Connect with us

DAKSHINA KANNADA

ನಮ್ಮ ಕುಡ್ಲ ದಸರಾ ಸಂಭ್ರಮ :ಕಲೆ, ಸಂಸ್ಕೃತಿ, ಆಚಾರ ವಿಚಾರಗಳ ತವರೂರು – ಕೆನರಾಬ್ಯಾಂಕ್ ಜಿಎಂ ಯೋಗೀಶ್ ಆಚಾರ್ಯ

Published

on

ನಮ್ಮ ಕುಡ್ಲ ದಸರಾ ಸಂಭ್ರಮ :ಕಲೆ, ಸಂಸ್ಕೃತಿ, ಆಚಾರ ವಿಚಾರಗಳ ತವರೂರು – ಕೆನರಾಬ್ಯಾಂಕ್ ಜಿಎಂ ಯೋಗೀಶ್ ಆಚಾರ್ಯ

ಮಂಗಳೂರು : ಇಡೀ ಜಗತ್ತಿಗೆ ಸಂಸ್ಕೃತಿಯ ಪಾಠವನ್ನು ಕಲಿಸಿಕೊಟ್ಟಿರುವುದು ಭಾರತ ದೇಶ. ಅಂಥಾದ್ದರಲ್ಲಿ. ಇಡೀ ಕರ್ನಾಟಕ ಅದಕ್ಕೆ ಮೂಲವಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಕಲೆ, ಸಂಸ್ಕೃತಿಯ ತವರೂರು ಆಗಿದ್ದು, ಇಲ್ಲಿನ ಸಂಸ್ಕೃತಿಯನ್ನು ಇಲ್ಲಿನ ಕಲಾವಿದರು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಯೋಗಿಶ್ ಆಚಾರ್ಯ ನುಡಿದರು.

ಅವರು ನಮ್ಮ ಕುಡ್ಲ ವಾಹಿನಿಯ ದಶದಿನಗಳ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ವಾಹಿನಿಗಳು ಕೇವಲ ಸುದ್ದಿಗಳಿಗೆ ಮಾತ್ರ ಆದ್ಯತೆ ನೀಡದೇ ಕಲೆ , ಸಾಹಿತ್ಯಕ್ಕೂ ಪ್ರೋತ್ಸಾಹ ನೀಡಿ ಅವರನ್ನು ಗೌರವಿಸಬೇಕು. ನಮ್ಮ ಕುಡ್ಲ ಆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸ ಎಂದರು.

ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಯರು ಕೂಡಾ ಹರ್ಷಚಿತ್ತರಾಗುತ್ತಾರೆ. ನವರಾತ್ರಿ ಸಂದರ್ಭದಲ್ಲಿ ದೇವಿಯರ ಆರಾಧನೆ ಮೂಲಕ ಸಮಾಜದಲ್ಲಿ ಹೆಣ್ಣು ಗೌರವದ ಪೂಜನೀಯ ಸ್ಥಾನ ಪಡೆದುಕೊಳ್ಳುತ್ತಾರೆ ಎಂದು ಜಯಲಕ್ಷ್ಮೀ ಸಿಲ್ಕ್ಸ್ ಉದ್ಯಾವರ ಇದರ ಅಪರ್ಣಾ ಹೆಗ್ಡೆ ಅಭಿಪ್ರಾಯಪಟ್ಟರು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನವರಂಗ್ ಅನ್ನೋದು ಕೇವಲ ಒಂದು ಸ್ಪರ್ಧೆ ಅಲ್ಲ. ನವರಂಗ್ ದಿನ ಒಂಭತ್ತು ದಿನಗಳ ಕಾಲ ಉಡುವ ಬಣ್ಣಬಣ್ಣದ ಸೀರೆಗಳ ಮೂಲಕ ನಾವು ನವದೇವಿಯರ ಮೂಲಕ ನಮ್ಮೊಳಗಿನ ಧನಾತ್ಮಕ ಶಕ್ತಿಯನ್ನು ಗೋಚರ ಮಾಡುವ ಕಾಲವಿದು ಎಂದು ವಿಶ್ಲೇಷಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಮುನ್ನೋಟಕ್ಕೆ ಮಾವಿನ ಕಟ್ಟೆ ಯಜಮಾನ ಇಂಡಸ್ಟ್ರೀಸ್‌ನ ವರದರಾಜ ಪೈ ಚಾಲನೆ ನೀಡಿ, ನಮ್ಮ ಕುಡ್ಲ ವಾಹಿನಿಗೆ ಶುಭ ಹಾರೈಸಿದರು. ನಮ್ಮ ಕುಡ್ಲ ವಾಹಿನಿಯ ಜೊತೆಗೆ ತಮ್ಮ ಸಂಸ್ಥೆಯ ಒಡನಾಟವನ್ನು ವಿವರಿಸಿದರು.
ಸಾಯಿರಾಧ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ, ನಮ್ಮ ಕರಾವಳಿಯ ಉದ್ಯಮ, ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರ, ಪ್ರವಾಸೋದ್ಯಮ ಹೀಗೆ ಎಲ್ಲವೂ ಇಲ್ಲಿ ಒಂದಕ್ಕೊಂದು ಪೂರಕವಾಗಿದ್ದು, ಇವುಗಳ ಮೂಲಕ ನಾವು ಅಭಿವೃದ್ಧಿ ಸಾಧಿಸಿ ಸಾಕಷ್ಟು ಉದ್ಯೋಗಾವಕಾಶವನ್ನು ಸೃಷ್ಟಿಸಲು ಅವಕಾಶವಿದೆ ಎಂದರು.
ಜಗತ್ತಿನಲ್ಲಿ ಅಸುರೀ ಶಕ್ತಿ ಹೆಚ್ಚಾದಾಗ ದೇವಿ ಇನ್ನೊಂದು ರೂಪದಲ್ಲಿ ಅದನ್ನು ಮಟ್ಟಹಾಕಿದ ವಿಚಾರ ನಮಗೆಲ್ಲರಿಗೂ ಗೊತ್ತಿದೆ. ಭೂಮಿಯಲ್ಲಿ ಅಧರ್ಮ ಹೆಚ್ಚಾದಾಗ ದೇವರೇ ಅದನ್ನು ಸರಿಪಡಿಸಲು ಮುಂದಾಗಲು ಆಚರಿಸುವುದೇ ಈ ನವರಾತ್ರಿ ಉತ್ಸವದ ಅಗತ್ಯತೆ ಎಂದು ಬಿಜೆಪಿ ನಾಯಕ, ಉದ್ಯಮಿ ಜಿತೇಂದ್ರ ಕೊಟ್ಟಾರಿ ನುಡಿದರು.

ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಜೆಡಿಎಸ್ ಮುಖಂಡ ಜೀವನ್ ಶೆಟ್ಟಿ ಉಪಸ್ಥಿತರಿದ್ದರು. ನಮ್ಮಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಕರ್ಕೇರಾ ಸ್ವಾಗತಿಸಿದರು. ನಿತಿನ್ ಕಾರ್ಯಕ್ರಮ ನಿರೂಪಿಸಿದರು.

BELTHANGADY

ಮಾಲಾಡಿ ಮನೆಯ ದೆವ್ವದ ರಹಸ್ಯವೇನು ಗೊತ್ತಾ..?

Published

on

ಬೆಳ್ತಂಗಡಿ ತಾಲೂಕಿನ ಮಾಲಾಡಿ ಎಂಬ ಗ್ರಾಮದಲ್ಲಿ ಭೂತದ ಕಾಟ ನಡೆಯುತ್ತಿರುವುದು ಈಗ ಕುತೂಹಲ ಮೂಡಿಸಿದೆ. ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಇದು ಭೂತದ ಚೇಷ್ಟೆ ಎಂದು ಮನೆಯವರು ಹೇಳಿಕೊಂಡಿದ್ದಾರೆ.

ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿಯುವ ಬಟ್ಟೆಗಳು.. ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗುವ ಜೋಡಿಸಿಟ್ಟ ಅಡುಗೆ ಪಾತ್ರೆಗಳು… ಕತ್ತಲಾಗುತ್ತಿದ್ದಂತೆ ಮನೆಯಲ್ಲಿ ಇನ್ಯಾರೋ ಓಡಾಡಿದಂತೆ ಆಗುವ ಅನುಭವ. ಹೌದು ಇಂತಹ ಒಂದು ಘಟನೆ ಮನೆಯೊಂದರಲ್ಲಿ ನಡೆಯುತ್ತಿದ್ದು ಕಳೆದ ಮೂರು ತಿಂಗಳಿನಿಂದ ಮನೆಯವರು ನಿದ್ರೆಯನ್ನೇ ಕಳೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದೆಯಂತೆ.

ಮೊಬೈಲ್‌ನಲ್ಲಿ ದೆವ್ವದ ಫೋಟೊ ಸೆರೆ

ಕತ್ತಲು ಆವರಿಸುತ್ತಿದ್ದಂತೆ ನಡೆಯುವ ಈ ವಿಚಿತ್ರಕಾರಿ ಘಟನೆಯಿಂದ ಮಾಲಾಡಿಯ ಈ ಮನೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಉಮೇಶ್ ಶೆಟ್ಟಿ ಹಾಗೂ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಈ ಮನೆಯಲ್ಲಿ ವಾಸವಾಗಿದ್ದು, ಕಳೆದ ಮೂರು ತಿಂಗಳಿನಿಂದ ಈ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ. ವಿಶೇಷ ಅಂದ್ರೆ ಉಮೇಶ್ ಶೆಟ್ಟಿ ಅವರ ಮಗಳು ತನ್ನ ಮೊಬೈಲ್ ಮೂಲಕ ಈ ವಿಚಿತ್ರ ಘಟನೆಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಈ ವೇಳೆ ಮಹಿಳೆಯ ಮುಖವನ್ನು ಹೋಲುವ ಆಕೃತಿಯೊಂದು ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ. ಹೀಗಾಗಿ ಇದು ಭೂತದ ಚೇಷ್ಟೆ ಅಂತ ಹೇಳಲಾಗಿದ್ದು, ಗ್ರಾಮದ ಜನರು ಇದರ ಪರಿಶೀಲನೆ ನಡೆಸಲು ಈ ಮನೆಗೆ ಬರ್ತಾ ಇದ್ದಾರೆ.

ಕೇವಲ ಮನೆಯವರಷ್ಟೇ ಇರುವಾಗ ಇಂತಹ ವಿಚಿತ್ರಕಾರಿ ಘಟನೆಗಳು ನಡೆದಿದೆ ಅನ್ನುವುದು ಇಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಊರಿನ ಜನರು ಬಂದು ಇದರ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ನಡೆಸಿದ್ದಾರೆಯಾದ್ರೂ ಯಾರಿಗೂ ಇಂತಹ ಅನುಭವ ಉಂಟಾಗಿಲ್ಲ. ಹಾಗಂತ ಉಮೇಶ್ ಅವರ ಪತ್ನಿಗೆ ಉಸಿರುಗಟ್ಟಿದಂತಹ ಅನುಭವ ಹೊರತು ಪಡಿಸಿದ್ರೆ ಬೇರೆ ಏನು ಇಲ್ಲಿ ಕಂಡು ಬಂದಿಲ್ಲ. ಆದ್ರೆ ಅವರ ಉಸಿರುಗಟ್ಟುವಿಕೆಗೂ ಭೂತಕ್ಕೂ ಸಂಬಂಧ ಇದೆಯಾ ಅನ್ನೋದು ಕೂಡಾ ಖಚಿತವಾಗಿಲ್ಲ.

ಯಾವಾಗ ಇವರು ಮೊಬೈಲ್‌ನಲ್ಲಿ ವಿಚಿತ್ರ ಆಕೃತಿಯ ಫೋಟೊ ತೆಗೆದು ಊರ ಜನರಿಗೆ ತೋರಿಸಿದ್ರೋ ಆವಾಗಿನಿಂದ ಇಲ್ಲಿಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ಜನರು ಬರಲು ಆರಂಭಿಸಿದ್ದಾರೆ. ಆದ್ರೆ ಊರವರ ಮುಂದೆ ಭೂತ ಪ್ರತ್ಯಕ್ಷವಾಗದೇ ಇರೋ ಕಾರಣ ಈ ಕಥೆಯ ಬಗ್ಗೆಯೇ ಜನರಿಗೆ ಅನುಮಾನ ಆರಂಭವಾಗಿದೆ. ಅಸಲಿಗೆ ಇಲ್ಲಿ ನಡೆಯುತ್ತಿರುವುದು ಭೂತದ ಚೇಷ್ಟೆಯೋ ಅಥವಾ ಮನುಷ್ಯ ನಿರ್ಮಿತ ಚೇಷ್ಟೆಯೋ ಅನ್ನೋ ಅನುಮಾನಗಳು ಜನರಿಗೆ ಕಾಡಿದೆ.

ಭಯದ ವಾತವಾರಣರದಲ್ಲಿ ಕತ್ತಲಲ್ಲಿ ಮೊಬೈಲ್ ಹಿಡಿದು ಭೂತದ ಫೋಟೊ ಹೇಗೆ ತೆಗೆದರು ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಹಾಗಂತ ಈ ರೀತಿ ಭೂತ ಇದೆ ಅಂತ ಸುಳ್ಳು ಹೇಳುವುದರಿಂದಲೂ ಇವರಿಗೇನು ಸಿಗುತ್ತದೆ ಎಂಬ ಪ್ರಶ್ನೆ ಕೂಡಾ ಎದುರಾಗಿದೆ. ಈ ವಿಚಾರದಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಭೂತದ ಹುಟುಕಾಟಕ್ಕೆ ಜನರು ಮುಂದಾಗಿದ್ದಾರೆ. ಕೆಲವರು ಇದು ಹೌದು ಅಂದ್ರೆ ಇನ್ನೂ ಕಲವರು ಇದು ಸುಳ್ಳು ಅಂದಿದ್ದು, ಇದರ ಹಿಂದೆ ಏನೋ ಮಸಲತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರ ಅಸಲಿ ಸತ್ಯ ಏನು ಅನ್ನೋ ಬಗ್ಗೆ ಈ ಮನೆಯವರ ಕೌನ್ಸಿಲಿಂಗ್ ಮಾಡಿದ್ರಷ್ಟೇ ಗೊತ್ತಾಗಬಹುದು ಅನ್ನೋದು ಹಲವರ ಅಭಿಪ್ರಾಯ.

Continue Reading

DAKSHINA KANNADA

ಮಂಗಳೂರು: ಕೊಡಿಯಾಲ್ ತೇರಿನ ಬಳಿಕ ಭಕ್ತರಿಂದ ಸಂಭ್ರಮದ ಓಕುಳಿ

Published

on

ಮಂಗಳೂರು: ರಥಬೀದಿಯ ವೆಂಕಟರಮಣ ದೇವರ ಜಾತ್ರೋತ್ಸವ ಫೆಬ್ರವರಿ ನಾಲ್ಕರಂದು ಸಂಪನ್ನಗೊಂಡಿದೆ. ಕೊಡಿಯಾಲ ತೇರು ಎಂದೇ ಪ್ರಸಿದ್ದಿಯಾಗಿರುವ ವೆಂಕಟರಮಣ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿ ಪುನೀತರಾಗಿದ್ದಾರೆ.

ಕೊಡಿಯಾಲ್‌ ತೇರಿನ ಮರುದಿನ ದೇವರ ಅವಭೃತ ಸ್ನಾನ ನೆರವೇರಿದ್ದು, ಸಾವಿರಾರು ಭಕ್ತರು ಓಕುಳಿ ಆಡಿ ಸಂಭ್ರಮಿಸಿದ್ದಾರೆ. ಮಂಗಳೂರು ರಥಬೀದಿ ಸೇರಿದಂತೆ ಪ್ರತಿ ಮನೆಯಲ್ಲೂ ಓಕುಳಿ ಸಂಭ್ರಮ ಕಂಡು ಬಂದಿದೆ. ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಬಣ್ಣದ ನೀರು ಎರಚಿ ಸಂಭ್ರಮಿಸಿದ್ದು, ನಾಸಿಕ್ ಬ್ಯಾಂಡ್‌ ಸದ್ದು ಇವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಗಂಡು ಮಕ್ಕಳು, ಹೆಣ್ಣು ಮಕ್ಕಳು, ವೃದ್ಧರು ಎಂಬ ಬೇಧವಿಲ್ಲದೆ ಎಲ್ಲರೂ ಬಣ್ಣ ಹಚ್ಚಿ ಸಂಭ್ರಮಿಸುತ್ತಿದ್ದರೆ, ಸುಡುವ ಬಿಸಿಲಿಗೆ ತಂಪು ನೀಡಲು ಟ್ಯಾಂಕರ್ ನಲ್ಲಿ ನೀರು ಸ್ಪ್ರೇ ಮಾಡುವ ಮೂಲಕ ಮೈ ತಂಪಾಗಿಸುವ ಕೆಲಸವನ್ನು ಕೆಲವು ಯುವಕರು ಮಾಡಿದ್ದಾರೆ.

ದೇವರ ಅವಭೃತ ಸ್ನಾನಕ್ಕೆ ದೇವಸ್ಥಾನದಿಂದ ದೇವರು ಹೊರಟು ಅವಭೃತ ಸ್ನಾನ ಮುಗಿಸಿ ಬರುವವರೆಗೂ ಈ ಓಕುಳಿ ಆಟ ನಡೆದಿದೆ. ಸಾವಿರಾರು ಜನರು ಈ ಸಂಭ್ರಮದ ಓಕುಳಿಯಲ್ಲಿ ಭಾಗಿಯಾಗಿ ಖುಷಿ ಪಟ್ಟಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಕೂಡಾ ಭಾಗಿಯಾಗಿ ಬಣ್ಣ ಹಚ್ಚಿ ಯುವಕರ ಜೊತೆ ಎಂಜಾಯ್ ಮಾಡಿದ್ದಾರೆ.

Continue Reading

BELTHANGADY

ಬೆಳ್ತಂಗಡಿಯಲ್ಲಿ ದೆವ್ವದ ಕಾಟಕ್ಕೆ ಕಂಗಾಲಾದ ಕುಟುಂಬ; ಮೊಬೈಲ್‌ನಲ್ಲಿ ಭೂತದ ಫೋಟೊ ಸೆರೆ

Published

on

ಬೆಳ್ತಂಗಡಿ: ದೆವ್ವ, ಆತ್ಮ, ಪ್ರೇತಗಳು ಇವೆಯಾ…? ಇದೊಂದು ಉತ್ತರ ಇಲ್ಲದ ಪ್ರಶ್ನೆ. ನಂಬುವವರು ಇದಕ್ಕೆ ಹೌದು ಎನ್ನುತ್ತಾರೆ. ನಂಬದೇ ಇರುವವರು ಇದನ್ನು ಭ್ರಮೆ ಎನ್ನುತ್ತಾರೆ. ಇದರ ಜತೆಗೆ, ಕೆಲವೊಮ್ಮೆ ಕೆಲವೊಂದು ದೃಶ್ಯಗಳು, ಫೋಟೊ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ಅಂತಹದ್ದೇ ದೃಶ್ಯವೊಂದು ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ವೈರಲ್ ಆಗುತ್ತಿದೆ.

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಮನೆಯೊಂದರಲ್ಲಿ ಭೂತದ ಚೇಷ್ಟೆಯಿಂದ ಕುಟುಂಬವೊಂದು ಕಂಗಾಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಮೂರು ತಿಂಗಳಿನಿಂದ ಈ ಕುಟುಂಬ ಭೂತದ ಕಾಟದಿಂದ ನಿದ್ದೆ ಇಲ್ಲದೆ ಕಳೆಯುತ್ತಿದೆ ಎನ್ನಲಾಗಿದೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಎಂಬವರ ಕುಟುಂಬ ಈ ಸಮಸ್ಯೆಗೆ ಸಿಲುಕಿದೆ.

ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿರುವ ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ನಿತ್ಯ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಸಂಜೆಯಾಗುತ್ತಿದ್ದಂತೆ ಮನೆಯವರು ಭಯ ಭೀತರಾಗುತ್ತಿದ್ದಾರೆ. ಮಲಗಿದ್ದ ವೇಳೆ ಕುತ್ತಿಗೆ ಹಿಡಿದಂತಾಗುವುದು, ಪಾತ್ರೆಗಳನ್ನು ಎಸೆಯುವುದು, ಬಟ್ಟೆಗೆ ಬೆಂಕಿ ತಗಲುವುದು ಮೊದಲಾದ ಘಟನೆಗಳು ನಡೆಯುತ್ತಿದೆ ಎನ್ನಲಾಗಿದೆ.

ಈ ಸುದ್ದಿ ತಿಳಿದ ಹಲವಾರು ಜನರು ಉಮೇಶ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆಯಾದ್ರೂ ಅವರಿಗೆ ಯಾರಿಗೂ ಈ ಅನುಭವ ಆಗಿಲ್ಲ. ಉಮೇಶ್ ಶೆಟ್ಟಿ ಅವರ ಪುತ್ರಿ ತನ್ನ ಶಿಕ್ಷಣದ ಸಲುವಾಗಿ ಮೊಬೈಲ್ ನೋಡುತ್ತಿರುವ ಸಂದರ್ಭದಲ್ಲಿ ಇಂತಹ ಅನುಭವ ಉಂಟಾಗಿ ಫೋಟೋ ತೆಗೆದಾಗ ಒಂದು ಆಕೃತಿ ಮೊಬೈಲ್ ಫೋಟೋದಲ್ಲಿ ಸೆರೆಯಾಗಿದೆ. ಇದರ ಜೊತೆಗೆ ಬಟ್ಟೆಗೆ ಬೆಂಕಿ ಬಿದ್ದಿರುವ ಫೋಟೊವನ್ನು ಕೂಡಾ ಅವರು ತೆಗೆದಿದ್ದಾರೆ.

ಒಟ್ಟಾರೆ ಈ ಮನೆಯಲ್ಲಿ ಕಾಡುವ ಸಮಸ್ಯೆಯ ಬಗ್ಗೆ ಜನರು ತಲೆಗೊಂದು ಮಾತನಾಡುತ್ತಿದ್ದು, ಭೂತ ಇದೆಯಾ ಇಲ್ಲವೋ ಎಂಬ ಕುತೂಹಲದಿಂದ ಪರೀಕ್ಷೆ ನಡೆಸಲು ಹಲವಾರು ಜನರು ಇವರ ಮನೆಗೆ ಬರುತ್ತಾ ಇದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page