Connect with us

DAKSHINA KANNADA

ಕೊನೆಗೂ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ನೂತನ ಮೇಳ ಹೊರಟೇ ಬಿಟ್ಟಿತು..!

Published

on

ಕೊನೆಗೂ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ನೂತನ ಮೇಳ ಹೊರಟೇ ಬಿಟ್ಟಿತು..!

ಮಂಗಳೂರು : ಪಾವಂಜೆ ಕ್ಷೇತ್ರದಲ್ಲಿ ನಿರಂತರ ಯಜ್ಞಾಧಿಗಳು ನಡೆಯುತ್ತಿದೆ, ಕಳೆದ ನಾಲ್ಕು ವರ್ಷಗಳಿಂದ ಮೇಳ ಶ್ರೀ ಕ್ಷೇತದಿಂದ ಮೇಳ ಮಾಡುವ ಯೋಚನೆ ಇತ್ತು, ಇದೀಗ ಕಾಲ ಕೂಡಿ ಬಂದಿದೆ,

ಪಾವಂಜೆ ಕ್ಷೇತ್ರದಲ್ಲಿ ಗೆಜ್ಜೆ ಸೇವೆಗೆ ಆದ್ಯತೆ ನೀಡಿ, ಪೌರಾಣಿಕ ಕಥಾನಕಗಳನ್ನು ಮುಂದಿನ ಪೀಳಿಗೆಗೆ ತಿಳಿಹೇಳುವ ಕೆಲಸ ನಡೆಯಲಿದೆ ಎಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಧರ್ಮದರ್ಶಿ ಡಾ.ಯಾಜಿ. ನಿರಂಜನ ಭಟ್ ಹೇಳಿದರು.

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕ್ರಪಾ ಪೋಷಿತ ಯಕ್ಷಗಾನ ಮಂಡಳಿಯ ಉದ್ಘಟನೆಯನ್ನು ನೆರವೇರಿಸಿ ಮಾತನಾಡಿದರು. ದೇವಳದ ಆಡಳಿತ ಮೊಕ್ತೇಸರ ಎಂ.ಶಶೀಂದ್ರಕುಮಾರ್ ಪಾವಂಜೆ ಕ್ಷೇತ್ರದಲ್ಲಿ ಈ ಹಿಂದೆ ಯಕ್ಷಗಾನ ಮೇಳವಿದ್ದು ಅದಕ್ಕೆ ದಾಖಲೆಗಳಿವೆ.

ಇದೀಗ ಮತ್ತೆ ಮೇಳ ಪ್ರಾರಂಭವಾಗಿದ್ದು ಯಕ್ಷಾರಾಧನೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಮೇಳದ ಬಗ್ಗೆ ಹಲವು ಜಿಜ್ಞಾಸೆಗಳು ಹಲವರಲ್ಲಿದೆ, ಮೇಳವು ಕೇವಲ ಒಂದು ತಿಂಗಳಿನಲ್ಲಿ ಆರಂಭಗೊಂಡಿದೆ,

ವೇಷಭೂಷಣ, ರಂಗ ಸ್ಥಳ, ಪರಿಕರ, ದೇವರ ಪ್ರಭಾವಳಿ, ಉಯ್ಯಾಲೆ, ಬಸ್ಸು ಸಹಿತ ಎಲ್ಲವೂ ದಾನಿಗಳ ಕೊಡುಗೆಯಾಗಿದೆ, ಮೇಳದ ನಿಜವಾದ ಯಜಮಾನ ಶ್ರೀ ಸುಬ್ರಹ್ಮಣ್ಯಸ್ವಾಮೀ. ಎಂದರು.

ಉದ್ಘಾಟನೆಗೂ ಮೊದಲು ದೇವರ ಸನಿಧಿಯಲ್ಲಿ ಕೆ.ಎಸ್ ನಿತ್ಯಾನಂದ ಸ್ವಾಮಿಗಳ ಉಪಸ್ಥಿತಿಯಲ್ಲಿ ಭಾಗವತರಿಗೆ ಜಾಗಟೆ, ಚೆಂಡೆ ಮದ್ದಳೆ ಗೆಜ್ಜೆಯನ್ನು ಕಲಾವಿದರಿಗೆ ಹಸ್ತಾಂತರಿಸಲಾಯಿತು.

ನಂತರ ಮೇಳದ ಪ್ರಧಾನ ಭಾಗವತ ಮತ್ತು ಮೇಳದ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ದೇವರ ಮುಂದೆ ಸ್ತುತಿ ಪದ್ಯ ಹಾಡಿದರು,

ಈ ಸಂದರ್ಭ ಪಟ್ಟಗುತ್ತು ಮಹಾಬಲ ಶೆಟ್ಟಿ, ಬರೋಡ ತುಳು ಸಂಘದ ಅಧ್ಯಕ್ಷ, ಉದ್ಯಮಿ ಶಶಿಧರ ಶೆಟ್ಟಿ, ಪಟ್ಲ ಪೌಂಡೇಶನ್‍ನ ಉಪಾಧ್ಯಕ್ಷರಾದ ಡಾ.ಮನು ರಾವ್, ದುರ್ಗಾಪ್ರಸಾದ್ ಈರೋಡ್, ಕೋಶಾಧಿಕಾರಿ ಸುದೇಶ್ ರೈ, ಉಡುಪಿ ಘಟಕದ ಸುಧಾಕರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. , ಪಟ್ಲ ಫೌಂಡೇಶನ್‍ನ ಪ್ರಧಾನ ಕಾರ್ಯದರ್ಶಿ ಅಡ್ಯಾರು ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು, ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.

ಕಾರ್ಯಕ್ರಮದ ನಂತರ ಶಾಂಭವಿ ವಿಜಯ ಎನ್ನುವ ಪ್ರಸಂಗ ಪ್ರದರ್ಶನಗೊಂಡಿತು.

BELTHANGADY

ಬೆಳ್ತಂಗಡಿ: ಡಿವೈಡರ್‌ಗೆ ಬೈಕ್‌ ಢಿಕ್ಕಿ, ಯುವಕ ಸ್ಥಳದಲ್ಲೇ ಜೀವಾಂತ್ಯ

Published

on

ಬೆಳ್ತಂಗಡಿ: ಡಿವೈಡರ್‌ಗೆ ಬೈಕ್‌ ಢಿಕ್ಕಿ ಹೊಡೆದು ಬೈಕ್ ಚಲಾಯಿಸುತ್ತಿದ್ದ ಯುವಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಿನ್ನೆ ರಾತ್ರಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ-ವೇಣೂರು ರಸ್ತೆಯಲ್ಲಿ ಸಂಭವಿಸಿದೆ.

ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸಮೀಪದ ಉಕ್ಕಿನಡ್ಕ ನಿವಾಸಿ ಪ್ರಶಾಂತ್‌ ಪೂಜಾರಿ ಮೃತ ಪಟ್ಟ ಯುವಕನಾಗಿದ್ದಾನೆ. ಪ್ರಶಾಂತ್‌ ಪೂಜಾರಿ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬೈಕ್‌ ಚಲಾಯಿಸಿಕೊಂಡು ಹೋಗುತ್ತಾ ವೇಣೂರು ರಸ್ತೆಯ ದ್ವಾರದಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಬೈಕ್ ಸವಾರನ ತಲೆ ವಿದ್ಯುತ್‌ ಕಂಬಕ್ಕೆ ಬಡಿದು ತೀವ್ರ ಸ್ವರೂಪದ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಬೆಳ್ತಂಗಡಿ ಟ್ರಾಫಿಕ್‌ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯ ಜನರ ಸಹಕಾರದಿಂದ ಪ್ರಶಾಂತ್‌ ಪೂಜಾರಿಯ ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆ ರವಾನಿಸಿದರು. ಮಿತಿ ಮೀರಿದ ವೇಗದ ಚಾಲನೆ ಹಾಗೂ ಅಜಾಗ್ರತೆ ಮತ್ತು ನಿರ್ಲಕ್ಷ್ಯ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

Continue Reading

DAKSHINA KANNADA

ಉಳ್ಳಾಲದಲ್ಲಿ ಸರಣಿ ಅಪಘಾತ; ಬಸ್, ಬೈಕ್‌ಗೆ ಡಿ*ಕ್ಕಿ ಹೊ*ಡೆದು ಕಂದಕಕ್ಕೆ ಉರುಳಿದ ಜೀಪ್

Published

on

ಉಳ್ಳಾಲ: ಚಾಲಕನ ಧಾವಂತದ ಚಾಲನೆಗೆ ಜೀಪೊಂದು ಕೇರಳ ಸಾರಿಗೆ ಬಸ್ಸಿನ ಹಿಂಬದಿಗೆ ಡಿ*ಕ್ಕಿ  ಹೊಡೆದು ಬಳಿಕ ಎಡ ಭಾಗದಿಂದ ಸಾಗುತ್ತಿದ್ದ ಬೈಕ್ ಸವಾರರಿಗೆ ಡಿ*ಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಆಡಂಕುದ್ರು ಎಂಬಲ್ಲಿ ನಿನ್ನೆ (ಫೆ.12) ಸಂಜೆ ವೇಳೆ ಸಂಭವಿಸಿದೆ.

ಬೈಕ್ ಸವಾರರಿ ಬ್ಬರೂ ಗಾ*ಯಗೊಂಡಿದ್ದಾರೆ. ಮಂಗಳೂರು ಭಾಗದಿಂದ ತೊಕ್ಕೋಟು ಕಡೆಗೆ ಸಾಗುತ್ತಿದ್ದ ಜೀಪನ್ನು ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮಂಗಳೂನಿಂದ ಕಾಸರಗೋಡು ಕಡೆಗೆ ಹೋಗುತ್ತಿದ್ದ ಕೇರಳ ಸಾರಿಗೆ ಬಸ್ಸಿನ ಹಿಂಬದಿಗೆ ಗು*ದ್ದಿದ್ದಾನೆ. ಅಲ್ಲಿಂದ ಮತ್ತೆ ಎಡ ಭಾಗಕ್ಕೆ ತಿರುಗಿಸಿದ ಪರಿಣಾಮ ಸವಾರರಿಬ್ಬರು ತೆರಳುತ್ತಿದ್ದ ಬೈಕಿಗೆ ಡಿ*ಕ್ಕಿ ಹೊಡೆದು ಬಳಿಕ ಜೀಪ್‌ ಕಂ*ದಕಕ್ಕೆ ಉರುಳಿದೆ.

ಇದನ್ನೂ ಓದಿ : ಮಂಗಳೂರು: ಹೆದ್ದಾರಿಯಲ್ಲಿ ವಾಹನ ಅಪಘಾತ, ಆಪತ್ಭಾಂದವರಾದ ಖಾದರ್

ಈ ಸರಣಿ ಅ*ಪಘಾತದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಲವು ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.  ಮಂಗಳೂರು ದಕ್ಷಿಣ ಸಂಚಾರಿ ಠಾಣಾ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

DAKSHINA KANNADA

ಮಂಗಳೂರು: ಹೆದ್ದಾರಿಯಲ್ಲಿ ವಾಹನ ಅಪಘಾತ, ಆಪತ್ಭಾಂದವರಾದ ಖಾದರ್

Published

on

ಮಂಗಳೂರು ಹೊರವಲಯದ ಪಡೀಲ್ ಸಮೀಪದ ಈಚರ್ ಲಾರಿಯೊಂದು ಅಪಘಾತಕ್ಕೆ ಒಳಗಾಗಿದೆ. ಎದುರಿನಿಂದ ಹೋಗುತ್ತಿದ್ದ ವಾಹನಕ್ಕೆ ಹಿಂಬದಿಯಿಂದ ಈಚರ್ ವಾಹನ ಡಿಕ್ಕಿಹೊಡೆದಿದ್ದು ಚಾಲಕ ವಾಹನದ ಒಳಗೆ ಸಿಲುಕಿಕೊಂಡಿದ್ದಾನೆ . ಈ ವೇಳೆ ಇದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಸ್ಪೀಕರ್ ಯು.ಟಿ.ಖಾದರ್ ಅವರು ತಕ್ಷಣ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.

ಈಚರ್ ವಾಹನದ ಮುಂಭಾಗ ನುಚ್ಚುಗುಜ್ಜಾದ ಕಾರಣ ಚಾಲಕನ ಕಾಲು ವಾಹನದಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಸಾರ್ವಜನಿಕರ ಸಹಕಾರದೊಂದಿಗೆ ವಾಹನದ ಮುಂಭಾಗವನ್ನು ಬಲವಾಗಿ ಎಳೆದು ಆತನನ್ನು ಹೊರೆತೆಗೆಯಲಾಗಿದೆ.

ಸ್ಪೀಕರ್ ಖಾದರ್ ಅವರು ಕೂಡಾ ಈ ಕಾರ್ಯದಲ್ಲಿ ಕೈ ಜೋಡಿಸಿದ್ದು, ಗಾಯಾಳು ಹೊರಬಂದ ತಕ್ಷಣ ಆತನಿಗೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಸ್ಪೀಕರ್ ಯು.ಟಿ ಖಾದರ್ ಅವರು ಈ ಹಿಂದೆಯೂ ಹಲವಾರು ಸಂದರ್ಭದಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ತಮ್ಮ ವಾಹನದಲ್ಲೇ ಕರೆದುಕೊಂಡು ಆಸ್ಪತ್ರೆಗೆ ಸೇರಿಸಿ ಗಮನ ಸೆಳೆದಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page