Connect with us

2,700 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಝಡ್ – ಮೋರ್ಹ್ ಸುರಂಗ ಉದ್ಘಾಟಿಸಿದ ಪ್ರಧಾನಿ ಮೋದಿ

Published

on

ಮಂಗಳೂರು/ಶ್ರೀನಗರ : 2,700 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಝಡ್ – ಮೋರ್ಹ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿ, ಬಳಿಕ ಹೆಲಿಕಾಪ್ಟರ್ ಮೂಲಕ ತೆರಳಿ ಸುರಂಗ ಉದ್ಘಾಟಿಸಿದರು.


ಈ ಸಂದರ್ಭ ಕೇಂದ್ರ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮೊದಲಾದವರು ಉಪಸ್ಥಿತರಿದ್ದರು.

ಉದ್ಘಾಟನೆ ಬಳಿಕ ಸುರಂಗದ ಒಳಗೆ ತೆರಳಿದ ಮೋದಿ, ಅಧಿಕಾರಿಗಳ ಜೊತೆ ಸುರಂಗ ನಿರ್ಮಿಸಿದ ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು. ಸಮುದ್ರಮಟ್ಟದಿಂದ 8,650 ಅಡಿ ಎತ್ತರದಲ್ಲಿರುವ ಈ ಸುರಂಗ ಮಧ್ಯ ಕಾಶ್ಮೀರದ ಗಂದರ್ ಬಾಲ್ ಜಿಲ್ಲೆಯ ಗಗಾಂಗೀರ್ ಮತ್ತು ಸೋನಾಮಾರ್ಗ್ ನಡುವೆ ಲೇಹ್‌ಗೆ ಹೋಗುವ ಮಾರ್ಗದಲ್ಲಿ ಎಲ್ಲ ಋತುಮಾನದಲ್ಲೂ ಸಂಪರ್ಕ ಕಲ್ಪಿಸುತ್ತದೆ. ಗಗಾಂಗೀರ್ ಮತ್ತು ಸೋನಾಮಾರ್ಗ್ ನಡುವಿನ 6.5 ಕಿಮೀ ಉದ್ದದ ಎರಡು ಪಥದ ರಸ್ತೆ ಸುರಂಗದಲ್ಲಿ ತುರ್ತು ಪರಿಸ್ಥಿತಿಗಳಿಗಾಗಿ ಸಮಾನಾಂತರ 7.5 ಮೀಟರ್ ಎಸ್ಕೇಪ್ ಮಾರ್ಗವನ್ನು  ನಿರ್ಮಿಸಲಾಗಿದೆ.

ಇದನ್ನೂ ಓದಿ : ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು ?

ಇದು ಸೋನಾಮಾರ್ಗ್ ಪ್ರದೇಶವನ್ನು ಚಳಿಗಾಲದ ಕ್ರೀಡಾ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಸಹಕಾರಿಯಾಗಿದೆ. ಸೋನಾಮಾರ್ಗ್ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಅತ್ಯಾಧುನಿಕ ಐಸ್-ಸ್ಕೇಟಿಂಗ್ ರಿಂಕ್ ಚಳಿಗಾಲದ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಹೊಸ ಭರವಸೆಯನ್ನು ಹುಟ್ಟು ಹಾಕಿದೆ.

 

Advertisement
Click to comment

Leave a Reply

Your email address will not be published. Required fields are marked *

LATEST NEWS

ಎಟಿಎಂ ದರೋಡೆ ಪ್ರಕರಣ ಬಯಲು ಮಾಡಿತು ಟೀ ಅಂಗಡಿ ಬಳಿ ನಡೆದ ಜಗಳ!

Published

on

ಮಂಗಳೂರು/ಬೆಂಗಳೂರು : ಅವರು ಖತರ್ನಾಕ್ ಕಳ್ಳರು. ಎಟಿಎಂನಿಂದ ಹಣ ಲೂಟಿ ಮಾಡುತ್ತಿದ್ದರು. ಆದರೆ,  ಖದೀಮರ ಕರಾಮತ್ತು ಅವರೇ ಮಾಡಿದ ಎಡವಟ್ಟಿನಿಂದ  ಸಿಕ್ಕಿ ಬೀಳುವಂತಾಗಿದೆ. ಲೂಟಿ ಮಾಡಿದ ಹಣಕ್ಕಾಗಿ ಟೀ ಅಂಗಡಿ ಬಳಿ ಜಗಳವಾಡಿದ 6 ಮಂದಿ ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರ ಕೈಗೆ ತಗಲಾಕ್ಕೊಂಡಿದ್ದಾರೆ.

ಎಸ್‌ ಸಮೀರ್‌ (26), ಕೆ ಮನೋಹರ (29), ಎಸ್‌ ಗಿರೀಶ್‌ (26), ಜಗ್ಗೇಶ್‌ (28), ಲಗ್ಗೆರೆಯ ವಿಆರ್‌ ಜಶ್ವಂತ್‌ (27), ಶಿವು(27) ಬಂಧಿತ ಆರೋಪಿಗಳು. ಆರು ಮಂದಿಯೂ ಖಾಸಗಿ ನಗದು ನಿರ್ವಹಣಾ ಕಂಪನಿಯ ಉದ್ಯೋಗಿಗಳಾಗಿದ್ದು, ನಂದಿ ಲೇಔಟ್‌ನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ವಿಚಾರಣೆ ವೇಳೆ ಬಯಲಾಯ್ತು ದರೋಡೆ ವಿಚಾರ :

ಕೆಂಪೇಗೌಡ ಲೇಔಟ್‌ನಲ್ಲಿರುವ ಟೀ ಸ್ಟಾಲ್‌ಗೆ ಬಂದಿದ್ದ ಆರೋಪಿಗಳು, ಕದ್ದ ಹಣವನ್ನು ಹಂಚಿಕೆ ಮಾಡಿಕೊಳ್ಳುವ ವಿಚಾರಕ್ಕೆ ಜಗಳವಾಡುತ್ತಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹಲವು ಎಟಿಎಂ ಗಳಲ್ಲಿ ಹಣ ದೋಚಿರುವ ವಿಚಾರ ಬೆಳಕಿಗೆ ಬಂದಿದೆ.

ಆರೋಪಿಗಳು ಎಟಿಎಂಗಳಿಗೆ ಹಣವನ್ನು ತುಂಬುವ ಹಾಗೂ ಎಟಿಎಂಗಳನ್ನು ರಿಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಅಲ್ಲದೆ, ಎಟಿಎಂಗಳಿಗೆ ಹಣವನ್ನು ತುಂಬುವಾಗ ಕಡಿಮೆ ಹಣವನ್ನು ತುಂಬಿ ಉಳಿದ ಹಣವನ್ನು ಲಪಟಾಯಿಸುತ್ತಿದ್ದರಂತೆ. ಅಷ್ಟೇ ಅಲ್ಲದೆ, ಎಟಿಎಂ ಯಂತ್ರಗಳನ್ನು ರಿಪೇರಿ ಮಾಡುವಾಗ ಪಾಸ್‌ವರ್ಡ್ ಪಡೆದು ಎಟಿಎಂಗಳಲ್ಲಿದ್ದ ಹಣವನ್ನು ದೋಚುತ್ತಿದ್ದರು ಎಂಬ ವಿಚಾರ ಬಯಲಾಗಿದೆ.

ಇದನ್ನೂ ಓದಿ : ನಿಮಗೆ ಕೂದಲು ಉದುರುತ್ತಿದೆಯೇ ? ಹಾಗಾದ್ರೆ ಇಂದೇ ಆಲೋವೆರಾ ತೆಗೊಳ್ಳಿ, ಹೀಗೆ ಮಾಡಿ..ಅಷ್ಟೇ..!!

ಕಳೆದ ಎರಡು ವರ್ಷಗಳಿಂದ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ಪೈಕಿ ಮೂವರು ಕದ್ದ ಹಣವನ್ನು ಬಳಸಿಕೊಂಡು ಮೂರು ಎಸ್‌ಯುವಿಗಳನ್ನು ಖರೀದಿಸಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ 51 ಲಕ್ಷ ರೂ. ನಗದು ಮತ್ತು ಮೂರು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Continue Reading

LATEST NEWS

ನಿಮಗೆ ಕೂದಲು ಉದುರುತ್ತಿದೆಯೇ ? ಹಾಗಾದ್ರೆ ಇಂದೇ ಆಲೋವೆರಾ ತೆಗೊಳ್ಳಿ, ಹೀಗೆ ಮಾಡಿ..ಅಷ್ಟೇ..!!

Published

on

ಕೂದಲು ಉದುರುವಿಕೆ ಎಂಬುವುದು ಇಂದಿನ ದಿನದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಕೂದಲು ಒಡೆಯುವುದು, ತೆಳುವಾಗುವುದು ಮತ್ತು ಬಿಳಿಯಾಗುವ ಸಮಸ್ಯೆಗಳಿಂದ ಬಹುತೇಕ ಎಲ್ಲರೂ ತೊಂದರೆಗೀಡಾಗಿದ್ದಾರೆ. ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ಬೋಳುತಲೆ ಸಮಸ್ಯೆ ಅನುಭವಿಸುತ್ತಾರೆ. ಕೆಲವೊಮ್ಮೆ, ಹವಾಮಾನ ಅಥವಾ ಜೀವನಶೈಲಿ ಬದಲಾದಾಗ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಕೆಲವು ದಿನಗಳವರೆಗೆ ಸಂಭವಿಸುವುದು ಸಾಮಾನ್ಯ, ಆದರೆ ದೀರ್ಘಕಾಲದವರೆಗೆ ನಿರಂತರವಾಗಿ ಕೂದಲು ಉದುರುತ್ತಿದ್ದರೆ ಬೋಳುತನಕ್ಕೆ ಕಾರಣವಾಗಬಹುದು.

ಕೂದಲು ಉದುರುವ ಸಮಸ್ಯೆಯ ಕಡಿಮೆ ಮಾಡಲು ಕೆಲವು ಮನೆಮದ್ದುಗಳನ್ನು ಟ್ರೈ ಮಾಡಬಹುದು. ಅದರಲ್ಲಿ ಅಲೋವೆರಾ ಅತ್ಯುತ್ತಮ ಪರಿಹಾರವಾಗಿದೆ. ಕೂದಲಿನ ಅನೇಕ ಸಮಸ್ಯೆಗಳನ್ನುಇದು ಪರಿಹರಿಸುತ್ತದೆ.  ಅಲೋವೆರಾ ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೆ. ಅಲೋವೆರಾ ಜೆಲ್ ನಲ್ಲಿ ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಬಿ 12, ಕೊಬ್ಬಿನಾಮ್ಲಗಳು ಮತ್ತು ಅಮೈನೋ ಆಮ್ಲಗಳಿವೆ. ಅಲೋವೆರಾ ಜೆಲ್ ಅನ್ನು ನೆತ್ತಿಗೆ ಹಚ್ಚುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ತುರಿಕೆ, ಸೋಂಕು ಮತ್ತು ಕೂದಲಿನ ಶುಷ್ಕತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲೋವೆರಾದಲ್ಲಿ ಅಲೋಯಿನ್ ಎಂಬ ರಾಸಾಯನಿಕ ಸಂಯುಕ್ತವಿದೆ. ಇದು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.

ಅಲೋವೆರಾ ಜೆಲ್ ಮತ್ತು ಈರುಳ್ಳಿ ರಸ :

ಅಲೋವೆರಾ ಜೆಲ್ ಮತ್ತು ಈರುಳ್ಳಿ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಮಿಶ್ರಣವನ್ನು ಕೆಲವು ತಿಂಗಳುಗಳ ಕಾಲ ನಿರಂತರವಾಗಿ ಬಳಸಿ. ಈರುಳ್ಳಿ ರಸದೊಂದಿಗೆ ಬೆರೆಸಿದ ಅಲೋವೆರಾ ಜೆಲ್ ಅನ್ನು ನಿಯಮಿತವಾಗಿ ಅನ್ವಯಿಸಿ 1 ಗಂಟೆ ಕಾಲ ಬಿಟ್ಟು ಸ್ನಾನ ಮಾಡಬೇಕು.

ಅಲೋವೆರಾ ಜೆಲ್ ಮತ್ತು ಆಮ್ಲಾ ಪುಡಿ ಮಿ :

ಅಲೋವೆರಾದ ಜೊತೆ ಆಮ್ಲವನ್ನು ಸೇರಿಸಿ ಕೂದಲಿಗೆ ಹಚ್ಚುವುದರಿಂದ  ಕೂದಲಿಗೆ ತುಂಬಾನೆ ಪ್ರಯೋಜನ ನೀಡುತ್ತೆ. ಒಂದು ಬಟ್ಟಲಿನಲ್ಲಿ ಅಲೋವೆರಾ ಜೆಲ್ ಮತ್ತು ಸ್ವಲ್ಪ ಆಮ್ಲಾ ಅಥವಾ ನೆಲ್ಲಿಕಾಯಿ ಪುಡಿಯನ್ನು ಬೆರೆಸಬೇಕು ಅಥವಾ ಆಮ್ಲಾ ರಸವನ್ನು ಸಹ ಸೇರಿಸಬಹುದು. ಬಳಿಕ ಅದನ್ನು ಪೇಸ್ಟ್ ನಂತೆ ತಲೆಬುರುಡೆಗೆ ಹಚ್ಚಿ ಅರಿಶಿನದಿಂದ ಮಸಾಜ್ ಮಾಡಿ. 1-2 ಗಂಟೆಗಳ ಕಾಲ ಹಾಗೆ ಬಿಟ್ಟು ಕೂದಲನ್ನು ತೊಳೆಯಬೇಕು. ಇದನ್ನು ವಾರಕ್ಕೆ ಕನಿಷ್ಠ 2 ಬಾರಿ ಮಾಡಿದರೆ ಕೂದಲು ಉದುರುವಿಕೆ ಕಡಿಮೆಯಾಗಿ, ಹೊಸ ಕೂದಲು ಬೆಳೆಯುತ್ತದೆ.

Continue Reading

DAKSHINA KANNADA

ಕೋಳಿ ಸಾಗಾಟದ ಟೆಂಪೋ ಪ*ಲ್ಟಿ; ಸ*ತ್ತ ಕೋಳಿಗಳಿಗಾಗಿ ಮುಗಿಬಿದ್ದ ಸಾರ್ವಜನಿಕರು

Published

on

ಬಂಟ್ವಾಳ: ಕೋಳಿ ಸಾಗಾಟದ ಟೆಂಪೋ ಪ*ಲ್ಟಿಯಾಗಿ ನೂರಾರು ಕೋಳಿಗಳು ಸಾ*ವನ್ನಪ್ಪಿರುವ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕನ್ಯಾನದ ಕುಳಾಲು ಎಂಬಲ್ಲಿ ಘಟನೆ ನಡೆದಿದೆ.

ಕಡಿದಾದ ರಸ್ತೆಯಲ್ಲಿ ಇನ್ನೊಂದು‌ ವಾಹನಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ಪಿಕಪ್ ಪ*ಲ್ಟಿಯಾಗಿದೆ.  ಪಿಕಪ್ ಟೆಂಪೋ ಚಾಲಕ‌ ಅದೃಷ್ಟವಶಾತ್ ಅ*ಪಾಯದಿಂದ ಪಾರಾಗಿದ್ದಾನೆ.

ಈ ವೇಳೆ ಸ*ತ್ತ ಕೋಳಿಗಳನ್ನು ಮನೆಗೆ ಕೊಂಡೊಯ್ಯಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.  ಈ ಘಟನೆಯಿಂದ ಕೋಳಿ‌ಪ್ರಿಯರಿಗೆ ಪುಕ್ಕಟೆಯಾಗಿ ಕೋಳಿಗಳು ದೊರೆದಂತಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page