Connect with us

DAKSHINA KANNADA

ಪತ್ತನಾಜೆ ಪ್ರಯುಕ್ತ ಕರಾವಳಿಯಲ್ಲಿ ಯಕ್ಷಗಾನ-ಉತ್ಸವಗಳಿಗೆ ಬಿತ್ತು ಬ್ರೇಕ್…

Published

on

ಮಂಗಳೂರು: ಬಾರ್ಕೂರಿನಿಂದ ಕಾಸರಗೋಡಿನ ಚಂದ್ರಗಿರಿಯವರೆಗೆ ವ್ಯಾಪಿಸಿಕೊಂಡಿರುವ ಪರಶುರಾಮ ಸೃಷ್ಠಿ ತುಳುನಾಡಿನಲ್ಲಿ ಇಂದು ಪತ್ತನಾಜೆ ಸಂಭ್ರಮ.

ಕೋಲ, ನೇಮ,ಅಂಕ ಆಯನ, ಆಚರಣೆಗಳಿಗೆ ತೆರೆ ಬೀಳುವ ವಿಶೇಷ ದಿನವೇ ಈ “ಪತ್ತನಾಜೆ”. ಪತ್ತನಾಜೆಯಿಂದ ಹಿಡಿದು ದೀಪಾವಳಿವರೆಗೂ ತುಳುನಾಡಿನಲ್ಲಿ ಧಾರ್ಮಿಕ ಉತ್ಸವಗಳ ಆಚರಣೆ ನಡೆಯುವುದಿಲ್ಲ. ಒಂದರ್ಥದಲ್ಲಿ ಈ ಎಲ್ಲಾ ಆಚರಣೆಗಳಿಗೆ ಒಪೂರ್ಣವಿರಾಮ ನೀಡುವುದೇ ಈ ಪತ್ತನಾಜೆ ಎಂದರೆ ತಪ್ಪಾಗಲ್ಲ.

ಪತ್ತನಾಜೆ ಎಂದರೇನು?

ತುಳು ಪಂಚಾಂಗದಲ್ಲಿ ವೃಷಭ ಮಾಸಕ್ಕೆ ಬೇಶ ತಿಂಗಳು ಎಂದು ಕರೆಯುತ್ತಾರೆ. ಬೇಶ ತಿಂಗಳಿನಲ್ಲಿ ಬರುವ 10ನೇ ದಿನಕ್ಕೆ ಪತ್ತನಾಜೆ ಎಂದು ಕರೆಯುತ್ತಾರೆ.

ಹಿಂದಿನ ಕಾಲದಲ್ಲಿ ಪತ್ತನಾಜೆಯಿಂದ ಗದ್ದೆ ಉಳುವ ಮೂಲಕ ಕೃಷಿ ಕೆಲಸ ಮೊದಲ್ಗೊಂಡು 18ನೇ ದಿನ ನೇಜಿ ನೆಡುವ ಸಂಪ್ರದಾಯವಿತ್ತು. ಮೊದಲೆಲ್ಲ ಆರು ತಿಂಗಳು ಮಳೆಗಾಲ, ಆರು ತಿಂಗಳು ಸೆಕೆಗಾಲವಿದ್ದು ಮೇ ತಿಂಗಳಿಂದ ನವೆಂಬರ್ ತಿಂಗಳವರೆಗೆ ಗದ್ದೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಯಕ್ಷಗಾನ, ನೇಮ, ಕೋಲ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗಲು ಪುರುಷೋತ್ತು ಸಿಗುತ್ತಿರಲಿಲ್ಲ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಕೆಲವೊಮ್ಮೆ ಸ್ಥಗಿತಗೊಳ್ಳುತ್ತಿತ್ತು.

ನವೆಂಬರ್ ತಿಂಗಳಿನಲ್ಲಿ ಎರ್ಮಾಳಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಮೂಲಕ ಕರಾವಳಿಯಲ್ಲಿ ಉತ್ಸವವಗಳು ಮೊದಲ್ಗೊಂಡು ಮೇ ತಿಂಗಳ ಮೇಷ ಸಂಕ್ರಮಣದಂದು ಪಾವಂಜೆ ಸಮೀಪದ ಖಂಡೇವಿನಲ್ಲಿ ನಡೆಯುವ ಜಾತ್ರೆ ಮೂಲಕ ಸಂಪನ್ನಗೊಳ್ಳುತ್ತದೆ ಎಂಬ ಮಾತಿದೆ.

ಆದರೆ ಅವಿಭಜಿತ ದ.ಕ ಜಿಲ್ಲೆಯಲ್ಲಿ ಕೊಡಿ ಏರಿ ನಡೆಸುವ ಧಾರ್ಮಿಕ ಉತ್ಸವಗಳಲ್ಲಿ ಕೊಂಡಾಣ ಜಾತ್ರೆಯು ಪತ್ತನಾಜೆಯ ಹಿಂದಿನ ದಿನ ಸಂಪನ್ನಗೊಳ್ಳುವುದು ಪ್ರತೀತಿ.

ಪತ್ತನಾಜೆ ವಿಶೇಷತೆ:
ಪತ್ತನಾಜೆ ದಿನದಂದು ಮಳೆ ಬಂದೇ ಬರುತ್ತದೆ ಎಂಬುವುದು ಪೂರ್ವಜರ ನಂಬಿಕೆ. ಈ ದಿನ ಎರಡು ಮಳೆ ಹನಿ ಆದರೂ ಬೀಳಲೇಬೇಕು.

ಆದರೆ ಈಗ ಪ್ರಕೃತಿಯ ಏರಿಳಿತಗಳಿಂದ ಹವಾಮಾನದಲ್ಲಿ ವ್ಯತ್ಯಾಸ ಉಂಟಾದರೂ ಸಂಪ್ರದಾಯದ ಕ್ರಮದಲ್ಲಿ ಯಾವುದೇ ರೀತಿಯ ರಾಜಿ ನಡೆಯುವುದಿಲ್ಲ.

ಈ ದಿನ ದೇವಸ್ಥಾನಗಳಲ್ಲಿ ವಸಂತ ಪೂಜೆ ನಡೆದು ದೇವರು ಗರ್ಭಗುಡಿಯೊಳಗೆ ಸೇರುತ್ತಾರೆ. ದೀಪಾವಳಿಯ ಬಳಿಕ ದೇವರು ಗರ್ಭಗುಡಿಯಿಂದ ಹೊರಗೆ ಬಂದು ಉತ್ಸವಗಳು ಆರಂಭಗೊಳ್ಳುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಆಟಿ ತಿಂಗಳ ನಂತರ ಬರುವ ಸೋಣ ತಿಂಗಳಿನಲ್ಲಿ ಶುಭ ಕಾಲವಿರುತ್ತದೆ. ಆದ್ದರಿಂದ ಅಂದಿನಿಂದ ಎಲ್ಲಾ ಆಚರಣೆಗಳು, ಉತ್ಸವಗಳು ಶುರುವಾಗುತ್ತದೆ.

ಯಕ್ಷಗಾನ ತಿರುಗಾಟಕ್ಕೂ ಸಮಾಪ್ತಿ:
ಯಕ್ಷಗಾನಗಳ ಮೇಳಗಳು ಕೂಡಾ ಪತ್ತನಾಜೆಯಂದು ತಮ್ಮ ಕೊನೆಯ ಪ್ರದರ್ಶನ ನೀಡಿ ಗೆಜ್ಜೆ ಕಳಚಿ ಪೂಜೆ ಸಲ್ಲಿಸಿ ತಿರುಗಾಟ ಮುಕ್ತಾಯ ಮಾಡುತ್ತದೆ. ದೀಪಾವಳಿಯ ಬಳಿಕ ದೀಪೋತ್ಸವ ಸಂದರ್ಭದಲ್ಲಿ ಪುನಃ ಪ್ರದರ್ಶನಕ್ಕೆ ಅಣಿಯಾಗುತ್ತದೆ.

ಪತ್ತನಾಜೆಯ ಬಳಿಕ ಯಕ್ಷಗಾನ ಮೇಳಗಳು ತಮ್ಮ ಪ್ರದರ್ಶನ ನಿಲ್ಲಿಸುವುದರಿಮದ ಅದರ ಕಲಾವಿದರಿಗೆ ಜೀವನ ನಿರ್ವಹಣೆ ಕಷ್ಟ.

ಶ್ರೀ ಕ್ಷೇತ್ರ ಕಟೀಲಿನಲ್ಲಿ ಕಟೀಲು ಮೇಳದ ಕಲಾವಿದರ ಆರ್ಥಿಕ ಸಮಸ್ಯೆಯನ್ನು ಮನಗೊಂಡು ಯಕ್ಷ ಧರ್ಮ ಬೋಧಿನಿ ಟ್ರಸ್ಟ್ ಕಲಾವಿದರಿಗೆ ಮಳೆಗಾಲದಲ್ಲೂ ವೇತನ ನೀಡುತ್ತದೆ.

ಯಕ್ಷಗಾನದ ತಿರುಗಾಟದ ಸಂದರ್ಭದಲ್ಲಿ ರಂಗಸ್ಥಳ ಮತ್ತಿತ್ತರ ವಿಧದಲ್ಲಿ ಬರುವ ಅನುದಾನದಲ್ಲಿನ ಉಳಿಕೆ ಮೊತ್ತವನ್ನು ಕಟೀಲಿನ 6 ಮೇಳ ಸುಮಾರು 300 ಕಲಾವಿದರಿಗೆ 6 ತಿಂಗಳ ಕಾಲ ಮಾಸಿಕ ವೇತನವಾಗಿ ಕಳೆದ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ.

ಈ ಬಾರಿ ಧರ್ಮಸ್ಥಳ, ಕಟೀಲು, ಸಾಲಿಗ್ರಾಮ, ಮಂದಾರ್ತಿ, ಸಸಿಹಿತ್ಲು, ಬಪ್ಪನಾಡು, ಪಾವಂಜೆ, ಹನುಮಗಿರಿ, ಶ್ರೀ ಶನೀಶ್ವರ ಮೇಳ ಸೇರಿದಂತೆ 15ಕ್ಕೂ ಹೆಚ್ಚು ಮೇಳಗಳು ತಿರುಗಾಟ ನಡೆಸಿವೆ.

 

DAKSHINA KANNADA

ಉಳ್ಳಾಲ ಸೋಮೇಶ್ವರ ಕ್ಷೇತ್ರದಲ್ಲಿ ಸ್ಥಳವಕಾಶದ ಕೊರತೆ; ಸರಕಾರಿ ಜಾಗ ನೀಡುವಂತೆ ಸಂಸದರಿಗೆ ಮನವಿ

Published

on

ಉಳ್ಳಾಲ : ಉಳ್ಳಾಲ ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ಪ್ರವಾಸೋದ್ಯಮ,ಗೋಶಾಲೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನ ನಡೆಸಲು ಸ್ಥಳವಕಾಶದ ಕೊರತೆ ಎದುರಾಗಿದ್ದು, ಆ ನಿಟ್ಟಿನಲ್ಲಿ ದೇವಸ್ಥಾನದ ಅಂಗಣದ ರೈಲ್ವೇ ಇಲಾಖೆಯ ಅಧೀನದಲ್ಲಿರುವ ಒಟ್ಟು 3 ಎಕರೆ 66 ಸೆಂಟ್ಸ್ ಸರಕಾರಿ ಜಾಗವನ್ನ ಸೋಮನಾಥ ಕ್ಷೇತ್ರಕ್ಕೆ ಪಹಣಿ ಮಾಡಿಸುವಂತೆ ಕೋಟೆಕಾರಿನ‌ ಸನಾತನ ಧರ್ಮ ಜಾಗೃತಿ ಸಮಿತಿ ವತಿಯಿಂದ ಸಂಸದ ಬೃಜೇಶ್ ಚೌಟ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಅವರಿಗೆ ಶನಿವಾರ(ಮಾ.15) ಮನವಿ ಸಲ್ಲಿಸಲಾಯಿತು.

ಸೋಮನಾಥೇಶ್ವರ ಕ್ಷೇತ್ರದ ಹೆಸರಲ್ಲಿ ಮುಂದಕ್ಕೆ ಪ್ರಸಾದ್ ಯೋಜನೆಯಡಿಯಲ್ಲಿ ಪ್ರವಾಸೋದ್ಯಮ, ಗೋಶಾಲೆ ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕೆಂಬ ಉದ್ದೇಶವಿದ್ದು,ಇದಕ್ಕೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಸೋಮನಾಥ ಕ್ಷೇತ್ರದ ಮುಂದುಗಡೆಯ ಸೋಮೇಶ್ವರ ಗ್ರಾಮಕ್ಕೊಳಪಟ್ಟ ಸರ್ವೆ ನಂಬ್ರ 74/12ಎ ಯಲ್ಲಿ 1 ಎಕರೆ 35 ಸೆಂಟ್ಸ್ ಹಾಗೂ ಸರ್ವೆ ನಂಬ್ರ 206/5ಸಿ ಯಲ್ಲಿ 2 ಎಕರೆ 31 ಸೆಂಟ್ಸ್ (ಒಟ್ಟು 3 ಎಕರೆ 66 ಸೆಂಟ್ಸ್) ಸರಕಾರಿ ಜಾಗವು ರೈಲ್ವೆ ಇಲಾಖೆಯ ಅಧೀನದಲ್ಲಿದೆ. ಈ ಎರಡು ಸರಕಾರಿ ಜಾಗದಲ್ಲಿ ಸಾಧಾರಣ 75 ವರ್ಷಕ್ಕಿಂತಲೂ ಹಿಂದೆ ರೈಲ್ವೆ ಇಲಾಖೆಗೆ ಜಲ್ಲಿ ಕಲ್ಲು ತೆಗೆಯಲಿಕ್ಕಾಗಿ ಭೂಮಾಪನ ಇಲಾಖೆಯಿಂದ ಪರವಾನಗಿ ನೀಡಲಾಗಿತ್ತು. ಸದ್ರಿ ಆ ಪರವಾನಗಿಯು ರದ್ದಾಗಿ ಸಾಧಾರಣ 35 ವರ್ಷ ಮೇಲ್ಪಟ್ಟಿದೆ. ಸೋಮೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಸ್ಥಳದ ಕೊರತೆ ಇರುವ ಕಾರಣ, ನಾವು ತಿಳಿಸಿರುವ ಸರಕಾರಿ ಜಾಗವನ್ನು ರೈಲ್ವೆ ಇಲಾಖೆಯ ಹೆಸರಿನಿಂದ ಪಹಣಿ ಪತ್ರ ರದ್ದುಪಡಿಸಿ, ದೇವಸ್ಥಾನದ ಹೆಸರಿಗೆ ಮಾಡಿಸಿಕೊಡಬೇಕಾಗಿ ಕೋರಲಾಗಿದೆ.

ಸೋಮೇಶ್ವರ ಕ್ಷೇತ್ರದಲ್ಲಿ ಪ್ರಕೃತಿ ರಮಣೀಯ ಬೀಚ್, ವಿಶಾಲವಾದ ರುದ್ರಪಾದೆ, ಪಾದೆಕಲ್ಲಿನ ಮೇಲೆ ಕಾರಣೀಕ ಸೋಮನಾಥ ದೇವಸ್ಥಾನವಿದ್ದು, ಪವಿತ್ರವಾದ”ಗಧಾ ತೀರ್ಥ” ಕೆರೆಯೂ ಇಲ್ಲಿದೆ. ಈ ಕ್ಷೇತ್ರವನ್ನ ಕೇಂದ್ರ ಸರಕಾರದ ಪ್ರಸಾದ್ ಯೋಜನೆ ಹಾಗೂ ಸ್ವದೇಶ್ ದರ್ಶನ್ ಯೋಜನೆಯ ಪಟ್ಟಿಗೆ ಸೇರಿಸುವಂತೆ ಸನಾತನ ಧರ್ಮ‌ ಜಾಗೃತಿ ಸಮಿತಿಯು ಸಂಸದರು ಮತ್ತು ಅಪರ ಜಿಲ್ಲಾಧಿಕಾರಿಯವರಿಗೆ ಲಿಖಿತ ಮನವಿ ನೀಡಿ ವಿನಂತಿಸಿದೆ.

ಇದನ್ನೂ ಓದಿ : ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ಚಿರತೆಯ ಶ*ವ ಪತ್ತೆ!

ಈ ಸಂದರ್ಭ ಕೋಟೆಕಾರು ಸನಾತನ ಧರ್ಮ ಜಾಗೃತಿ ಸಮಿತಿ ಅಧ್ಯಕ್ಷ ರಮೇಶ್ ಕೊಲ್ಯ, ಉಪಾಧ್ಯಕ್ಷ ಸುರೇಂದ್ರನ್ ಪಿ.ಬೀರಿ, ಕೋಶಾಧಿಕಾರಿ ಗಣೇಶ್ ಕೊಲ್ಯ, ಪ್ರ.ಕಾರ್ಯದರ್ಶಿ ಕೃಷ್ಣರಾಜ್ ಕೆ.ಆರ್, ಜೊತೆ ಕಾರ್ಯದರ್ಶಿ ಜಯಂತ್ ಸಂಕೋಳಿಗೆ, ಸದಸ್ಯರಾದ ಕೃಷ್ಣ ಶೆಟ್ಟಿ ತಾಮಾರ್,ರಾಘವೇಂದ್ರ ಮಾಸ್ಟರ್, ಪವಿತ್ರ ಗಟ್ಟಿ,ರಾಘವನ್ ಬೀರಿ, ಪದ್ಮನಾಭ ಗಟ್ಟಿ, ಕೃಷ್ಣ ಬಿ.ಎಮ್, ರೇವತಿ ಟೀಚರ್, ಪ್ರದೀಪ್ ಚಂದ್ರ ಶೆಟ್ಟಿ ಅಡ್ಕಗುತ್ತು, ವಸಂತ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Continue Reading

DAKSHINA KANNADA

ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ಚಿರತೆಯ ಶ*ವ ಪತ್ತೆ!

Published

on

ಮಂಗಳೂರು : ಚಿರತೆಯೊಂದು ಅಸಹಜ ರೀತಿಯಲ್ಲಿ ಸಾ*ವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ನಡೆದಿದೆ. ಉಳೆಪಾಡಿ ಸಾನದ ಬಳಿ ಇಂದು ಬೆಳಗ್ಗೆ(ಮಾ.16) ಚಿರತೆಯ ಶ*ವ ಕಂಡು ಬಂದಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿನ್ನಿಗೋಳಿ ಸುತ್ತಮುತ್ತ  ಹಲವು ಬಾರಿ ಚಿರತೆ ಕಂಡು ಬಂದಿದ್ದು, ಅನೇಕ ಕಡೆಗಳಲ್ಲಿ ಸಾಕು ನಾಯಿಗಳು ಚಿರತೆಗೆ ಆಹಾರವಾಗಿವೆ.

ಇದನ್ನೂ ಓದಿ  : ರಾಜ್ಯದಲ್ಲೇ ಅತೀ ದೊಡ್ಡ ಕಾರ್ಯಾಚರಣೆ; ಮಂಗಳೂರು ಸಿಸಿಬಿ ಪೊಲೀಸರಿಂದ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ

ಹಲವು ಕಡೆಗಳಲ್ಲಿ ಚಿರತೆ ಓಡಾಡುವ ದೃಶ್ಯಗಳು ಸಿ.ಸಿ. ಟಿವಿಯಲ್ಲಿ ದಾಖಲಾಗಿದ್ದು, ಕೆಲ ತಿಂಗಳ ಹಿಂದೆ ಮೂಲ್ಕಿಯಲ್ಲಿ ಮನೆಯೊಳಗೆ ಚಿರತೆ ನುಗ್ಗಿ ಸಮಸ್ಯೆಯುಂಟಾಗಿತ್ತು.

Continue Reading

DAKSHINA KANNADA

ಅಕ್ರಮ ಪಿಸ್ತೂಲ್ ಸಹಿತ ಅಂತಾರಾಜ್ಯ ಕ್ರಿಮಿನಲ್ ಬಂಧನ

Published

on

ಮಂಗಳೂರು : ಎರಡು ದಿನಗಳ ಹಿಂದೆ ಎರಡು ದಿನಗಳ ಹಿಂದೆ ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರು ಡ್ರಗ್ ಮಾರಾಟಗಾರ ಬಂಧನವಾಗಿತ್ತು. ಅವರಿಂದ 3 ಪಿಸ್ತೂಲ್, 6 ಸಜೀವ ಮದ್ದುಗುಂ*ಡುಗಳನ್ನು, ಕಾರುಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳ ಬೆನ್ನು ಹತ್ತಿರುವ ಪೊಲೀಸರು, ಈ ಪೈಕಿ ಓರ್ವನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಬ್ದುಲ್ ಫೈಜಲ್.ಎಂ ಅಲಿಯಾಸ್ ಫೈಜು (26) ಬಂಧಿತ ಆರೋಪಿ. ಈತನನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಳಿಯ ಮೊರ್ತಾನಾ ಎಂಬಲ್ಲಿ ಮಾರ್ಚ್ 15 ರಂದು ಬಂಧಿಸಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲೇ ಅತೀ ದೊಡ್ಡ ಕಾರ್ಯಾಚರಣೆ; ಮಂಗಳೂರು ಸಿಸಿಬಿ ಪೊಲೀಸರಿಂದ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ

ಆತನಿಂದ 1 ಪಿಸ್ತೂಲ್, 1 ಸಜೀವ ಮದ್ದು ಗುಂಡು ಹಾಗೂ ಮೊಬೈಲ್ ಫೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 2,10,000 ರೂ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಎರಡು ಹ*ಲ್ಲೆ ಪ್ರಕರಣಗಳು ದಾಖಲಾಗಿವೆ.

Continue Reading
Advertisement

Trending

Copyright © 2025 Namma Kudla News

You cannot copy content of this page