Connect with us

LATEST NEWS

ಕೋಮುದ್ವೇಷದ ಪೋಸ್ಟ್‌ Post, Like, Share ಮಾಡಿದರೆ ಇಲ್ಲ ಕ್ಷಮೆ: ಕಮೀಷನರ್‌ ಖಡಕ್‌ ಎಚ್ಚರಿಕೆ

Published

on

ಮಂಗಳೂರು: ಕೋಮುದ್ವೇಷ ಹರಡುವ ಪೋಸ್ಟ್‌ಗಳನ್ನು ಷೇರ್‌ ಮಾಡಿದವರು, ಲೈಕ್‌ ಮಾಡಿದವರು, ಅದಕ್ಕೆ ಕಮೆಂಟ್‌ ಮಾಡಿದವರು, ಸಮಾನ ಅಪರಾಧಿಗಳಾಗುತ್ತಾರೆ. ಆಮೇಲೆ ಹೇಳಬೇಡಿ ನನಗೆ ಗೊತ್ತಾಗಿಲ್ಲ, ಷೇರ್‌ ಮಾಡಿಬಿಟ್ಟೆ, ಕಮೆಂಟ್‌ ಮಾಡಿಬಿಟ್ಟೆ ಅಂದರೆ ಅದಕ್ಕೆ ಕಾನೂನಿನಲ್ಲಿ ಕ್ಷಮೆ ಇಲ್ಲ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.


ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್‌ ಗಲಾಟೆ,

ಶಿವಮೊಗ್ಗ ಕೊಲೆ ಸೇರಿದಂತೆ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿ ಕೋಮುದ್ವೇಷಕ್ಕೆ ತಿರುಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪೊಲೀಸ್‌ ತಂಡ ದಿನದ ಇಪ್ಪತ್ತನಾಲ್ಕು ಗಂಟೆಯೂ ಸೋಷಿಯಲ್‌ ಮೀಡಿಯಾವನ್ನು ವಾಚ್‌ ಮಾಡುತ್ತಿದೆ.

6 ನುರಿತ ಸಿಬ್ಬಂದಿ ಇದರ ಹಿಂದೆ ಕೆಲಸ ಮಾಡುತ್ತಿದ್ದಾರೆ. 100ಕ್ಕೂ ಹೆಚ್ಚು ಈಗಾಗಲೇ ವಿದ್ಯಾರ್ಥಿ, ಕಾರ್ಮಿಕರು, ಮಹಿಳೆಯರು, ರಾಜಕೀಯ ಪಕ್ಷದ ನಾಯಕರು, ಕೆಲವೊಂದು ವ್ಯಕ್ತಿಗಳು ಸೇರಿದಂತೆ ಎಲ್ಲಾ ಸ್ಥರದ ಸಾಮಾಜಿಕ ಜಾಲತಾಣಗಳ ಗುಂಪುಗಳ ಮೇಲೂ ಪೊಲೀಸ್ ಸೈಬರ್ ಘಟಕ ನಿಗಾ ವಹಿಸಿದೆ.

ವಿವಿಧ ವ್ಯಕ್ತಿಗಳು ಸೇರಿ ಸದ್ಯ 1064 ಪ್ರೋಪೈಲ್‌ಗಳನ್ನು ಕ್ಷಣ ಕ್ಷಣಕ್ಕೂ ವಾಚ್‌ ಮಾಡುತ್ತಿದ್ದೇವೆ. ಎಲ್ಲಾ ರಾಜಕೀಯ, ಸಾಮಾಜಿಕ ವಾಟ್ಸಪ್‌ ಗ್ರೂಪ್‌ಗಳಲ್ಲಿ ಸಹ ನಾವಿದ್ದೇವೆ. ಕಳೆದ ಎರಡು ತಿಂಗಳಿಂದ ಎಲ್ಲಾವನ್ನು ಗಮನಿಸುತ್ತಿದ್ದೇವೆ.

ಡಿಸಿಪಿ ಹರಿರಾಂ ಶಂಕರ್‌ ಇದರ ನೇತೃತ್ವ ವಹಿಸಿದ್ದಾರೆ.
ಇದನ್ನು ಲೈಟಾಗಿ ತೆಗೆದುಕೊಳ್ಳೋದು ಬೇಡ ಎಂದು ಎಚ್ಚರಿಸಿದ ಅವರು, ಅಗತ್ಯ ಕ್ರಮ ಕಂಡುಬಂದರೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ಹಿಂಜರಿಯುವುದಿಲ್ಲ.

ನಮ್ಮ ಮಾಹಿತಿಯನ್ನು ಉಳಿದ ಇಲಾಖೆಗಳೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ರಾಜ್ಯ ಗುಪ್ತಚರ ಇಲಾಖೆಯ ಜೊತೆಗೆಯೂ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಏನೇನೋ ಪೋಸ್ಟ್‌ ಮಾಡಿ ತಪ್ಪಿಸಿಕೊಳ್ಳಬಹುದೆಂಬ ಭಂಡ ಧೈರ್ಯ ಬೇಡ. ಯಾವುದೇ ಕೋಮುದ್ವೇಷದ ಪೋಸ್ಟ್‌ ಬಗ್ಗೆ ಕೇಸ್‌ ದಾಖಲಾದರೆ, ಆ ಪೋಸ್ಟ್‌ಗಳನ್ನು ಷೇರ್‌ ಮಾಡಿದವರು,

ಲೈಕ್‌ ಮಾಡಿದವರು, ಅದಕ್ಕೆ ಕಮೆಂಟ್‌ ಮಾಡಿದವರು, ಸಮಾನ ಅಪರಾಧಿಗಳಾಗುತ್ತಾರೆ. ಮತ್ತೊಮ್ಮೆ ಹೇಳುತ್ತಿದ್ದೇನೆ ಎಂದು ಒತ್ತಿ ಒತ್ತಿ ಹೇಳಿದ ಅವರು ಆಮೇಲೆ ಹೇಳಬೇಡಿ ನನಗೆ ಗೊತ್ತಾಗಿಲ್ಲ ಷೇರ್‌ ಮಾಡಿಬಿಟ್ಟೆ, ಕಮೆಂಟ್‌ ಮಾಡಿಬಿಟ್ಟೆ ಅಂದರೆ ಅದಕ್ಕೆ ಕ್ಷಮೆ ಇಲ್ಲ.

ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ಎಚ್ಚರಿಕೆ ನೀಡಿದರು. ಸೋಷಿಯಲ್‌ ಮೀಡಿಯಾವನ್ನು ಯೂಸ್‌ ಮಾಡುವ ಅದರ ಬದಲು ಮಿಸ್‌ಯೂಸ್‌ ಮಾಡುವ ಕೆಲಸಕ್ಕೆ ಕೈ ಹಾಕಬೇಡಿ. ನಮ್ಮ ಟೆಕ್ನಿಕಲ್‌ ಟೀಂ ತುಂಬಾ ಕ್ಲೋಸ್ಲೀಲಿ ವಾಚ್‌ ಮಾಡುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.

LATEST NEWS

ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡ ಬಿಜೆಪಿ ನಾಯಕ

Published

on

ಮಂಗಳೂರು/ಶ್ರೀನಗರ: ಜಮ್ಮುಕಾಶ್ಮೀರದ ಮಾಜಿ ಶಾಸಕ, ಬಿಜೆಪಿ ನಾಯಕ ಫಕೀರ್ ಮೊಹಮ್ಮದ್ ಖಾನ್ ಅವರು ಇಂದು (ಮಾ.20) ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.


62 ವರ್ಷದ ಖಾನ್ ಇಲ್ಲಿನ ತುಳಸಿಬಾಗ್ ಸರ್ಕಾರಿ ವಸತಿಗೃಹದೊಳಗೆ ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯನ್ನು ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್, ಮಾಜಿ ಶಾಸಕರು ಆತ್ಮಹ*ತ್ಯೆಯಿಂದ ಸಾವನ್ನಪ್ಪಿದ್ದಾರೆ ದೃಢಪಡಿಸಿದ್ದಾರೆ. ಮೊಹಮ್ಮದ್ ಖಾನ್ ಅವರ ಆತ್ಮಹ*ತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್:  18 ನಕ್ಸಲರ ಹ*ತ್ಯೆ; ಓರ್ವ ಯೋಧ ಹು*ತಾತ್ಮ

1996ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾಗಿದ್ದ ಖಾನ್, 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ, ಕೆಲವು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಪಡೆಯುವಲ್ಲಿ ಅವರು ವಿಫಲರಾಗಿದ್ದರು.

ಫಕೀರ್ ಮೊಹಮ್ಮದ್ ಖಾನ್ ಅವರ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಂತಾಪ ವ್ಯಕ್ತಪಡಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದಾರೆ.

Continue Reading

LATEST NEWS

ಒಬ್ಬರಲ್ಲ, ಇಬ್ಬರಲ್ಲ 48 ನಾಯಕರ ಹನಿಟ್ರ್ಯಾಪ್; ಸದನದಲ್ಲಿ ಸಚಿವ ರಾಜಣ್ಣ ಬಾಂಬ್!

Published

on

ಮಂಗಳೂರು/ಬೆಂಗಳೂರು : ಸದನದಲ್ಲಿ ಇಂದು ಹನಿ ಟ್ರ್ಯಾಪ್ ವಿಚಾರ ಸದ್ದು ಮಾಡಿದ್ದು,  ರಾಜಣ್ಣ ಸ್ಫೋಟಕ ಮಾಹಿತಿ  ಹೊರಹಾಕಿದ್ದಾರೆ. ವಿಜಯಪುರ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ ಕಲಾಪದಲ್ಲಿ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದು,  ಸಹಕಾರ ಸಚಿವ ಕೆ.ಎನ್.ರಾಜಣ್ಣಗೆ ಹನಿಟ್ರ್ಯಾಪ್ ಆಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ  ಸಚಿವ ರಾಜಣ್ಣ ಈ ಆರೋಪವನ್ನು ಒಪ್ಪಿಕೊಂಡಿದ್ದಾರೆ.

ಯತ್ನಾಳ್ ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ನಾನು ವಾಸ್ತವವನ್ನು ಹೇಳುತ್ತೇನೆ. ಸಾರ್ವಜನಿಕವಾಗಿ ತಪ್ಪು ಮಾಹಿತಿ ಹೋಗಬಾರದು ಎಂದು ಹೇಳುತ್ತಿದ್ದೇನೆ. ತುಮಕೂರು ಭಾಗದ ಸಚಿವ ಎಂದು ಹೇಳುತ್ತಿದ್ದು, ನಾನು ಮತ್ತು ಪರಮೇಶ್ವರ್ ಇಬ್ಬರೇ ಇರುವುದು. ಕರ್ನಾಟಕ ರಾಜ್ಯ  ಸಿಡಿಗೆ ಕಾರ್ಖಾನೆ ಎಂದು ಬಹಳ ಜನ ಹೇಳುತ್ತಾರೆ.  ರಾಜ್ಯ, ರಾಷ್ಟ್ರಮಟ್ಟದ ಸುಮಾರು 48  ನಾಯಕರ ಹನಿಟ್ರ್ಯಾಪ್ ವಿಡಿಯೋಗಳಿವೆ ಎಂದು ಬಾಂ*ಬ್ ಸಿಡಿಸಿದ್ದಾರೆ.

ಇದನ್ನೂ ಓದಿ : ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ಸ್ನಾನ ಹೇಗೆ ಮಾಡುತ್ತಾರೆ ಗೊತ್ತಾ?

ಇದು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ವಿವಿಧ ಪಕ್ಷಗಳ ನಾಯಕರ ಹನಿಟ್ರ್ಯಾಪ್ ಆಗಿದೆ. ನಾನು ಲಿಖಿತ ರೂಪದಲ್ಲಿ ದೂರು ಕೊಡುತ್ತೇನೆ. ಅದನ್ನ ಆಧರಿಸಿ ತನಿಖೆ ನಡೆಸಬೇಕು. ಹನಿಟ್ರ್ಯಾಪ್ ಹಿಂದಿನ ಪ್ರೊಡ್ಯೂಸರ್ ಯಾರು? ಡೈರೆಕ್ಟರ್ ಯಾರು? ಎಂಬುದು ಹೊರಬರಲಿ ಎಂದಿದ್ದಾರೆ.

 

Continue Reading

LATEST NEWS

ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಚಹಲ್-ಧನಶ್ರೀ ಜೋಡಿ

Published

on

ಮಂಗಳೂರು/ಮುಂಬೈ: ಟೀಮ್ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಇದೀಗ ಕಾನೂನುಬದ್ದವಾಗಿ ದೂರವಾಗಿದ್ದಾರೆ. ಇಬ್ಬರ ವಿಚ್ಛೇದನಕ್ಕೆ ನ್ಯಾಯಾಲಯ ಅಧಿಕೃತವಾಗಿ ಮುದ್ರೆಯೊತ್ತಿದೆ.


ಕಳೆದ ಎರಡು ತಿಂಗಳುಗಳಿಂದ ಸ್ಟಾರ್ ಜೋಡಿಯ ವಿಚ್ಛೇದನ ವಿಚಾರ ಸುದ್ದಿಯಲ್ಲಿತ್ತು. ಇಂದು (ಮಾ.20) ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯದಿಂದ ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಹಲ್ ಅವರ ಲಾಯರ್ ನಿತಿನ್ ಕುಮಾರ್ ಗುಪ್ತಾ,”ನ್ಯಾಯಾಲಯವು ವಿಚ್ಛೇದನದ ತೀರ್ಪು ನೀಡಿದೆ. ನ್ಯಾಯಾಲಯವು ಇಬ್ಬರು ಜಂಟಿಯಾಗಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದೆ. ಇಬ್ಬರೂ ಇನ್ನು ಮುಂದೆ ಗಂಡ-ಹೆಂಡತಿಯಲ್ಲ. ವಿಚ್ಛೇದನ ಅಧಿಕೃತವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಹಲ್-ಧನಶ್ರೀ ಡಿವೋರ್ಸ್ ನಾಳೆ ನಿರ್ಧಾರ… ಜೀವನಾಂಶ ಎಷ್ಟು ಕೋಟಿ ಗೊತ್ತಾ..? 

ಮುಂಬರುವ ಐಪಿಎಲ್‌ನಲ್ಲಿ ಚಹಲ್ ಭಾಗವಹಿಸುವಿಕೆಯನ್ನು ಪರಿಗಣಿಸಿ ಗುರುವಾರವೇ ವಿಚ್ಛೇದನ ಅರ್ಜಿಯನ್ನು ನಿರ್ಧರಿಸುವಂತೆ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ ಇಂದು ತೀರ್ಪು ಬಂದಿದೆ. ದಂಪತಿಯು ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page