Connect with us

LATEST NEWS

ನ್ಯೂಯಾರ್ಕ್ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಉಡುಪಿಯ ರಶ್ಮಿ ಸಾಮಂತ್

Published

on

ಉಡುಪಿ: ಕರ್ನಾಟಕದ ಉಡುಪಿ ಮೂಲದ ಯುವ ನಾಯಕಿ ರಶ್ಮಿ ಸಾಮಂತ್ ಅವರು ಮಾರ್ಚ್ 9 ರಿಂದ ಮಾರ್ಚ್ 20, 2026 ರವರೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಿಳಾ ಸ್ಥಿತಿಗತಿ ಆಯೋಗದ (CSW70) 70ನೇ ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.


ಈ ಸಮ್ಮೇಳನದಲ್ಲಿ ಭಾರತದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಕೂಡ ಭಾಗವಹಿಸಲಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ 2021ರ ಪದವೀಧರೆಯಾಗಿರುವ ರಶ್ಮಿ, ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಪ್ರಸ್ತುತ ಅವರು ಉಡುಪಿಯಲ್ಲಿ ‘ಪ್ಲವ’ (Plava) ಎಂಬ ನಾಗರಿಕ ಪ್ರಜ್ಞೆ ಮೂಡಿಸುವ ಪ್ರತಿಷ್ಠಾನವನ್ನು ನಡೆಸುತ್ತಿದ್ದಾರೆ.

ಜನಪ್ರಿಯ ಲೇಖಕಿ ರಶ್ಮಿ ಸಾಮಂತ್ ಬರೆದಿರುವ ‘ಎ ಹಿಂದೂ ಇನ್ ಆಕ್ಸ್‌ಫರ್ಡ್’ ಮತ್ತು ‘ರಾಮಜನ್ಮಭೂಮಿ: ದಿ ಇನ್ಸ್ಪಿರೇಷನ್ ಫಾರ್ ಹಿಂದೂ ರಿಸರ್ಜೆನ್ಸ್’ ಎಂಬ ಎರಡು ಪುಸ್ತಕಗಳು ಭಾರತದಲ್ಲಿ ‘ಬೆಸ್ಟ್ ಸೆಲ್ಲರ್’ ಆಗಿವೆ. ಟೈಮ್ಸ್ ನೌ, ರಿಪಬ್ಲಿಕ್ ಮತ್ತು ದೂರದರ್ಶನ ಸೇರಿದಂತೆ ಪ್ರಮುಖ ರಾಷ್ಟ್ರೀಯ ವಾಹಿನಿಗಳಲ್ಲಿ ಚರ್ಚಾಗಾರರಾಗಿ ಹಾಗೂ ಪ್ರಮುಖ ದಿನಪತ್ರಿಕೆಗಳಲ್ಲಿ ಅಂಕಣಕಾರರಾಗಿ ಗುರುತಿಸಿಕೊಂಡಿರುವ ರಶ್ಮಿ, ಜಾಗತಿಕ ಮಟ್ಟದಲ್ಲಿ ಭಾರತದ ಧ್ವನಿಯಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಸ್ನೇಹಿತನ ಬ್ಯಾಂಕ್ ಖಾತೆ ಪಡೆದು ಸೈಬರ್ ವಂಚನೆ; ಆರು ಮಂದಿ ಆರೋಪಿಗಳ ಬಂಧನ

ಪ್ರಮುಖ ಸಾಧನೆಗಳು:

ಆಕ್ಸ್‌ಫರ್ಡ್ ಕ್ಯಾರೆಕ್ಟರ್ ಪ್ರಾಜೆಕ್ಟ್ ಮತ್ತು ಅಮೇರಿಕನ್ ಜ್ಯೂಯಿಷ್ ಕಮಿಟಿಯ ಫೆಲೋ (2024)ನಾಯಕತ್ವವನ್ನು ಹೊಂದಿದ್ದರು. 2024ರ “30 Under 30” ಅತ್ಯಂತ ಪ್ರಭಾವಶಾಲಿ ಯುವ ರಾಜಕೀಯ ಧ್ವನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ರಷ್ಯಾದ ಈಸ್ಟರ್ನ್ ಎಕನಾಮಿಕ್ ಫೋರಂ (2024) ಮತ್ತು ಗ್ಲೋಬಲ್ ಡಿಜಿಟಲ್ ಫೋರಂನಲ್ಲಿ (2025) ಭಾರತದ ಪ್ರತಿನಿಧಿ ಭಾಗವಹಿಸಿದ್ದಾರೆ. ಬ್ರಿಟಿಷ್ ಸಂಸತ್ತಿನಲ್ಲಿ ಲೀಸೆಸ್ಟರ್ ಹಿಂಸಾಚಾರದ ಕುರಿತು ವರದಿ ಸಲ್ಲಿಕೆ ಮತ್ತು ಉಡುಪಿ ಹಿಜಾಬ್ ವಿವಾದ ಮತ್ತು ಹಿಡನ್ ಕ್ಯಾಮೆರಾ ಪ್ರಕರಣಗಳಲ್ಲಿ ಕಾನೂನು ಹೋರಾಟ ನಡೆಸಿದ್ದಾರೆ.

LATEST NEWS

ಇರಾನ್-ಇಸ್ರೇಲ್ ಸಂಘರ್ಷ: ಮಾ.12ರಂದು ಮಂಗಳೂರು- ಮಧ್ಯ ಪ್ರಾಚ್ಯ ಮಾರ್ಗದ 14 ವಿಮಾನಗಳು ರದ್ದು

Published

on

ಮಂಗಳೂರು: ಪಶ್ಚಿಮ ಏಷ್ಯಾ- ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಸನ್ನಿವೇಶ ಇರುವ ಹಿನ್ನೆಲೆಯಲ್ಲಿ ಮಧ್ಯ ಪ್ರಾಚ್ಯ ದೇಶಗಳ ವಾಯು ಪ್ರದೇಶವನ್ನು ಮುಚ್ಚಿರುವುದರಿಂದ ಗುರುವಾರ (ಮಾ. 12) ಮಂಗಳೂರು ಮತ್ತು ಮಧ್ಯ ಪ್ರಾಚ್ಯ ದೇಶಗಳ ನಡುವಣ 14 ವಿಮಾನ ಯಾನವನ್ನು ರದ್ದುಪಡಿಸಲಾಗಿದೆ.

ಮಂಗಳೂರು- ದುಬಾಯಿ ಮತ್ತು ದುಬಾಯಿ ಮಂಗಳೂರು ಮಾರ್ಗದ ಎರಡೂ ವಿಮಾನಗಳ ಓಡಾಟ ರದ್ದಾಗಿದೆ. ಹಾಗೆಯೇ ಮಂಗಳೂರು – ದೋಹಾ ಮತ್ತು ದೋಹಾ ಮಂಗಳೂರು, ಮಂಗಳೂರು- ಬಹ್ರೈನ್ ಮತ್ತು ಬಹ್ರೈನ್- ಮಂಗಳೂರು, ಮಂಗಳೂರು- ಕುವೈತ್ ಮತ್ತು ಕುವೈತ್- ಮಂಗಳೂರು, ಮಂಗಳೂರು- ದಮಾಮ್ ಮತ್ತು ದಮಾಮ್- ಮಂಗಳೂರು, ಮಂಗಳೂರು- ಅಬುಧಾಬಿ ಮತ್ತು ಅಬಿಧಾಬಿ- ಮಂಗಳೂರು ನಡುವಣ ವಿಮಾನ ಸಂಚಾರವನ್ನು ರದ್ದು ಪಡಿಸಲಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಹಳೆ ಕಾಲಕ್ಕೆ ಮರಳಿದ ಹೋಟೆಲ್‌ಗಳು: ಗ್ಯಾಸ್ ಬಂದ್ ಬೆನ್ನಲ್ಲೇ ಒಲೆ ಹಚ್ಚಿದ ಮಾಲೀಕರು

ಮಧ್ಯ ಪ್ರಾಚ್ಯ ದೇಶಗಳಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳ ಮತ್ತು ಕೇರಳ ರಾಜ್ಯದಿಂದ ಅಧಿಕ ಸಂಖ್ಯೆಯ ಜನರು ದುಡಿಯುತ್ತಿದ್ದಾರೆ. ಹಲವಾರು ಮಂದಿ ಸ್ವಂತ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮಂಗಳೂರು ಮತ್ತು ಮಧ್ಯ ಪ್ರಾಚ್ಯ ದೇಶಗಳ ಮಧ್ಯೆ ವೈಮಾನಿಕ ಸಂಚಾರ ವ್ಯತ್ಯಯಗೊಂಡ ಕಾರಣ ಕರಾವಳಿಯ ಜನರಿಗೆ ಬಹಳಷ್ಟು ಸಮಸ್ಯೆಗಳಾಗಿವೆ. ಏನಾಗುತ್ತದೋ ಎಂಬ ಆತಂಕ ಕೂಡಾ ಎದುರಾಗಿದೆ.

Continue Reading

LATEST NEWS

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಡಕೆ ತೋಟಕ್ಕೆ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ

Published

on

ಆನಂದಪುರ: ತೋಟವೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಬೆಂಕಿ ಕಾಣಿಸಿಕೊಂಡ ಪರಿಣಾಮ ಮರಗಳು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದಿದೆ.


ಆನಂದಪುರ ಸಮೀಪದ ಲಕ್ಕವಳ್ಳಿ ಗ್ರಾಮದ ಮುರುಗೇಂದ್ರ ಗೌಡ್ರು ಎಂಬುವವರ 1 ಎಕರೆ ಅಡಕೆ ತೋಟದಲ್ಲಿ ಈ ಘಟನೆ ನಡೆದಿದ್ದು, ಮಧ್ಯಾಹ್ನದ ಸಮಯದಲ್ಲಿ ಬಿಸಿಲು ಹೆಚ್ಚಿದ್ದರಿಂದ ಮತ್ತು ಒಣಗಿದ ಎಲೆಗಳು ತೋಟದಲ್ಲಿ ಇದ್ದುದರಿಂದ, ಶಾರ್ಟ್ ಸರ್ಕ್ಯೂಟ್ ಆದ ತಕ್ಷಣ ಬೆಂಕಿ ವೇಗವಾಗಿ ಹಬ್ಬಿದೆ.

ಬೆಂಕಿಯ ತೀವ್ರತೆಗೆ ಅಡಕೆ ಮರಗಳು ಭಾಗಶಃ ಸುಟ್ಟು ಹೋಗಿದ್ದು, ತೋಟದಲ್ಲಿದ್ದ ಬೆಲೆಬಾಳುವ ಹನಿ ನೀರಾವರಿ ಪೈಪ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮತ್ತೆ ಹಳೆ ಕಾಲಕ್ಕೆ ಮರಳಿದ ಹೋಟೆಲ್‌ಗಳು: ಗ್ಯಾಸ್ ಬಂದ್ ಬೆನ್ನಲ್ಲೇ ಒಲೆ ಹಚ್ಚಿದ ಮಾಲೀಕರು

ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಕಾಲದಲ್ಲಿ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ವಿಷಯ ತಿಳಿದ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ.

Continue Reading

LATEST NEWS

ಮತ್ತೆ ಹಳೆ ಕಾಲಕ್ಕೆ ಮರಳಿದ ಹೋಟೆಲ್‌ಗಳು: ಗ್ಯಾಸ್ ಬಂದ್ ಬೆನ್ನಲ್ಲೇ ಒಲೆ ಹಚ್ಚಿದ ಮಾಲೀಕರು

Published

on

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದೆ.


ಈ ಬಿಕ್ಕಟ್ಟಿನಿಂದಾಗಿ ಹೋಟೆಲ್ ಉದ್ಯಮವು ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದು, ಅನೇಕ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಸೌದೆ ಒಲೆಗಳ ಮೊರೆ ಹೋಗಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಗಾಂಧಿನಗರದಲ್ಲಿರುವ 3-ಸ್ಟಾರ್ ಹೋಟೆಲ್ ಸೇರಿದಂತೆ ಹಲವು ಪ್ರತಿಷ್ಠಿತ ಹೋಟೆಲ್‌ಗಳು ಈಗಾಗಲೇ ಸೌದೆ ಮತ್ತು ಇದ್ದಿಲನ್ನು ಬಳಸಿ ಅಡುಗೆ ಮಾಡಲು ಆರಂಭಿಸಿವೆ.

ಹೋಟೆಲ್ ಸಿಬ್ಬಂದಿಗಳು ಅಡುಗೆಮನೆಗೆ ಪ್ಲೈವುಡ್ ಶೀಟ್ ಹಾಗೂ ಸೌದೆಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಗ್ಯಾಸ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡರೆ ಮುಂದಿನ ಒಂದೆರಡು ದಿನಗಳಲ್ಲಿ ಹೋಟೆಲ್‌ಗಳನ್ನು ಬಂದ್ ಮಾಡಬೇಕಾಗಬಹುದು ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಎಚ್ಚರಿಸಿದೆ.

ಇದನ್ನೂ ಓದಿ: ಬೆಂಗಳೂರು ಭೀಕರತೆ: ಕೊಲೆ ಆರೋಪಿಯ ಮೇಲೆ 68 ಬಾರಿ ಮಚ್ಚಿನಿಂದ ದಾಳಿ, ಬದುಕಿದ್ದೇ ಪವಾಡ!

ಗ್ಯಾಸ್ ಉಳಿತಾಯ ಮಾಡಲು ಮತ್ತು ಪರ್ಯಾಯ ವ್ಯವಸ್ಥೆ ಅಷ್ಟೊಂದು ಸುಲಭವಲ್ಲದ ಕಾರಣ, ಹೋಟೆಲ್‌ಗಳು ತಮ್ಮ ಮೆನುವಿನಿಂದ ದೋಸೆ, ಬಿರಿಯಾನಿ ಮತ್ತು ಪರೋಟದಂತಹ ಹೆಚ್ಚು ಗ್ಯಾಸ್ ಬಳಸುವ ಖಾದ್ಯಗಳನ್ನು ಕೈಬಿಟ್ಟು, ಕೇವಲ ಟೀ, ಕಾಫಿ ಅಥವಾ ಉಪಹಾರಕ್ಕೆ ಮಾತ್ರ ಸೀಮಿತಗೊಳ್ಳುತ್ತಿವೆ ಎನ್ನಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page