ಯಾವುದೇ ವಿಚಾರದಲ್ಲಿಯೂ ನಂಬಿಕೆ ಮುಖ್ಯ. ಆದರೆ ಮೂಢನಂಬಿಕೆ ಇರಲೇಬಾರದು. ಏಕೆಂದರೆ ಅದು ಜೀವನದ ದಿಕ್ಕನ್ನೇ ಬದಲಾಯಿಸಿ ನಮ್ಮನ್ನು ನರಕಕ್ಕೆ ತಳ್ಳಿಬಿಡುತ್ತದೆ. ಮೂಢನಂಬಿಕೆಯು ಒಂದು ಜೀವವನ್ನೇ ಬಲಿ ಕೊಡುತ್ತದೆ ಎಂದರೆ ಏನರ್ಥ ? ಅದರಲ್ಲೂ ತನ್ನದೇ ರಕ್ತದಿಂದ ಹುಟ್ಟಿದ ಮಗುವನ್ನು ಬಲಿ ಕೊಟ್ಟರೆ ಹೇಗಾಗಬಹುದು ? ಇದೀಗ ಅಂತಹದ್ದೇ ಘೋರ ಘಟನೆಯೊಂದು ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ನಡೆದಿದ್ದು, ಮಹಿಳೆಯೊಬ್ಬರು ತನ್ನ ಮಗಳನೇ ನರಬಲಿ ನೀಡಿದ್ದಾರೆ. ಆ ಮಹಾತಾಯಿ ಹಾಗೆ ಮಾಡಲು ಕಾರಣವೇನು ಗೊತ್ತಾ ? ಮಹಿಳೆ ಮಾಡಿದ ಆ ಕ್ಷಮಿಸಲಾಗದ ಅಪವಾದಕ್ಕೆ ನ್ಯಾಯಾಲಯ ಒದಗಿಸಿದ ಶಿಕ್ಷೆ ಏನು ? ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ಆಧುನಿಕ ಜಗತ್ತಿನಲ್ಲಿ, ಇಡೀ ಜಗತ್ತು ತಂತ್ರಜ್ಞಾನದ ಹಿಂದೆ ಓಡುತ್ತಿದೆ. AI ಅಂತಹ ವಿಚಾರಗಳ ಮುಂದೆಯೂ ಈ ಮೂಢನಂಬಿಕೆ ಎಂಬ ಭೂತ ಇನ್ನು ಹೋಗಿಲ್ಲ. ಇದೀಗ ನಡೆದಿರುವ ಘಟನೆಯಿಂದ ಇಡೀ ಮನುಕುಲವೇ ತಲೆತಗ್ಗಿಸುವಂತಾಗಿದೆ. ಅದರಲ್ಲೂ ತಾಯಿ ಎನ್ನುವ ಪದಕ್ಕೆ ಕಳಂಕ ತಂದಿದೆ. ತನ್ನ ಅತಿಯಾದ ಮೂಢನಂಬಿಕೆಯಿಂದ ಸ್ವಂತ ಮಗಳನ್ನೇ ಆ ತಾಯಿಯೊಬ್ಬಳು ಬಲಿ ನೀಡಿದ್ದಾಳೆ.
ಕೃಷ್ಣ ಮತ್ತು ಭಾರತಿ ಎಂಬ ದಂಪತಿಗಳು ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ವಾಸವಾಗಿದ್ದರು. ಭಾರತಿ ಮತ್ತು ಕೃಷ್ಣ ಅವರ ಮದುವೆಗೆ ಭಾರತಿ ಮನೆಯವರ ಒಪ್ಪಿಗೆ ಇರಲಿಲ್ಲ. ಬಲವಂತವಾಗಿ ಭಾರತಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದಾರೆ. ಆದರೆ ಆಕೆ ಆತನ ಜತೆ ಸಂಸಾರ ನಡೆಸದೆ. ಕೃಷ್ಣನ ಜತೆಗೆ ಓಡಿ ಹೋಗಿ 2019ರಲ್ಲಿ ಕೃಷ್ಣ ಅವರನ್ನು ವಿವಾಹವಾದರು. ಹೀಗೆ ಅವರ ಪ್ರೀತಿಯ ಸಂಕೇತವಾಗಿ ಒಬ್ಬಳು ಮಗಳು ಜನಿಸಿದಳು.
ಭಾರತಿಗೆ ಮೊದಲಿನಿಂದಲ್ಲೂ ದೇವರ ಬಗ್ಗೆ ಅಥವಾ ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆಯುಳ್ಳ ಮಹಿಳೆ. ಆ ಕಾರಣಕ್ಕೆ ಆಕೆಗೆ ಒಬ್ಬ ಜ್ಯೋತಿಷ್ಯರು ಸರ್ಪ ದೋಷ ಇದೆ ಎಂದು ಹೇಳಿದರು. ಅಂದಿನಿಂದ ಆಕೆ ಎಲ್ಲ ಕಡೆ ಸರ್ಪ ದೋಷ ನಿವಾರಣೆಗಾಗಿ ಆ ಪೂಜೆ, ಈ ಪೂಜೆ ಎಲ್ಲ ಮಾಡುತ್ತಿದ್ದಳು. ಆದರೆ ತಾಯಿಯ ಈ ಮೂಢನಂಬಿಕೆ ಬಗ್ಗೆ ಆಕೆಯ ಮಗಳು ಅಸಡ್ಡೆ ತೋರುತ್ತಿದ್ದಳು. ಪತ್ನಿಯ ಈ ವರ್ತನೆ ನೋಡಿ ಗಂಡ ಕೃಷ್ಣ ಹಾಗೂ ಆಕೆಯ ಅತ್ತೆ-ಮಾವ ಮನೋವೈದ್ಯರ ಬಳಿಗೆ ಕರೆದೊಯ್ಯಲು ನಿರ್ಧಾರಿಸಿದರು. ಆದರೆ ಆಕೆ ಈ ಮೂಢನಂಬಿಕೆಗೆ ಒಳಗಾಗಿ, ನಾನು ಮಂತ್ರ ಶಕ್ತಿಯಿಂದ ಸರಿಯಾಗುತ್ತೇನೆ ಎಂದು ಚಿಕಿತ್ಸೆಯನ್ನು ವಿರೋಧಿಸಿದಳು.
ಸ್ವಲ್ಪ ದಿನಗಳ ನಂತರ ಭಾರತಿ ಈ ನಾಗದೋಷದಿಂದ ಮುಕ್ತಿ ಪಡೆಯಲು ನರಬಲಿ ಪೂಜೆ ಮಾಡಬೇಕು ಎಂದು ನಿರ್ಧರಿಸಿದಳು. ಹಾಗಾಗಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಸರ್ಪ ದೋಷದಿಂದ ಮುಕ್ತಿಗೆ ಈ ದಾರಿ ಸರಿ ಎಂದು ಭಾರತಿ ತನ್ನ ಏಳು ವರ್ಷ ಮಗಳ ನಾಲಿಗೆ ಮತ್ತು ಗಂಟಲನ್ನು ಕತ್ತರಿಸಿ ಕ್ರೂರವಾಗಿ ಕೊಂದು ಹಾಕಿದ್ದಾಳೆ. ನಂತರ ಸ್ಥಳದಿಂದ ಭಾರತಿ ಪರಾರಿಯಾಗಿದ್ದಾಳೆ. ಕೃಷ್ಣ ಮನೆಗೆ ಬಂದು ನೋಡಿದ್ರೆ, ತನ್ನ ಮಗುವು ರಕ್ತ ಮಡುವಿನಲ್ಲಿ ಬಿದ್ದಿತ್ತು ಕಂಡು ಅಘಾತಕ್ಕೆ ಒಳಗಾಗಿದ್ದ, ಬಳಿಕ ಆ ವಿಷಯನ್ನು ಪೋಲಿಸರಿಗೆ ತಿಳಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ತಾಯಿ ಭಾರತಿಯನ್ನು ಪತ್ತೆ ಮಾಡಿ ಬಂಧಿಸಿ ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.
ಪೊಲೀಸ್ ಇಲಾಖೆ ನಡೆಸಿದ ಎಲ್ಲ ತನಿಖೆಗಳ ವರದಿಯನ್ನು ಕೋರ್ಟ್ ಮುಂದೆ ಇಟ್ಟಿದ್ದಾರೆ. ಆಕೆ ತಪ್ಪಿಗೆ ಬಲವಾದ ಸಾಕ್ಷಿಗಳಿದ್ದು, ಕೋರ್ಟ್ ಆಕೆಗೆ ಮರಣದಂಡನೆ ನೀಡಿದೆ. ಸೂರ್ಯಪೇಟೆ ಜಿಲ್ಲಾ ನ್ಯಾಯಾಲಯದ ಮೊದಲ ಹೆಚ್ಚುವರಿ ನ್ಯಾಯಾಧೀಶ ಎಂ. ಶ್ಯಾಮ್ ಶ್ರೀ ತೀರ್ಪು ನೀಡಿದ್ದಾರೆ. ಹಾಗೂ ಆಕೆಗೆ 5 ಸಾವಿರ ದಂಡ ವಿಧಿಸಲಾಯಿತು. ಒಂದು ವೇಳೆ ದಂಡ ಪಾವತಿಸದಿದ್ದಾರೆ. 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸುತ್ತದೆ ಎಂದು ಹೇಳಿದೆ.