Connect with us

DAKSHINA KANNADA

ಮುಸ್ಲಿಂರಿಗೆ ಹಿಂಸಿಸುವುದನ್ನು ನಿಲ್ಲಿಸಿ ಅಥವಾ ಭಾರತವನ್ನು ಹಿಂದುಗಳ ದೇಶ ಎಂದೇ ಡಿಕ್ಲೇರ್ ಮಾಡಿ-ಮೊಹಮ್ಮದ್ ಮಸೂದ್ ಆಕ್ರೋಶ

Published

on

ಮಂಗಳೂರು: ಹಿಜಾಬ್‌ ಬಳಿಕ, ದೇವಸ್ಥಾನ ಆಯ್ತು, ಪೂಜೆ ಆಯ್ತು, ಅಂಗಡಿ ವ್ಯಾಪಾರ ಬಂದ್ ಮಾಡಿ ಆಯ್ತು… ಈಗ ಮಸೀದಿಯಲ್ಲಿ ಬಾಂಗ್‌ ಕೊಡಬಾರದು ಎಂದು ಹಿಂದು ಸಂಘಟನೆಗಳು ಮುಂದಾಗಿವೆ. ಇದು ಎಲ್ಲಿಯವರೆಗೆ ಮುಟ್ಟಲಿದೆ ಸ್ವಾಮಿ…? ಇದು ಹಿಂದುಗಳ ದೇಶ ಎಂದೇ ನೀವು ಡಿಕ್ಲೇರ್ ಮಾಡಿ ಎಂದು ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ ಎಸ್ ಮೊಹಮ್ಮದ್ ಮಸೂದ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಿಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಮುಸ್ಲಿಮರ ವಿಚಾರ ಏನೂ ಇರಕೂಡದು ಎಂದು ನೀವು ಡಿಕ್ಲೇರ್ ಮಾಡಿಬಿಡಿ. ಲೌಡ್‌ ಸ್ಪೀಕರ್‌ ಇಡಿ…ಆದರೆ ಮಾಲಿನ್ಯಗೋಸ್ಕರ ಇದನ್ನು ಇಡಬೇಡಿರಿ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಅವರ ಹೇಳಿಕೆಗೆ ಅಭಿನಂದಿಸುತ್ತೇನೆ. ಮಾಲಿನ್ಯ ಎಂದರೆ ಏನು..? ನಿಮಗೆ ಧ್ವನಿ ವರ್ಧಕದಿಂದ ಮಾಲಿನ್ಯ ಆಗುತ್ತಿದೆಯೇ ಸ್ವಾಮಿ..? ಪಟಾಕಿ ಹೊಡೆದರೂ ಮಾಲಿನ್ಯ ಅಲ್ಲವೇ..? ದೇವಸ್ಥಾನದ ಗಂಟೆ ಜಾಗಟೆ , ಪಟಾಕಿ ಸಿಡಿಸುವುದು ಕೂಡ ಶಬ್ಧ ಮಾಲಿನ್ಯ ಅಲ್ಲವಾ…?

ಅಲ್ಲಾನಿಗೆ ಪ್ರತಿಯಾಗಿ ನಾವು ರಾಮ ಜಪ ಕೂಗುತ್ತೇವೆ ಎಂದು ಮುತಾಲಿಕ್ ಹೇಳಿದ್ದಾರೆ. ನೀವು ಕೂಗಿ ಸ್ವಾಮಿ ಮಾಡಿ…ನಮ್ಮದೇನೂ ಅಡ್ಡಿ ಇಲ್ಲಾ. ಎಂದು ವಾಗ್ದಾಳಿ ನಡೆಸಿದರು.

ಇನ್ನು ಸಚಿವ ಬಿ ಸಿ ಪಾಟೀಲ್‌ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು ಧ್ವನಿ ವರ್ಧಕದ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ನೀವು ದೇವಸ್ಥಾನದಲ್ಲಿ ಗಂಟೆ ಹೊಡೆದರೆ ಕಿರಿಕಿರಿ ಆಗಲ್ವಾ, ಓಟು ಕೇಳಿಕೊಂಡು ಮನೆ ಮನೆಗೆ ಹೋಗಲ್ವಾ ಅದು ಮಾಲಿನ್ಯ ಅಲ್ಲವಾ?

ಮಾಲಿನ್ಯ ಎಂದು ಹೇಳುತ್ತಾರಲ್ವ ಹಾಗಾದ್ರೆ ನೀರುಳ್ಳಿ ಯಾಕೆ ತಿನ್ತೀರಿ. ಅದರ ಫಲವತ್ತತೆಗೆ ಗೊಬ್ಬರಕ್ಕೆ ಮೂತ್ರದಂತಹ ಅನೇಕ ಮಾಲಿನ್ಯಕಾರಿ ಅಂಶ ಎಲ್ಲಾನೂ ಹಾಕ್ತಾರೆ ಅದು ತಿನ್ನಲೇಬಾರದು ಎಂದರು.

ರಮಾನಾಥ ರೈ’ಕೋಮು ಮತ್ತು ದ್ವೇಷ ಆಕಾಶದ ಎತ್ತರಕ್ಕೆ ಹೊಗುವ ಮೊದಲು ಎಚ್ಚೆತ್ತುಕೊಳ್ಳಿ’ ಎಂದು ಹೇಳ್ತಾರೆ. ಹೌದು, ಆಕಾಶದ ಎತ್ತರ ಹೋದರೆ ಅದು ಸಮುದ್ರಕ್ಕೆ ಬೀಳುತ್ತದೆ ನೋಡಿ. ನಾನು ದೇವರ ಹತ್ರ ಒಂದೇ ಕೇಳೋದು ನಮ್ಮ ಸರ್ಕಾರ, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ, ಪೊಲೀಸ್ ಕಮಿಷನರ್ ಎಚ್ಚೆತ್ತುಕೊಳ್ಳಲಿ ಎಂದು.

ಡೀಸೆಲ್ , ಪೆಟ್ರೋಲ್ ಬೆಲೆ ಏರಿಕೆಯ ವಿಚಾರದ ಬಗ್ಗೆ ಮಾತನಾಡಿದ ಅವರು ‘ಈ ಹಣ್ಣಿನ ಗಲಾಟೆ ಬಿಟ್ಟು ಬೆಲೆ ಇಳಿಸುವ ಕೆಲಸ ಮಾಡಲಿ. ಇವತ್ತು ನೋಡಿ ರಮಾನಾಥ ರೈಗೆ ಬಹಳ ಒಳ್ಳೆ ಬುದ್ಧಿ ಬಂದಿದೆ. ಸರಿ ದಾರಿಯಲ್ಲಿ ನಡೆಯುತ್ತಿದ್ದಾರೆ. ಇಂತಹ ವಿಚಾರದಲ್ಲಿ ಯಾವುದೂ ಇಲ್ಲ. ಪಕ್ಷವೂ ಇಲ್ಲ, ಹೆಣವೂ ಇಲ್ಲ. ನೀವು ನಡೆಯುತ್ತಿರುವ ದಾರಿಯಲ್ಲಿ ಮುನ್ನಡೆಯಿರಿ, ನಿಮ್ಮ ಹಿಂದೆ ನಾವಿದ್ದೇವೆ’ ಎಂದು ಹೇಳಿದರು.

ಇನ್ನು ಕಲ್ಲಡ್ಕ ಪ್ರಭಾಕರ್ ಭಟ್ ಬಗ್ಗೆ ಮಾತನಾಡಿದ ಅವರು ‘ ಕಲ್ಲಡ್ಕ ಭಟ್ರು ತುಂಬಾ ಒಳ್ಳೆ ಮನುಷ್ಯ. ಅವ್ರು ಭಟ್ರು ಹಾಗೆಯೇ ಡಾಕ್ಟ್ರು ಅವರು, ಒಳ್ಳೆ ಕೆಲಸ ಮಾಡುತ್ತಿದ್ದಾರೆ. ನಾವು ಯಾರಿಗೂ ಕೇಡು ಬಯಸುವುದಿಲ್ಲ. ಕೆಟ್ಟದನ್ನು ದೇವರು ನೋಡ್ತಾರೆ. ಅವರನ್ನು ಅಲ್ಲಾ ಕಾಪಾಡಲಿ. ದೇವರು ಅವರಿಗೆ ಆಶೀರ್ವಾದ ಮಾಡಲಿ’ ಎಂದು ಹೇಳಿದರು.

ಇದೀಗ ಮಾವಿನ ಹಣ್ಣು ತೆಗೆದುಕೊಳ್ಳಬೇಡಿರಿ ಎಂದು ಹೇಳಿದ್ದಾರೆ. ಇದೇನು ಸ್ವಾಮಿ..? ಇದು ಈ ರೀತಿ ಮುಂದುವರೆದರೆ ಯಾವ ಹಂತಕ್ಕೆ ಹೋಗಬಹುದು. ಅದೇನೇ ಆದರೂ ನಮ್ಮದು ರಂಜಾನ್ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು. ಪೊಲೀಸರು ಎಲ್ಲಾ ಮಸೀದಿಗಳಿಗೂ ಭದ್ರತೆ ನೀಡಬೇಕು ಎಂದು ಮನವಿ ನೀಡಿದ್ದೇವೆ ಎಂದರು.

DAKSHINA KANNADA

ಹಿಂದೂಗಳನ್ನು ಗುರಿಯಾಗಿಟ್ಟುಕೊಳ್ಳುವ ಪೊಲೀಸರ ಕ್ರಮ ಸಹಿಸಲ್ಲ: ಭರತ್‌ ಶೆಟ್ಟಿ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸುತ್ತಿರುವುದನ್ನು ಖಂಡಿಸಿ ಈಗಾಗಲೇ ನಾನು ದೆಹಲಿಯಲ್ಲಿರುವ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗದ ಅಧಿಕಾರಿಗಳು ಮಂಗಳೂರಿಗೆ ಬಂದು ತನಿಖೆ ಆರಂಭಿಸಿದ್ದಾರೆ. ನನ್ನ ಹೇಳಿಕೆಯನ್ನು ಕೂಡಾ ಅವರು ದಾಖಲಿಸಿದ್ದಾರೆ ಎಂದು ಮಂಗಳೂರು ಉತ್ತರ ಕ್ಷೇತ್ರ ಶಾಸಕ ಭರತ್‌ ಶೆಟ್ಟಿ ಹೇಳಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು ಪೊಲೀಸರು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿವಿಧ ಹಿಂದೂ ಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಅವರ ಮನೆಗಳಿಗೆ ರಾತ್ರಿ ವೇಳೆ ತೆರಳಿ ಫೋಟೋ ತೆಗೆಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಕಾನೂನು, ಸುವ್ಯವಸ್ಥೆ ಹೆಸರಿನಲ್ಲಿ ಅವರು ಈ ರೀತಿ ಹಿಂಸೆ ನೀಡುತ್ತಿರುವುದನ್ನು ನಮಗೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮುಡಾ ಕಲೆಕ್ಷನ್ ಕೇಂದ್ರವಾಗಿ ಮಾರ್ಪಾಡಾಗಿದೆ. ಅವ್ಯವಸ್ಥೆ ಆಗರವಾಗಿದೆ. ಜನರು ಕಟ್ಟಡಕ್ಕೆ ಅರ್ಜಿ ಮೂಡಾದಲ್ಲಿ ಸಲ್ಲಿಸಿದರೆ ಅದಕ್ಕೆ ಅನುಮೋದನೆ ಇಲ್ಲಿ ಆಗುತ್ತಿಲ್ಲ. ಬದಲಿಗೆ ಬೆಂಗಳೂರಿಗೆ ತೆರಳಬೇಕಾಗಿದೆ. ಇದು ಯಾತಕ್ಕೆ ಎನ್ನುವುದು ಜನರಿಗೆ ಗೊತ್ತಿದೆ. ಇದೆಲ್ಲವನ್ನೂ ಖಂಡಿಸಿ ನಾವು ದಕ್ಷಿಣ ಕನ್ನಡ ಮತ್ತು ಉಡುಪಿಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ದೊಡ್ಡ ರೀತಿಯ ಪ್ರತಿಭಟನೆ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ: ರಾಜ್ಯ ಸರಕಾರದಿಂದ ಕಾನೂನಿನಲ್ಲೂ ತುಷ್ಠೀಕರಣ: ಶಾಸಕ ಭರತ್ ಶೆಟ್ಟಿ

ಇನ್ನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಸರಕಾರದ ತಾರತಮ್ಯ ನೀತಿ, ಅಭಿವೃದ್ಧಿ ಇಲ್ಲದ ಆಡಳಿತದ ವಿಚಾರ, ಜ್ವಲಂತ ಸಮಸ್ಯೆಗಳಿಗೆ ಸಿಗದ ಸಮಸ್ಯೆಗಳು ಇವೆಲ್ಲವನ್ನೂ ಖಂಡಿಸಿ ಜೂನ್ 23ರಂದು ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

Continue Reading

DAKSHINA KANNADA

ಗಾಯಕಿ ಅಖಿಲ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು; ಪುತ್ತೂರು ಕೋರ್ಟ್‌ನಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಕೆ

Published

on

ಪುತ್ತೂರು: ಗಾಯಕಿ ಹಾಗೂ ನಿರೂಪಕಿ ಅಖಿಲಾ ಪಜಿಮಣ್ಣು ಸಂಸಾರ ಮುರಿದುಬಿದ್ದಿದೆ. ಕನ್ನಡ ಕೋಗಿಲೆ ಸೀಸನ್​ 1 ಹಾಗೂ ಸೀಸನ್​ 2 ರನ್ನರ್​ ಅಪ್​ ಆಗಿದ್ದ ಅಖಿಲಾ ತಮ್ಮ ಸುಮಧುರ ಕಂಠದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು.

ಪುತ್ತೂರಿನವರಾದ ಅಖಿಲಾ, 2011 ರಲ್ಲಿ ಸರಿಗಮಪ ಲಿಟಲ್ ಚಾಂಪ್ಸ್‌ನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿಗೆ ಏರಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್‌ ಶರ್ಮ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಧನಂಜಯ್‌ ಶರ್ಮ ಮೂಲತಃ ಮೈಸೂರಿನವರಾಗಿದ್ದು, ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕದ ಖಾಸಗಿ ಕಂಪನಿಯೊಂದರಲ್ಲಿ ಫರ್ಮ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.

ಇತ್ತೀಚೆಗೆ ಟೆಸ್ಲಾ ಕಾರು ಖರೀದಿ ಮಾಡಿಯೂ ಸುದ್ದಿಯಾಗಿದ್ದರು. ಟೆಸ್ಲಾ ಕಾರ್‌ನಲ್ಲಿ ಪತ್ನಿಯ ಜೊತೆಗೆ ಟ್ರಿಪ್‌ಗೆ ಹೋಗುವ ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದರು. ಇದೀಗ ಇಬ್ಬರೂ ಒಪ್ಪಿಗೆಯಿಂದ ಈ ನಿರ್ಧಾರಕ್ಕೆ ಬಂದಿದ್ದು, ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಕೋರ್ಟ್‌ನ ದಾಖಲೆಗಳೂ ಸಿಕ್ಕಿದ್ದು, ಜೂನ್‌ 12 ರಂದು ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಕಡಬ: ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ ಸೈನಿಕ ಹೃದಯಾಘಾತದಿಂದ ನಿಧನ

ವಿಚ್ಛೇದನಕ್ಕೆ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದ ಅಖಿಲಾ ಪಜಿಮಣ್ಣು ತಮ್ಮ ಖಾತೆಯಿಂದ ಗಂಡ ಧನಂಜಯ ಶರ್ಮ ಅವರಿದ್ದ ಎಲ್ಲಾ ಫೋಟೋ, ವಿಡಿಯೋಗಳನ್ನು ಡಿಲೀಟ್‌ ಮಾಡಿದ್ದಾರೆ. ಇದೀಗ ಪುತ್ತೂರು ಕೋರ್ಟ್‌ನಲ್ಲಿ ಇಬ್ಬರೂ ಕೂಡ ತಮ್ಮ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Continue Reading

DAKSHINA KANNADA

ಕಡಬ: ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ ಸೈನಿಕ ಹೃದಯಾಘಾತದಿಂದ ನಿಧನ

Published

on

ಕಡಬ: ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ ಸೈನಿಕ ಹೃದಯಾ*ಘಾತದಿಂದ ನಿಧನರಾಗಿರುವ ಘಟನೆ ಕಳಾರ ಸಮೀಪದ ಅಲಾರ್ಮೆಯಲ್ಲಿ ನಡೆದಿದೆ. ಪ್ರಭಾಕರನ್ ಮೃತರು.


ಒಂದು ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಪಡೆದು ಊರಿಗೆ ಆಗಮಿಸಿದ್ದ ಅವರು ಅಡ್ಡಗದ್ದೆ ಬಳಿ ಹೆತ್ತವರೊಂದಿಗೆ ಕುಟುಂಬ ಸಮೇತರಾಗಿ ವಾಸವಿದ್ದರು. ರಂಗಸ್ವಾಮಿ ಮತ್ತು ಸೆಲ್ಲಾಯಿ ದಂಪತಿಯ ನಾಲ್ಕು ಮಕ್ಕಳಲ್ಲಿ ಇವರು ಕೊನೆಯ ಮಗನಾಗಿದ್ದರು. ಪುಸ್ತುತ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ನಂತರ ಕಡಬ ಕಳಾರ ಬಳಿ ಖರೀದಿಸಿದ್ದ ಜಾಗದಲ್ಲಿ ಮನೆ ನಿರ್ಮಿಸಿದ್ದರು. ಎರಡು ವಾರದ ಹಿಂದೆಯಷ್ಟೇ ಗೃಹ ಪ್ರವೇಶ ಮಾಡಿದ್ದರು.

ಇದನ್ನೂ ಓದಿ: ಬಂಟ್ವಾಳ: ಗರ್ಭಿಣಿ ಪತ್ನಿಯನ್ನು ಕೊಲೆಗೈದು ಪತಿ ನೇಣು ಬಿಗಿದು ಆತ್ಮಹತ್ಯೆ

ಜೂ. 18ರಂದು ತನ್ನ ಕಾರಿನಲ್ಲಿ ಬರುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಕೂಡಲೇ ಕಡಬ ಸಮುದಾಯ ಆಸ್ಪತ್ರೆಗೆ ಆಗಮಿಸಿದ್ದು, ಈ ವೇಳೆ ಆಸ್ಪತ್ರೆಯೊಳಗೆ ಕುಸಿದು ಬಿದ್ದಿದ್ದು ಕೂಡಲೇ ಆಸ್ಪತ್ರೆ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆಗೆ ಮುಂದಾಗಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದುಕೊಂಡು ಹೋಗವಷ್ಟರಲ್ಲಿ ಸಾ*ವನ್ನಪ್ಪಿದ್ದಾರೆ. ಮೃತರು ಪತ್ನಿ ಇಬ್ಬರು ಮಕ್ಕಳು ಹಾಗೂ ಹೆತ್ತವರನ್ನು ಅಗಲಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page