Connect with us

LATEST NEWS

ಅಧಿಕಾರ ದುರ್ಬಳಕೆ ಆರೋಪ: ಉತ್ತರ ಕನ್ನಡ ಡಿಸಿ ವಿರುದ್ಧ ಮುಖ್ಯಮಂತ್ರಿಗೆ ದೂರು

Published

on

ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ವಿರುದ್ಧ ಅಧಿಕಾರ ದುರ್ಬಳಕೆಯ ವಿರುದ್ಧ 35 ಮಂದಿಯ ಸಹಿಯೊಂದಿಗೆ ದೂರು ಸಲ್ಲಿಕೆಯಾಗಿದೆ.


ಮುಖ್ಯಮಂತ್ರಿ, ಕಂದಾಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ‘ನೊಂದ ಪ್ರವಾಸೋದ್ಯಮಿಗಳು, ಪ್ರವಾಸೋದ್ಯಮ ಕಾರ್ಮಿಕರು’ ಎಂಬ ಹೆಸರಿನಲ್ಲಿ 35 ಮಂದಿಯ ಸಹಿಯೊಂದಿಗೆ ದೂರು ಸಲ್ಲಿಕೆಯಾಗಿದೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಸೇರಿ ಕೋವಿ‌ಡ್‌ನಿಂದ ಮುಚ್ಚಿ ಹೋದ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದಂತೆ ತಮಗಿಲ್ಲದ ಅಧಿಕಾರವನ್ನು ಚಲಾಯಿಸಿ ಮೌಖಿಕ ಆದೇಶದೊಂದಿಗೆ

ತಮ್ಮ ಅಧೀನ ಅಧಿಕಾರಿಗಳನ್ನು ದುರ್ಬಳಕೆ ಮಾಡಿ, ಪ್ರವಾಸೋದ್ಯಮಿಗಳನ್ನು ಬೆದರಿಸಿ ಕಮಿಷನ್ ಪಡೆಯಲು ದಾಂಡೇಲಿಯ ಕಾಳಿ ನದಿಯ ಜಲಕ್ರೀಡೆಗಳನ್ನು ಬಂದ್ ಮಾಡಿ ಕಾನೂನು ಬಾಹಿರ ಸಮೀತಿಯನ್ನು ರಚಿಸಿ ಬಲವಂತವಾಗಿ ಸಮಿತಿಯ ಮೂಲಕ ವಸೂಲಿಗಳಿಯಲು ಮುಂದಾಗಿದ್ದಾರೆ.

ಹೀಗಾಗಿ ಈ ಕುರಿತು ವಿಚಾರಣೆ ನಡೆಸಿ ಕ್ರಮ ಜರುಗಿಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.

LATEST NEWS

ಕೋಟ: ಟಿಟಿ ವಾಹನ ಪಲ್ಟಿ, 10 ಕ್ಕೂ ಹೆಚ್ಚು ಜನರಿಗೆ ಗಾಯ

Published

on

ಕೋಟ: ಟಿಟಿ ವಾಹನ ಪಲ್ಟಿಹೊಡೆದು ಹಲವರು ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಹೈಸ್ಕೂಲ್ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಕೇರಳದಿಂದ ಕೊಲ್ಲೂರಿಗೆ ಪ್ರವಾಸಕ್ಕೆ ಹೊರಟ್ಟಿದ್ದ ಟಿಟಿ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಹೊಡೆದು ರಾಷ್ಟ್ರೀಯ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಇಂದಿರಾ ಲ್ಯಾಬ್ ಸಮೀಪದ ಕಂದಕಕ್ಕೆ ಉರುಳಿದೆ.

ಇದನ್ನೂ ಓದಿ: ವಾಕಿಂಗ್ ಮಾಡುತ್ತಿದ್ದಾಗ ವೃದ್ಧೆಯ ಸರ ಕದ್ದು ಪರಾರಿಯಾದ ಕಳ್ಳ

ಟಿಟಿ ವಾಹನದಲ್ಲೊ ಸುಮಾರು 15 ಜನ ಪ್ರಯಾಣಿಕರಿದ್ದು ಅಪಘಾತದಲ್ಲಿ 10 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರು ಆಂಬುಲೆನ್ಸ್ ನಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸಿರುತ್ತಾರೆ.

Continue Reading

LATEST NEWS

ಮಸೂದೆ ಅನುಮೋದನೆಗೆ ಗಡುವು; ಸುಪ್ರೀಂ ಕೋರ್ಟ್‌ಗೆ ರಾಷ್ಟ್ರಪತಿ 14 ಪ್ರಶ್ನೆ!

Published

on

ಮಂಗಳೂರು/ನವದೆಹಲಿ : ರಾಜ್ಯಪಾಲರು ಕಾರಣಾಂತರಗಳಿಂದ ಅಂಕಿತ ಹಾಕದೆ ಪರಿಗಣನೆಗೆ ಕಾಯ್ದಿರಿಸಿದ ಮಸೂದೆಗಳ ಕುರಿತು ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ಮೂಲಕ ಇದೇ ಮೊದಲ ಬಾರಿ ಎಂಬಂತೆ ರಾಷ್ಟ್ರಪತಿಗೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿ ದೊಡ್ಡ ಮಟ್ಟಿನ ಸುದ್ದಿಯಾಗಿತ್ತು. ಇದೀಗ ಈ ಆದೇಶಕ್ಕೆ ಪ್ರತಿಯಾಗಿ ದ್ರೌಪದಿ ಮುರ್ಮು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಆಯಾಯ ರಾಜ್ಯಗಳ ರಾಜ್ಯಪಾಲರು ಅನುಮೋದನೆಗೆ ಕಳುಹಿಸುವ ಬಿಲ್‌ಗಳನ್ನು ಪಾಸ್ ಮಾಡುವುದು ಅಥವಾ ವಾಪಾಸ್ ಕಳುಹಿಸುವ ಬಗ್ಗೆ ಮೂರು ತಿಂಗಳೊಳಗೆ ನಿರ್ಧರಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್ ಮುಂದೆ ದ್ರೌಪದಿ ಮುರ್ಮು 14 ಪ್ರಶ್ನೆಗಳನ್ನು ಇಟ್ಟಿದ್ದಾರೆ.

ಸಂವಿಧಾನದಲ್ಲೇ ಅಂತಹ ಯಾವುದೇ ಗಡುವು/ಷರತ್ತು ಇಲ್ಲದಿರುವಾಗ ಸುಪ್ರೀಂಕೋರ್ಟ್ ಅಂತಹ ತೀರ್ಪು ನೀಡಲು ಹೇಗೆ ಸಾಧ್ಯ ಎಂದು ಕೇಳಿದ್ದಾರೆ.

ಏನಿದು ಪ್ರಕರಣ?

ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗೆ ಅಂಕಿತ ಹಾಕದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು. ಈ ಕುರಿತು ತೀರ್ಪು ನೀಡುವಾಗ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಆರ್.ಮಹದೇವನ್ ಪೀಠವು, 201ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ಕಾರ್ಯನಿರ್ವಹಣೆಯು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಗೊಳಪಡುತ್ತದೆ ಎಂದು ತಿಳಿಸಿತ್ತು.

ವಿಧಿಯ 201ನೇ ಅನ್ವಯ, ರಾಜ್ಯಪಾಲರಿಗೆ ಸರ್ಕಾರ ಕಳುಹಿಸುವ ಬಿಲ್ ಬಗ್ಗೆ ನಿರ್ಧರಿಸದೇ ಇದ್ದಲ್ಲಿ, ರಾಷ್ಟ್ರಪತಿಯವರು ಬಿಲ್ಲಿನ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಮಸೂದೆಗೆ ಅಂಕಿತ ಹಾಕುವುದು, ಸ್ಪಷ್ಟನೆ ಕೇಳುವುದು, ವಾಪಾಸ್ ಕಳುಹಿಸುವುದು ಅಥವಾ ತಿರಸ್ಕರಿಸುವುದು ರಾಷ್ಟ್ರಪತಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿತ್ತು.

ಮೂರು ತಿಂಗಳೊಳಗೆ ರಾಷ್ಟ್ರಪತಿಗಳು ಮಸೂದೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗದಿದ್ದಲ್ಲಿ, ನಿರ್ದಿಷ್ಟ ರೆಕಾರ್ಡ್ ಮಾಡಿಕೊಂಡು, ಸಂಬಂಧಪಟ್ಟ  ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಮೂರು ತಿಂಗಳೊಳಗೆ ರಾಷ್ಟ್ರಪತಿ ಕಚೇರಿಯಿಂದ ಯಾವುದೇ ಆದೇಶ ಬಾರದೇ ಇದ್ದಲ್ಲಿ, ರಾಜ್ಯಗಳು ಸುಪ್ರೀಂಕೋರ್ಟ್‌ಗೆ ದೂರು ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಿತ್ತು.

ರಾಷ್ಟ್ರಪತಿ ಪ್ರಶ್ನೆ ಏನು?

  1. ವಿಧಿ 200ರ ಅಡಿಯಲ್ಲಿ ರಾಜ್ಯಪಾಲರಿಗೆ ಮಸೂದೆಯನ್ನು ಮಂಡಿಸಿದಾಗ ಅವರ ಮುಂದೆ ಇರುವ ಸಾಂವಿಧಾನಿಕ ಆಯ್ಕೆಗಳು ಯಾವುವು?
  2. ರಾಜ್ಯಪಾಲರು ಮಸೂದೆಯನ್ನು ತಮ್ಮ ಮುಂದೆ ಮಂಡಿಸಿದಾಗ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಬಳಸಿಕೊಂಡು ಸಚಿವ ಸಂಪುಟ ನೀಡುವ ನೆರವು ಮತ್ತು ಸಲಹೆಗೆ ಬದ್ಧರಾಗಿದ್ದಾರೆಯೇ?
  3. ವಿಧಿ 200ರ ಅಡಿಯಲ್ಲಿ ರಾಜ್ಯಪಾಲರ ಸಾಂವಿಧಾನಿಕ ವಿವೇಚನೆಯು ನ್ಯಾಯಸಮ್ಮತವೇ?
  4. ವಿಧಿ 200ರ ಅಡಿಯಲ್ಲಿ ರಾಜ್ಯಪಾಲರ ಕ್ರಮಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಪರಿಶೀಲನೆಗೆ ವಿಧಿ 361 ಸಂಪೂರ್ಣ ನಿರ್ಬಂಧವೇ?
  5. ಸಾಂವಿಧಾನಿಕವಾಗಿ ನಿಗದಿಪಡಿಸಿದ ಸಮಯ ಮಿತಿ ಮತ್ತು ರಾಜ್ಯಪಾಲರು ಅಧಿಕಾರಗಳನ್ನು ಚಲಾಯಿಸುವ ವಿಧಾನದ ಅನುಪಸ್ಥಿತಿಯಲ್ಲಿ, ರಾಜ್ಯಪಾಲರು ಆರ್ಟ್ 200ರ ಅಡಿಯಲ್ಲಿ ಎಲ್ಲಾ ಅಧಿಕಾರಗಳನ್ನು ಚಲಾಯಿಸುವ ಉದ್ದೇಶಕ್ಕಾಗಿ ನ್ಯಾಯಾಂಗ ಆದೇಶಗಳ ಮೂಲಕ ಸಮಯಸೂಚಿಯನ್ನು ವಿಧಿಸಬಹುದೇ ಮತ್ತು ವ್ಯಾಯಾಮದ ವಿಧಾನವನ್ನು ಸೂಚಿಸಬಹುದೇ?
  6. ವಿಧಿ 201ರ ಅಡಿಯಲ್ಲಿ ರಾಷ್ಟ್ರಪತಿಗಳು ಸಾಂವಿಧಾನಿಕ ವಿವೇಚನೆಯನ್ನು ಚಲಾಯಿಸುವುದು ನ್ಯಾಯಸಮ್ಮತವೇ?
  7. ಸಂವಿಧಾನಾತ್ಮಕವಾಗಿ ನಿಗದಿಪಡಿಸಿದ ಸಮಯಾವಧಿ ಮತ್ತು ಅಧ್ಯಕ್ಷರು ಅಧಿಕಾರಗಳನ್ನು ಚಲಾಯಿಸುವ ವಿಧಾನದ ಅನುಪಸ್ಥಿತಿಯಲ್ಲಿ, ವಿಧಿ 201ರ ಅಡಿಯಲ್ಲಿ ಅಧ್ಯಕ್ಷರು ವಿವೇಚನೆಯನ್ನು ಚಲಾಯಿಸಲು ನ್ಯಾಯಾಂಗ ಆದೇಶಗಳ ಮೂಲಕ ಸಮಯಾವಧಿಯನ್ನು ವಿಧಿಸಬಹುದೇ ಮತ್ತು ವ್ಯಾಯಾಮದ ವಿಧಾನವನ್ನು ನಿಗದಿಪಡಿಸಬಹುದೇ?
  8. ರಾಷ್ಟ್ರಪತಿಗಳ ಅಧಿಕಾರಗಳನ್ನು ನಿಯಂತ್ರಿಸುವ ಸಾಂವಿಧಾನಿಕ ಯೋಜನೆಯ ಬೆಳಕಿನಲ್ಲಿ, ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿದಾಗ ರಾಷ್ಟ್ರಪತಿಗಳು ವಿಧಿ 143 ರ ಅಡಿಯಲ್ಲಿ ಉಲ್ಲೇಖದ ಮೂಲಕ ಸುಪ್ರೀಂ ಕೋರ್ಟ್‌ನ ಸಲಹೆಯನ್ನು ಪಡೆಯಬೇಕೇ ಅಥವಾ ಬೇರೆ ರೀತಿಯಲ್ಲಿ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕೇ?
  9. ಕಾನೂನು ಜಾರಿಗೆ ಬರುವ ಮೊದಲು, 200 ಮತ್ತು 201ನೇ ವಿಧಿಗಳ ಅಡಿಯಲ್ಲಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ತೆಗೆದುಕೊಳ್ಳುವ ನಿರ್ಧಾರಗಳು ನ್ಯಾಯಸಮ್ಮತವೇ? ಮಸೂದೆ ಕಾನೂನಾಗುವ ಮೊದಲು, ಅದರ ವಿಷಯಗಳ ಬಗ್ಗೆ ನ್ಯಾಯಾಲಯಗಳು ಯಾವುದೇ ರೀತಿಯಲ್ಲಿ ನ್ಯಾಯಾಂಗ ತೀರ್ಪು ನೀಡಲು ಅನುಮತಿ ಇದೆಯೇ?
  10. ರಾಷ್ಟ್ರಪತಿ/ರಾಜ್ಯಪಾಲರ ಸಾಂವಿಧಾನಿಕ ಅಧಿಕಾರಗಳು ಮತ್ತು ಆದೇಶಗಳ ಚಲಾವಣೆಯನ್ನು ವಿಧಿ 142ರ ಅಡಿಯಲ್ಲಿ ಯಾವುದೇ ರೀತಿಯಲ್ಲಿ ಬದಲಿಸಬಹುದೇ?
  11. ರಾಜ್ಯ ಶಾಸಕಾಂಗವು ಮಾಡಿದ ಕಾನೂನು ರಾಜ್ಯಪಾಲರ ಒಪ್ಪಿಗೆಯಿಲ್ಲದೆ ಜಾರಿಯಲ್ಲಿರುವ ಕಾನೂನೇ?
  12. ವಿಧಿ 145(3) ರ ಪ್ರಕಾರ, ಸಂವಿಧಾನದ ವ್ಯಾಖ್ಯಾನವನ್ನು ಗಣನೀಯವಾಗಿ ಪ್ರಶ್ನಿಸುವ ಸ್ವಭಾವದ್ದೇ ಎಂದು ಮೊದಲು ನಿರ್ಧರಿಸುವುದು ಮತ್ತು ಅದನ್ನು ಕನಿಷ್ಠ ಐದು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸುವುದು ಸುಪ್ರೀಂ ಕೋರ್ಟ್‌ನ ಯಾವುದೇ ಪೀಠಕ್ಕೆ ಕಡ್ಡಾಯವಲ್ಲವೇ?
  13. ವಿಧಿ 142 ರ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಅಧಿಕಾರಗಳು ಕಾರ್ಯವಿಧಾನ ಕಾನೂನು ಅಥವಾ ವಿಧಿ 142 ರ ವಿಷಯಗಳಿಗೆ ಸೀಮಿತವಾಗಿವೆಯೇ? ಸಂವಿಧಾನ ಅಥವಾ ಜಾರಿಯಲ್ಲಿರುವ ಕಾನೂನಿನ ಅಸ್ತಿತ್ವದಲ್ಲಿರುವ ಸಬ್ಸ್ಟಾಂಟಿವ್ ಅಥವಾ ಕಾರ್ಯವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿ ಅಥವಾ ಅಸಮಂಜಸವಾಗಿ ನಿರ್ದೇಶನಗಳನ್ನು ನೀಡುವ/ಆದೇಶಗಳನ್ನು ನೀಡುವವರೆಗೆ ವಿಸ್ತರಿಸುತ್ತದೆಯೇ?
  14. 131ನೇ ವಿಧಿಯ ಅಡಿಯಲ್ಲಿ ಮೊಕದ್ದಮೆ ಹೂಡುವುದನ್ನು ಹೊರತುಪಡಿಸಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಾದಗಳನ್ನು ಪರಿಹರಿಸಲು ಸಂವಿಧಾನವು ಸುಪ್ರೀಂ ಕೋರ್ಟ್‌ನ ಯಾವುದೇ ಇತರ ನ್ಯಾಯವ್ಯಾಪ್ತಿಯನ್ನು ನಿಷೇಧಿಸುತ್ತದೆಯೇ?

Continue Reading

LATEST NEWS

ಯುಪಿಎಸ್‌ಸಿ ಅಧ್ಯಕ್ಷರಾಗಿ ಆಯ್ಕೆಯಾದ ಅಜಯ್‌ಕುಮಾರ್ ಯಾರು ಗೊತ್ತಾ?

Published

on

ಮಂಗಳೂರು/ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದ ನೂತನ ಅಧ್ಯಕ್ಷರಾಗಿ ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿ ಅಜಯ್‌ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಅಧ್ಯಕ್ಷೆಯಾಗಿದ್ದ ಪ್ರೀತಿ ಸೂದನ್ ಅವರ ಅವಧಿ ಏಪ್ರಿಲ್ 29ಕ್ಕೆ ಮುಗಿದಿದ್ದು, ಅಂದಿನಿಂದ ಈ ಹುದ್ದೆ ತೆರವಾಗಿತ್ತು. ಅಜಯ್ ಕುಮಾ‌ರ್ ಅವರ ನೇಮಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನೇಮಕಾತಿ ಆದೇಶದಲ್ಲಿ, “ಡಾ ಅಜಯ್ ಕುಮಾರ್‌ ರವರ ಅಧ್ಯಕ್ಷ ಅಧಿಕಾರಾವಧಿಯು ಯುಪಿಎಸ್‌ಸಿ ಅಧ್ಯಕ್ಷ ಕಚೇರಿಗೆ ಆಗಮಿಸಿದ ದಿನಾಂಕದಿಂದ ಆರಂಭವಾಗಲಿದೆ. ಅವರ ನೇಮಕಾತಿ ಅವಧಿಯನ್ನು ಭಾರತದ ಸಂವಿಧಾನದ 316(2)ನೇ ವಿಧಿಯ ನಿಬಂಧನೆಗಳಿಗೆ ಅನುಗುಣವಾಗಿ ಮತ್ತು ಸೇವಾ ಷರತ್ತುಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಯುಪಿಎಸ್‌ಸಿ (ಸದಸ್ಯರ) ನಿಯಮಗಳು, 1969 ರ ಪ್ರಕಾರ ನಿಯಂತ್ರಿಸಲಾಗುತ್ತದೆ” ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಾರತದ ಮೇಲೆ ಕಣ್ಣಿಟ್ರೆ ಮಣ್ಣಲ್ಲಿ ಹೂತು ಹಾಕ್ತೀವಿ; ಬಾದಾಮಿ ಬಾಗ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್

ಯುಪಿಎಸ್‌ಸಿ ಅಧ್ಯಕ್ಷರಾಗಿ ಆಯ್ಕೆಯಾದ ಅಜಯ್‌ಕುಮಾರ್ ಯಾರು?
1985ನೇ ತಂಡದ, ಕೇರಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದ ಅಜಯ್ ಕುಮಾರ್, 2019ರ ಆಗಸ್ಟ್ 23ರಿಂದ 2022ರ ಅಕ್ಟೋಬರ್ 31ರವರೆಗೂ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಇವರು ಐಐಟಿ ಕಾನ್ಪುರ್‌ ಹಳೆಯ ವಿದ್ಯಾರ್ಥಿ ಸಹ. ಪಿಹೆಚ್‌ಡಿ ಅನ್ನು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ ನಲ್ಲಿ ಪಡೆದಿದ್ದಾರೆ ಮತ್ತು ಎಂಎಸ್ ಅನ್ನು ಅಪ್ಲೈಡ್‌ ಎಕನಾಮಿಕ್ಸ್‌ನಲ್ಲಿ ಮಿನ್ನೆಸೋಟಾ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ.

ರಕ್ಷಣಾ ಕಾರ್ಯದರ್ಶಿಯಾಗಿ ನಿವೃತ್ತರಾದ ಭಾರತದ ಅತ್ಯಂತ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು. ತಮ್ಮ ಪರಿವರ್ತನಾತ್ಮಕ ರಕ್ಷಣಾ ಸುಧಾರಣೆಗಳಿಗೆ ಹೆಸರುವಾಸಿಯಾಗಿದ್ದಾರೆ. ರಕ್ಷಣಾ ಪಡೆಗಳ ಮುಖ್ಯಸ್ಥರ ರಚನೆ, ಆತ್ಮನಿರ್ಭರ ಭಾರತ ಉಪಕ್ರಮಗಳು, ಅಗ್ನಿವೀರ್ ಯೋಜನೆ ಮತ್ತು ಸಶಸ್ತ್ರ ಕಾರ್ಖಾನೆಗಳ ಕಾರ್ಪೋರೇಟೀಕರಣಕ್ಕೆ ಕೊಡುಗೆ ನೀಡಿದ್ದಾರೆ.

ವಿಶೇಷವೆಂದರೆ, ಅಜಯ್ ಕುಮಾರ್ ರವರು ಕಾಂಗ್ರೆಸ್‌, ಭಾರತೀಯ ಜನತಾ ಪಾರ್ಟಿ ಎರಡು ಪಕ್ಷಗಳ ಅಧಿಕಾರಾವಧಿಯಲ್ಲಿ ಸರ್ಕಾರಗಳ ಜತೆ ಪ್ರಮುಖ ಪಾತ್ರವಹಿಸಿ ಸೇವೆ ಮಾಡಿದ್ದಾರೆ. ಎರಡು ಸರ್ಕಾರಗಳ ಸಂದರ್ಭದಲ್ಲೂ ಪ್ರಮುಖ ಹುದ್ದೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page