Connect with us

LATEST NEWS

ಮಕ್ಕಳ ಯಕ್ಷಗಾನದಲ್ಲಿ ರಾಜಕೀಯ ವೈಷಮ್ಯ: ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ ಪಂಚಾಯತ್ ಉಪಾಧ್ಯಕ್ಷ..!

Published

on

ಉಡುಪಿ: ರಾಜಕೀಯ ವೈಷಮ್ಯ ಹಿನ್ನೆಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಕ್ಕಳ ಯಕ್ಷಗಾನ ಅರ್ಧಕ್ಕೆ ನಿಲ್ಲಿಸಿರುವಂತಹ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೇರಿಕುದ್ರುವಿನಲ್ಲಿ ನಡೆದಿದೆ.

ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಮಕ್ಕಳ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಂದಾಪುರ ಪೊಲೀಸ್ ಠಾಣೆಗೆ ಆನೆಗಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಪೂಜಾರಿ ದೂರು ನೀಡಿದ್ದರು.

ದೂರಿನ ಹಿನ್ನಲೆ ಪೊಲೀಸರು ಮಕ್ಕಳ ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ರಾತ್ರಿ 10:30 ರ ವರೆಗೆ ಯಕ್ಷಗಾನ ನಡೆಸಲು ಸಮಿತಿ ಅನುಮತಿ ಪಡೆದಿದ್ದು, ಆದರೆ ಸಮಯ ಮೀರುತ್ತಿದ್ದಂತೆ ಉದಯ ಪೂಜಾರಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಯಕ್ಷಗಾನದಲ್ಲಿ ಭಾಗವಹಿಸಬೇಕಿದ್ದ ಭಾಗವತರ ಅನಾರೋಗ್ಯದಿಂದ ವಿಳಂಬವಾಗಿದ್ದು, ಒಂದು ಗಂಟೆ ತಡವಾಗಿ ಕಾರ್ಯಕ್ರಮ ಪ್ರಾರಂಭವಾಗಿದೆ. ಅವಧಿ ಮುಗಿದ ಬಳಿಕ ಯಕ್ಷಗಾನ ನಡೆಸುತ್ತಿರುವ ಕುರಿತು ಉದಯ ಪೂಜಾರಿ ದೂರು ನೀಡಿದ್ದು, ರಾಜಕೀಯ ಪ್ರೇರಿತವಾಗಿ ಯಕ್ಷಗಾನ ನಿಲ್ಲಿಸುವ ಯತ್ನ ನಡೆಯುತ್ತಿರುವ ಕುರಿತು ಆಯೋಜಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಯಕ್ಷಗಾನವನ್ನು ನಿಲ್ಲಿಸಿದ ಗ್ರಾಮ ಪಂಚಾಯತ್‌ ಉಪಾಧ್ಯಕ್ಷನ ನಡೆಗೆ ದೇವರೇ ತಕ್ಕ ಶಾಸ್ತಿ ಮಾಡುವರು ಎಂದಿದ್ದಾರೆ.

LATEST NEWS

ಕೊಹ್ಲಿ ಎದುರಿಸಿದ ಕಠಿಣ ಬೌಲರ್ ಇವರಂತೆ ?

Published

on

ಮಂಗಳೂರು/ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೀವರ್ ಕ್ರಿಕೆಟ್ ಲೋಕವನ್ನು ಆವರಿಸಿದೆ. ಮಾರ್ಚ್ 22ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯ ನಡೆಯಲಿದ್ದು, ಈ ಮ್ಯಾಚ್‌ನಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿದೆ.


ಸೀಸನ್ 18ಕ್ಕೆ ಎಲ್ಲಾ ತಂಡಗಳು ಅಭ್ಯಾಸ ಪ್ರಾರಂಭಿಸಿದ್ದು, ಆರ್‌ಸಿಬಿ ಕೂಡ ಈ ಸೀಸನ್‌ಗೆ ಸಜ್ಜಾಗಿ ನಿಂತಿದೆ. ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಇದೆಲ್ಲದರ ನಡುವೆ ಕೊಹ್ಲಿ ಐಪಿಎಲ್‌ನಲ್ಲಿ ನಾನೆದುರಿಸಿದ ಅತ್ಯಂತ ಕಠಿಣ ಬೌಲರ್ ಯಾರೆಂಬುದನ್ನು ಹೇಳಿದ್ದಾರೆ.

ಆರ್‌ಸಿಬಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಾನೆದುರಿಸಿದ ಕಠಿಣ ಬೌಲರ್ ಎಂದರೆ ಅದು ಜಸ್‌ಪ್ರೀತ್ ಬುಮ್ರಾ ಎಂದಿದ್ದಾರೆ. ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್. ಅವರನ್ನು ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: IML 2025: ಇಂಡಿಯಾ ಮಾಸ್ಟರ್ಸ್‌ಗೆ ಚಾಂಪಿಯನ್‌ ಕಿರೀಟ

ಬುಮ್ರಾ ಐಪಿಎಲ್‌ನಲ್ಲಿ ಹಲವು ಬಾರಿ ನನ್ನನ್ನು ಔಟ್ ಮಾಡಿದ್ದಾರೆ. ಅವರನ್ನು ನೆಟ್ಸ್‌ನಲ್ಲೂ ಎದುರಿಸುವುದು ಅತ್ಯಂತ ಕಠಿಣವಾಗಿರುತ್ತದೆ. ಅವರನ್ನು ಎದುರಿಸಲು ನಾವು ಯಾವಾಗಲೂ, ಪ್ರತಿ ಚೆಂಡಿಗೂ ಮೈಂಡ್ ಗೇಮ್‌ನೊಂದಿಗೆ ಸಿದ್ದವಾಗಿರಬೇಕು ಎಂದು ಕೊಹ್ಲಿ ಬುಮ್ರಾ ಬೌಲಿಂಗ್ ಅನ್ನು ಹೊಗಲಿದ್ದಾರೆ.

 

 

ವಿರಾಟ್ ಕೊಹ್ಲಿ ಹಾಗೂ ಬುಮ್ರಾ ಐಪಿಎಲ್‌ನ 16 ಇನಿಂಗ್ಸ್‌ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಬುಮ್ರಾ ಎಸೆದ 95 ಎಸೆತಗಳನ್ನು ಎದುರಿಸಿರುವ ಕೊಹ್ಲಿ 140 ರನ್​ ಗಳಿಸಿದ್ದಾರೆ. ಇದರ ನಡುವೆ 5 ಬಾರಿ ವಿಕೆಟ್​ ಅನ್ನು ಸಹ ಒಪ್ಪಿಸಿದ್ದಾರೆ. ಇನ್ನು ಬುಮ್ರಾ-ಕೊಹ್ಲಿ ಮುಖಾಮುಖಿಯಲ್ಲಿ ಮೂಡಿಬಂದಿರುವ ಫೋರ್​ಗಳ ಸಂಖ್ಯೆ 15. ಹಾಗೆಯೇ ಬುಮ್ರಾ ಎಸೆತಗಳಲ್ಲಿ ಕೊಹ್ಲಿ ಕೇವಲ 5 ಸಿಕ್ಸ್ ಮಾತ್ರ ಬಾರಿಸಿದ್ದಾರೆ.

 

Continue Reading

LATEST NEWS

ಕಾರು ಡಿ*ಕ್ಕಿಯಾಗಿ ಟಿಪ್ಪರ್‌ನಡಿ ಸಿಲುಕಿದ ಸ್ಕೂಟಿ; ಅದೃಷ್ಟವಶಾತ್ ಮಹಿಳೆ, ಮಕ್ಕಳು ಪಾರು

Published

on

ಕುಂದಾಪುರ : ಇತ್ತೀಚೆಗೆ ಅಪಘಾ*ತ ಪ್ರಕರಣಗಳು ಹೆಚ್ಚುತ್ತಿದ್ದು, ಅನೇಕರು ಪ್ರಾ*ಣ ಕಳೆದು ಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಅಪ*ಘಾತ ಪ್ರಕರಣ ವರದಿಯಾಗಿದ್ದು, ಅದೃಷ್ಟವಶಾತ್ ದುರಂ*ತವೊಂದು ತಪ್ಪಿದೆ.

ಸ್ಕೂಟಿಗೆ ಕಾರು ಡಿ*ಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ‌‌ ನಿಂತಿದ್ದ ಟಿಪ್ಪರ್ ಚಕ್ರದಡಿ ಸ್ಕೂಟಿ ಸಿಲುಕಿದೆ. ಅದೃಷ್ಟವಶಾತ್ ಮಹಿಳೆ ‌ಮತ್ತು ಮಕ್ಕಳಿಬ್ಬರು ಸಣ್ಣ ಪುಟ್ಟ ಗಾ*ಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆ ನಡೆದಿರೋದು ಕುಂದಾಪುರದ ಹೆಮ್ಮಾಡಿಯಲ್ಲಿ.

ಸ್ಕೂಟಿಗೆ ಕಾರು ಡಿ*ಕ್ಕಿ ಹೊಡೆದು  ರಸ್ತೆಯ ಬದಿಗೆ ತಳ್ಳಲ್ಪಟ್ಟಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿ ನಿಂತಿದ್ದ ಟಿಪ್ಪರ್‌ನಡಿ ಬಿದ್ದಿದೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Continue Reading

DAKSHINA KANNADA

ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಚೀಂವ್ ಚೀಂವ್ ಅಭಿಯಾನ

Published

on

ಬಂಟ್ವಾಳ: ಬೇಸಗೆಯಲ್ಲಿ ಮನುಷ್ಯನಿಗೆ ಹೇಗೆ ಬಾಯಾರಿಕೆ ಆಗುತ್ತದೆಯೋ ಅದೇ ರೀತಿ ಪ್ರಾಣಿ ಪಕ್ಷಿಗಳಿಗೂ ಬಾಯಾರಿಕೆ ಆಗುತ್ತದೆ. ಆದರೆ ಬೇಸಗೆಯಲ್ಲಿ ನೀರು ಸಿಗದೆ ಪ್ರಾಣಿ ಪಕ್ಷಿಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ಕಾರಣ ಅವುಗಳಿಗೂ ನೀರುಣಿಸುವುದು ನಮ್ಮ ಜವಾಬ್ದಾರಿ. ಈ ಬಗ್ಗೆ ಬಿ.ಸಿ.ರೋಡ್ ನ ಮೊಡಂಕಾಪಿನ ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಚೀಂವ್ ಚೀಂವ್ ಅಭಿಯಾನ ನಡೆಸಿದ್ದಾರೆ.

ನೀರು ಸಿಗದೆ ಪರದಾಡುವ ಪಕ್ಷಿಗಳಿಗೆ ಶಾಲಾ ಆವರಣದಲ್ಲಿ ತೆಂಗಿನ ಗೆರಟೆಗಳನ್ನು ಇರಿಸಿ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ. ಸುಮಾರು 252 ಈ ರೀತಿಯ ಗೆರಟೆಗಳನ್ನು ಇರಿಸಿ ನಿತ್ಯ ಇದಕ್ಕೆ ನೀರು ಹಾಕಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗುವಂತೆ ಮಾಡಿದ್ದಾರೆ.

ಇಲ್ಲಿನ ಶಿಕ್ಷಕ ರೋಶನ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಈ ಪರಿಸರ ಸ್ನೇಹಿ ಕೆಲಸ ನಡೆಸಲಾಗಿದೆ. ಕಳೆದ ಐದು ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳು ಬೇಸಗೆಯಲ್ಲಿ ಪಕ್ಷಿಗಳಿಗೆ ಆಹಾರ ಇಡಲು ಪಾತ್ರೆ ತಯಾರಿಸಿ ಶಾಲೆಯ ಸುತ್ತ ಮುತ್ತ ಹಾಗೂ ಮನೆಗಳ ಸುತ್ತಮುತ್ತ ಇಟ್ಟು ಪಕ್ಷಿಗಳ ಬಾಯಾರಿಕೆ ನೀಗಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಪಕ್ಷಿಗಳ ಬಗ್ಗೆ ಅಧ್ಯಯನಕ್ಕೂ ಸಹಕಾರಿಯಾಗಿದ್ದು, ಶಾಲೆಯ ವತಿಯಿಂದ ಪಕ್ಷಿಗಳು ಆಹಾರ ನೀರು ಸೇವಿಸುವ ಫೋಟೋ ಸ್ಪರ್ಧೆಯನ್ನೂ ಏರ್ಪಡಿಸಿ ಬಹುಮಾನ ನೀಡಲಾಗಿದೆ. ಮಕ್ಕಳ ಈ ಜಾಗೃತಿ ಅಭಿಯಾನ ಪ್ರತಿಯೊಬ್ಬರು ಕನಿಷ್ಟ ತಮ್ಮ ಮನೆಯ ಕಿಟಕಿಯಲ್ಲಿ ಪಕ್ಷಿಗಳಿಗೆ ನೀರಿಡುವಂತೆ ಪ್ರೇರೇಪಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page