಜನರು ಈ ದಿನ ತಮ್ಮ ಪ್ರೀತಿಯ ಸಂದೇಶಗಳೊಂದಿಗೆ ಕಾರ್ಡ್‌ಗಳು, ಹೂವುಗಳು ಅಥವಾ ಚಾಕೊಲೇಟ್‌ಗಳನ್ನು ಕಳುಹಿಸುವ ಮೂಲಕ ಇನ್ನೊಬ್ಬರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಈ ಒಂದು ದೇಶದಲ್ಲಿ ಹುಡುಗಿಯರು ಹುಡುಗರಿಗೆ ಉಡುಗೊರೆಗಳನ್ನು ನೀಡುತ್ತಾರೆ.

ವ್ಯಾಲೆಂಟೆನ್ಸ್ ಡೇ ಬಹಳ ಜನಪ್ರಿಯವಾದ ದಿನವಾಗಿದೆ. ಪ್ರೀತಿಪಾತ್ರರ ನಡುವೆ ಈ ದಿನದಂದು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಪ್ರೇಮಿಗಳ ದಿನದಂದು ಹೆಚ್ಚಾಗಿ ಹುಡುಗರು ಹುಡುಗಿಯರಿಗೆ ಗಿಫ್ಟ್‌ಗಳನ್ನು ಕೊಡುತ್ತಾರೆ. ಆದರೆ, ಜಪಾನ್ ದೇಶದಲ್ಲಿ ಹುಡುಗಿಯರು ಹುಡುಗರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಇದರ ಬದಲಾಗಿ ಹುಡುಗರು ಹುಡುಗಿಯರು ಇಷ್ಟಪಡದ ವಸ್ತುಗಳನ್ನು ಹಿಂತಿರುಗಿಸಬೇಕು.

ಇದನ್ನೂ ಓದಿ: ಗೆಳತಿಗಾಗಿ ಕಳ್ಳನಾದ ಎಂಎಲ್ಎ ಮಗ !

ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 14ರಂದು ಅಲ್ಲಿನ ಜನರು ತಮ್ಮ ತಮ್ಮ ಪ್ರೀತಿಪಾತ್ರರ ಹೆಸರನ್ನು ಹೃದಯದ ಆಕಾರದಲ್ಲಿ ಭುಜದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇನ್ನು ಎಲ್ಲಾ ದೇಶಗಳಲ್ಲೂ ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಿದರೆ, ಬ್ರೇಜಿಲ್‌ನಲ್ಲಿ ಜೂನ್ 12 ರಂದು ವ್ಯಾಲೆಂಟೆನ್ಸ್ ಡೇ ಆಚರಿಸುತ್ತಾರೆ. ಫಿಲಿಪೈನ್ಸ್ ದೇಶದಲ್ಲಿ ಸರ್ಕಾರದ ಆಶ್ರಯದಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತವೆ.

Continue Reading

LATEST NEWS

ಗ್ರಿಲ್ಡ್ ಚಿಕನ್ ತಿಂದು 22 ಜನರು ಆಸ್ಪತ್ರೆಗೆ ದಾಖಲು

Published

on

ತಮಿಳುನಾಡು: ಹೋಟೆಲ್‌ನಲ್ಲಿ ಗ್ರಿಲ್ಡ್ ಚಿಕನ್ ತಿಂದು 22 ಜನ ಆಸ್ಪತ್ರೆಗೆ ದಾಖಲಾದ ಘಟನೆ ತಮಿಳುನಾಡಿನ ಮಧುರೈ ಚೋಳವಂಧನ್‌ನಲ್ಲಿ ನಡೆದಿದೆ.

ಮಧುರೈನ ಹೋಟೆಲ್‌ವೊಂದರಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಇತ್ತು. ಇಲ್ಲಿ ಯಾವಾಗಲೂ ಜನಸಂಖ್ಯೆಯಿಂದಲೇ ಹೋಟೆಲ್ ತುಂಬಿಕೊಳ್ಳುತ್ತಿತ್ತು. ನಿನ್ನೆ ರಾತ್ರಿ ಬಾಸ್ಕೆಟ್ ಬಾಲ್ ಆಡಲು ಮಧುರೈಗೆ ಬಂದಿದ್ದ ಪ್ರಸನ್ನ ಎಂಬ ಆಟಗಾರ ತನ್ನ 10 ಜನ ಸ್ನೇಹಿತರೊಂದಿಗೆ ಈ ಹೋಟೆಲ್‌ನಲ್ಲಿ ಗ್ರಿಲ್ಡ್ ಚಿಕನ್ ತಿಂದಿದ್ದರು. ಇದನ್ನು ತಿಂದ ಬಳಿಕ ಅವರಲ್ಲಿ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಹಾಗೆಯೇ ಗ್ರಿಲ್ಡ್ ಚಿಕನ್ ತಿಂದ ಉಳಿದವರಿಗೂ ಇದೇ ರೀತಿ ಆಗಿ ಅಸ್ವಸ್ಥಗೊಂಡಿದ್ದಾರೆ.

ಹುಷಾರ್‌ ಇಲ್ಲದೇ ಆದ ಎಲ್ಲರನ್ನೂ ಮಧುರೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Continue Reading

LATEST NEWS

ChatGPT, DeepSeek ಬ್ಯಾನ್; ಹಣಕಾಸು ಸಚಿವಾಲಯದಿಂದ ಸುತ್ತೋಲೆ

Published

on

ಮಂಗಳೂರು/ನವದೆಹಲಿ : ಸದ್ಯ ಎಲ್ಲೆಡೆ ಚಾಟ್ ಜಿಪಿಟಿ, ಡೀಪ್ ಸೀಕ್‌ನದ್ದೇ ಸದ್ದು. ಆದರೆ, ಇಂತಹ  ಕೃತಕ ಬುದ್ಧಿಮತ್ತೆ ಟೂಲ್‌ಗಳ ಬಳಕೆಯನ್ನು ಹಣಕಾಸು ಸಚಿವಾಲಯ ನಿಷೇಧಿಸಿದೆ. AI ಭದ್ರತಾ ನೀತಿಗಳನ್ನು ಬಿಗಿಗೊಳಿಸಿರುವ ಹಣಕಾಸು ಸಚಿವಾಲಯ ಸರ್ಕಾರದ ಡೇಟಾ ಹಾಗೂ ಕಡತಗಳ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ.

ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರ ಅನುಮೋದನೆಯೊಂದಿಗೆ ಹೊರಡಿಸಲಾದ ಈ ನಿರ್ದೇಶನ ಸಚಿವಾಲಯದ ಜಾಲದಲ್ಲಿ ಬಳಸಲಾಗುವ ಎಲ್ಲಾ AI-ಚಾಲಿತ ಅಪ್ಲಿಕೇಶನ್‌ಗಳಿಗೆ ಅನ್ವಯಿಸುತ್ತದೆ.  ಸರ್ಕಾರಿ ಇಲಾಖೆಗಳ ಡಿವೈಸ್ ಗಳಲ್ಲಿ ಮಾತ್ರ ChatGPT, DeepSeek ಗಳ ಬಳಕೆಗೆ ನಿಷೇಧ ಅನ್ವಯವಾಗುತ್ತದೆ.

ಈ ಬಗ್ಗೆ ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಇಲಾಖೆಗಳಿಗೆ ಆದೇಶದ ಪ್ರತಿಯನ್ನು ರವಾನಿಸಲಾಗಿದೆ.

ಇದನ್ನೂ ಓದಿ : ಬಿಗ್‌ಬಾಸ್‌ ಸೀಸನ್-11 ರಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಇವರೇ ನೋಡಿ..!

AI ಟೂಲ್ ಗಳು ಸರ್ಕಾರಿ ಡೇಟಾದ ಗೌಪ್ಯತೆಗೆ ಅ*ಪಾಯವನ್ನುಂಟು ಮಾಡುತ್ತವೆ ಎಂದು ಪತ್ರದಲ್ಲಿ ಹೇಳಲಾಗಿದ್ದು, ಅಧಿಕೃತ ಸಾಧನಗಳಲ್ಲಿ ಅವುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕೆಂದು ಸಲಹೆ ನೀಡಿದೆ. ಎಲ್ಲಾ ಇಲಾಖೆಗಳ ಉದ್ಯೋಗಿಗಳಿಗೆ ನಿರ್ದೇಶನವನ್ನು ಪಾಲಿಸಲು ಸೂಚಿಸಲಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page