Connect with us

LATEST NEWS

ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ : ಬಡವರಿಗೆ ಪ್ರಧಾನಿ ಮಂತ್ರಿ ಗರೀಬ್​ ಕಲ್ಯಾಣ ಯೋಜನೆ ಅಡಿ ನವೆಂಬರ್​ವರೆಗೂ ಉಚಿತ ರೇಷನ್

Published

on

ನವದೆಹಲಿ :  ಕೋವಿಡ್​ ಸೋಂಕಿನ ವಿರುದ್ಧ ವಿಶ್ವದ ಪ್ರಮುಖ ದೇಶಗಳು ಹೋರಾಡುತ್ತಿದ್ದು, ಭಾರತ ಕೂಡ ಈ ಹೋರಾಟದಿಂದ ಹಿಂದೆ ಉಳಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೋಂಕಿನ ವಿರುದ್ಧ ಹೋರಾಟಕ್ಕೆ ಕಳೆದ ಒಂದೂವರೆ ವರ್ಷಗಳಲ್ಲಿ ಹೊಸ ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದೆ.

ದೇಶದಲ್ಲಿ ವಿವಿಧ ಕಂಪನಿಗಳು ಲಸಿಕೆಗಳನ್ನು ಉತ್ಪಾದಿಸಲು ಆರಂಭಿಸಲಿದೆ. ಇದರ ಜೊತೆಗೆ ಬೇರೆ ದೇಶಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಲಸಿಕೆಗಳು ಪಡೆದ ಕಾರಣದಿಂದಲೇ ಆರೋಗ್ಯ ಕಾರ್ಯಕರ್ತರು ಜನರ ಜೀವ ಉಳಿಸಲು ಸಾಧ್ಯವಾಯಿತು. ವಿಶ್ವಾಸದಿಂದಲೇ ಸಿದ್ಧಿ ಎಂಬ ಮೂಲಕ ಮಂತ್ರವನ್ನು ಜಪಿಸಿ ಈಗಾಗಲೇ ದೇಶದ 23 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ ಎಂದರು.

ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ಕೊಡುವ ನಿಟ್ಟಿನಲ್ಲಿ ಕಾರ್ಯ ನಡೆಸಲಾಗುತ್ತಿದ್ದು, ಜನರು ಕೂಡ ಅವರ ಸರದಿ ಬಂದಾಗ ಲಸಿಕೆ ಹಾಕಿಕೊಳ್ಳಬೇಕು. ಇದೇ ಕಾರಣದಿಂದ ಲಸಿಕೆ ವಿತರಣೆ ವೇಗವನ್ನು ಹೆಚ್ಚಸಿಲಾಗುವುದು.ಲಸಿಕೆ ಲಭ್ಯತೆ ಹೆಚ್ಚಿಸಲು ವಿದೇಶದಿಂದ ಕೂಡಲ ಲಸಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.

ಮಕ್ಕಳಿಗೂ ಲಸಿಕೆ ನೀಡುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಮಕ್ಕಳಿಗಾಗಿ ಎರಡಯ ಲಸಿಕೆಗಳ ಪ್ರಯೋಗ ನಡೆಯುತ್ತಿದೆ, ಇದರಲ್ಲಿ ಇಂದು ಮೂಗಿನ ದ್ರೌಷಧವಾಗಿದೆ ಎಂದರು.

ಬಡವರ ಜೊತೆಗೆ ಸರ್ಕಾರ ಇದೆ. ಇದೇ ಹಿನ್ನಲೆ ನವೆಂಬರ್​ ವರೆಗೂ ಬಡ ಸಹೋದರ-ಸಹೋದರಿಯರು ಹೊಟ್ಟೆ ಹಸಿವಿನಿಂದ ಬಳಲಬಾರದು. ಇದೇ ಕಾರಣದಿಂದ ನವೆಂಬರ್​ವರೆಗೂ ಪ್ರಧಾನಿ ಮಂತ್ರಿ ಗರೀಬ್​ ಕಲ್ಯಾಣ ಯೋಜನೆ ಅಡಿ ನವೆಂಬರ್​ವರೆಗೂ ಉಚಿತ ರೇಷನ್​ ನೀಡಲಾಗುವುದು. ಇದರಿಂದ 80 ಕೋಟಿ ಜನರು ಲಾಭಾ ಪಡೆಯಲಿದ್ದಾರೆ ಎಂದು ಘೋಷಿಸಿದರು.

ವರ್ಷದೊಳಗೆ ಭಾರತದಲ್ಲಿ ಎರಡು ಲಸಿಕೆಗಳು ತಯಾರಾದವು. ಲಸಿಕೆ ಕುರಿತು ಅನೇಕ ರಾಜಕಾರಣಗಳು ನಡೆದವು. ಲಸಿಕೆ ಬಗ್ಗೆ ಜನರಲ್ಲಿ ಅನುಮಾನ ಮೂಡುವಂತೆ ಮಾಡಿ ಜನರ ಜೀವನದ ಜೊತೆ ಆಟವಾಡಿದರು. ಇದೇ ಲಸಿಕೆ ಪಡೆದ ಕಾರಣದಿಂದಲೇ ವೈದ್ಯರು, ನರ್ಸ್​ ಆರೋಗ್ಯ ಸಿಬ್ಬಂದಿಗಳು ಜನರ ಜೀವ ರಕ್ಷಣೆಗೆ ಹೋರಾಡಿದರು. ಇದೇ ಕಾರಣದಿಂದಲೇ ಜನರಲ್ಲಿ ಮನವಿ ಮಾಡುತ್ತೇನೆ. ಜನರು ಹೋಗಿ ಲಸಿಕೆ ಪಡೆಯಬೇಕು, ಯುವ ಜನರು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಜನರು ತಪ್ಪದೇ ಮಾಸ್ಕ್​ ಧರಸಿಬೇಕು. ಸಾಮಾಜಿಕ ಅಂತರ ಕಾಡಬೇಕು, ಕೊರೋನಾ ಕರ್ಫ್ಯೂ ಸಡಿಲಿಸಿದ ಮಾತ್ರಕ್ಕೆ ಸೋಂಕು ಇಲ್ಲ ಎಂದು ತಿಳಿಯದೇ ಎಚ್ಚರವಹಿಸಬೇಕು. ನಾವೆಲ್ಲರೂ ಸೋಂಕಿನ ವಿರುದ್ಧ ಈ ಹೋರಾಟದಲ್ಲಿ ಜಯಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

LATEST NEWS

ಅಪಾರ್ಮೆಂಟ್ ನಿಂದ ಜಿಗಿದು SSLC ವಿದ್ಯಾರ್ಥಿನಿ ಆತ್ಮಹತ್ಯೆ

Published

on

ಬೆಂಗಳೂರು: ಅಪಾರ್ಮೆಟ್ ಮೇಲಿನಿಂದ ಜಿಗಿದು ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಕಾಡಗೋಡಿಯಲ್ಲಿ ನಡೆದಿದೆ.

ಬೆಂಗಳೂರಿನ ಕಾಡಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅಸೆಟ್ಸ್ ಮಾರ್ಕ್ ಅಪಾರ್ಮೆಂಟ್ ನಲ್ಲಿ ಉತ್ತರ ಪ್ರದೇಶ ಮೂಲದ ಕುಟುಂಬವೊಂದು ವಾಸವಾಗಿತ್ತು. ಅವರ 15 ವರ್ಷದ ಬಾಲಕಿಯೊಬ್ಬಳು ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದಳು.

ಇಂದು ಅಸೆಟ್ಸ್ ಮಾರ್ಕ್ ಅಪಾರ್ಮೆಂಟ್ ನ 20ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಕಾಡುಗೋಡಿ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಬಾಲಕಿ ಅಪಾರ್ಮೆಂಟ್ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಹಿಂದಿನ ಕಾರಣ ಏನು ಅಂತ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯಿಂದ ನಿಖರ ಕಾರಣ ತಿಳಿದು ಬರಬೇಕಿದೆ.

Continue Reading

LATEST NEWS

ತಂಬಾಕು ಸೇವಿಸಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವತಿ..!

Published

on

ಹಾವೇರಿ: ಚಿಕ್ಕ ವಯಸ್ಸಿಗೆ ಕೆಲವೊಂದು ಮಕ್ಕಳಿಗೆ ಕೆಲವೊಂದು ಚಟಗಳು ಇರುತ್ತವೆ. ಅದರಿಂದ ಹೊರ ಬರಲು ಹೆತ್ತವರು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಇಲ್ಲೊಂದು ಇದೇ ರೀತಿಯ ಘಟನೆ ನಡೆದಿದೆ. ಚಿಕ್ಕ ವಯಸ್ಸಿನಲ್ಲಿ ತಂಬಾಕು ಸೇವಿಸಬೇಡ ಎಂದು ಹೆತ್ತವರು ಬುದ್ಧಿ ಹೇಳಿದಕ್ಕೆ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.

ಬೀಬಿಜಾನ್ ಸೊಂಡಿ (18) ಆತ್ಮಹತ್ಯೆಗೆ ಶರಣಾದ ಯುವತಿ. ನಿನ್ನದು ಇನ್ನೂ ಚಿಕ್ಕ ವಯಸ್ಸು. ಬದುಕಿ ಸಾಧಿಸುವಂತದ್ದೂ ತುಂಬಾನೇ ಇದೆ. ತಂಬಾಕು ಸೇವನೆ ಮಾಡುವುದು ಒಳ್ಳೆಯದಲ್ಲ ಎಂದು ಬುದ್ಧಿ ಹೇಳಿದ್ದಕ್ಕೆ ಯುವತಿ ನೇಣಿಗೆ ಶರಣಾಗಿದ್ದಾಳೆ.

ಯುವತಿ ಕಳೆದ ಕೆಲವು ದಿನಗಳಿಂದ ತಂಬಾಕು ಸೇವನೆ ಚಟಕ್ಕೆ ಅಂಟಿಕೊಂಡಿದ್ದಳು. ತಂಬಾಕು ಸೇವನೆ ಮಾಡುವುದನ್ನು ಬಿಡುವಂತೆ ಬೀಬಿಜಾನ್ ಗೆ ತಂದೆ-ತಾಯಿ ಪದೇ ಪದೇ ಬುದ್ಧಿವಾದ ಹೇಳಿದ್ದರು.ಮನೆಗೆಲಸ ಮಾಡುತ್ತಿದ್ದ ಬೇಬಿಜಾನ್ ನಾನು ದುಡಿಮೆ ಮಾಡಿ ನನ್ನ ಸ್ವಂತ ಹಣದಲ್ಲಿ ಖರ್ಚು ಮಾಡಲು ಅಪ್ಪ ಅಮ್ಮ ಬಿಡುತ್ತಿಲ್ಲ ಎಂದು ತಂದೆ ತಾಯಿಯೊಂದಿಗೆ ಬೇಬಿ ಜಾನ್ ಜಗಳವಾಡಿದ್ದಾಳೆ.

ನಂತರ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಘಟನೆ ಕುರಿತು ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

2 ಮಕ್ಕಳ ತಾಯಿ ವಾರದಲ್ಲಿ 5 ದಿನ ವಿಮಾನದಲ್ಲಿ ಪ್ರಯಾಣ

Published

on

ಮಂಗಳೂರು/ಕೌಲಾಲಂಪುರ : ಕೆಲಸ ಎಂಬುದು ಮನುಷ್ಯನ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಕೆಲವರಿಗೆ ಕೆಲಸದ ಜೊತೆ ಕುಟುಂಬಕ್ಕೆ ಸಮಯ ಕೊಡುವುದಕ್ಕೆ ಆಗುವುದಿಲ್ಲ. ಆದರೆ ಇನ್ನು ಕೆಲವರು ಎರಡನ್ನೂ ಸಮತೋಲನವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.

ಇದೇ ರೀತಿ “ವರ್ಕ್ ಲೈಫ್ ಬ್ಯಾಲೆನ್ಸ್‌’ಗಾಗಿ 2 ಮಕ್ಕಳ ತಾಯಿ ವಾರದಲ್ಲಿ 5 ದಿನಗಳು ವಿಮಾನದಲ್ಲಿ ಪ್ರಯಾಣಿಸುವ ಮೂಲಕ ಕೆಲಸದ ಜತೆಗೆ, ಮಕ್ಕಳಿಗೂ ಸಮಯ ನೀಡುತ್ತಿದ್ದಾರೆ.

ಭಾರತೀಯ ಮೂಲದ ರೇಚಲ್ ಕೌರ್ ಮಲೇಷ್ಯಾದ ಕೌಲಾಲಂಪುರದಲ್ಲಿರುವ ಏರ್ ಏಷ್ಯಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕುಟುಂಬವು ಪೆನಾಂಗ್‌ನಲ್ಲಿ ವಾಸಿಸುತ್ತಿದೆ. ರೇಚಲ್‌ಗೆ ಇಬ್ಬರು ಮಕ್ಕಳಿದ್ದು, ಅವರೊಂದಿಗೆ ಸಮಯ ಕಳೆಯಲು ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಎದ್ದು, 5.55ಕ್ಕೆ ವಿಮಾನದಲ್ಲಿ 398 ಕಿ.ಮೀ. ಪ್ರಯಾಣಿಸಿ ಕಚೇರಿಗೆ ತಲುಪುತ್ತಾರೆ.

ಬಳಿಕ ಸಂಜೆ ವಿಮಾನದಲ್ಲಿ ಹೊರಟು 8 ಗಂಟೆಗೆ ಮನೆ ತಲುಪಿ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ಹೀಗೆ ಒಟ್ಟು 796 ಕಿ.ಮೀ. ದೂರ ಪ್ರಯಾಣಿಸುತ್ತಿರುತ್ತಾರೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾಗೆ ಆಘಾತ

ಕೌರ್ ವಾರದಲ್ಲಿ 5 ದಿನಗಳು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೂ ಖರ್ಚು ಕಡಿಮೆಯಂತೆ. ಈ ಹಿಂದೆ ಟಿಕೆಟ್ ಮತ್ತು ಇತರ ವೆಚ್ಚಕ್ಕಾಗಿ 41,000 ರೂ. ವೆಚ್ಚ ಮಾಡುತ್ತಿದ್ದೆ. ಈಗ ಅದು 21,000 ರೂ.ಗೆ ಇಳಿಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಕೌಲಾಲಂಪುರದಲ್ಲೇ ಬಾಡಿಗೆ ಮನೆ ಪಡೆದಿದ್ದ ರೇಚಲ್ ವಾರಕ್ಕೊಮ್ಮೆ ಕುಟುಂಬವನ್ನು ಭೇಟಿಯಾಗುತ್ತಿದ್ದರು.

ಇದು ಸಾಮಾನ್ಯವಾದ ವಿಷಯವಲ್ಲ, ಸಮಯವನ್ನು ವ್ಯರ್ಥ ಮಾಡದೇ ಮಕ್ಕಳಿಗಾಗಿ ರೇಚಲ್ ಕೌರ್ ವಾರದಲ್ಲಿ 5 ದಿನ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page