Connect with us

DAKSHINA KANNADA

ನಾಗರ ಪಂಚಮಿ ಪೂಜೆಗೆ ಈ ವಸ್ತುಗಳನ್ನು ಬಳಸಿ, ಜೀವನದಲ್ಲಿ ನಿಮಗೆ ಯಾವುದೇ ದೋಷ ಎದುರಾಗುವುದಿಲ್ಲ

Published

on

ಮಂಗಳೂರು: ಹಿಂದೂ ಧರ್ಮದಲ್ಲಿ, ನಾಗ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನದಂದು ಹಾವುಗಳನ್ನು ಪೂಜಿಸುವುದರಿಂದ ನಾಗಪ್ಪನ ಆಶೀರ್ವಾದ ಸಿಗುವುದಲ್ಲದೆ ಅನೇಕ ರೀತಿಯ ದೋಷಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಅದರಲ್ಲೂ ಜಾತಕದಲ್ಲಿ ಕಾಳ ಸರ್ಪದೋಷ ಇರುವವರಿಗೆ ಅಥವಾ ರಾಹು-ಕೇತುಗಳಿಂದ ಜೀವನದಲ್ಲಿ ಏನಾದರೂ ತೊಂದರೆಗಳಾದರೆ ನಾಗಪಂಚಮಿಯ ದಿನದಂದು ಹಾವುಗಳನ್ನು ಪೂಜಿಸುವುದರಿಂದ ರಾಹು-ಕೇತುಗಳ ದುಷ್ಪರಿಣಾಮ ಕಡಿಮೆಯಾಗುತ್ತದೆ.

ನಾಗ ಪಂಚಮಿ ಪೂಜೆಯ ಮುಹೂರ್ತ ಯಾವಾಗ?

ಕ್ಯಾಲೆಂಡರ್ ಪ್ರಕಾರ, 2024 ರಲ್ಲಿ ನಾಗರ ಪಂಚಮಿ ತಿಥಿ ಆಗಸ್ಟ್ 9 ರಂದು ಮಧ್ಯರಾತ್ರಿ 12:36 ಕ್ಕೆ ಪ್ರಾರಂಭವಾಗಲಿದೆ, ಇದು ಆಗಸ್ಟ್ 10 ರಂದು ಬೆಳಿಗ್ಗೆ 3:14 ಕ್ಕೆ ಕೊನೆಗೊಳ್ಳುತ್ತದೆ. ಆಗಸ್ಟ್ 9 ರಂದು ನಾಗರಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಅಂದು ಬೆಳಿಗ್ಗೆ 5 ರಿಂದ 8 ರವರೆಗೆ ಪೂಜೆಗೆ ಶುಭ ಮುಹೂರ್ತವಿರುತ್ತದೆ. ಈ ದಿನ ಪೂಜೆಗೆ 3 ಗಂಟೆಗಳ ಕಾಲಾವಕಾಶವಿರುತ್ತದೆ. ಈ ಸಮಯದಲ್ಲಿ ಪೂಜೆ ಮಾಡಿದರೆ ಶುಭವಾಗುತ್ತದೆ ಅಲ್ಲದೇ ಜೀನವದ ಎಲ್ಲಾ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.

ನಾಗರ ಪಂಚಮಿಯ ದಿನದ ಪೂಜೆಯಲ್ಲಿ ಕೆಲವು ವಸ್ತು/ಪರಿಕರಗಳನ್ನು ಸೇರಿಸುವುದು ಪ್ರಧಾನವಾಗುತ್ತದೆ. ಏಕೆಂದರೆ ಇವುಗಳಿಲ್ಲದೆ ನಾಗದೇವತೆಯ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗುತ್ತದೆ ಮತ್ತು ದೋಷಗಳನ್ನು ತ್ವರಿತವಾಗಿ ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾಗರ ಪಂಚಮಿಯ ಪೂಜೆಯಲ್ಲಿ ಈ ವಸ್ತು ವಿಷಯಗಳನ್ನು ಸೇರಿಸಿ. ಇದರಿಂದ ನಿಮ್ಮ ಯಾವುದೇ ಕೆಲಸಗಳಿಗೆ ಅಡ್ಡಿಯಾಗುವುದಿಲ್ಲ.

ಈ ದಿನದಂದು ಮನೆಯ ಬಾಗಿಲ ಬಳಿ ಗೋವಿನ ಸಗಣಿ, ಸಿಂಧೂರ ಮತ್ತು ಬೇವಿನ ಸೊಪ್ಪಿನಿಂದ ಹಾವಿನ ಆಕಾರವನ್ನು ಮಾಡುತ್ತಾರೆ. ಇದಾದ ನಂತರ ನಾಗದೇವತೆಗೆ ಹಾಲು ಅರ್ಪಿಸಿ ಮನೆಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಕಾಲ ಸರ್ಪದೋಷ, ಹಾವು ಕಡಿತ ಯಾತನೆಯಿಂದ ಮುಕ್ತಿ ಸಿಗುತ್ತದೆ.

ಪೂಜೆಯಲ್ಲಿ ಇದನ್ನು ಬಳಸಿ:

ನಾಗರ ಪಂಚಮಿ ಪೂಜೆಯನ್ನು ಮಾಡುವಾಗ ಬೆಳ್ಳಿ, ಕೆಂಪು ಮಣ್ಣು, ಗೋವಿನ ಸಗಣಿ, ಮರ ಅಥವಾ ಕಲ್ಲಿನಿಂದ ಮಾಡಿದ ಹಾವಿನ ಚಿತ್ರ ಅಥವಾ ವಿಗ್ರಹ ಅಥವಾ ಹಾವಿನ ಚಿತ್ರ, ಮುಂತಾದ ಎಲ್ಲಾ ಅಗತ್ಯ ಸಾಮಗ್ರಿಗಳನ್ನು ಸರಿಯಾಗಿ ಬಳಸುವುದು ಅತ್ಯವಶ್ಯಕ. ಹಾಲು, ಸಿಹಿತಿಂಡಿಗಳು, ಹಣ್ಣುಗಳು, ಹೂವುಗಳು, ಕಾಳುಗಳು, ಅರಿಶಿನ, ಕರ್ಪೂರ, ಮೊಳಕೆಯೊಡೆದ ಧಾನ್ಯಗಳು, ಅಗರಬತ್ತಿಗಳು ಮುಂತಾದ ವಸ್ತುಗಳನ್ನು ಬಳಸಬೇಕಾಗುತ್ತದೆ.

ನಾಗರ ಪಂಚಮಿಯಂದು ಈ ಪರಿಹಾರಗಳನ್ನು ಮಾಡಿ:

  • ನಾಗರಪಂಚಮಿಯ ದಿನದಂದು ಮನೆಯ ಪ್ರವೇಶ ದ್ವಾರದಲ್ಲಿ ನಾಗರಹಾವಿನ ಆಕಾರವನ್ನು ಮಾಡಿ ಭಕ್ತಿಯಿಂದ ಪ್ರಾರ್ಥಿಸುವುದರಿಂದ ಆರ್ಥಿಕ ಲಾಭ ದೊರೆಯುತ್ತದೆ.
  • ಭಗವಾನ್ ಶಿವನ ಆಶೀರ್ವಾದವನ್ನು ಪಡೆಯಲು, ನೀವು ನಾಗರಪಂಚಮಿಯ ದಿನದಂದು ನಾಗರಕಟ್ಟೆಯಿರುವ ದೇವಸ್ಥಾನಕ್ಕೆ ಹೋಗಿ ಏಳು ಶ್ರೀಗಂಧದ ಕಡ್ಡಿಗಳನ್ನು ಅರ್ಪಿಸಬೇಕು.
  • ನಾಗರಪಂಚಮಿಯ ದಿನದಂದು ಶಿವಲಿಂಗಕ್ಕೆ ಹಾಲು, ಹಣ್ಣು, ದತ್ತೂರ, ಹೂವುಗಳನ್ನು ಅರ್ಪಿಸಿ ರುದ್ರಾಭಿಷೇಕ ಮಾಡುವ ಮೂಲಕ ಶಿವನ ಆಶೀರ್ವಾದವನ್ನು ಪಡೆಯಬೇಕು.
  • ನಿಮ್ಮ ಜಾತಕದಲ್ಲಿ ರಾಹು ಮತ್ತು ಕೇತುಗಳ ಪ್ರಭಾವವಿದ್ದರೆ ಗ್ರಹದೋಷ ನಿವಾರಣೆಗೆ ನಾಗರ ಪಂಚಮಿಯ ದಿನ ಪೂಜೆ ಮಾಡಬೇಕು.
  • ನಿಮ್ಮ ಇಷ್ಟಾರ್ಥಗಳನ್ನು ಪೂರೈಸಲು, ನಾಗರ ಪಂಚಮಿಯ ದಿನದಂದು ನೀವು ನಾಗರ ಪಂಚಮಿ ಮಂತ್ರವನ್ನು 108 ಬಾರಿ ಜಪಿಸಬೇಕು.

DAKSHINA KANNADA

ಮೂಡುಬಿದಿರೆ: ಖ್ಯಾತ ಕಂಟೆಂಟ್ ಕ್ರಿಯೇಟರ್ ಸೂರಜ್ ಅಂಚನ್ ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಹಿಂಬದಿ ಸವಾರ ಸಾವು

Published

on

ಮೂಡುಬಿದಿರೆ: ಕಾಮಗಾರಿ ಹಂತದಲ್ಲಿರುವ ಕಾರ್ಕಳ–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕದಲ್ಲಿ ಗುರುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ.

ಖ್ಯಾತ ಕಂಟೆಂಟ್ ಕ್ರಿಯೇಟರ್ ಸೂರಜ್ ಅಂಚನ್ ಚಲಾಯಿಸುತ್ತಿದ್ದ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಹಿಂಬದಿ ಸವಾರ, ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ಕೋಟೆ ಬಾಗಿಲಿನ ಶ್ರವಣ್ ಎಸ್. ಸುವರ್ಣ (17)  ಸಾವನ್ನಪ್ಪಿದ್ದಾನೆ.

ಸದಾನಂದ ಸುವರ್ಣ – ರಾಜಶ್ರೀ ದಂಪತಿಯ ಪುತ್ರನಾಗಿರುವ ಶ್ರವಣ್ ಮೂಡುಬಿದಿರೆಯ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇನ್ನು ಅಪಘಾತದಲ್ಲಿ ಸೂರಜ್ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಉಡುಪಿ: ಪಿಕಪ್ ವಾಹನ ಚಲಿಸಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಸಾವು

ಕಂಟೆಂಟ್ ಕ್ರಿಯೇಟರ್ ಆಗಿ ಹೆಸರುವಾಸಿಯಾಗಿರುವ ಸೂರಜ್ ಅಂಚನ್ ಹಾಗೂ ಅವರ ಸಂಬಂಧಿ ಶ್ರವಣ್ ಬೈಕ್‌ ನಲ್ಲಿ ತೆರಳುತ್ತಿದ್ದಾಗ ಕಾರ್ಕಳ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು. ಶ್ರವಣ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Continue Reading

DAKSHINA KANNADA

ಮಂಗಳೂರು: ಆನ್ ಲೈನ್ ಇನ್ಶೂರೆನ್ಸ್‌ ಹೆಸರಿನಲ್ಲಿ ವಂಚನೆ ಪ್ರಕರಣ; ಆರೋಪಿ ಅರೆಸ್ಟ್

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಿವಾಸಿಯೋರ್ವರಿಗೆ ವಿಮೆ ಮಾಡಿಸುವುದಾಗಿ ನಂಬಿಸಿ ಕ್ರೆಡಿಟ್ ಕಾರ್ಡ್‌ ನಂಬರ್ ಮತ್ತು ಒಟಿಪಿ ಪಡೆದು ಕ್ರೆಡಿಟ್ ಕಾರ್ಡ್ ನಿಂದ 2.37 ಲಕ್ಷ ರೂಪಾಯಿ ಡ್ರಾ ಮಾಡಿ ವಂಚಿಸಿದ ಘಟನೆಯೊಂದು ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಸೈಬರ್‌ ಅಪರಾಧ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.


ಮಹಾರಾಷ್ಟ್ರ ಮೂಲದ ಹಾಗೂ ಪ್ರಸ್ತುತ ಮಂಡ್ಯ ಕೃಷ್ಣರಾಜ ಪೇಟೆಯಲ್ಲಿ ವಾಸಿಸುತ್ತಿರುವ ಅವಿನಾಶ್‌ ರಮೇಶ್‌ ಗೌಡ (24) ಬಂಧಿತ ಆರೋಪಿಯಾಗಿದ್ದಾನೆ.

ಪುತ್ತೂರು ನಿವಾಸಿ ಯಶೋಧರ ಎಂಬವರಿಗೆ ಅಪರಿಚಿತ ವ್ಯಕ್ತಿಯೋರ್ವ ವಿವಿಧ ಮೊಬೈಲ್‌ ನಂಬರ್ ಗಳಿಂದ ದೂರವಾಣಿ ಕರೆ ಮಾಡಿ, ತಾನು ವಿಮಾ ಕಂಪೆನಿಯೊಂದರಿಂದ ಕರೆ ಮಾಡುತ್ತಿರುವುದಾಗಿ ಹೇಳಿ ವಿಮೆ ಮಾಡಿಸಿ ಕೊಡುವುದಾಗಿ ಹಾಗೂ ಆ ಬಗ್ಗೆ ಹಣ ಪಾವತಿಸುವಂತೆ ತಿಳಿಸಿರುತ್ತಾನೆ. ಆಗ ಯಶೋಧರ ಅವರು ತನಗೆ ವಿಮೆ ಬೇಡ ಎಂದು ನಿರಾಕರಿಸಿದ್ದಾರೆ.

ಆ ಬಳಿಕ ಕರೆ ಮಾಡಿದ ಅಪರಿಚಿತ ವ್ಯಕ್ತಿ ಇನ್ಸುರೆನ್ಸ್‌ ಕ್ಯಾನ್ಸಲ್‌ ಮಾಡುವುದಾಗಿ ತಿಳಿಸಿ, ಯಶೋಧರ ಅವರ ಕ್ರೆಡಿಟ್ ಕಾರ್ಡ್‌ ನಂಬರ್‌ ಮತ್ತು ಒಟಿಪಿ ಪಡೆದು ಕ್ರೆಡಿಟ್ ಕಾರ್ಡ್ ನಿಂದ 2,37,036 ರೂಪಾಯಿ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಗಂಡನಿಗೆ ಗುಲಾಬಿ ಜೊತೆ ಮದ್ಯ ನೀಡಿದ ಮಹಿಳೆ ವಿರುದ್ಧ ಎಫ್‌ಐಆರ್!

ಈ ಬಗ್ಗೆ ಯಶೋಧರ ಅವರು ದಕ್ಷಿಣ ಕನ್ನಡ ಜಿಲ್ಲಾ ಸೈಬರ್‌ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಹಾರಾಷ್ಟ್ರ ಮೂಲದ ಹಾಗೂ ಪ್ರಸ್ತುತ ಮಂಡ್ಯ ಕೃಷ್ಣರಾಜ ಪೇಟೆಯಲ್ಲಿ ವಾಸಿಸುತ್ತಿರುವ ಆರೋಪಿ ಅವಿನಾಶ್‌ ರಮೇಶ್‌ ಗೌಡ ಎಂಬಾತನನ್ನು ಫೆಬ್ರವರಿ 11 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading

DAKSHINA KANNADA

ಪಿಕಪ್-ಟಿಪ್ಪರ್‌ನಲ್ಲಿ ಮಕ್ಕಳನ್ನು ತುಂಬಿಕೊಂಡು ಅಧ್ಯಯನ ಪ್ರವಾಸ; ಮುಖ್ಯ ಶಿಕ್ಷಕ ಅಮಾನತು – ಚಾಲಕರ ವಿರುದ್ದ ಪ್ರಕರಣ ದಾಖಲು

Published

on

ಬೆಳ್ತಂಗಡಿ: ಶಾಲಾ ಮಕ್ಕಳನ್ನು ಕಾನೂನು ಬಾಹಿರವಾಗಿ ಸರಕು ಸಾಗಣೆ ಮಾಡುವ ಪಿಕಪ್ ಮತ್ತು ಟಿಪ್ಪರ್ ವಾಹನದಲ್ಲಿ ಕರೆದುಕೊಂಡು ಹೋದ ಪ್ರಕರಣ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಎರಡು ವಾಹನ ಮತ್ತು ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ಶಾಲೆಯ ಪ್ರಭಾರ ಶಿಕ್ಷಕ ಕಿರಣ್ ಅವರನ್ನೂ ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ನೇತೃತ್ವದಲ್ಲಿ ಪಿಕಪ್ ಮತ್ತು ಟಿಪ್ಪರ್ ವಾಹನಗಳಿಗೆ ಮೂರು ಸಾವಿರ ಬಾಡಿಗೆ ನೀಡಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಸ್ಥಳೀಯ ನಾಲ್ಕೂರು ಅನಿಲ್ ಫಾರ್ಮ್ ಗೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಂದಿದ್ದ ವಿಡಿಯೋ ವೈರಲ್ ಅಗಿತ್ತು.

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಫೆ.12 ರಂದು ಬೆಳ್ತಂಗಡಿ ಶಿಕ್ಷಣ ಇಲಾಖೆಯ ಮಂಗಳೂರು ಡಿಡಿಪಿಐ ಶಶಿಧರ್.ಜಿ.ಎಸ್ ಅವರು ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರನ್ನು ಫೆ.12 ರಂದು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ : ವಿದ್ಯಾರ್ಥಿಗಳನ್ನು ಜೇನು ಕೃಷಿ ಅಧ್ಯಯನಕ್ಕಾಗಿ ಪಿಕಪ್- ಟಿಪ್ಪರ್‌ನಲ್ಲಿ ತುಂಬಿಕೊಂಡು ಹೋದ ಶಿಕ್ಷಕರು; ಸಾರ್ವಜನಿಕರ ಆಕ್ರೋಶ

ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಅವರು ಪಿಕಪ್ ವಾಹನ ಚಾಲಕ ನವೀನ್ ಮತ್ತು ಟಿಪ್ಪರ್ ಚಾಲಕ ಪ್ರವೀಣ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page