Connect with us

FILM

ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಮತ್ತೆ ಎಂಟ್ರಿ!?

Published

on

‘ಬಿಗ್ ಬಾಸ್ ಕನ್ನಡ ಸೀಸನ್ 12’ಕ್ಕೆ ಎಂಟ್ರಿ ಕೊಟ್ಟಿದ್ದ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಮೊದಲ ದಿನವೇ ಔಟ್ ಆಗಿದ್ದರು. ಇದೀಗ ಮತ್ತೆ ಕಿಚ್ಚನ ವಾರದ ಪಂಚಾಯಿತಿಯಲ್ಲಿ ವಾಪಸ್ಸಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಟ್ವಿಸ್ಟ್‌ಗಳಿಂದ ಕೂಡಿರುವ ಹಿನ್ನೆಲೆ ಮನೆಗೆ ಎಂಟ್ರಿಕೊಟ್ಟ ಎರಡನೇ ದಿನಕ್ಕೆ ಎಲಿಮಿನೇಟ್ ಆದ ರಕ್ಷಿತಾ ಇನ್ನೂ ಮನೆಯಿಂದ ಹೊರಹೋಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈಗಾಗಲೇ ಈ ಕುರಿತು ಕಲರ್ಸ್ ಕನ್ನಡ ತಮ್ಮ ಅಧಿಕೃತ ಜಾಲತಾಣದ ಖಾತೆಯಲ್ಲಿ ಎಲಿಮಿನೇಟ್ ಆಗಿದ್ದಾರೆ ಎಂದು ಫೋಟೋ ಸಮೇತ ಸ್ಪಷ್ಟಪಡಿಸಿದೆ.

ಆದರೆ, ರಕ್ಷಿತಾ ಮಾತ್ರ ಇಲ್ಲಿಯವರೆಗೆ ಹೊರಬಂದಿರುವ ಯಾವ ಸೂಚನೆಗಳು ಲಭಿಸಿಲ್ಲ. ಹೀಗಾಗಿ, ಹಲವರು ಇದೊಂದು ಪ್ರಾಂಕ್ ಆಗಿರಬಹುದು. ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಅವರು ರೀ-ಎಂಟ್ರಿ ಕೊಡಬಹುದು ಎಂದು ಅಭಿಪ್ರಾಯಿಸಿದ್ದರು.

ಇದನ್ನೂ ಓದಿ: ಬಲೆ ಬಲೆ ಗೈಯ್ಸ್ ಎಂದು ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಡಲಿದ್ದಾರಾ ರಕ್ಷಿತಾ ಶೆಟ್ಟಿ!?  

ಅಂತೆಯೇ, ರಕ್ಷಿತಾ ವೇದಿಕೆಗೆ ಬಂದಿದ್ದು, ಮನೆಗೆ ಮರಳಲು ಸುದೀಪ್ ಅವರಿಂದ ಒಪ್ಪಿಗೆ ಪಡೆದಿದ್ದಾರೆ! ರಕ್ಷಿತಾ ಅವರನ್ನ ಸುದೀಪ್ ಅವರು ವೇದಿಕೆಗೆ ಆಹ್ವಾನಿಸುತ್ತಾರೆ. ಈ ಸಂರ್ಭದಲ್ಲಿ ಸುದೀಪ್ ತಮಾಷೆ ಮಾಡಿದ್ದು ಇದು ಏನು ಉಡುಪಿ ಅಂದುಕೊಂಡಿದ್ದಿರಾ.. ಬರೋದು, ಹೋಗೊದು ಅಂತಾ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಕ್ಷಿತಾ, ಹೋರಗೆ ಹಾಕ್ಬಿಟ್ಟಿದ್ದಾರೆ. ಈಗ ಒಳಗಡೆ ವಾಪಸ್ ಬಿಡ್ತೀವಿ.. ಒಳಗಡೆ ಹೋಗಿ ಏನ್‌ ಮಾಡ್ತೀರಿ ಎಂದು ಸುದೀಪ್ ಮರು ಪ್ರಶ್ನೆ ಹಾಕಿದ್ದಾರೆ.

ಪ್ರಾಪರ್ ರೀಸನ್ ಕೇಳ್ತಿನಿ. ಹೋಗುವಾಗ ಬಂದಿದ್ರು, ಆದರೆ ಯಾರು ಸ್ಟ್ಯಾಂಡ್ ತೆಗೋಳೋಕೆ ಬಂದಿಲ್ಲ ಎಂದು ರಕ್ಷಿತಾ ಕೋಪದಿಂದ ಹೇಳಿದ್ದಾರೆ. ನಾನು ಹೇಗೆ ಆಡ್ತೀನಿ, ಅವರು ಜಸ್ಟ್ ಕವರ್ ನೋಡಿ ಜಡ್ಜ್ ಮಾಡಿದ್ರು. ನನಗೆ ಯೋಗ್ಯ ಉಂಟು ಎಂದು ರಕ್ಷಿತಾ ಹೇಳಿದ್ದಾರೆ. ಈ ಬಗ್ಗೆ ಕಲರ್ಸ್ ಕನ್ನಡ ಪ್ರೋಮೋ ಹಂಚಿಕೊಂಡಿದೆ. ಆದರೆ, ಇದೂ ಸಹ ಟ್ವಿಸ್ಟ್ ಆಗಿದೆಯೇ? ಎಂಬುದನ್ನು ಸಂಚಿಕೆ ನೋಡಿಯೇ ತಿಳಿಯಬೇಕಿದೆ. ಆದರೆ, ಇದೂ ಸಹ ಟ್ವಿಸ್ಟ್ ಆಗಿದೆಯೇ? ಎಂಬುದನ್ನು ಸಂಚಿಕೆ ನೋಡಿಯೇ ತಿಳಿಯಬೇಕಿದೆ.

FILM

ಕುಟುಂಬ ಸಮೇತರಾಗಿ ಕಾಪು ಕ್ಷೇತ್ರಕ್ಕೆ ನಟಿ ಶ್ರುತಿ ಭೇಟಿ

Published

on

ಕಾಪು : ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶ್ರುತಿ ಕುಟುಂಬ ಸಮೇತರಾಗಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ದ ದೇಗುಲಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.

ದೇವಳದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಬಳಿಕ ಮಾತನಾಡಿದ ನಟಿ, ನಾನು ಇಲ್ಲಿನ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುವುದಿತ್ತು. ಜೊತೆಗೆ ಇಲ್ಲಿನ ಕಾಪು ಮಾರಿಯಮ್ಮ ದೇವಸ್ಥಾನದ ಬಗ್ಗೆ ಕೇಳಿದ್ದೆ. ದೇಗುಲ ಬಹಳ ಸುಂದರವಾಗಿ ಮೂಡಿ ಬಂದಿದೆ. ಕರಾವಳಿ ಭಾಗಕ್ಕೆ ಭೇಟಿ ನೀಡುವ ಯಾತ್ರಿಗಳು, ಪ್ರವಾಸಿಗರು ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಿ ಎಂದರು.

ಇದನ್ನೂ ಓದಿ : ರಿಲೀಸ್ ಗೆ ಮೊದಲೇ ‘ಕಾಂತಾ’ ವಿರುದ್ಧ ದೂರು! ಸಂಕಷ್ಟದಲ್ಲಿ ನಿರ್ಮಾಪಕ ದಗ್ಗುಬಾಟಿ

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ರವೀಂದ್ರ ಮಲ್ಲಾರ್, ಚರಿತ ದೇವಾಡಿಗ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Continue Reading

FILM

ರಿಲೀಸ್ ಗೆ ಮೊದಲೇ ‘ಕಾಂತಾ’ ವಿರುದ್ಧ ದೂರು! ಸಂಕಷ್ಟದಲ್ಲಿ ನಿರ್ಮಾಪಕ ದಗ್ಗುಬಾಟಿ

Published

on

ಚೆನ್ನೈ: ರಾಣಾ ದಗ್ಗುಬಾಟಿ ನಿರ್ಮಿಸಿರುವ ‘ಕಾಂತಾ’ ಸಿನಿಮಾ ರಿಲೀಸ್‌ಗೆ ಇನ್ನೆರೆಡು ದಿನಗಳು ಇರುವಾಗಲೇ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾ ವಿರುದ್ಧ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ.

ಖ್ಯಾತ ನಟ ದುಲ್ಕರ್ ಸಲ್ಮಾನ್ ನಟಿಸಿದ ಕಾಂತಾ ಸಿನಿಮಾ ತಮಿಳು ಚಿತ್ರರಂಗದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ಕಮಾಲ್ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಚೆನ್ನೈನಲ್ಲಿ ಕಾಂತಾ ವಿರುದ್ಧ ಕೇಸು ದಾಖಲಾಗಿತ್ತು.

ಯಾಕೆ ಕೇಸ್?

ಕಾಂತಾ ಸಿನಿಮಾ 1955ರ ತಮಿಳು ಚಿತ್ರರಂಗದ ಪ್ರಥಮ ಸೂಪರ್ ಸ್ಟಾರ್ ಎಂ.ಕೆ. ತ್ಯಾಗರಾಜ್ ಭಾಗವತರ್ ಅವರ ಜೀವನ ಕುರಿತಾದ ಕಥೆಯನ್ನು ಹೊಂದಿದೆ ಎಂಬ ಮಾತುಗಳು ಕಿವಿಗೆ ಬಿದ್ದಿವೆ.
ಎಂ.ಕೆ ತ್ಯಾಗರಾಜ ಭಾಗವತರ್ ಅವರ ಜೀವನದ ಕುರಿತು ಸಿನಿಮಾ ಮಾಡುವ ಮೊದಲು ನಮ್ಮಿಂದ ಯಾವುದೇ ರೀತಿಯ ಅನುಮತಿ ಪಡೆದುಕೊಂಡಿಲ್ಲ ಹಾಗೂ ಅದರ ಕುರಿತು ಯಾವುದೇ ಸಂಭಾಷಣೆಯೂ ನಡೆದಿಲ್ಲ. ಆದ ಕಾರಣ ಚಿತ್ರಕ್ಕೆ ತಡೆ ನೀಡಬೇಕು ಎಂದು ತ್ಯಾಗರಾಜರ ಮೊಮ್ಮಗ ಚೆನ್ನೈನ ಸಿವಿಲ್ ನ್ಯಾಯಲಯದಲ್ಲಿ ಕಾಂತಾ ಚಿತ್ರದ ವಿರುದ್ಧ ದೂರು ದಾಖಲಿಸಿದ್ದಾರೆ.

ನಿರ್ಮಾಪಕ ರಾಣಾ ದಗ್ಗುಬಾಟಿ ಅವರ ಕಾಂತಾ ಸಿನಿಮಾವು ಕಾಲ್ಪನಿಕ ಕತೆಯನ್ನು ಹೊಂದಿದೆ. ಬದಲಾಗಿ ಯಾರ ವೈಯಕ್ತಿಕ ಜೀವನದ ಕುರಿತು ಇಲ್ಲ. ಚಿತ್ರವು ಯಾವುದೇ ಅಡೆತಡೆ ಇಲ್ಲದೆ ನವೆಂಬರ್ 14 ಕ್ಕೆ ಬಿಡುಗಡೆ ಆಗಲಿದೆ ಎಂದು ‘ಎಕ್ಸ್’ ನಲ್ಲಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಓದಿ: 2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯುವುದು ಅನುಮಾನ!?

ನಿರ್ದೇಶಕ ಸೆಲ್ವಮಣಿ ಸೆಲ್ವರಾಜ್ ಅವರ ಕಾಂತಾ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಟೀಕೆ ಮಹಮದ್ ಎಂಬ ಪಾತ್ರ ಮಾಡುತ್ತಿದ್ದು, ರಾಣಾ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಸಮುದ್ರಕಣಿ, ಭಾಗ್ಯಶ್ರೀ ಬೋರ್ಸೇ ನಾಯಕಿಯಾಗಿ ನಟಿಸಿದ್ದಾರೆ.

Continue Reading

FILM

ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನ

Published

on

ಮಂಡ್ಯ: ತಿಥಿ ಸಿನಿಮಾದ ಮೂಲಕ ಗಡ್ಡಪ್ಪ ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯದ ಚನ್ನೇಗೌಡ (89) ಆನಾರೋಗ್ಯದಿಂದ ನಿಧನರಾಗಿದ್ದಾರೆ.

ಗಡ್ಡಪ್ಪ ತಿಂಗಳ ಹಿಂದೆ ಸೊಂಟಕ್ಕೆ ಪೆಟ್ಟಾಗಿ ಆಪರೇಷನ್‌ಗೆ ಒಳಗಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದ ನಿರ್ದೇಶಕ ರಾಮ್ ರೆಡ್ಡಿ ಅವರ ‘ತಿಥಿ’ ಚಿತ್ರದ ಮೂಲಕ ಗಡ್ಡಪ್ಪ ಅವರು ದೇಶದಾದ್ಯಂತ ಗಮನ ಸೆಳೆದರು. ‘ತಿಥಿ’ ಚಿತ್ರದ ನಂತರ ಅವರು ‘ತರ್ಲೆ ವಿಲೇಜ್’, ‘ಜಾನಿ ಮೇರಾ ನಾಮ್’, ‘ಹಳ್ಳಿ ಪಂಚಾಯಿತಿ’ ಸೇರಿದಂತೆ ಸುಮಾರು 8 ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಇದನ್ನೂ ಓದಿ: ಬಾಲಿವುಡ್‌ಗೆ ಮತ್ತೊಂದು ಆಘಾತ; ನಟ ಗೋವಿಂದ ಆಸ್ಪತ್ರೆಗೆ ದಾಖಲು

ತಮ್ಮ ಸಹಜತೆ ಮತ್ತು ವಿಶಿಷ್ಟ ಶೈಲಿಯಿಂದಾಗಿ ಗಡ್ಡಪ್ಪ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಗಡ್ಡಪ್ಪ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page