Connect with us

LATEST NEWS

ಕರ್ನಾಟಕದತ್ತ ಪ್ರಧಾನಿ ಮೋದಿ ಚಿತ್ತ… ಈ ಜಿಲ್ಲೆಗಳಲ್ಲಿ ಮೋದಿ ಪ್ರವಾಸ! ಎಲ್ಲಿ? ಯಾವಾಗ?

Published

on

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿವೆ. ಯಾವುದೇ ಕ್ಷಣದಲ್ಲಾದರೂ ಚುನಾವಣಾ ನೀತಿಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಎರಡನೇ ಹಂತದ ಬಿರುಸಿನ ಪ್ರಚಾರಕ್ಕೆ ಸಿದ್ದತೆ ನಡೆಸಿದ್ದಾರೆ. ಅವರು ಕರ್ನಾಟಕದತ್ತ ಚಿತ್ತ ನೆಟ್ಟಿದ್ದಾರೆ. ರಾಜ್ಯದ ಕೆಲ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ.

ಎಲ್ಲಿ? ಯಾವಾಗ?

ರಾಜ್ಯದಲ್ಲಿ ಪ್ರಧಾನಿ ಮೋದಿ ಲೋಕಸಭಾ ಚುನಾವಣೆಯ ಪ್ರಚಾರ ಸಮಾವೇಶಗಳನ್ನು ಮಾರ್ಚ್‌ 16 ರಿಂದ ಪ್ರಾರಂಭಿಸಲಿದ್ದಾರೆ. ಮಾ. 16 ರಂದು ಕಲಬುರಗಿಯಲ್ಲಿ ಹಾಗೂ ಮಾ.18 ರಂದು ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿಯವರು ಮಾರ್ಚ್‌ 16 ಮಧ್ಯಾಹ್ನ 2 ಘಂಟೆಗೆ ಕಲಬುರುಗಿಗೆ ಭೇಟಿ ನೀಡಲಿದ್ದು, ಅಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ, 18 ರ ಮಧ್ಯಾಹ್ನ 2 ಘಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಬಿಜೆಪಿ ರಾಜ್ಯಕಛೇರಿ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಯವರ ಎರಡು ದಿನಗಳ ಪ್ರವಾಸಕ್ಕೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, 16 ರಂದು ಕಲಬುರಗಿಯ ಎನ್ ವಿ ಆಟದ ಮೈದಾನದಲ್ಲಿ ಸಭೆ ನಡಿಯಲ್ಲಿದ್ದು, 18 ರಂದು ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಪಕ್ಷದ ಪ್ರಮುಖರು ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

 

LATEST NEWS

ವಿಮಾನ ನಿಲ್ದಾಣದಲ್ಲಿ ಗುಂಡಿಗೆ ಬಿದ್ದ ಮಗು ಸಾವು

Published

on

ಕೊಚ್ಚಿ: ತೆರೆದಿಟ್ಟ ತ್ಯಾಜ್ಯದ ಗುಂಡಿಗೆ 3 ವರ್ಷದ ಬಾಲಕ ಬಿದ್ದು ಸಾವನ್ನಪ್ಪಿದ ಘಟನೆ ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ರಾಜಸ್ತಾನದ ರಿಧಾನ್ ಜಾಜು ಮೃತಪಟ್ಟ ಬಾಲಕ. ಪೋಷಕರ ಜೊತೆ ವಿಮಾನದಿಂದ ಇಳಿದಿದ್ದ ಕುಟುಂಬ ಮಗುವಿನೊಂದಿಗೆ ವಿಮಾನ ನಿಲ್ದಾಣದ ದೇಶೀಯ ಟರ್ಮಿನಲ್ ಹೊರಗಿನ ಕೆಫೆಗೆ ಹೊಗಿತ್ತು. ಈ ವೇಳೆ ಕೆಫೆಯ ಹೊರಗಡೆ ಆಟವಾಡುತ್ತಿದ್ದಾಗ ವಿಮಾನ ನಿಲ್ದಾಣದ ಕಸದ ಗುಂಡಿಗೆ ಬಿದ್ದಿದ್ದಾನೆ.

ವಿಮಾನನಿಲ್ದಾಣದ ಕೆಫೆಗೆ ಮಗುವಿನ ಪೋಷಕರು ಬಂದಿದ್ದಾಗ ಈ ಘಟನೆ ನಡೆದಿದೆ. ದೇಶೀಯ ಟರ್ಮಿನಲ್‌ನ ಹೊರಗಿರುವ ಅನ್ನ ಸಾರಾ ಕೆಫೆಯ ಹಿಂಭಾಗದಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಸ್ಥಳದಲ್ಲಿ ಈ ದುರ್ಘಟನೆ ನಡೆದಿದೆ. ತನ್ನ ಅಣ್ಣನೊಂದಿಗೆ ಹೊರಗೆ ಆಟವಾಡುತ್ತಿದ್ದ ಮಗು ಕಸ ತುಂಬಿದ ಗುಂಡಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

LATEST NEWS

ಎಚ್ಚರ ಎಚ್ಚರ..! ಯಾವುದೇ ಲಿಂಕ್ಗಳನ್ನು ತೆರೆಯದಿದ್ದರೂ ಹ್ಯಾಕ್ ಆಗುತ್ತೆ ವಾಟ್ಸ್ಆ್ಯಪ್ ಖಾತೆ

Published

on

ಮಂಗಳೂರು/ಕ್ಯಾಲಿಫೋರ್ನಿಯಾ: ಈ ಹಿಂದೆ ಅನಾಮಧೇಯ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ಮಾತ್ರ ಮೊಬೈಲ್‌ಗಳು ಮತ್ತು ಆ್ಯಪ್‌ಗಳು ಹ್ಯಾಕ್ ಆಗುತ್ತಿದ್ದವು. ಆದರೆ ಈಗ ಸಂಶಯಾಸ್ಪದ ಲಿಂಕ್‌ಗಳು ವ್ಯಾಟ್ಸ್‌ಆ್ಯಪ್‌ಗೆ ಬಂದರೆ  ಖಾತೆ ಹ್ಯಾಕ್ ಆಗುತ್ತೆ ಎಂದು ವ್ಯಾಟ್ಸ್ ಆ್ಯಪ್ ಸ್ಪಷ್ಟಪಡಿಸಿದೆ.

ವಾಟ್ಸ್ಆ್ಯಪ್ ಖಾತೆ ಹ್ಯಾಕ್ ಆಗದಿರಲು ಅನಾಮಧೇಯ ಮತ್ತು ಸಂಶಯಾಸ್ಪದ ವೆಬ್ ಕೊಂಡಿ (ಲಿಂಕ್), ಫೈಲ್ ಮತ್ತು ಆ್ಯಪ್‌ಗಳನ್ನು ತೆರೆಯಬಾರದು ಎಂದು ಬಹುತೇಕ ಬಳಕೆದಾರರಿಗೆ ತಿಳಿದೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಲಿಂಕ್‌ಗಳನ್ನು ತೆರೆಯದಿದ್ದರೂ ವಾಟ್ಸ್ಆ್ಯಪ್ ಖಾತೆ ಹ್ಯಾಕ್ ಆಗಿವೆ ಎಂಬ ವಿಚಾರವನ್ನು ಸ್ವತಃ ವಾಟ್ಸ್ಆ್ಯಪ್ ಬಹಿರಂಗಪಡಿಸಿದೆ.

24 ದೇಶಗಳಿಗೆ ಸೇರಿದ ಸುಮಾರು 90 ಬಳಕೆದಾರರು ತಾವು ಸ್ವೀಕರಿಸಿದ ದೋಷಪೂರಿತ ಫೈಲ್‌ಗಳನ್ನು ತೆರೆಯದಿದ್ದರೂ ಅವರ ಖಾತೆಗಳು ಹ್ಯಾಕ್ ಆಗಿವೆ. ಇದರ ಹಿಂದೆ ಇಸ್ರೇಲ್‌ನ “ಪ್ಯಾರಾಗೋನ್ ಸೊಲ್ಯೂಷನ್ಸ್’ ಎಂಬ ಸಂಸ್ಥೆಯ ಕೈವಾಡವಿದೆ ಎನ್ನಲಾಗಿದೆ. ಸದ್ಯ ಬಳಕೆದಾರರ ಖಾತೆಗಳು ಹ್ಯಾಕ್ ಆಗದಂತೆ ಕ್ರಮ ವಹಿಸಲಾಗಿದೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಭೂತದ ಮನೆಯಲ್ಲಿ ನೀರವ ಮೌನ…! ಮನೆಬಿಟ್ಟು ಹೋದ ಕುಟುಂಬ

ಝಿರೋ-ಕ್ಲಿಕ್ ದಾಳಿ

ಪ್ಯಾರಾಗಾನ್ ಸೊಲ್ಯೂಷನ್ಸ್ ಕಚೇರಿ ಅಮೆರಿಕದ ವರ್ಜೀನಿಯಾದಲ್ಲಿದೆ. ಗ್ರ್ಯಾಫೈಟ್ ಸ್ಪೈವೇರ್ ಅತ್ಯಂತ ಅಪಾಯಕಾರಿ. ಇದನ್ನು ಬಳಕೆದಾರರಿಗೆ ತಿಳಿಯದಂತೆ ಸಾಧನದಲ್ಲಿ ಅಳವಡಿಸಲಾಗುತ್ತದೆ. ಅಷ್ಟೇ ಅಲ್ಲ ಬಳಕೆದಾರರು ಯಾವುದೇ ಲಿಂಕ್ ಸೇರಿದಂತೆ ಇತ್ಯಾದಿಗಳನ್ನು ಕ್ಲಿಕ್ ಮಾಡುವ ಅಗತ್ಯವಿಲ್ಲ. ಈ ರೀತಿಯ ತಂತ್ರವನ್ನು ಝಿರೋ-ಕ್ಲಿಕ್ ದಾಳಿ ಎಂದು ಕರೆಯಲಾಗುತ್ತದೆ. ಒಮ್ಮೆ ನಿಮ್ಮ ಸಾಧನದಲ್ಲಿ ಈ ವೈರಸ್​ ಅಳವಡಿಕೆ ನಂತರ ಹ್ಯಾಕರ್‌ಗಳು ನಿಮ್ಮ ಸಾಧನವನ್ನು ಸುಲಭವಾಗಿಯೇ ಆಪರೇಟ್​ ಮಾಡುತ್ತಾರೆ. ನಂತರ ಹ್ಯಾಕರ್‌ಗಳು ತಮ್ಮ ಇಚ್ಛೆಯಂತೆ ಫೋನ್‌ನಿಂದ ಡೇಟಾ ಕದಿಯಬಹುದು.

ಪರಿಹಾರ ಏನು?

ವಾಟ್ಸ್ಆ್ಯಪ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಲೇ ಇರಬೇಕು. ನೀವು ಅಪರಿಚಿತ ಸಂಖ್ಯೆಯಿಂದ ಲಿಂಕ್ ಅಥವಾ ಫೈಲ್ ಬಂದರೆ ಅದಕ್ಕೆ ಪ್ರತಿಕ್ರಯಿಸಬಾರದು. ಆ ಸಂಖ್ಯೆಗಳನ್ನು ಬ್ಲಾಕ್ ಲಿಸ್ಟ್ ಹಾಕುವುದು ಸೂಕ್ತ. ಆಗಾಗ್ಗೆ ನಿಮ್ಮ ಫೋನ್‌ನ ಸೆಟ್ಟಿಂಗ್ಸ್ ಮತ್ತು ಅಪ್ಲಿಕೇಶನ್ ಅನುಮತಿಗಳನ್ನು ಪರಿಶೀಲಿಸುವುದು ಸೂಕ್ತವಾಗಿದೆ.

 

Continue Reading

LATEST NEWS

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ನಾಲ್ಕು ಜನ ಸಾ*ವು

Published

on

ನವದೆಹಲಿ:  ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ನಾಲ್ಕು ಜನ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಸ್ಥಳದಿಂದ ಕನಿಷ್ಠ ನಾಲ್ಕು ಸುಟ್ಟ ಶವಗಳನ್ನ ವಶಪಡಿಸಿಕೊಂಡಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತದೇಹಗಳು ಮತ್ತು ಗಾಯಗೊಂಡ ವ್ಯಕ್ತಿಯನ್ನು ಕಲ್ಯಾಣಿಯ ಜೆಎನ್ಎಂ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗ್ತಿದೆ.

ಈ ಸ್ಫೋಟದಿಂದ ಇಡೀ ಕಾರ್ಖಾನೆಗೆ ಹಾನಿಯಾಗಿದೆ. ಆರಂಭದಲ್ಲಿ, ನಾವು ನಾಲ್ಕು ಸುಟ್ಟ ಶವಗಳನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಜ್ವಾಲೆಗಳನ್ನ ನಂದಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಲ್ಯಾಣಿಯ ರಥಾಲಾ ಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟಕ್ಕೆ ಬಲಿಯಾದವರು ಕಾರ್ಖಾನೆಯ ಉದ್ಯೋಗಿಗಳು ಎಂದು ನಿವಾಸಿಗಳು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page