Film: ತಮಿಳು ನಟ ಹಾಗೂ ನಟಿ ಮೃಣಾಲ್ ಠಾಕುರ್ ಡೇಟಿಂಗ್ನಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ನಟಿ ಮೃಣಾಲ್ ಠಾಕುರ್ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಚಾರದ ಕುರಿತು ಮೌನ ಮುರಿದಿದ್ದಾರೆ.

ಇತ್ತೀಚೆಗೆ, ನಟಿ ಮೃಣಾಲ್ ಠಾಕೂರ್ ತಮ್ಮ ವೃತ್ತಿ ಬದುಕಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕಾಗಿಯೇ ಆಗಾಗ ಸುದ್ದಿಯಾಗುತ್ತಿದ್ದಾರೆ. ಇದೀಗ ನಟ ಧನುಷ್ ಅವರೊಂದಿಗೆ ಮೃಣಾಲ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಧನುಷ್-ಮೃಣಾಲ್ ಮದುವೆ ವದಂತಿಗೆ ಕಾರಣವೇನು?
ಕೆಲ ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ನಟ ಧನುಷ್ ಅವರು ಹಂಚಿಕೊಂಡ ಫೋಟೋಗೆ ಮೃಣಾಲ್ ಠಾಕೂರ್ ಅವರು, ಸರ್.. ಎಂಥ ಅದ್ಬುತ ಪಯಣ. ಬ್ಲಾಕ್ ಬಸ್ಟರ್, ಕಲ್ಟ್, ಲೆಗೆಸಿ ಎಂದು ಕಾಮೆಂಟ್ ಮಾಡಿದ್ದರು. ಅದಕ್ಕೆ ಧನುಷ್ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪುಗೆ ಮತ್ತು ಬಿಳಿ ಹಾರ್ಟ್ ಎಮೋಜಿಯನ್ನು ಧನುಷ್ ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೌತ್ನಿಂದ ಹಿಡಿದು ಬಾಲಿವುಡ್ವರೆಗೂ ಈ ಸುದ್ದಿ ಗಾಳಿಯಲ್ಲಿ ಗುಲ್ಲೆಬ್ಬಿಸಿತ್ತು.
ಡೇಟಿಂಗ್ ಗಾಸಿಪ್
ಸನ್ ಆಫ್ ಸರ್ದಾರ್-2′ ಸಿನಿಮಾದ ಪ್ರೀಮಿಯರ್ ವೇಳೆ ಮೃಣಾಲ್ ಠಾಕೂರ್ ಮತ್ತು ಧನುಷ್ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು. `ತೇರೆ ಇಷ್ಕ್ ಮೇ’ ಸಿನಿಮಾದ ಶೂಟಿಂಗ್ ಮುಗಿದಾಗಲೂ ಧನುಷ್ ಜೊತೆ ಮೃಣಾಲ್ ಠಾಕೂರ್ ಅವರು ಇದ್ದರು. ಧನುಷ್ ಅವರ ಸಹೋದರಿಯ ಇನ್ಸ್ಟಾಗ್ರಾಮ್ ಖಾತೆಯನ್ನು ಕೂಡ ಮೃಣಾಲ್ ಅವರು ಫಾಲೋ ಮಾಡಲು ಆರಂಭಿಸಿದ್ದಾರೆ. ಈ ಎಲ್ಲ ಕಾರಣದಿಂದ ಧನುಷ್ ಮತ್ತು ಮೃಣಾಲ್ ಬಗ್ಗೆ ಡೇಟಿಂಗ್ ಗಾಸಿಪ್ ಹಬ್ಬಿತ್ತು.
ವದಂತಿ ಬಗ್ಗೆ ಮೌನ ಮುರಿದ ಮೃಣಾಲ್!
ಇದೀಗ ಈ ಎಲ್ಲಾ ವಿಚಾರಗಳ ಕುರಿತು ಮೌನ ಮುರಿದಿರುವ ಮೃಣಾಲ್ ಠಾಕುರ್, ನನ್ನ ಕೆಲಸವು ನನ್ನನ್ನು ಪರಿಚಯಿಸಬೇಕೇ ಹೊರತು ಗಾಸಿಪ್ನಿಂದ ಅಲ್ಲ ಎಂದು ನಾನು ಯಾವಾಗಲು ನಂಬಿದ್ದೇನೆ. ಆದರೆ, ಇಂದು ನಾನು ಎಂದಿಗೂ ಬರೆಯದ ಕಥೆಗಳು, ಎಂದಿಗೂ ಮಾತನಾಡದ ಸಂಭಾಷಣೆಗಳು ಮತ್ತು ಎಂದಿಗೂ ತೆಗೆದುಕೊಳ್ಳದ ನಿರ್ಧಾರಗಳೊಂದಿಗೆ ನನ್ನ ಹೆಸರು ಬರುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮದುವೆ ವಿವಾದ ಎಂದು ಕರೆಯಲ್ಪಡುವ ಒಂದು ವಿಷಯ ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಆದರೆ, ಧನುಷ್ ಯಾವಾಗಲು ನನಗೆ ಸಹೋದರನಿದ್ದಂತೆ. ನಾವಿಬ್ಬರೂ ಹಂಚಿಕೊಳ್ಳುವುದು ಪರಸ್ಪರ ಗೌರವ ಮತ್ತು ವೃತ್ತಿಪರತೆ, ಅದಕ್ಕಿಂತ ಬೇರೇನೂ ಇಲ್ಲ. ಆದರೆ, ಜನರು ಮಹಿಳೆಯ ಪ್ರಯಾಣವನ್ನು ಒಪ್ಪಿಕೊಳ್ಳುವ ಬದಲು ಆಕೆಯ ವೈಯಕ್ತಿಕ ಜೀವನದ ಬಗ್ಗೆ ಕಥೆಗಳನ್ನು ರಚಿಸಲು ಏಕೆ ಉತ್ಸುಕರಾಗಿದ್ದಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ ಎಂದರು.
ನಾನು ಮೌನವಾಗಿರಲು ಕಾರಣ ಎಲ್ಲವನ್ನೂ ಮರೆಮಾಡುವ ಸಲುವಾಗಿ ಅಲ್ಲ. ಬದಲಾಗಿ ನನ್ನ ವೈಯಕ್ತಿಕ ಜೀವನಕ್ಕೆ ಸಾರ್ವಜನಿಕ ಸಮ್ಮತಿ ಅಗತ್ಯವಿಲ್ಲ ಎಂದು ನಾನು ನಂಬಿದ್ದೇನೆ. ಆದಾಗ್ಯೂ, ಆಡಿಷನ್ಗಳು, ನಿರಾಕರಣೆಗಳು, ದೀರ್ಘ ರಾತ್ರಿಗಳ ಹೋರಾಟ, ನಿರಂತರ ಆತ್ಮವಿಶ್ವಾಸದ ಮೂಲಕ ನಾನು ಇಂದು ಈ ಹಂತವನ್ನು ತಲುಪಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: BBK 12 ಜಾಹ್ನವಿ ಅವರ ಈ ಕೆಲಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆಯ ಸುರಿಮಳೆ
ಮುಂದುವರಿದು.. ಆದರೆ, ನನ್ನ ಈ ಪ್ರಯಾಣವನ್ನು ವದಂತಿಯಾಗಿ ಕಡಿಮೆ ಮಾಡುವುದು ಅನ್ಯಾಯ. ಸಾಮಾಜಿಕ ಮಾಧ್ಯಮವು ಎಲ್ಲರಿಗೂ ಧ್ವನಿ ನೀಡುತ್ತದೆ. ಅದು ಜವಾಬ್ದಾರಿಯನ್ನು ಸಹ ಬಯಸುತ್ತದೆ. ಕೆಲವು ಕ್ಲಿಕ್ಗಳು, ಲೈಕ್ಗಳು ಮತ್ತು ಹಂಚಿಕೆಗಳು ಮನಸ್ಸಿಗೆ ಘಾಸಿ ಮಾಡುತ್ತಿವೆ. ಆದರೆ, ಅವು ಕೆಲವೊಂದು ಜನರ ಮೇಲೆ ಪರಿಣಾಮ ಬೀರುತ್ತವೆ. ನಾನು ಸ್ಪಷ್ಟವಾಗಿ ತಿಳಿಸುತ್ತಿದ್ದೇನೆ ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದ್ದಾರೆ.