Connect with us

LATEST NEWS

80ಕೋಟಿಗೂ ಅಧಿಕ ನೀರಿನ ಬಿಲ್ ಬಾಕಿ: ಮೌನವಹಿಸಿದೆ ಜಿಲ್ಲಾಡಳಿತ ..!

Published

on

80ಕೋಟಿಗೂ ಅಧಿಕ ನೀರಿನ ಬಿಲ್ ಬಾಕಿ: ಮೌನವಹಿಸಿದೆ ಜಿಲ್ಲಾಡಳಿತ..! 

ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಜನಸಾಮಾನ್ಯರು ನೀರಿನ ಬಿಲ್ ಕಟ್ಟದಿದ್ದರೆ ಅಧಿಕಾರಿಗಳು ಆವಾಜ್ ಹಾಕಿ ವಸೂಲಿ ಮಾಡ್ತಾರೆ.ಆದರೆ ಸರ್ಕಾರಿ ಸಂಸ್ಥೆಗಳು, ಪ್ರತಿಷ್ಠಿತ ವ್ಯಕ್ತಿಗಳು ಹಲವಾರು ವರ್ಷಗಳಿಂದ 80 ಕೋಟಿಗೂ ಅಧಿಕ ನೀರಿನ ಬಿಲ್ ಬಾಕಿ ಇರಿಸಿದರೂ ಆಡಳಿತ ಮಾತ್ರ ಮೌನವಾಗಿದೆ.

ಪ್ರತಿಷ್ಠಿತ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಡವರು, ಜನಸಾಮಾನ್ಯರಿಗೆ ಒಂದು ನ್ಯಾಯ. ಶ್ರೀಮಂತ, ಪ್ರತಿಷ್ಠಿತ ವ್ಯಕ್ತಿ ಸಂಸ್ಥೆಗಳಿಗೆ ಇನ್ನೊಂದು ನ್ಯಾಯ ಎಂಬಂತಾಗಿದೆ.

ಅಧಿಕಾರಿಗಳ ಮಲತಾಯಿ ಧೋರಣೆಯಿಂದಲೇ ಹಲವು ವರ್ಷದಿಂದ ಮಹಾನಗರಪಾಲಿಕೆಯ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹಣ ಬರಲು ಬಾಕಿ ಇದೆ.

ಅಸಲಿಗೆ ಹೀಗೆ ಬಾಕಿ ಇರುವ ಹಣ ಪಾಲಿಕೆಗೆ ಸಂದಾಯವಾಗಬೇಕಿರೋದು ನೀರಿನ ಬಿಲ್ಗಳಿಂದ ಅನ್ನೋದು ದುರಂತ. ಜನಸಾಮಾನ್ಯರಿಂದ ನೀರಿನ ಬಿಲ್ ಬಾಕಿಯನ್ನು ವಸೂಲು ಮಾಡುವ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ, ಪ್ರಭಾವಿಗಳು ಮತ್ತು ಶ್ರೀಮಂತರ ಬಿಲ್ ಬಾಕಿಯಿದ್ದರೂ ಮೌನಕ್ಕೆ ಶರಣಾಗಿದೆ. ನೀರಿನ ಬಿಲ್ ಬಾಕಿ ಇಟ್ಟವರ ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿಗಳು, ಖಾಸಗಿ ಆಸ್ಪತ್ರೆಗಳು, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ  ಕೆಲವು ಪ್ರತಿಷ್ಠಿತ ಕಾಲೇಜುಗಳು ಸೇರಿವೆ. ಹೀಗೆ ಪಟ್ಟಿ ಮಾಡಲಾದ ಸಂಸ್ಥೆಗಳಿಂದ ಮನಪಾ ಬೊಕ್ಕಸಕ್ಕೆ ಬರೋಬ್ಬರಿ 80 ಕೋಟಿ ರೂಪಾಯಿ ಸಂದಾಯವಾಗಲು ಬಾಕಿ ಇರುವುದು ತಿಳಿದು ಬಂದಿದೆ.

ಪ್ರತಿ ತಿಂಗಳು ನೀರಿನ ಬಿಲ್ ಪಾವತಿ ಮಾಡುವಂತೆ ಜನಸಾಮಾನ್ಯರಿಗೆ ಕರೆಗಳು ಬರುತ್ತವೆ, ಒತ್ತಡ ಹಾಕಲಾಗುತ್ತದೆ. ಬಿಲ್ ಕಟ್ಟದಿದ್ದರೆ ನೀರಿನ ಸಂಪರ್ಕ ಸ್ಥಗಿತಗೊಳಿಸುವ ಧಮ್ಕಿ ಹಾಕಲಾಗುತ್ತದೆ. ಆದರೆ ಸಮಾಜದಲ್ಲಿ ಗಣ್ಯರು ಎನಿಸಿಕೊಂಡಿರುವವರು ಪ್ರತಿಷ್ಠಿತ ಸಂಸ್ಥೆಗಳ ಬಿಲ್ ಬಾಕಿ ಇದ್ದರೂ ಪಾಲಿಕೆ ಅಧಿಕಾರಿಗಳ ವರಸೆ ನಡೆಯುವುದಿಲ್ಲ.

ಉಳ್ಳವರು ಲಕ್ಷಾಂತರ ರೂಪಾಯಿ ನೀರಿನ ಬಿಲ್ ಬಾಕಿ ಇರಿಸಿಕೊಂಡಿದ್ದರೂ ವಸೂಲಿ ಮಾಡುವ ಗೋಜಿಗೆ ಪಾಲಿಕೆ ಅಧಿಕಾರಿಗಳು ಹೋಗಿಲ್ಲ. ಪಾಲಿಕೆಯ ನೀರಿನ ಬಿಲ್ ಸಂಗ್ರಹಿಸುವಲ್ಲಿ ಹಿಂದಿನ ಕಾಂಗ್ರೆಸ್ ಆಡಳಿತ ವಿಫಲವಾಗಿತ್ತು. ಈಗ ಆಡಳಿತ ನಡೆಸುತ್ತಿರುವ ಬಿಜೆಪಿ ಕೂಡ ಇದರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮೃದು ಧೋರಣೆ ತಳೆದಿದೆ.

ಸಧ್ಯ ಮಂಗಳೂರಿನಲ್ಲಿ 85,000 ಮನೆಗಳಿಗೆ, 5000 ಗೃಹೇತರ, 1370 ವಾಣಿಜ್ಯ, ಕಟ್ಟಡ 1200, ಕೈಗಾರಿಕೆ 800,ನೀರಿನ ಸಂಪರ್ಕಗಳಿವೆ. ಆದರೆ ಇದರಲ್ಲಿ ಜನಸಾಮಾನ್ಯರ ನೀರಿನ ಬಿಲ್ ಮಾತ್ರ ಕಾಲಕಾಲಕ್ಕೆ ಸಂದಾಯವಾಗುತ್ತಿದ್ದು, ಪ್ರಭಾವಿಗಳ ಮತ್ತು ಸರ್ಕಾರಿ ಸಂಸ್ಥೆಗಳು ಮಾತ್ರ ಹಲವಾರು ವರ್ಷಗಳಿಂದ ಬಿಲ್ ಬಾಕಿ ಇರಿಸಿದೆ. ಒಟ್ಟಿನಲ್ಲಿ ಸಾಮಾನ್ಯ ಜನರ ತಿಂಗಳ ಬಿಲ್ಲಿಗೆ ಬೆನ್ನು ಬೀಳುವ ಪಾಲಿಕೆ ಆಡಳಿತ ಶ್ರೀಮಂತರ ವಿಚಾರದಲ್ಲಿ ರಾಜಿ ಮಾಡಿಕೊಂಡಿರುವುದು ಅಕ್ಷಮ್ಯ.

DAKSHINA KANNADA

ಉಳ್ಳಾಲ ಸೋಮೇಶ್ವರ ಕ್ಷೇತ್ರದಲ್ಲಿ ಸ್ಥಳವಕಾಶದ ಕೊರತೆ; ಸರಕಾರಿ ಜಾಗ ನೀಡುವಂತೆ ಸಂಸದರಿಗೆ ಮನವಿ

Published

on

ಉಳ್ಳಾಲ : ಉಳ್ಳಾಲ ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ಪ್ರವಾಸೋದ್ಯಮ,ಗೋಶಾಲೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನ ನಡೆಸಲು ಸ್ಥಳವಕಾಶದ ಕೊರತೆ ಎದುರಾಗಿದ್ದು, ಆ ನಿಟ್ಟಿನಲ್ಲಿ ದೇವಸ್ಥಾನದ ಅಂಗಣದ ರೈಲ್ವೇ ಇಲಾಖೆಯ ಅಧೀನದಲ್ಲಿರುವ ಒಟ್ಟು 3 ಎಕರೆ 66 ಸೆಂಟ್ಸ್ ಸರಕಾರಿ ಜಾಗವನ್ನ ಸೋಮನಾಥ ಕ್ಷೇತ್ರಕ್ಕೆ ಪಹಣಿ ಮಾಡಿಸುವಂತೆ ಕೋಟೆಕಾರಿನ‌ ಸನಾತನ ಧರ್ಮ ಜಾಗೃತಿ ಸಮಿತಿ ವತಿಯಿಂದ ಸಂಸದ ಬೃಜೇಶ್ ಚೌಟ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಅವರಿಗೆ ಶನಿವಾರ(ಮಾ.15) ಮನವಿ ಸಲ್ಲಿಸಲಾಯಿತು.

ಸೋಮನಾಥೇಶ್ವರ ಕ್ಷೇತ್ರದ ಹೆಸರಲ್ಲಿ ಮುಂದಕ್ಕೆ ಪ್ರಸಾದ್ ಯೋಜನೆಯಡಿಯಲ್ಲಿ ಪ್ರವಾಸೋದ್ಯಮ, ಗೋಶಾಲೆ ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕೆಂಬ ಉದ್ದೇಶವಿದ್ದು,ಇದಕ್ಕೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಸೋಮನಾಥ ಕ್ಷೇತ್ರದ ಮುಂದುಗಡೆಯ ಸೋಮೇಶ್ವರ ಗ್ರಾಮಕ್ಕೊಳಪಟ್ಟ ಸರ್ವೆ ನಂಬ್ರ 74/12ಎ ಯಲ್ಲಿ 1 ಎಕರೆ 35 ಸೆಂಟ್ಸ್ ಹಾಗೂ ಸರ್ವೆ ನಂಬ್ರ 206/5ಸಿ ಯಲ್ಲಿ 2 ಎಕರೆ 31 ಸೆಂಟ್ಸ್ (ಒಟ್ಟು 3 ಎಕರೆ 66 ಸೆಂಟ್ಸ್) ಸರಕಾರಿ ಜಾಗವು ರೈಲ್ವೆ ಇಲಾಖೆಯ ಅಧೀನದಲ್ಲಿದೆ. ಈ ಎರಡು ಸರಕಾರಿ ಜಾಗದಲ್ಲಿ ಸಾಧಾರಣ 75 ವರ್ಷಕ್ಕಿಂತಲೂ ಹಿಂದೆ ರೈಲ್ವೆ ಇಲಾಖೆಗೆ ಜಲ್ಲಿ ಕಲ್ಲು ತೆಗೆಯಲಿಕ್ಕಾಗಿ ಭೂಮಾಪನ ಇಲಾಖೆಯಿಂದ ಪರವಾನಗಿ ನೀಡಲಾಗಿತ್ತು. ಸದ್ರಿ ಆ ಪರವಾನಗಿಯು ರದ್ದಾಗಿ ಸಾಧಾರಣ 35 ವರ್ಷ ಮೇಲ್ಪಟ್ಟಿದೆ. ಸೋಮೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಸ್ಥಳದ ಕೊರತೆ ಇರುವ ಕಾರಣ, ನಾವು ತಿಳಿಸಿರುವ ಸರಕಾರಿ ಜಾಗವನ್ನು ರೈಲ್ವೆ ಇಲಾಖೆಯ ಹೆಸರಿನಿಂದ ಪಹಣಿ ಪತ್ರ ರದ್ದುಪಡಿಸಿ, ದೇವಸ್ಥಾನದ ಹೆಸರಿಗೆ ಮಾಡಿಸಿಕೊಡಬೇಕಾಗಿ ಕೋರಲಾಗಿದೆ.

ಸೋಮೇಶ್ವರ ಕ್ಷೇತ್ರದಲ್ಲಿ ಪ್ರಕೃತಿ ರಮಣೀಯ ಬೀಚ್, ವಿಶಾಲವಾದ ರುದ್ರಪಾದೆ, ಪಾದೆಕಲ್ಲಿನ ಮೇಲೆ ಕಾರಣೀಕ ಸೋಮನಾಥ ದೇವಸ್ಥಾನವಿದ್ದು, ಪವಿತ್ರವಾದ”ಗಧಾ ತೀರ್ಥ” ಕೆರೆಯೂ ಇಲ್ಲಿದೆ. ಈ ಕ್ಷೇತ್ರವನ್ನ ಕೇಂದ್ರ ಸರಕಾರದ ಪ್ರಸಾದ್ ಯೋಜನೆ ಹಾಗೂ ಸ್ವದೇಶ್ ದರ್ಶನ್ ಯೋಜನೆಯ ಪಟ್ಟಿಗೆ ಸೇರಿಸುವಂತೆ ಸನಾತನ ಧರ್ಮ‌ ಜಾಗೃತಿ ಸಮಿತಿಯು ಸಂಸದರು ಮತ್ತು ಅಪರ ಜಿಲ್ಲಾಧಿಕಾರಿಯವರಿಗೆ ಲಿಖಿತ ಮನವಿ ನೀಡಿ ವಿನಂತಿಸಿದೆ.

ಇದನ್ನೂ ಓದಿ : ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ಚಿರತೆಯ ಶ*ವ ಪತ್ತೆ!

ಈ ಸಂದರ್ಭ ಕೋಟೆಕಾರು ಸನಾತನ ಧರ್ಮ ಜಾಗೃತಿ ಸಮಿತಿ ಅಧ್ಯಕ್ಷ ರಮೇಶ್ ಕೊಲ್ಯ, ಉಪಾಧ್ಯಕ್ಷ ಸುರೇಂದ್ರನ್ ಪಿ.ಬೀರಿ, ಕೋಶಾಧಿಕಾರಿ ಗಣೇಶ್ ಕೊಲ್ಯ, ಪ್ರ.ಕಾರ್ಯದರ್ಶಿ ಕೃಷ್ಣರಾಜ್ ಕೆ.ಆರ್, ಜೊತೆ ಕಾರ್ಯದರ್ಶಿ ಜಯಂತ್ ಸಂಕೋಳಿಗೆ, ಸದಸ್ಯರಾದ ಕೃಷ್ಣ ಶೆಟ್ಟಿ ತಾಮಾರ್,ರಾಘವೇಂದ್ರ ಮಾಸ್ಟರ್, ಪವಿತ್ರ ಗಟ್ಟಿ,ರಾಘವನ್ ಬೀರಿ, ಪದ್ಮನಾಭ ಗಟ್ಟಿ, ಕೃಷ್ಣ ಬಿ.ಎಮ್, ರೇವತಿ ಟೀಚರ್, ಪ್ರದೀಪ್ ಚಂದ್ರ ಶೆಟ್ಟಿ ಅಡ್ಕಗುತ್ತು, ವಸಂತ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Continue Reading

FILM

ರೆಬೆಲ್‌ ಸ್ಟಾರ್‌ ಅಂಬರೀಶ್ ಮೊಮ್ಮಗನ ಹೆಸರೇನು ಗೊತ್ತಾ?

Published

on

ಬೆಂಗಳೂರು: ಅಭಿಷೇಕ್-ಅವಿವಾಗೆ 2024ರ ನವೆಂಬರ್ 12ರಂದು ಗಂಡು ಮಗು ಜನಿಸಿತ್ತು. ಈ ಮಗುವಿಗೆ ಇಂದು ನಾಮಕರಣ ಶಾಸ್ತ್ರ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ ಒಂದರಲ್ಲಿ ಬಹಳ ಅದ್ದೂರಿಯಾಗಿ ನಾಮಕರಣ ಶಾಸ್ತ್ರ ನೆರವೇರಿದೆ.

ಇನ್ನು ರಬೆಲ್ ಅಂಬರೀಶ್ ಮೊಮ್ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ. ಅಭೀಷೇಕ್ ಅವರು ತಮ್ಮ ಮಗುವಿಗೆ ಅಪ್ಪನ ಮೂಲ ಹೆಸರನ್ನೇ ಹಿಟ್ಟಿದ್ದಾರೆ. ಅಂಬರೀಶ್ ಅವರ ಮೂಲ ಹೆಸರು ಅಮರ್‌ನಾಥ್ ಎಂದು ಆಗಿತ್ತು. ಹೀಗಾಗಿ ಈ ಹೆಸರನ್ನೇ ಆಯ್ಕೆ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಂಬರೀಶ್‌ನ ಆಪ್ತವಲಯದವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

Continue Reading

DAKSHINA KANNADA

ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ಚಿರತೆಯ ಶ*ವ ಪತ್ತೆ!

Published

on

ಮಂಗಳೂರು : ಚಿರತೆಯೊಂದು ಅಸಹಜ ರೀತಿಯಲ್ಲಿ ಸಾ*ವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ನಡೆದಿದೆ. ಉಳೆಪಾಡಿ ಸಾನದ ಬಳಿ ಇಂದು ಬೆಳಗ್ಗೆ(ಮಾ.16) ಚಿರತೆಯ ಶ*ವ ಕಂಡು ಬಂದಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿನ್ನಿಗೋಳಿ ಸುತ್ತಮುತ್ತ  ಹಲವು ಬಾರಿ ಚಿರತೆ ಕಂಡು ಬಂದಿದ್ದು, ಅನೇಕ ಕಡೆಗಳಲ್ಲಿ ಸಾಕು ನಾಯಿಗಳು ಚಿರತೆಗೆ ಆಹಾರವಾಗಿವೆ.

ಇದನ್ನೂ ಓದಿ  : ರಾಜ್ಯದಲ್ಲೇ ಅತೀ ದೊಡ್ಡ ಕಾರ್ಯಾಚರಣೆ; ಮಂಗಳೂರು ಸಿಸಿಬಿ ಪೊಲೀಸರಿಂದ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ

ಹಲವು ಕಡೆಗಳಲ್ಲಿ ಚಿರತೆ ಓಡಾಡುವ ದೃಶ್ಯಗಳು ಸಿ.ಸಿ. ಟಿವಿಯಲ್ಲಿ ದಾಖಲಾಗಿದ್ದು, ಕೆಲ ತಿಂಗಳ ಹಿಂದೆ ಮೂಲ್ಕಿಯಲ್ಲಿ ಮನೆಯೊಳಗೆ ಚಿರತೆ ನುಗ್ಗಿ ಸಮಸ್ಯೆಯುಂಟಾಗಿತ್ತು.

Continue Reading
Advertisement

Trending

Copyright © 2025 Namma Kudla News

You cannot copy content of this page