Connect with us

BANTWAL

ಬೀದಿಗೆ ಬಿದ್ದ ಕುಟುಂಬಕ್ಕೆ ಆಸರೆಯಾದ ಶಾಸಕ ರಾಜೇಶ್ ನಾಯ್ಕ್ : ಶಾಸಕರ ನಡೆಗೆ ಎಲ್ಲೆಡೆ ಪ್ರಶಂಸೆ..!

Published

on

ಬಂಟ್ವಾಳ:ಅನಾಥ ಕುಟುಂಬವೊಂದಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಕಾಲದಲ್ಲಿ ನೆರವಿನ ಭರವಸೆ ನೀಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಲಾಕ್ ಡೌನ್ ಬಳಿಕ ಮನೆಕಳೆದುಕೊಂಡು, ಕೆಲಸ, ಊಟ ಇಲ್ಲದೇ ಬೀದಿಯಲ್ಲಿದ್ಧ ಕುಟುಂಬಕ್ಕೆ ಆಸರೆಯಾಗಿ ನಿಂತ ಬಂಟ್ವಾಳ ಶಾಸಕರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಮೂಲತಃ ಬಂಟ್ವಾಳ ತಾಲೂಕಿನ  ಬಡಗಬೆಳ್ಳೂರು ಮುಟ್ಟಿಕಲ್ಲು ಎಂಬಲ್ಲಿನ  ಕುಟುಂಬ ವಗ್ಗದ ಕುಜಿಲಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಗಂಡ ಮೇಸ್ತ್ರಿ ಕೆಲಸ ಸಹಾಯಕರಾಗಿ ದುಡಿದು ಹೆಂಡತಿ ಮತ್ತು ಎರಡು ವರ್ಷದ ಮಗುವಿನೊಂದಿಗೆ ಜೀವನ ಮಾಡುತ್ತಿದ್ದರು.  ಕೆಲಸ ವಿಲ್ಲದ ಕುಟುಂಬ ಮನೆ ಬಾಡಿಗೆಕೊಡಲು ಕೈಯಲ್ಲಿ ಡುಡ್ಡಿಲ್ಲ,

ಊಟಕ್ಕೆ ಗತಿಯಿಲ್ಲ ಎಂಬ ಸ್ಥಿತಿಯಲ್ಲಿರುವಾಗ ಬಾಡಿಗೆ ಮನೆ ಬಿಟ್ಟು ಹೊರಗೆ ಬರಬೇಕಾಯಿತು. ಹೀಗೆ ಮನೆ ಬಿಟ್ಟು ಬೀದಿಗೆ ಬಂದ ಪತ್ನಿಯೊಂದಿಗೆ ಎರಡು ವರ್ಷದ ಎಳೆಯ ಕಂದಮ್ಮನ ಜೊತೆಯಲ್ಲಿ ಬಿಸಿರೋಡು ಬಸ್ ನಿಲ್ದಾಣ ದಲ್ಲಿ ಕುಳಿತುಕೊಂಡಿದ್ದರು.

ಇವರ ಪರಿಸ್ಥಿತಿಯನ್ನು ಅರಿತ ಕರ್ಪೆ ಗ್ರಾಮದ ಅಡಂಗಾಜೆ ನಿವಾಸಿ ಪ್ರಶಾಂತ್ ಶಾಂತಿ ಎಂಬವರು ಕುಟುಂಬ ವನ್ನು ತನ್ನ  ಮನೆಗೆ  ಕರೆದುಕೊಂಡು ಬಂದು ವಾಸ್ತವ್ಯ  ಸಮೇತ ಊಟೋಪಚಾರ ವ್ಯವಸ್ಥೆ ಮಾಡಿದ್ದರು.

ಕರ್ಪೆ ಗ್ರಾಮದಲ್ಲಿ ತಾತ್ಕಾಲಿಕ ವಾಗಿ ಆಸರೆ ಪಡೆದ ಕುಟುಂಬದ ಸದಸ್ಯೆ ವಿಮಲ ಅವರು  ತನ್ನ  ಕುಟುಂಬದ ಪರಿಸ್ಥಿತಿ ಯನ್ನು  ವಾಟ್ಸಪ್ ನಲ್ಲಿ ವಿಡಿಯೋ ಮೆಸೇಜ್ ಮೂಲಕ  ತಿಳಿಸಿ   ತನ್ನ ಅಳಲನ್ನು  ತೋಡಿಕೊಂಡಿರುವ ವಿಷಯವು  ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿಯಲು ಬಿಟ್ಟಿದ್ದರು.

ನಾವು ಕೂಲಿ ಕಾರ್ಮಿಕರು ನಮಗೆ ಮನೆಯಿಲ್ಲ, ಊಟಕ್ಕೆ ಗತಿಯಿಲ್ಲ ಸಾಧ್ಯ ವಾದವರು ಸಹಾಯಮಾಡಿ ಬಂಟ್ವಾಳ ಶಾಸಕರಿಗೆ ಮುಟ್ಟುವವರೆಗೆ ಶೇರ್ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ವೀಡಿಯೋ  ಕಂಡ  ಬಂಟ್ವಾಳ  ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಯವರು ತಕ್ಷಣವೇ ಸ್ಪಂದಿಸಿದ್ದಾರೆ.  ಶಾಸಕರ  ವಾರ್ ರೂಮ್ ಸದಸ್ಯರು ಹಾಗೂ ಸ್ಥಳೀಯ ತಾಲೂಕು  ಪಂಚಾಯತ್ ಸದಸ್ಯರಾದ  ಪ್ರಭಾಕರ  ಪ್ರಭು ಮತ್ತು ಬಿಜೆಪಿ  ನಾಯಕರಾದ  ರತ್ನಕುಮಾರ್ ಚೌಟರ  ಮೂಲಕ ಮನೆಗೆ ಭೇಟಿ ನೀಡಿ ನೊಂದ  ಮಹಿಳೆ ಯೊಂದಿಗೆ ಶಾಸಕರು ದೂರವಾಣಿ ಕರೆಯಲ್ಲಿ ಮಾತನಾಡಿ  ನಾಳೆಯಿಂದಲೇ ಸಕಲ  ವ್ಯವಸ್ಥೆಯನ್ನು  ಪೂರೈಸುವುದಾಗಿ ಭರವಸೆ ನೀಡಿದರು.

ಶಾಸಕರ ಸ್ಪಂದನೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

BANTWAL

ತುಂಬೆ: ಚಾಲಕನಿಗೆ ಮೂರ್ಛೆ ರೋಗ ಬಂದು ಡಿವೈಡರ್ ಮೇಲೇರಿದ ಲಾರಿ

Published

on

ಬಂಟ್ವಾಳ: ಚಾಲಕನಿಗೆ ಮೂರ್ಛೆ ರೋಗ ಬಂದು ಡಿವೈಡರ್ ಮೇಲೆ ಲಾರಿ ಹತ್ತಿ ಸುಮಾರು 100 ಮೀ ನಷ್ಟು ಚಲಿಸಿ ನಿಂತಿದ್ದು, ಬಳಿಕ ಡ್ರೈವರ್ ಸೀಟಿನಲ್ಲಿ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ರಾ.ಹೆ.75ರ ತುಂಬೆ ಸಮೀಪ ನಡೆದಿದೆ.

ಲಾರಿ ಚಾಲಕನನ್ನು ಕೂಡಲೇ ಸ್ಥಳೀಯರು ತುಂಬೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ 7.45 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಡಿವೈಡರ್ ಮೇಲೆ ಹಾಕಿದ್ದ ರಸ್ತೆ ಸೂಚಕಾ ಫಲಕಕ್ಕೆ ಹಾನಿಯಾಗುವುದು ಬಿಟ್ಟರೆ ಬೇರೆ ಯಾವೂದೇ ರೀತಿಯ ತೊಂದರೆ ಆಗಲಿಲ್ಲ.

ಲಾರಿಯು ಬೆಂಗಳೂರಿನಿಂದ ಮಂಗಳೂರು ಕಡೆಗೆ ಚಲಿಸುತ್ತಿತ್ತು. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Continue Reading

Ancient Mangaluru

ಚಿಕಿತ್ಸೆ ಫಲಕಾರಿಯಾಗದೆ ಯುವ ಪೊಲೀಸ್ ಸಿಬ್ಬಂದಿ ನಿಧನ

Published

on

ಬಂಟ್ವಾಳ : ತೀವ್ರ ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೊಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಂಗಳವಾರ (ಫೆ.11) ನಡೆದಿದೆ.

ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ (26) ಮೃತಪಟ್ಟ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಅವಿವಾಹಿತರಾಗಿದ್ದ ಅಭಿಷೇಕ್ ಅವರು 2020ರಲ್ಲಿ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯ ಎಚ್.ಸಿ.ಯಾಗಿ ನೇಮಕಗೊಂಡಿದ್ದರು. ಆ ಬಳಿಕ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರಿಗೆ ಕಳೆದ ಒಂದು ವರ್ಷದ ಹಿಂದೆ ಬೆನ್ನುಮೂಳೆಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬ್ಲಡ್ ಕ್ಯಾನ್ಸರ್ ಕಂಡು ಬಂದಿತ್ತು.

ಇದನ್ನೂ ಓದಿ: ಶಾಲಾ ಬಸ್ ಸೀಟ್‌ಗಾಗಿ ನಡೆದ ಜಗಳ ಬಾಲಕನ ಸಾವಿನಲ್ಲಿ ಅಂತ್ಯ

ಆ ಬಳಿಕ ಸುಮಾರು 8 ತಿಂಗಳಿನಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಕುಟುಂಬ ಮೂಲಗಳು ತಿಳಿಸಿವೆ. ಅಭಿಷೇಕ್ ಅವರ ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ನಗರದಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.

Continue Reading

BANTWAL

ಬಂಟ್ವಾಳದಲ್ಲಿ ಭಾರೀ ಅಗ್ನಿ ಅವಘಡ; ಸುಟ್ಟು ಕರಕಲಾದ ಗೋಡೋನ್‌

Published

on

ಬಂಟ್ವಾಳ : ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ನಿಂದ ಗೋಣಿಯ ಗೋಡನಿಗೆ  ಬೆಂಕಿ ಹತ್ತಿ ಗೋಡನ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ನಿನ್ನೆ (ಫೆ.10)  ಬಂಟ್ವಾಳ ಕರಿಯಂಗಳ ಗ್ರಾಮದ ಬಡಕಬೈಲು ಪ್ರದೇಶದಲ್ಲಿ ನಡೆದಿದೆ.

ಗೋಡೋನ್‌ಗೆ ಬೆಂಕಿ ಹತ್ತಿದ್ದು ಮಾತ್ರವಲ್ಲದೇ, ಹತ್ತಿರದ ಅಬ್ದುಲ್ ಹಮೀದ್ ಮನೆಗೆ ಬೆಂಕಿ ಬಿದ್ದಿದೆ. ಸುಲೇಮಾನ್ ಹಾಗೂ ಮಹಮ್ಮದ್ ಹನೀಪ್ ಮನೆ ಸ್ವಲ್ಪಮಟ್ಟಿಗೆ ಬೆಂಕಿಗಾಹುತಿಯಾಗಿದೆ. ಬೆಂಕಿ ಅನಾಹುತದಿಂದ ಪ್ರಾಣಹಾನಿ ಉಂಟಾಗಿಲ್ಲ. ರಾತ್ರಿ ಸುಮಾರು 11 ಗಂಟೆಗೆ ಬೆಂಕಿ ಬಿದ್ದಿದ್ದು, ಕೂಡಲೇ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಪತಿಗೆ ಅನೈತಿಕ ಸಂಬಂಧವಿರುವ ಶಂಕೆ; ಜಿಮ್‌ನಲ್ಲಿಯೇ ಆತ್ಮಹತ್ಯೆಗೆ ಶರಣಾದ ಪತ್ನಿ

ತಕ್ಷಣವೇ ಮೂರು ಅಗ್ನಿಶಾಮಕ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ ಭಾರೀ ಜನಸ್ತೋಮವೇ ನೆರೆದಿದ್ದು, ಬೆಂಕಿ ನಂದಿಸಲು ಸಹಕರಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page