Connect with us

LATEST NEWS

ರಜತ್ ಮಾಡಿದ ಯಡವಟ್ಟು, ಪಂದ್ಯದ ಗತಿಯನ್ನೇ ಬದಲಾಯಿಸಿತು..!

Published

on

ಮಂಗಳೂರು/ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ವಿರುದ್ದ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆದರೆ ಈ ಪಂದ್ಯದ ಗತಿ ಬದಲಿಸಿದ್ದು, ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟೀದರ್ ಮಾಡಿದ ಆ ಒಂದು ಯಡವಟ್ಟಿನಿಂದ.


ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟ್ ಮಾಡಿದ್ದ ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು 163 ರನ್‌ಗಳನ್ನು ಕಲೆ ಹಾಕಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್, 17.5 ಓವರ್‌ನಲ್ಲಿ ನಿಗದಿತ ಗುರಿ ಮುಟ್ಟಿತು.

ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಕನ್ನಡಿಗ ಕೆಎಲ್ ರಾಹುಲ್ ಪ್ರಮುಖ ಪಾತ್ರವಹಿಸಿದರು. 53 ಬಾಲ್‌ನಲ್ಲಿ 93 ರನ್‌ಗಳನ್ನು ಗಳಿಸಿ ತಂಡವನ್ನು ಗೆಲ್ಲಿಸಿಕೊಟ್ಟರು.

ರಜತ್ ಮಾಡಿದ ಎಡವಟ್ಟು..!
ಬ್ಯಾಟಿಂಗ್‌ ಇಳಿದ ಡೆಲ್ಲಿ ತಂಡಕ್ಕೆ ಆರಂಭದಲ್ಲಿ ಆರ್‌ಸಿಬಿಯ ತೀಕ್ಷ್ಣ ಬೌಲಿಂಗ್ ಎದುರಾಯಿತು. ಡೆಲ್ಲಿ ತಂಡ ಕೇವಲ 30 ರನ್‌ಗಳಿಗೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್ ಮೆಕ್‌ಗುರ್ಕ್ ಮತ್ತು

ಅಭಿಷೇಕ್ ಪೊರೆಲ್ ಅವರನ್ನು ಬೇಗನೆ ಪೆವೆಲಿಯನ್‌ಗೆ ಸೇರಿಸಿದರು. ಒಂದು ವಿಕೆಟ್ ಯಶ್ ದಯಾಳೆ ಪಾಲಾದರೆ, ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದರು.

ಮೂರು ಪ್ರಮುಖ ವಿಕೆಟ್ ಜೊತೆಯಲ್ಲೇ 4ನೇ ವಿಕೆಟ್ ಕೂಡ ಆರ್‌ಸಿಬಿಗೆ ಪವರ್ ಪ್ಲೇನಲ್ಲೇ ಸಿಗುತ್ತಿತ್ತು, ಆದರೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮಾಡಿದ ಎಡವಟ್ಟು ಇಡೀ ಪಂದ್ಯವನ್ನೇ ಕಳೆದುಕೊಳ್ಳುವಂತಾಯಿತು. ಪಾಟಿದರ್ ಅವರು ಕೆಎಲ್ ರಾಹುಲ್ ಅವರ ಕ್ಯಾಚ್ ಡ್ರಾಪ್ ಮಾಡಿದ್ದು ಪಂದ್ಯದ ಗತಿಯನ್ನೇ ಬದಲಾಯಿಸಿತು. ಇದು ನಾಲ್ಕನೇ ಓವರ್‌ನಲ್ಲಿ ಸಂಭವಿಸಿತು. ಯಶ್‌ ದಯಾಳ್ ಬೌಲಿಂಗ್ ಮಾಡುತ್ತಿದ್ದರು.

ಇದನ್ನೂ ಓದಿ: ವಿರಾಟ್‌ ಕೊಹ್ಲಿ ಫೋಟೋವನ್ನು ಹಂಚಿಕೊಂಡ WWE ಸೂಪರ್‌ ಸ್ಟಾರ್‌..!

ಈ ಓವರ್‌ನ ಎರಡನೇ ಎಸೆತದಲ್ಲಿ, ರಾಹುಲ್ ಅವರ ಬ್ಯಾಟ್‌ನ ಅಂಚಿಗೆ ತಗುಲಿ ಚೆಂಡು ನೇರವಾಗಿ ಗಾಳಿಯಲ್ಲಿ ಹಾರಿತು. ಕವರ್ಸ್‌ನಲ್ಲಿ ನಿಂತಿದ್ದ ಪಾಟಿದರ್ ಕ್ಯಾಚ್‌ಗೆಂದು ಓಡಿ ಹೋದರು. ಆದರೆ ಕ್ಯಾಚ್ ಅವರ ಕೈಯಿಂದ ಚೆಂಡು ಜಾರಿತು. ಆ ಸಮಯದಲ್ಲಿ ರಾಹುಲ್ ವಿಕೆಟ್ ಪಡೆದಿದ್ದರೆ, ಪಂದ್ಯ ಆರ್‌ಸಿಬಿ ಕೈಯಲ್ಲಿರುತ್ತಿತ್ತು. ಆದರೆ ಆ ಕ್ಯಾಚ್ ತಪ್ಪಿದ ನಂತರ, ರಾಹುಲ್ ಅದ್ಬುತ ಬ್ಯಾಟಿಂಗ್ ಮಾಡಿ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಹೀಗಾಗಿ ರಜತ್ ಮಾಡಿದ ಯಡವಟ್ಟಿನಿಂದ ಪಂದ್ಯದ ಗತಿಯೇ ಬದಲಾಯಿತು

LATEST NEWS

ಶಿಕ್ಷಕರಿಗೆ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನದಿಂದ ವಿನಾಯಿತಿ..!?

Published

on

 ಮಂಗಳೂರು/ಬೆಂಗಳೂರು: ಏಪ್ರಿಲ್ 15 ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಆರಂಭವಾಗಿದೆ.


ಆದ್ರೆ ಏಪ್ರಿಲ್ 18 ರಂದು ಗುಡ್ ಫ್ರೈಡ್ , ಹೋಲಿ ಸ್ಯಾಟರ್‌ಡೆ ಮತ್ತು ಈಸ್ಟರ್ ಸಂಡೆ ದಿನದಂದು ಮೌಲ್ಯಮಾಪನಕ್ಕೆ ವಿನಾಯಿತಿ ಕೋರಿ ಶಿಕ್ಷಕರು ಮನವಿ ಮಾಡಿದ್ದಾರೆ. ಈ ಮನವಿಯನ್ನು ಪುರಸ್ಕರಿಸಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ಮಾಪನ ಮಂಡಳಿ ಕ್ರೈಸ್ತ ಸಮೂದಾಯದ ಶಿಕ್ಷಕರಿಗೆ ಮೌಲ್ಯ ಮಾಪನದಿಂದ ವಿನಾಯಿತಿ ನೀಡಿದೆ.

ಇದನ್ನೂ ಓದಿ: ರೈಲಿನಲ್ಲಿ ಎಟಿಎಮ್; ವಿನೂತನ ಕಾರ್ಯ ಪರಿಚಯಿಸಿದ ಭಾರತೀಯ ರೈಲ್ವೆ..!

ರಾಜ್ಯದ ಎಲ್ಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಪತ್ರ ಬರೆದು ಏ.18 ರಿಂದ 20 ರ ವರೆಗೆ ಅರ್ಹ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದೆ.

Continue Reading

DAKSHINA KANNADA

ಕಾಡು ಹಂದಿ ಮಾಂಸದ ಆಮಿಷವೊಡ್ಡಿ ವಂಚನೆ; ಖದೀಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

Published

on

ಕಡಬ : ಕಾಡು ಹಂದಿಯ ಮಾಂಸ ನೀಡುವುದಾಗಿ ಹಲವಾರು ಸಮಯಗಳಿಂದ ಹಲವರಿಂದ ಹಣ ಪಡೆದು  ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು  ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ  ಒಪ್ಪಿಸಿದ ಘಟನೆ ಮಂಗಳವಾರ(ಎ.15) ಕುಲ್ಕುಂದದಲ್ಲಿ  ನಡೆದಿದೆ.

ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ  ಕಾಡು ಹಂದಿ ಉರುಳಿಗೆ ಬಿದ್ದಿದ್ದು ಮಾಂಸ ಬೇಕಾದರೆ ಹೇಳಿ ಎಂದು ಈತ  ಹೇಳಿದ್ದ. ಮಹಿಳೆಯು ನಿರಾಕರಿಸಿ ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಈ ಸಂದರ್ಭ ಈ ಹಿಂದೆ ಹಣ ನೀಡಿ ಈತನಿಂದಲೇ ಮೋಸ ಹೋದ ವ್ಯಕ್ತಿಯೊಬ್ಬರು ಎದುರುಕೊಂಡಿದ್ದು ಈತನನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಡಬ ತಾಲೂಕಿನ ಮರ್ದಾಳದ ಮಹೇಶ ಬಂಧಿತ ಆರೋಪಿ. ಈತ ಹಲವರಿಗೆ ವಿವಿಧ ರೀತಿಯಲ್ಲಿ  ವಂಚಿಸಿರುವುದು ತಿಳಿದು ಬಂದಿದೆ. ದೂರು ನೀಡಲು ಯಾರು ಮುಂದೆ ಬಾರದ ಕಾರಣ ಆತನನ್ನು ವಿಚಾರಿಸಿ ಪೊಲೀಸರು ಬಿಟ್ಟಿರುವುದಾಗಿ ತಿಳಿದುಬಂದಿದೆ.

ಈತ ಫೆಬ್ರವರಿ ತಿಂಗಳಲ್ಲಿ ಕೆಡ್ಡಸದ ಸಂದರ್ಭ  ಎಡಮಂಗಲದಲ್ಲಿ  ವ್ಯಕ್ತಿಯೊಬ್ಬರು  ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದು , ಹಂದಿ ಮಾಂಸ ಇದೆ. ಬೇಕಾದರೆ ಕೊಡುತ್ತೇನೆ ಎಂದು ಹೇಳಿ ಹಲವರಿಂದ  ಹಣ ಪಡೆದಿದ್ದ. ತನ್ನ ಜೊತೆ  ಹಿರಿಯ ವ್ಯಕ್ತಿಯನ್ನು ಕರೆದೊಯ್ದಿದ್ದ. ಅವರನ್ನು ಪಾಲೋಲಿ ಸೇತುವೆ ಬಳಿ  ಬೈಕ್ ನಿಂದ ಇಳಿಸಿ ಕ್ಷಣ ಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ  ಎಸ್ಕೇಪ್ ಆಗಿದ್ದ.

ಇದನ್ನೂ ಓದಿ : ಗರ್ಭಿಣಿ ಎಂದು ಸುಳ್ಳು ಹೇಳಿದ್ಲು…ಮಗುವಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿ ಜೈಲು ಸೇರಿದ್ಲು!

ವಂಚಿಸಿದ ವ್ಯಕ್ತಿ ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು. ಆ ಸಂದರ್ಭದಲ್ಲಿ ಯಾರೂ ಠಾಣೆಗೆ ದೂರು ನೀಡದ ಕಾರಣ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿದುಬಂದಿದೆ.

 

 

Continue Reading

LATEST NEWS

ಗರ್ಭಿಣಿ ಎಂದು ಸುಳ್ಳು ಹೇಳಿದ್ಲು…ಮಗುವಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿ ಜೈಲು ಸೇರಿದ್ಲು!

Published

on

ಮಂಗಳೂರು/ನವದೆಹಲಿ : ಮದುವೆಯಾಗಿ ಏಳು ವರ್ಷವಾದ್ರೂ ಮಕ್ಕಳಾಗದ ಮಹಿಳೆ ಗಂಡನ ಮನೆಯಲ್ಲಿ ಹೇಳಿದ ಸುಳ್ಳಿನ ಕಾರಣದಿಂದಾಗಿ ಪೊಲೀಸರ ಅತಿಥಿಯಾಗಿದ್ದಾಳೆ. ಈ ಘಟನೆ ನವದೆಹಲಿಯಲ್ಲಿ ನಡೆದಿದ್ದು, ಮಾಲ್ವಿಯಾ ನಗರದ ಪೂಜಾ ಎಂಬಾಕೆ ಬಂಧನಕ್ಕೆ ಒಳಗಾದ ಮಹಿಳೆ.

ಗರ್ಭಿಣಿ ಎಂದು ಸುಳ್ಳು ಹೇಳಿದ್ಲು :

ಪೂಜಾಳಿಗೆ ಮದುವೆಯಾಗಿ ಏಳು ವರ್ಷವಾಗಿದ್ದರೂ ಮಕ್ಕಳಾಗದ ಕಾರಣ ಸಾಕಷ್ಟು ಪರಿತಪಿಸಿದ್ದು, ಕಳೆದ ಒಂಭತ್ತು ತಿಂಗಳ ಹಿಂದೆ ಅತ್ತೆಯಲ್ಲಿ ಅದೊಂದು ಸುಳ್ಳು ಹೇಳಿದ್ದಾಳೆ. ಪೂಜಾ ತಾನು ಗರ್ಭಿಣಿಯಾಗಿರುವುದಾಗಿ ಅತ್ತೆಯಲ್ಲಿ ತಿಳಿಸಿದ್ದು, ವಿಚಾರ ಕೇಳಿ ಮನೆಯವರೆಲ್ಲರೂ ಸಂಭ್ರಮಿಸಿದ್ದಾರೆ. ಪೂಜಾ ಕೂಡ ಒಂಭತ್ತು ತಿಂಗಳಿನಿಂದ ಗರ್ಭಿಣಿಯಂತೆ ನಟಿಸಿದ್ದು, ಪ್ರಸವದ ಸಮಯ ಹತ್ತಿರವಾಗುತ್ತಿದ್ದಂತೆ ಆತಂಕಗೊಂಡಿದ್ದಾಳೆ. ಆದರೆ, ಈ ಆತಂಕ ದೂರ ಮಾಡಲು ಆಕೆ ಸಾಕಷ್ಟು ಪ್ಲ್ಯಾನ್ ಮಾಡಿದ್ದು, ನವದೆಹಲಿಯ ಸಪ್ತರ್ಜಂಗ್ ಆಸ್ಪತ್ರೆಯಿಂದ ಮಗುವಿನ ಕಳ್ಳತನ ಮಾಡಿದ್ದಾಳೆ.

ಎಪ್ರಿಲ್ 14 ರಂದು ಸಪ್ತರ್ಜಂಗ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವನ್ನು ಎಪ್ರಿಲ್ 15 ರಂದು ಅಪಹರಿಸಿದ್ದಾಳೆ.

ಇದನ್ನೂ ಓದಿ : ಮಂಗಳೂರಿನಲ್ಲಿ ನಡೆಯಿತಾ ಸಾಮೂಹಿಕ ಅತ್ಯಾಚಾರ? ಅರೆ ಪ್ರಜ್ಞಾವಸ್ಥೆಯಲ್ಲಿ ಬಿಹಾರದ ಯುವತಿ ಪತ್ತೆ!

ಸಿಸಿಟಿವಿಯಿಂದಾಗಿ ಕೃತ್ಯ ಬಯಲು : 

ಆಸ್ಪತ್ರೆಯಲ್ಲಿ ಮಗು ಕಾಣೆಯಾದ ಬಗ್ಗೆ ಮಗುವಿನ ಪೋಷಕರು ದೂರು ನೀಡಿದ್ದು, ಸಿಸಿಟಿವಿಯ ತಪಾಸಣೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಮುಖವನ್ನು ಮರೆಮಾಚಿದ ಮಹಿಳೆಯೊಬ್ಬಳು ಮಗುವಿನೊಂದಿಗೆ ನಡೆದುಕೊಂಡು ಹೋಗುವುದನ್ನು ಗಮನಿಸಿದ್ದಾರೆ. ಆಕೆಯ ಪ್ರತಿಯೊಂದು ಚಲನವಲನವನ್ನು ಪತ್ತೆ ಮಾಡಿ ಏಮ್ಸ್ ಮೆಟ್ರೋ ನಿಲ್ದಾಣದಿಂದ ಸಮಯಪುರಕ್ಕೆ ಪ್ರಯಾಣಿಸಿ ಪಂಚಶೀಲ ಫ್ಲೈ ಓವರ್ ಕಡೆಗೆ ಹೋಗಿರುವುದನ್ನು ಗಮನಿಸಿದ್ದಾರೆ. ಮಗುವಿನ ಸಹಿತ ಗಂಡನ ಮನೆಗೆ ಹೋಗುತ್ತಿದ್ದ ಪೂಜಾಳನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಈ ವೇಳೆ ತಾನು ಅತ್ತೆಯಲ್ಲಿ ಹೇಳಿದ ಸುಳ್ಳನ್ನು ಸತ್ಯ ಮಾಡಲು ಮಗುವನ್ನು ಕದ್ದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.

Continue Reading
Advertisement

Trending

Copyright © 2025 Namma Kudla News

You cannot copy content of this page