Connect with us

LATEST NEWS

ಖತರ್ನಾಕ್ ದರೋಡೆ ಗ್ಯಾಂಗ್ ಬಂಧನ: ಹುಬ್ಬಳ್ಳಿ ಪೊಲೀಸರ ಯಶಸ್ವೀ ಕಾರ್ಯಾಚರಣೆ..

Published

on

ಹುಬ್ಬಳ್ಳಿ: ಚಾಕುವಿನಿಂದ ಹಲ್ಲೆ ನಡೆಸಿ, ಪಿಸ್ತೂಲ್ ತೋರಿಸಿ, ದರೋಡೆ ಮಾಡಿದ್ದ ಗ್ಯಾಂಗ್ ನ್ನು ಬಂಧಿಸುವಲ್ಲಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹುಬ್ಬಳ್ಳಿಯ ಸೆಟಲ್ ಮೆಂಟ್ ಪ್ರದೇಶದ ಶ್ರೀನಿವಾಸ ವೀರಾಪುರ, ಸಿದ್ಧಾರ್ಥ ಅಲಿಯಾಸ್ ಕಿರಣ್ ಗುರುನಾಥ ಹಾಗೂ ಸುಧಾಕರ ಗಬ್ಬೂರ ಎಂದು ಗುರುತಿಸಲಾಗಿದೆ.
ಮೇ 02 ರಂದು ಹುಬ್ಬಳ್ಳಿ ತಾಲೂಕಿನ ಬೆಳಗಲಿ ಕ್ರಾಸ್ ಬಳಿ ದರೋಡೆ ಕೃತ್ಯ ಘಟನೆ ನಡೆದಿತ್ತು. ಶಿರಾಜ್ ಮೆಹಬೂಬ್ ಸಾಬ್ ಕೋಳೂರ ಹಾಗೂ ಆತನ ಗೆಳೆಯ ಹಾಶೀಮ್ ಪೀರ ಸವಣೂರ ಅವರು ಹೋಗುತ್ತಿದ್ದ ವೇಳೆ ವಾಹನ ಅಡ್ಡಗಟ್ಟಿದ್ದ ಆರೋಪಿಗಳು,
ಚಾಕುವಿನಿಂದ ಹಲ್ಲೆ ಮಾಡಿ, ಗನ್ ತೋರಿಸಿ ದರೋಡೆ ಮಾಡಿದ್ದಾರೆ. 15 ಸಾವಿರ ರೂಪಾಯಿ ನಗದು, ಎರಡು ಪರ್ಸ್, 20 ಸಾವಿರ ರೂಪಾಯಿ ಮೌಲ್ಯದ ಹೊಸ ಬಟ್ಟೆಗಳು ಇತ್ಯಾದಿಗಳನ್ನು ಕಳವುಗೈದಿದ್ದ ಆರೋಪಿಗಳು ಎಸ್ಕೇಪ್ ಆಗಿದ್ದರು.


ಗ್ರಾಮೀಣ ಠಾಣೆ ಪೊಲೀಸ್ ಇನ್ಸಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್, ತಲ್ವಾರ್ ಮತ್ತಿತರ ವಸ್ತು ಜಪ್ತಿ ಮಾಡುವ ಜೊತೆಗೆ, ದರೋಡೆ ಮಾಡಿದ ನಗದು ಹಣವನ್ನೂ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ಬಂಧಿಸಿದ ನಂತರ ಈ ಗ್ಯಾಂಗ್ ಬೇರೆ ಬೇರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಬಂಧಿತ ಆರೋಪಿಗಳು ವಾಹನಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಹೆದರಿಸಿ ದರೋಡೆ ಮಾಡುತ್ತಿದ್ದರು.

ಬಂಧಿತರು ರೌಡಿಶೀಟರ್ ಗಳಾಗಿದ್ದು, ಮರ್ಡರ್, ದರೋಡೆ ಇತ್ಯಾದಿ ಕೇಸ್ ಗಳು ಅವರ ಮೇಲಿವೆ. ರಾಜ್ಯವೊಂದೇ ಅಲ್ಲದೆ ನೆರೆ ರಾಜ್ಯಗಳಲ್ಲಿಯೂ ಸಂಚರಿಸಿ ದರೋಡೆ ಇತ್ಯಾದಿ ಕೃತ್ಯ ನಡೆಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ…

LATEST NEWS

ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುತ್ತಿರುವಾಗ ಹೃದಯಾಘಾತವಾಗಿ ವ್ಯಕ್ತಿ ಸಾವು

Published

on

ತುಮಕೂರು: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶದ ನಾನಾ ಕಡೆಯಿಂದ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಅದೇ ರೀತಿ ಪುಣ್ಯ ಸ್ನಾನ ಮಾಡುತ್ತಿರುವಾಗ ಹೃದಯಾಘಾತದಿಂದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಶಿರಾ ತಾಲೂಕಿನ ಬರಗೂರು ಮೂಲದ ನಾಗರಾಜ್ (57) ಎಂದು ಗುರುತಿಸಲಾಗಿದೆ.

ಎಲ್‌ಎನ್‌ಪಿ ಬ್ರಿಕ್ಸ್ನ ಮಾಲೀಕರಾದ ನಾಗರಾಜು ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಮಂಗಳವಾರ ಸಾಯಂಕಾಲ ತ್ರಿವೇಣಿ ಸಂಗಮದಲ್ಲಿ ಸಂಧ್ಯಾ ವಂದನೆ ಮಾಡಿ ಪುಣ್ಯಸ್ನಾನ ಮಾಡುತ್ತಿರುವಾಗ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Continue Reading

FILM

ಗುಟ್ಟಾಗಿ ಎಂಗೇಜ್ಮೆಂಟ್…! ದರ್ಶನ್ ಬಗ್ಗೆ ಸ್ವಾಂಡಲ್‌ವುಡ್ ಕ್ವೀನ್ ಹೇಳಿದ್ದೇನು?

Published

on

ಮಂಗಳೂರು/ಬೆಂಗಳೂರು : ಇತ್ತೀಚೆಗೆ ನಟಿ ರಕ್ಷಿತಾ ಪ್ರೇಮ್ ಅವರ ತಮ್ಮನ ವಿವಾಹ ನಡೆಯಿತು. ಈ ವೇಳೆ ಸ್ಯಾಂಡಲ್ ವುಡ್‌ ನಟ, ನಟಿಯರು ಗಮನ ಸೆಳೆದಿದ್ದರು. ಅವರಲ್ಲಿ ರಮ್ಯಾ ಕೂಡ ಒಬ್ಬರು. ಕಪ್ಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಂಗೊಳಿಸುತ್ತಿದ್ದ ಸ್ಯಾಂಡಲ್‌ವುಡ್ ಕ್ವೀನ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಈ ವೇಳೆ ಅವರ ಕೈಯಲ್ಲಿದ್ದ ರಿಂಗ್ ಗಮನ ಸೆಳೆದಿತ್ತು.

ಎಂಗೇಜ್ಮೆಂಟ್…ಮದುವೆ ಊಟ:

ರಮ್ಯಾ ಮದುವೆ ಯಾವಾಗ? ಎಂಬ ಪ್ರಶ್ನೆ ಸದಾ ಚಾಲ್ತಿಯಲ್ಲಿರುತ್ತದೆ. ಇದೀಗ ಅವರ ಕೈಯಲ್ಲಿದ್ದ ರಿಂಗ್ ಮತ್ತೆ ಮದುವೆ ವಿಚಾರವನ್ನು ಮುನ್ನೆಲೆಗೆ ತಂದಿದೆ. ಈ ಬಗ್ಗೆ ಹಲವು ಊಹಾಪೋಹಾಗಳು ಹುಟ್ಟಿಕೊಂಡಿದೆ. ಗುಟ್ಟಾಗಿ ಎಂಗೇಜ್ಮೆಂಟ್ ಮಾಡ್ಕೊಂಡ್ರಾ ಮೋಹಕ ತಾರೆ? ಎಂದೇ ಹೇಳಲಾಗುತ್ತಿದೆ. ಇದೀಗ ಈ ಪ್ರಶ್ನೆಗೆ ರಮ್ಯಾ ಉತ್ತರ ಕೊಟ್ಟಿದ್ದಾರೆ. ಅದೂ ಒಗಟಾಗಿ.

ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಮಾಧ್ಯಮದವರು ಮದುವೆ, ರಿಂಗ್ ಬಗ್ಗೆ ಕೇಳಿದ್ದಾರೆ. ಅದಕ್ಕೆ ರಮ್ಯಾ ನಕ್ಕಿದ್ದಾರೆ. ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ. ಮದುವೆ ಆದ್ರೆ ಮಾತ್ರ ಸಿಹಿ ಊಟ ಹಾಕಿಸಬೇಕಾ? ಯಾವಾಗ ಬೇಕಾದರು ಹಾಕಿಸಬಹುದು. ಅದಕ್ಕೆ ಮದುವೆಯಾಗಲೇಬೇಕೆಂದೇನಿಲ್ಲ ಎಂದಿದ್ದಾರೆ. ಆಮೇಲೆ ವೈಯಕ್ತಿಕ ಪ್ರಶ್ನೆ ಬೇಡ ಎಂದು ಅಲ್ಲಿಂದ  ನಡೆದಿದ್ದಾರೆ.

ದರ್ಶನ್ ಬಗ್ಗೆ ರಮ್ಯಾ ಏನಂದ್ರು?

ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಜೈಲು ಪಾಲಾದಾಗ ನಟಿ ರಮ್ಯಾ ಟೀಕಿಸಿದ್ದರು. ತಮ್ಮ ಟ್ವೀಟ್ ಖಾತೆಯಲ್ಲಿ ದರ್ಶನ್ ವಿರುದ್ಧ ಟ್ವೀಟ್ ಮಾಡಿದ್ದರು.

ಕರ್ನಾಟಕ ಬಾಕ್ಸ್ ಆಫೀಸ್ ಎನ್ನುವ ಹೆಸರಿನ ಖಾತೆಯಿಂದ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ವೊಂದನ್ನು ಮಾಡಲಾಗಿತ್ತು. ಆ ಟ್ವೀಟ್‌ ಅನ್ನು ರಮ್ಯಾ ಅವರು ರೀ ಟ್ವೀಟ್ ಮಾಡಿದ್ದರು. ಐಪಿಸಿ ಸೆಕ್ಷನ್ 302 ಉಲ್ಲೇಖಿಸಿ, ಈ ಸೆಕ್ಷನ್‌ನ ಪ್ರಕಾರ ದರ್ಶನ್ ಕಠಿಣ ಶಿಕ್ಷೆಯಾಗಬಹುದು ಎಂದಿದ್ದರು. ಈ ಮೂಲಕ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದನ್ನೂ ಓದಿ : ಉ*ಗ್ರರ ಟಾರ್ಗೆಟ್ ಆದ ಪ್ರಧಾನಿ ಮೋದಿ..! ವಿಮಾನದ ಮೇಲೆ ದಾ*ಳಿಯ ಬೆದರಿಕೆ..!

ಇದೀಗ ದರ್ಶನ್ ಜೈಲಿನಿಂದ ಹೊರಬಂದ ಬಳಿಕ ನಟಿ ರಮ್ಯಾರಲ್ಲಿ ಅವರ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಲು ರಮ್ಯಾ ಹಿಂಜರಿದಿದ್ದಾರೆ. ನೋ ಕಮೆಂಟ್ಸ್ ಎಂದು ಮೆಲು ದನಿಯಲ್ಲಿ ಹೇಳಿ ಜಾರಿಕೊಂಡಿದ್ದಾರೆ.

Continue Reading

LATEST NEWS

ಸಾಲ ವಸೂಲಿಗೆ ಬಂದ ಬ್ಯಾಂಕ್ ಉದ್ಯೋಗಿಯನ್ನೇ ಮದುವೆಯಾದ ವಿವಾಹಿತ ಮಹಿಳೆ !

Published

on

ಮಂಗಳೂರು/ಪಾಟ್ನಾ : ವಿವಾಹಿತ ಮಹಿಳೆಯೊಬ್ಬಳು ಮನೆಯಿಂದ ಓಡಿಹೋಗಿ ಬ್ಯಾಂಕ್ ಉದ್ಯೋಗಿಯನ್ನೇ ಮದುವೆಯಾಗಿರುವ ಘಟನೆ ಬಿಹಾರದ ಜಮುಯಿ ಎಂಬ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಇವರಿಬ್ಬರ ಮದುವೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾಲ ವಸೂಲಿಗಾಗಿ ಬ್ಯಾಂಕ್ ಉದ್ಯೋಗಿ ಮಹಿಳೆಯ ಮನೆಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಉಂಟಾಗಿದೆ. ಆದರೆ ಕಳೆದ ಐದು ತಿಂಗಳಿನಿಂದ ಇಬ್ಬರೂ ರಹಸ್ಯವಾಗಿ ಭೇಟಿಯಾಗುತ್ತಿದ್ದರು ಎಂದು ಮದುವೆಯ ನಂತರ ಬಹಿರಂಗಗೊಂಡಿದೆ.

ವಿವಾಹಿತ ಮಹಿಳೆ ಮತ್ತು ಬ್ಯಾಂಕ್ ನೌಕರ ಮಂಗಳವಾರ (ಫೆ.11) ದೇವಸ್ಥಾನಕ್ಕೆ ತೆರಳಿ ವಿವಾಹವಾಗಿದ್ದಾರೆ. ಬ್ಯಾಂಕ್ ಉದ್ಯೋಗಿಯನ್ನು ಪವನ್‌ ಕುಮಾರ್ ಮತ್ತು ವಿವಾಹಿತ ಮಹಿಳೆಯ ಹೆಸರು ಇಂದ್ರಾ ಕುಮಾರಿ ಎಂದು ಹೇಳಲಾಗುತ್ತಿದೆ.

ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದ ಮಹಿಳೆ

ಪವನ್ ಕುಮಾರ್ ಬ್ಯಾಂಕ್‌ ಒಂದರಲ್ಲಿ ಉದ್ಯೋಗಿಯಾಗಿದ್ದು, ವಿವಾಹಿತ ಮಹಿಳೆ ಇಂದ್ರಕುಮಾರಿ ಅದೇ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದಳು. ಬಳಿಕ ಬ್ಯಾಂಕ್ ಸಾಲ ತೀರಿಸಲಾಗದೇ ಕಂಗಲಾಗಿದ್ದಳು. ಸಾಲ ವಸೂಲಾತಿಗಾಗಿ ಬ್ಯಾಂಕ್ ಸಿಬ್ಬಂದಿಯಾಗಿದ್ದ ಪವನ್‌ ಅವರು ಇಂದ್ರಕುಮಾರಿ ಮನೆಗೆ ಭೇಟಿ ನೀಡುತ್ತಿದ್ದರು.  ಈ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿ, ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಮಾತನಾಡಲು ಪ್ರಾರಂಭಿಸಿದ್ದರು. ಫೆಬ್ರವರಿ 4ರಂದು ಮಹಿಳೆ ತನ್ನ ಗಂಡನನ್ನು ಬಿಟ್ಟು ಬ್ಯಾಂಕ್ ನೌಕರನ ಜೊತೆ ಓಡಿಹೋಗಿದ್ದಳು.

ಇದನ್ನೂ ಓದಿ: 2 ಮಕ್ಕಳ ತಾಯಿ ವಾರದಲ್ಲಿ 5 ದಿನ ವಿಮಾನದಲ್ಲಿ ಪ್ರಯಾಣ

ಮೊದಲನೇ ಗಂಡನಿಂದ ಕಿರುಕುಳ

ಇಂದ್ರಕುಮಾರಿಗೆ 2022ರಲ್ಲೇ ವಿವಾಹವಾಗಿದೆ ಎಂದು ಹೇಳಲಾಗುತ್ತಿದೆ. ಪತಿ ವಿಪರೀತ ಮದ್ಯ ಸೇವಿಸಿ ಆಕೆಯನ್ನು ಹೊಡೆಯುತ್ತಿದ್ದನು. ಇದರಿಂದಾಗಿ ಸಾಲ ವಸೂಲಾತಿಗಾಗಿ ಬಂದಿದ್ದ ಬ್ಯಾಂಕ್ ಉದ್ಯೋಗಿಯಾಗಿ ಪವನ್ ಜೊತೆ ಆಪ್ತತೆ ಹೆಚ್ಚಾಯಿತು. ಕೊನೆಗೆ ಇಬ್ಬರ ಪ್ರೀತಿ ಮದುವೆಯ ಮೂಲಕ ಒಂದಾಗಿದೆ. ಆದರೆ ವಿವಾಹವಾದ ನಂತರ, ಇಂದ್ರಕುಮಾರಿ ತನ್ನ ಮೊದಲನೇ ಗಂಡ ಮತ್ತು ಇತರ ಕುಟುಂಬ ಸದಸ್ಯರಿಂದ ಜೀವ ಬೆದರಿಕೆ ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page