ದೆಹಲಿ/ಮಂಗಳೂರು: ವಯನಾಡು ಹಾಗೂ ರಾಯ್ಬರೇಲಿ ಎರಡನ್ನೂ ಗೆದ್ದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದ್ಯ ದೇಶದ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸಿದ್ದಾರೆ. ರಾಯ್ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿರುವ ರಾಹುಲ್ ಗಾಂಧಿ ಸದ್ಯ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಪ್ರವಾಸ ಮಾಡ್ತಾ ಇದ್ದಾರೆ. ಇತ್ತ ವಯನಾಡು ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಉಪಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ರಾಜಸ್ಥಾನದಿಂದ ರಾಜ್ಯ ಸಭಾ ಸದಸ್ಯೆಯಾಗಿ ಸೋನಿಯಾ ಗಾಂಧಿ ಪಶ್ಚಿಮದ ರಾಜ್ಯಗಳತ್ತ ಗಮನ ಹರಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಭಾರತದಲ್ಲಿ ರಾಹುಲ್ ನಿರಂತರ ಪ್ರವಾಸ..!

ವಿರೋಧ ಪಕ್ಷದ ನಾಯಕನಾದ ಬಳಿಕ ಉತ್ತರ ಭಾರತದ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವ ರಾಹುಲ್ ಗಾಂಧಿ ತಮ್ಮ ಎಂದಿನ ಶೈಲಿಯಲ್ಲೇ ಜನರನ್ನು ಭೇಟಿಯಾಗ್ತಾ ಇದ್ದಾರೆ. ಅಸ್ಸಾಂ ನೆರೆ ಸಂತ್ರಸ್ತರು, ಹತ್ರಾಸ್ ಕಾಲ್ತುಳಿತ ಸಂತ್ರಸ್ತರು, ಮಣಿಪುರ ಗಲಭೆಯ ಸಂತ್ರಸ್ತರು, ಹೀಗೇ ಎಲ್ಲರನ್ನೂ ಭೇಟಿಯಾಗಿ ಸಾಂತ್ವಾನ ಹೇಳ್ತಾ ಇದ್ದಾರೆ. ತನ್ನ ಕ್ಷೇತ್ರವಾದ ರಾಯ್ ಬರೇಲಿಯಲ್ಲೂ ಸುತ್ತಾಡಿಕೊಂಡು ಫುಲ್ ಆಕ್ಟಿವ್ ಆಗಿದ್ದಾರೆ. ಸಂತ್ರಸ್ತರ ನೆರವಿಗೆ ಬಾರದ ಕೇಂದ್ರ ಸರ್ಕಾರಕ್ಕೆ ಛಾಟಿ ಬೀಸುವ ಮೂಲಕ ಉತ್ತರ ಭಾರತದ ಜನರ ವಿಶ್ವಾಸ ಗಳಿಸುತ್ತಿದ್ದಾರೆ. ಇನ್ನು ತನ್ನದೇ ಕ್ಷೇತ್ರ ರಾಯ್ ಬರೇಲಿಯಲ್ಲೂ ಕೂಡಾ ಓಡಾಡಿಕೊಂಡು ಜನರ ಜೊತೆ ಬೆರೆಯುತ್ತಿರುವ ರಾಹುಲ್ ಗಾಂಧಿ ಜನರಿಗೆ ಬಹಳಷ್ಟು ಹತ್ತಿರವಾಗಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಶಾಸಕ ವೈ ಭರತ್ ಶೆಟ್ಟಿ ಮೇಲೆ ಎಫ್ಐಆರ್
ದಕ್ಷಿಣದಲ್ಲಿ ಹವಾ ಸೃಷ್ಠಿಸಲು ಸಜ್ಜಾದ ಪ್ರಿಯಾಂಕಾ..!

ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸಿದ್ದ ಪ್ರಿಯಾಂಕ ಗಾಂಧಿ ಶೀಘ್ರವಾಗಿ ಕೇರಳದ ವಯನಾಡಿಗೆ ಶಿಫ್ಟ್ ಆಗುತ್ತಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದ ಪ್ರಿಯಾಂಕಾ ಸದ್ಯ ಕೇರಳದತ್ತ ಗಮನಹರಿಸಿದ್ದಾರೆ. ರಾಹುಲ್ ಗಾಂಧಿಗೆ ಮರುಜೀವ ನೀಡಿದ್ದ ವಯನಾಡಿನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿದ್ದು, ಗೆಲುವಿನ ನಿರೀಕ್ಷೆಯಲ್ಲೂ ಇದ್ದಾರೆ. ಕೇರಳದಲ್ಲಿ ಗೆಲುವು ಸಾಧಿಸಿದ್ರೆ ದಕ್ಷಿಣ ಭಾರತದಲ್ಲಿ ಪ್ರಿಯಾಂಕ ಹವಾ ಸೃಷ್ಠಿಯಾಗುವ ಎಲ್ಲಾ ಲಕ್ಷಣ ಗೋಚರಿಸಿದೆ.
ಗಾಂಧಿ ಕುಟುಂಬ ಮುಂದಿಟ್ಟು ಕಾಂಗ್ರೆಸ್ ತಂತ್ರಗಾರಿಕೆ..!
ಉತ್ತರ, ದಕ್ಷಿಣ ಹಾಗೂ ಪಶ್ಚಿಮದಲ್ಲಿ ರಾಹುಲ್ , ಪ್ರಿಯಾಂಕಾ , ಸೋನಿಯಾ ಗಾಂಧಿ ಮೂಲಕ ಪಕ್ಷ ಸಂಘಟನೆಯ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ಇದೊಂದು ಕಾಂಗ್ರೆಸ್ನ ಉತ್ತಮ ರಾಜಕೀಯ ತಂತ್ರಗಾರಿಕೆ ಅಂತ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ 10 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆ ರಾಹುಲ್ ಗಾಂಧಿಗೆ ಮೊದಲ ಅಗ್ನಿ ಪರೀಕ್ಷೆಯಾಗಿದೆ. ರಾಯ್ ಬರೇಲಿ ಉಳಿಸಿಕೊಂಡ ರಾಹುಲ್ ಗಾಂಧಿ ಇಲ್ಲಿ ಎಷ್ಟು ಪ್ರಾಭಲ್ಯ ಬೆಳೆಸಿದ್ದಾರೆ ಅನ್ನೋದು ಉಪಚುನಾವಣೆ ಸಾಬೀತು ಪಡಿಸಲಿದೆ.
‘ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ’ ಕೇರಳದಲ್ಲಿ ಪೊಲೀಸರ ಬಲೆಗೆ ಬಿದ್ದ ದಿವ್ಯಾ ವಸಂತ
ಉತ್ತರ ಪ್ರದೇಶದಲ್ಲಿ 15 ವರ್ಷದ ಬಳಿಕ ಬದಲಾವಣೆಯ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಆಶಾಕಿರಣವಾಗಿದ್ದಾರೆ. ಈ ಬಾರಿ ಇಂಡಿ ಒಕ್ಕೂಟದ ಜೊತೆ ಸೇರಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಇನ್ನಿಲ್ಲದ ಶಾಕ್ ನೀಡಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ ಇದು ಕಾಂಗ್ರೆಸ್ನ ಉತ್ತಮ ನಡೆಯಾಗಿದ್ದು, ಎದುರಾಳಿ ಪಕ್ಷಗಳಿಗೆ ದೊಡ್ಡ ಸವಾಲು ನೀಡುವ ಸಾಧ್ಯತೆಯನ್ನು ನಿರೀಕ್ಷಿಸಿದ್ದಾರೆ.