Connect with us

LATEST NEWS

AsiaCup: ಭಾರತ VS ಪಾಕಿಸ್ತಾನ ಹೈವೊಲ್ಟೇಜ್ ಪಂದ್ಯಕ್ಕೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಪಾಕ್ ವೇಗಿ!

Published

on

2025ರ ಏಷ್ಯಾಕಪ್‌ನ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೊಲ್ಟೇಜ್ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನ ಕ್ರಿಕೆಟ್‌ನಿಂದ ದೊಡ್ಡ ಸುದ್ದಿ ಹೊರಬಿದ್ದಿದೆ. ಪಾಕ್‌ ತಂಡದ ಸ್ಟಾರ್ ವೇಗಿ ಅನಿರೀಕ್ಷಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

ಭಾರತ ಇಂದು (ಸೆ.10) ಯುಎಇ ವಿರುದ್ದದ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದೆ. ರವಿವಾರ ಪಾಕಿಸ್ತಾನ ವಿರುದ್ದ ಆಡಲಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ತಂಡಕ್ಕೆ ಆಘಾತ ಎದುರಾಗಿದೆ.

ಈ ಟೂರ್ನಿಯಲ್ಲಿ ಬಲಿಷ್ಠ ತಂಡ ಎನಿಸಿಕೊಂಡಿರುವ ಪಾಕಿಸ್ತಾನ ಸೆ.12 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ತಂಡದ 31 ವರ್ಷದ ಎಡಗೈ ವೇಗದ ಬೌಲರ್ ಉಸ್ಮಾನ್ ಶಿನ್ವಾರಿ ಇದ್ದಕ್ಕಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಆದರೆ, ಶಿನ್ವಾರಿ ಅವರ ನಿವೃತ್ತಿ ಘೋಷಣೆ ಪಾಕ್ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅವರನ್ನು ಏಷ್ಯಾಕಪ್ ತಂಡದಲ್ಲಿ ಆಯ್ಕೆ ಮಾಡಿಲ್ಲ.

6 ವರ್ಷಗಳ ಬಳಿಕ ನಿವೃತ್ತಿ ಘೋಷಣೆ
ಉಸ್ಮಾನ್ ಶಿನ್ವಾರಿ ಕಳೆದ ಆರು ವರ್ಷಗಳಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯವಾಡಲಿಲ್ಲ. ಇದೀಗ ತಮ್ಮ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಆರು ವರ್ಷಗಳ ಕಾಲ ಪಾಕಿಸ್ತಾನದ ಪರ ಶಿನ್ವಾರಿ 34 ಅಂತಾರಾಷ್ಟ್ರೀಯ ಪಂದ್ಯವಾಡಿದ್ದಾರೆ. ಎಡಗೈ ವೇಗಿಯಾಗಿರುವ ಶಿನ್ವಾರಿ 2013 ರಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಂತರ ಶ್ರೀಲಂಕಾ ವಿರುದ್ಧವೇ ಏಕದಿನ ಮತ್ತು ಟೆಸ್ಟ್‌ ಗೆ ಪಾದಾರ್ಪಣೆ ಮಾಡಿದರು. ಅವರು 17 ಏಕದಿನ ಮತ್ತು 16 ಟಿ20ಐಗಳಲ್ಲಿ ಆಡಿದ್ದಾರೆ. ಎರಡೂ ಸ್ವರೂಪಗಳಲ್ಲಿ ಕ್ರಮವಾಗಿ 34 ವಿಕೆಟ್‌ಗಳು ಮತ್ತು 13 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅವರು ಡಿಸೆಂಬರ್ 2019 ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ್ದು ಒಂದೇ ಬಾರಿಗೆ. ಅದು ಪಾಕಿಸ್ತಾನ ಪರ ಅವರ ಕೊನೆಯ ಪಂದ್ಯವಾಯಿತು. ತಾನಾಡಿದ ಎರಡನೇ ಏಕದಿನ ಪಂದ್ಯದಲ್ಲಿಯೇ ಶಿನ್ವಾರಿ ಐದು ವಿಕೆಟ್ ಗೊಂಚಲು ಪಡೆದಿದ್ದರು. 2018ರ ಏಷ್ಯಾಕಪ್ ಕೂಟದಲ್ಲಿ ಶಿನ್ವಾರಿ ಪಾಕ್ ತಂಡದ ಭಾಗವಾಗಿದ್ದರು.

ಆದರೆ ನಂತರದಲ್ಲಿ ಗಾಯದಿಂದ ಬಳಲುತ್ತಿದ್ದ ಉಸ್ಮಾನ್ ಶಿನ್ವಾರಿ ಬೆನ್ನುನೋವಿನಿಂದಾಗಿ ತುಂಬಾ ತೊಂದರೆಗೊಳಗಾಗಿದ್ದರು. ಮತ್ತೊಂದೆಡೆ ಶಿನ್ವಾರಿ ಅವರನ್ನು ಪಿಸಿಬಿ ನಿರ್ಲಕ್ಷಿಸಿತ್ತು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಶಿನ್ವಾರಿ ಅವರ ನಿವೃತ್ತಿ ಸುದ್ದಿ ಕೇಳಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳನ್ನ ಅಚ್ಚರಿಗೊಳಿಸಿದೆ.

LATEST NEWS

ದೆಹಲಿ ಸ್ಫೋ*ಟ : ಡಿಎನ್‌ಎ ಪರೀಕ್ಷೆಯಿಂದ ಹೊರಬಿತ್ತು ಕಾರು ಚಲಾಯಿಸುತ್ತಿದ್ದುದು ಯಾರೆಂಬ ಸತ್ಯ!

Published

on

ಮಂಗಳೂರು/ನವದೆಹಲಿ :  ಕೆಂಪುಕೋಟೆ ಬಳಿ  ನ.10 ರಂದು ಸಂಭವಿಸಿದ ಸ್ಫೋ*ಟದಲ್ಲಿ 12 ಮಂದಿ ಪ್ರಾ*ಣ ಕಳೆದುಕೊಂಡಿದ್ದಾರೆ. ಸ್ಫೋಟಕ್ಕೆ ಬಳಸಲಾದ ಹೂಂಡೈ ಐ20 ಕಾರನ್ನು ಚಲಾಯಿಸುತ್ತಿದ್ದುದು ಯಾರೆಂಬುದು ಬಯಲಾಗಿದೆ. ಪುಲ್ವಾಮಾದ ವೈದ್ಯ ಉಮರ್ ನಬಿ ಎಂಬಾತನೇ ಕಾರು ಚಲಾಯಿಸುತ್ತಿದ್ದ ಎಂಬುದು ದೃಢಪಟ್ಟಿದೆ.

ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳಲ್ಲಿ ಮುಖವಾಡ ಧರಿಸಿದ್ದ ವ್ಯಕ್ತಿಯೊಬ್ಬ ಕಾರು ಚಾಲನೆ ಮಾಡಿದ್ದು ಕಂಡುಬಂದಿತ್ತು. ಕಾರನ್ನು ಚಾಲನೆ ಮಾಡಿದ ವ್ಯಕ್ತಿ ಪುಲ್ವಾಮಾದ ವೈದ್ಯ ಉಮರ್ ನಬಿ ಎಂದು ತನಿಖಾಧಿಗಳು ಗುರುತಿಸಿದ್ದು, ಡಿಎನ್‌ಎ ಪರೀಕ್ಷೆ ಮೂಲಕ  ಖಚಿತವಾಗಿದೆ.

ಸ್ಫೋಟಗೊಂಡ ಕಾರಿನಲ್ಲಿ ಶಂಕಿತನ ದೇಹದ ಭಾಗಗಳು ಪತ್ತೆಯಾಗಿದ್ದವು. ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪುಲ್ವಾಮಾದಲ್ಲಿರುವ ಡಾ. ನಬಿ ಅವರ ತಾಯಿಯಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದರು.

ಇದನ್ನೂ ಓದಿ :WATCH VIDEO : ಎಲ್ಲರೆದುರು ರಶ್ಮಿಕಾ ಮಂದಣ್ಣಗೆ  ವಿಜಯ್ ದೇವರಕೊಂಡ ಸಿಹಿಮುತ್ತು; ವೀಡಿಯೋ ವೈರಲ್

ಸ್ಫೋಟದ ಸ್ಥಳದಿಂದ ಸಂಗ್ರಹಿಸಲಾದ ಡಿಎನ್ಎ ಮಾದರಿ ಹಾಗೂ ಆತನ ತಾಯಿಯ ಡಿಎನ್ಎ ಮಾದರಿಗಳೊಂದಿಗೆ ಹೋಲಿಕೆ ಮಾಡಲಾಗಿದೆ. ಕಾರನ್ನು ಡಾ.ಉಮರ್ ನಬಿ ಚಾಲನೆ ಮಾಡುತ್ತಿದ್ದರು ಎಂಬುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ.

Continue Reading

LATEST NEWS

ನ.16ರಂದು ಮಣ್ಣಗುಡ್ಡೆ ಗುರ್ಜಿ

Published

on

ಮಂಗಳೂರು: ಶರವು ಶ್ರೀ ಮಹಾಗಣಪತಿ ದೇವರ 156ನೇ ದೀಪಾರಾಧನೆಯ ಉತ್ಸವ ಮಣ್ಣಗುಡ್ಡೆ ಗುರ್ಜಿ ನವೆಂಬರ್ 16ರಂದು ಭಾನುವಾರ ವೈಭವದಿಂದ ಜರುಗಲಿದೆ.


ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಟ್ರಸ್ಟ್‌, ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ ಮತ್ತು ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ ಮಹಿಳಾ ಘಟಕದ ವತಿಯಿಂದ ಆಯೋಜಿಸಲ್ಪಡುವ ಗುರ್ಜಿ ಉತ್ಸವದಲ್ಲಿ ಗುರ್ಜಿ ಮುಂಭಾಗದಲ್ಲಿ ಭಜನಾ ಕಾರ್ಯಕ್ರಮ ನಡೆದು ಸಂಜೆ 6 ಗಂಟೆಯಿಂದ ಮಹಾಪೂಜೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದನ್ನೂ ಓದಿ: ಕುದ್ರೋಳಿ ಕ್ಷೇತ್ರದಲ್ಲಿ ಇಂದು ಭೈರವಾಷ್ಟಮಿ

ಸಂಜೆ 6.30ರಿಂದ ಸುದೀಕ್ಷ ಆರ್ ಸುರತ್ಕಲ್‌ ಇವರಿಂದ ನಾದಾರ್ಚನೆ, 8 ಗಂಟೆಗೆ ಸಭಾ ಕಾರ್ಯಕ್ರಮ, ರಾತ್ರಿ 9.30ರಿಂದ ನೃತ್ಯೋಲ್ಲಾಸ ಹಾಗೂ ಸಂಭವಾಮಿ ಯುಗೇ ಯುಗೇ (ದಶಾವತಾರ) ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

Continue Reading

FILM

WATCH VIDEO : ಎಲ್ಲರೆದುರು ರಶ್ಮಿಕಾ ಮಂದಣ್ಣಗೆ  ವಿಜಯ್ ದೇವರಕೊಂಡ ಸಿಹಿಮುತ್ತು; ವೀಡಿಯೋ ವೈರಲ್

Published

on

ಮಂಗಳೂರು/ಹೈದರಾಬಾದ್ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಂಬಂಧದ ಬಗೆಗಿನ ಸುದ್ದಿಯೇನು ಹೊಸತಲ್ಲ.  ಇವರಿಬ್ಬರ ಪ್ರೀತಿ, ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಹರಿದಾಡುತ್ತಿರುತ್ತವೆ. ಇದೀಗ ಈ ಗಾಸಿಪ್‌ಗೆ ಪುಷ್ಠಿ ಕೊಡುವ ವೀಡಿಯೋವೊಂದು ವೈರಲ್ ಆಗುತ್ತಿದೆ.

ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್​ಫ್ರೆಂಡ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಹೀಗಾಗಿ ಚಿತ್ರ ತಂಡ ನವೆಂಬರ್ 12 ರಂದು ಹೈದರಾಬಾದ್​ನಲ್ಲಿ ಸಕ್ಸಸ್ ಮೀಟ್ ಇಟ್ಟುಕೊಂಡಿತ್ತು. ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ರಶ್ಮಿಕಾ ಕಾಣುತ್ತಿದ್ದಂತೆ ವಿಜಯ್ ದೇವರಕೊಂಡ ನಕ್ಕಿದ್ದಾರೆ. ರಶ್ಮಿಕಾ ಕೈ ಹಿಡಿದು ಕುಲುಕಿದ್ದಾರೆ. ಬಳಿಕ ಕೈಗೆ ಮುತ್ತಿಕ್ಕಿದ್ದಾರೆ. ಇದರಿಂದ ರಶ್ಮಿಕಾ ಮತ್ತಷ್ಟು ಖುಷಿಕೊಂಡರು. ಸದ್ಯ  ಈ ವೀಡಿಯೋ ವೈರಲ್ ಆಗಿದೆ.

ಇದನ್ನೂ ಓದಿ :  ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಹುಭಾಷಾ ನಟಿ ನಯನ ತಾರಾ ದಂಪತಿ ಭೇಟಿ

ಈ ವೀಡಿಯೋ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇವರದ್ದು ಬೆಸ್ಟ್ ಜೋಡಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page